ಕೊವಿಡ್‌ ಲಸಿಕೆ ವ್ಯರ್ಥ ಮಾಡಿದ ರಾಜ್ಯಗಳಿಗೆ ಪ್ರಧಾನಿ ಮೋದಿ ತರಾಟೆ

ನವದೆಹಲಿ: ಕೊರೋನಾ ಲಸಿಕೆ ವ್ಯರ್ಥಮಾಡುತ್ತಿರುವ ರಾಜ್ಯಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ರಾಜ್ಯಗಳಲ್ಲಿ ಕೋವಿಡ್ -19 ಲಸಿಕೆ ಮಿತಿಮೀರಿ ವ್ಯರ್ಥವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಕೊರೋನಾ ಪಾಸಿಟಿವ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಸಭೆ ನಡೆಸಿದ … Continued

ಕೊವಿಡ್: ಮಾ.೧೭ರಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ

ನವ ದೆಹಲಿ: ದೇಶದ ಕೋವಿಡ್ -೧೯ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮಾ.೧೭ (ಬುಧವಾರ) ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಎರಡನೇ ತರಂಗದ ಭೀತಿ ಮತ್ತು ರಾಜ್ಯ ಸರ್ಕಾರಗಳು ಸಮಯಕ್ಕಿಂತ ಮುಂಚಿತವಾಗಿಯೇ ಇದಕ್ಕೆ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಭೆ ನಡೆಸಲಾಗುತ್ತದೆ. ಕಳೆದ ೨೪ ಗಂಟೆಗಳಲ್ಲಿ, … Continued

ಕೊವಿಡ್‌ ವ್ಯಾಕ್ಸಿನೇಶನ್‌ ಪ್ರಮಾಣಪತ್ರದ ಮೇಲಿನ ಮೋದಿ ಚಿತ್ರ ತೆಗೆಯಲು ಹೇಳಿದ ಚುನಾವಣಾ ಆಯೋಗ

ಮಾದರಿ ನೀತಿ ಸಂಹಿತೆಯ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ಮತದಾನದ ವ್ಯಾಪ್ತಿಯ ರಾಜ್ಯಗಳಲ್ಲಿ ವಿತರಿಸಲಾದ ಕೊವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರವನ್ನು ತೆಗೆದುಹಾಕಲು ಭಾರತ ಚುನಾವಣಾ ಆಯೋಗ (ಇಸಿಐ) ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯವನ್ನು ಕೇಳಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ . ಕೊವಿಡ್‌ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರವು … Continued

ಬಿಬಿಸಿ ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ತಾಯಿಗೆ ಅವಹೇಳನ: ಟ್ವಿಟ್ಟರ್‌ನಲ್ಲಿ #BoycottBBC ಆರಂಭ

ಬಿಬಿಸಿ ಏಷ್ಯನ್ ನೆಟ್‌ವರ್ಕ್‌ನ ‘ಬಿಗ್ ಡಿಬೇಟ್’ ರೇಡಿಯೊ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ, ಕರೆ ಮಾಡಿದವರಲ್ಲಿ ಒಬ್ಬರು ಪ್ರಧಾನಿ ನರೇಂದ್ರ ಮೋದಿಯವರ ತಾಯಿಯ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ. ಅದರ ಆಡಿಯೋ ಕ್ಲಿಪ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಅನುಸರಿಸಿ ಬಿಜೆಪಿ ನಾಯಕರು ಹಾಗೂ ಅನೇಕರು ಟ್ವಟ್ವರ್‌ನಲ್ಲಿ ತಮ್ಮ ಅಸಮಾಧಾನವನ್ನು ದಾಖಲಿಸಿದ್ದಾರೆ. ‘ಬಿಗ್ ಡಿಬೇಟ್’ … Continued

ರಾಜಕಾರಣಿಗಳು ದಪ್ಪ ಚರ್ಮದವರೆಂದು ದಪ್ಪ ಸೂಜಿ ಬಳಸಲು ಯೋಜಿಸುತ್ತಿದ್ದೀರಾ: ಲಸಿಕೆ ನೀಡಿದ ದಾದಿಯರಿಗೆ ಪ್ರಧಾನಿ ಮೋದಿ ಪ್ರಶ್ನೆ

