ಕೇಂದ್ರದ ಮಹತ್ವದ ನಿರ್ಧಾರ…100 ದಿನಗಳ ಕೋವಿಡ್ ಕರ್ತವ್ಯ ಪೂರೈಸಿದ ವೈದ್ಯಕೀಯ ಸಿಬ್ಬಂದಿಗೆ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ

ನವ ದೆಹಲಿ; ಕೋವಿಡ್‌-19 ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿ ಲಭ್ಯತೆ ಹೆಚ್ಚಿಸಲು ಪ್ರಮುಖ ನಿರ್ಧಾರಗಳನ್ನು ಪ್ರಧಾನಿ ಸೋಮವಾರ ಅಧಿಕೃತಗೊಳಿಸಿದ್ದಾರೆ. 100 ದಿನಗಳ ಕಾಲ ಕೋವಿಡ್ ಕರ್ತವ್ಯಗಳನ್ನು ಪೂರೈಸುವ ವೈದ್ಯಕೀಯ ಸಿಬ್ಬಂದಿಗೆ ಮುಂಬರುವ ನಿಯಮಿತ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಸೇವೆಗಳನ್ನು ಒದಗಿಸುವ ವ್ಯಕ್ತಿಗಳಿಗೆ ಕನಿಷ್ಠ 100 ದಿನಗಳ ಕೋವಿಡ್ ಕರ್ತವ್ಯವನ್ನು … Continued

ತಮಿಳುನಾಡಿನಲ್ಲಿ ವಿಲಕ್ಷಣ ಘಟನೆ: ಡಿಎಂಕೆ ಜಯ..ಹರಕೆ ತೀರಿಸಲು ನಾಲಿಗೆ ಕತ್ತರಿಸಿಕೊಂಡ ಮಹಿಳೆ..!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಮುನ್ನೇಟ್ರ ಕಝಗಂ (ಡಿಎಂಕೆ) ಗೆದ್ದ ನಂತರ ತನ್ನ ಭರವಸೆ ಉಳಿಸಿಕೊಳ್ಳುವ ಸಲುವಾಗಿ ತಮಿಳುನಾಡಿನ ಮಹಿಳೆ ತನ್ನ ನಾಲಿಗೆಯನ್ನು ಕತ್ತರಿಸಿ ದೇವತೆಗೆ ಅರ್ಪಿಸಿದ ವಿಲಕ್ಷಣ ಘಟನೆ ನಡೆದಿದೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿರುವ ಸ್ಥಳೀಯ ಮುತಲಮ್ಮನ್ ದೇವಸ್ಥಾನದ ಪ್ರವೇಶದ್ವಾರದಲ್ಲಿ 32 ವರ್ಷದ ಮಹಿಳೆ ಬಾಯಿಯಿಂದ ರಕ್ತಸ್ರಾವ ಕಂಡುಬಂದಿದೆ. ಅವಳು ತನ್ನ ನಾಲಿಗೆಯನ್ನು … Continued

ತಾಯಿ ಬದುಕಿಸಲು ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಿದ ಪುತ್ರಿಯರು..ಮನಕಲಕುವ ವಿಡಿಯೋ ವೈರಲ್​

ಉತ್ತರ ಪ್ರದೇಶದ ಬಹ್ರೇಚ್​ ಜಿಲ್ಲೆಯಲ್ಲಿ ಪುತ್ರಿಯರಿಬ್ಬರು ತಮ್ಮ ತಾಯಿ ಬಚಾವ್‌ ಮಾಡಲು ಪ್ರಯತ್ನಿಸಿದ ಘಟನೆ ಸಾಮಾಜಿ ಜಾಲತಾಣದಲ್ಲಿ ಬಾರೀ ವೈರಲ್‌ ಆಗಿದೆ. ಬಹ್ರೇಚ್‌ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸ್ಟ್ರೆಚರ್​ ಮೇಲೆ ಮಲಗಿದ್ದ ತಾಯಿಯನ್ನ ಉಳಿಸಿಕೊಳ್ಳಬೇಕು ಎಂದು ಇಬ್ಬರು ಪುತ್ರಿಯರು ತಾಯಿಯ ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಲು ಯತ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ … Continued

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 12 ಕೊರೊನಾ ರೋಗಿಗಳು ಸೇರಿ 24 ಸಾವು..!