ರಾಜಕಾರಣಿಗಳು “ತುಂಬಾ ದಪ್ಪ ಚರ್ಮದವರೆಂದು ದಪ್ಪ ಸೂಜಿ ಬಳಸಲು ಯೋಜಿಸುತ್ತಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೋವಿಡ್ -19 ಲಸಿಕೆ ನೀಡುವ ದಾದಿಯರನ್ನು ಕೇಳಿ ಹಾಸ್ಯ ಮಾಡಿದ ಪ್ರಸಂಗ ನಡೆಯಿತು. ಪ್ರಧಾನಿ ಮೋದಿ ತಮ್ಮ ಮೊದಲ ಡೋಸ್ ಕೊವಿಡ್‌-19 ಲಸಿಕೆಯನ್ನು ಸೋಮವಾರ ಇಲ್ಲಿನ ಏಮ್ಸ್‌ನಲ್ಲಿ ತೆಗೆದುಕೊಂಡರು. ಪುದುಚೇರಿಯವರಾದ ನರ್ಸ್ ಪಿ. ನಿವೇದ ಭಾರತ್ ಬಯೋಟೆಕ್‌ನ … Continued

ದೆಹಲಿ ಏಮ್ಸ್‌ನಲ್ಲಿ ಕೋ ವ್ಯಾಕ್ಸಿನ್‌ ಕೊವಿಡ್‌ ಲಸಿಕೆ ಮೊದಲ ಡೋಸ್‌ ಪಡೆದ ಪ್ರಧಾನಿ ಮೋದಿ

ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೋವಿಡ್ -19 ಲಸಿಕೆಯ ತಮ್ಮ ಮೊದಲ ಡೋಸ್ ತೆಗೆದುಕೊಂಡರು. “ಏಮ್ಸ್ನಲ್ಲಿ ನನ್ನ ಮೊದಲ ಡೋಸ್ ಕೊವಿಡ್‌-19 ಲಸಿಕೆ ತೆಗೆದುಕೊಂಡೆ. ಕೊವಿಡ್‌ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ … Continued

ಚಹಾ ಮಾರುತ್ತಿದ್ದ ಬಗ್ಗೆ ಮುಚ್ಚುಮರೆ ಮಾಡದ ಪ್ರಧಾನಿ ಮೋದಿ: ಆಝಾದ್ ಶ್ಲಾಘನೆ

ಪ್ರಮುಖ ಪಕ್ಷವೊಂದರ ಮುಖಂಡನಾಗಿದ್ದರೂ ತನ್ನ ಭೂತಕಾಲದ ಜೀವನದ ಬಗ್ಗೆ ಮುಚ್ಚುಮರೆ ಮಾಡದ ಮಾದರಿ ವ್ಯಕ್ತಿ ಪ್ರಧಾನಿ ಮೋದಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಶ್ಲಾಘಿಸಿದ್ದಾರೆ. ಜಮ್ಮುವಿನ ಗುಜ್ಜರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ನಾಯಕರ ಹಲವು ಗುಣಗಳನ್ನು ನಾನು ಮೆಚ್ಚುತ್ತೇನೆ. ನಾನು ಕೂಡಾ ಹಳ್ಳಿಯಿಂದ ಬಂದಿದ್ದು ಇದರ ಬಗ್ಗೆ ನನಗೆ ಹೆಮ್ಮೆಯಿದೆ. … Continued