ಚಾಮರಾಜನಗರ : ಜಿಲ್ಲಾಸ್ಪತ್ರೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಆಕ್ಸಿಜನ್ ಸಿಗದೇ ಇರುವುದು ಹಾಗೂ ಇತರೆ ಕಾರಣಗಳಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲೇ 24 ರೋಗಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಆಮಲಜನಕ ಸಿಗದೆ 12 ಜನರು ಮೃತಪಟ್ಟಿದ್ದಾರೆ ಹಾಗೂ ಇತರ ಕಾರಣಗಳಿಂದ 12 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ … Continued

ಚುನಾವಣೆ ನಡೆದ ಐದು ರಾಜ್ಯಗಳಲ್ಲಿ ಕಳೆದ ವಾರದ ಕೊರೊನಾ ಸೋಂಕಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಬಹುತೇಕ ಎರಡು ಪಟ್ಟು ಹೆಚ್ಚಳ..!

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ಹೋದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಕೋವಿಡ್ -19 ಪ್ರಕರಣಗಳು ದೇಶದ ಇತರ ಭಾಗಗಳಿಗಿಂತ ನಂತರದಲ್ಲಿ ಏರಿಕೆಯಾಗಲು ಪ್ರಾರಂಭಿಸಿದವು, ಆದರೆ ಈ ಪ್ರದೇಶಗಳಲ್ಲಿನ ತಲಾ ಹೊಸ ಪ್ರಕರಣಗಳಿಂದಾಗಿ ಕಡಿದಾದ ವಕ್ರರೇಖೆಯು ಈಗ ಅವುಗಳನ್ನು ಮುಂದಕ್ಕೆ ತಳ್ಳಿದೆ ಎಂದು ಡೇಟಾ ತೋರಿಸುತ್ತದೆ. ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು … Continued

ತಮಿಳುನಾಡು:ಹತ್ತು ವರ್ಷಗಳ ನಂತರ ಡಿಎಂಕೆ ಅಧಿಕಾರಕ್ಕೆ, ಮೊದಲನೇ ಬಾರಿಗೆ ಸಿಎಂ ಆಗಲಿರುವ ಸ್ಟಾಲಿನ್‌

ಚೆನ್ನೈ: ಒಂದು ದಶಕದ ನಂತರ, ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ತಮಿಳುನಾಡಿನಲ್ಲಿ ತನ್ನ ಪ್ರತಿಸ್ಪರ್ಧಿ ಎಐಎಡಿಎಂಕೆ ವಿರುದ್ಧ ಗೆಲುವು ಸಾಧಿಸಿದೆ. 68 ವರ್ಷದ ಸ್ಟಾಲಿನ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. 2021 ರ ತಮಿಳುನಾಡು ಚುನಾವಣೆಯ 234 ಸ್ಥಾನಗಳ ಪೈಕಿ 49 ಸ್ಥಾನಗಳಿಗೆ ಮತ ಎಣಿಕೆ ಇನ್ನೂ ನಡೆಯುತ್ತಿದೆ. ಡಿಎಂಕೆ ನೇತೃತ್ವದ ಮೈತ್ರಿ 124ರಲ್ಲಿ ಗೆದ್ದಿದೆ … Continued

ಕೇರಳದಲ್ಲಿ 1977ರ ನಂತರ ಸತತ ಎರಡನೇ ಸಲ ಅಧಿಕಾರಕ್ಕೆ ಬಂದು ದಾಖಲೆ ಮುರಿದ ಎಲ್ ಡಿಎಫ್‌..!

ಕೇರಳದ 140 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಎಲ್‌ಡಿಎಫ್ ಗೆದ್ದುಕೊಂಡಿತು, ಪಿಣರಾಯಿ ವಿಜಯನ್ ಮತ್ತೆ ಸಿಎಂ ಆಗಲಿದ್ದಾರೆ ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 41 ಸ್ಥಾನಗಳನ್ನು ಗೆದ್ದುಕೊಂಡಿದೆ. 1977 ರಲ್ಲಿ ನಡೆದ ಐದನೇ ವಿಧಾನಸಭಾ ಚುನಾವಣೆಯ ಸುಮಾರು ನಾಲ್ಕೂವರೆ ದಶಕಗಳ ನಂತರ, ಕೇರಳವು ಆಡಳಿತಾರೂಢ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಆಯ್ಕೆ … Continued

ಕರ್ನಾಟಕದಲ್ಲಿ ಭಾನುವಾರವೂ ನಲವತ್ತು ಸಾವಿರ ಕೆಳಗೆ ದಾಖಲಾದ ದೈನಂದಿನ ಕೊರೊನಾ ಸೋಂಕು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ದೈನಂದಿನ ಸೋಂಕಿತರ ಸಂಖ್ಯೆ ನಲವತ್ತು ಸಾವಿರ ಒಳಗೆ ಬಂದಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 37,733 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಹಾಗೂ ಇದೇ ವೇಳೆ 21,149 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 1164398 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ, 421436 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 217 ಮಂದಿ ಮೃತಪಟ್ಟಿದ್ದಾರೆ. … Continued

ಬಂಗಾಳದಲ್ಲಿ ಟಿಎಂಸಿ ಭರ್ಜರಿ ಗೆಲುವು, ಆದರೆ ನಂದಿಗ್ರಾಮದಲ್ಲಿ ಅಧಿಕಾರಿ ವಿರುದ್ಧ ಮಮತಾ ಸೋಲು.. ಕೋರ್ಟಿಗೆ ಹೋಗುವೆ ಎಂದು ದೀದಿ

ಕೋಲ್ಕತ್ತಾ: ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಜಯ ಸಾಧಿಸಿದರೂ ನಂದಿಗ್ರಾಮದ ಕ್ಲಿಫ್‌ಹ್ಯಾಂಗರ್‌ನಲ್ಲಿ ಬಿಜೆಪಿಯ ಸುವೆಂದು ಅಧಿಕಾರಿ ವಿರುದ್ಧ ಸೋತಿದ್ದಾರೆ. “ನಂದಿಗ್ರಾಮದಲ್ಲಿನ ತೀರ್ಪನ್ನು ನಾನು ಒಪ್ಪುತ್ತೇನೆ – ಇದು ದೊಡ್ಡ ವಿಷಯವಲ್ಲ. ಚಿಂತಿಸಬೇಡಿ” ಎಂದು ಮುಖ್ಯಮಂತ್ರಿ ಹೇಳಿದರು, ಆದಾಗ್ಯೂ, ಫೌಲ್‌ ಪ್ಲೇಯ್‌ ಬಗ್ಗೆ ನ್ಯಾಯಾಲಯ ಸಂಪರ್ಕಿಸುವುದಾಗಿ ಪ್ರಕಟಿಸಿದರು. ದಿನವಿಡೀ ಮಮತಾ ಬ್ಯಾನರ್ಜಿ ಮತ್ತು ಸುವೆಂದು ಅಧಿಕಾರಿ … Continued

ಫೋಟೋ ಫಿನಿಶ್‌ನಲ್ಲಿ ಬೆಳಗಾವಿಯಲ್ಲಿ ಗೆದ್ದ ಬಿಜೆಪಿಯ ಮಂಗಲಾ ಅಂಗಡಿ

ಬೆಳಗಾವಿ: ಅತ್ಯಂತ ತುರುಸಿನ ಸ್ಪರ್ಧೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ದಿ. ಸುರೇಶ್​ ಅಂಗಡಿ ಪತ್ನಿ ಮಂಗಲಾ ಅಂಗಡಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​ ಅಭ್ಯರ್ಥಿ ಸತೀಶ್​ ಜಾರಕಿಹೊಳಿ ಸೋಲುಂಡಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಏ.17ರಂದು ಮತದಾನವಾಗಿತ್ತು. ಮತ ಎಣಿಕೆಯ ಆರಂಭದಲ್ಲಿ ಸತೀಶ್​ ಜಾರಕಿಹೊಳಿ ಆರಂಭಿಕ ಮುನ್ನಡೆ ಸಾಧಿಸಿದ್ದರಾದರೂ ತದನಂತರ  … Continued