ಕಿರಣ್‌ ಬೇಡಿ ಪ್ರಮಾದ ಮರೆಮಾಚಲು ಪ್ರಧಾನಿ ಯತ್ನ: ನಾರಾಯಣಸಾಮಿ ಆರೋಪ

ಪುದುಚೇರಿ: ಪ್ರಧಾನಿ ನರೇಂದ್ರ ಮೋದಿ ಹಿಂದಿನ ರಾಜ್ಯಪಾಲರಾಗಿದ್ದ ಕಿರಣ್‌ ಬೇಡಿ ಅವರ ಪ್ರಮಾದಗಳನ್ನು ನಮ್ಮದೆಂದು ಬಿಂಬಿಸುತ್ತಿದ್ದಾರೆ ಎಂದು ಪುದುಚೆರಿ ಮಾಜಿ ಮುಖ್ಯಮಂತ್ರಿ ನಾರಾಯಣಸಾಮಿ ಆರೋಪಿಸಿದ್ದಾರೆ.. ರಾಜ್ಯಪಾಲರಾಗಿದ್ದ ಕಿರಣ್‌ ಬೇಡಿ ಅವರ ಪ್ರಮಾದಗಳನ್ನು ಮುಚ್ಚಿಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಆರೋಪ ಮಾಡಿದರು. ತಮ್ಮ ಸರ್ಕಾರ ಕೈಗೊಂಡ 52 ಯೋಜನೆಗಳನ್ನು ನಿಲ್ಲಿಸಿದ್ದು ಕಿರಣ್ ಬೇಡಿ, ಆದರೆ … Continued

ಭಾರತದ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಜಗತ್ತು ಹೊಸ ದೃಷ್ಟಿಕೋನದಿಂದ ನೋಡುತ್ತಿದೆ: ಪ್ರಧಾನಿ ಮೋದಿ

ಭಾರತೀಯ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಹೊಸ ದೃಷ್ಟಿಕೋನ, ಗೌರವ ಮತ್ತು ಹೊಸ ವಿಶ್ವಾಸಾರ್ಹತೆಯಿಂದ ನೋಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅ ಅವರು ಎಂಜಿಆರ್‌ ವೈದ್ಯಕೀಯ ವಿಶ್ವವಿದ್ಯಾಲಯದ ೩೩ನೇ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಕೊರೊನಾ ರೋಗದ ವಿರುದ್ಧದ ಹೋರಾಟದಲ್ಲಿ ನೆರೆಯ ರಾಷ್ಟ್ರಗಳಿಗೆ ನೆರವು ನೀಡುವಲ್ಲಿ ಭಾರತದ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು. ಭಾರತವು ಕೇವಲ ಹೊಸ … Continued

ಪುದುಚೆರಿ ಮಾಜಿ ಸಿಎಂ ನಾರಾಯಣಸ್ವಾಮಿ ಕಾಂಗ್ರೆಸ್‌ ಮುಖಂಡರ ಚಪ್ಪಲಿ ಎತ್ತೋದ್ರಲ್ಲಿ ಪರಿಣಿತ: ಮೋದಿ ಟೀಕೆ

ಪುದುಚೆರಿಯ ಹಿಂದಿನ ಮುಖ್ಯಮಂತ್ರಿ ನಾರಾಯಣಸ್ವಾಮಿ ಪಕ್ಷದ ಮುಖಂಡ ಚಪ್ಪಲಿಗಳನ್ನು ಎತ್ತುವಲ್ಲಿ ಪರಿಣಿತರಾಗಿದ್ದರೇ ಹೊರತು ಪುದುಚೆರಿಯ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪರಿಣಿತರಾಗಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪುದುಚೇರಿಯಲ್ಲಿ ಮಾತನಾಡಿದ ವರು,  ನಡೆಯುವ ಚುನಾವಣೆಯಲ್ಲಿ ಜನರು ಎನ್‌ಡಿಎ ಪರ ಮತಚಲಾಯಿಸಿದರೆ ಇಲ್ಲಿನ ಜನರನ್ನೇ ಹೈಕಮಾಂಡ್‌ ಎಂದು ಪರಿಗಣಿಸಲಾಗುವುದು. ರಾಜ್ಯದ ಜನರು ಕಾಂಗ್ರೆಸ್‌ ದುರಾಡಳಿತದಿಂದ ಮುಕ್ತರಾಗಿದ್ದಾರೆ. ಪುದುಚೇರಿಯಲ್ಲಿ … Continued