ಅಪ್ಪ-ಮಕ್ಕಳ ಜಗಳ ಬಿಡಿಸಲು ಹೋದ ಪೊಲೀಸ್‌ ಅಧಿಕಾರಿಯನ್ನೇ ಕೊಚ್ಚಿ ಕೊಂದರು…!

ತಿರುಪ್ಪೂರ್:  ಆಸ್ತಿ ವಿಚಾರಕ್ಕೆ ಅಪ್ಪ-ಮಕ್ಕಳ ನಡುವಿನ ಜಗಳ ಬಿಡಿಸಲು ಹೋದ ಪೊಲೀಸ್‌  ಅಧಿಕಾರಿಯನ್ನೇ ಕೊಚ್ಚಿ ಕೊಲೆಗೈದಿರುವ(Murder Case) ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಿರುಪ್ಪೂರ್ ಜಿಲ್ಲೆಯ ಉಡುಮಲ್‌ಪೇಟೆ (Udumalpet) ಬಳಿಯ ಕುಡಿಮಂಗಲಂನಲ್ಲಿ ಸೋಮವಾರ ರಾತ್ರಿ ವಿಶೇಷ ಸಬ್-ಇನ್‌ಸ್ಪೆಕ್ಟರ್ (Special Sub-Inspector) ಷಣ್ಮುಗವೇಲ್ (Shanmugavel) ಅವರನ್ನು ಕ್ರೂರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳೀಯ ಎಐಎಡಿಎಂಕೆ ಶಾಸಕರ ಒಡೆತನದ ಖಾಸಗಿ ಎಸ್ಟೇಟ್‌ನಲ್ಲಿ ತಂದೆ ಮತ್ತು ಇಬ್ಬರು ಮಕ್ಕಳ ನಡುವಿನ ಗಲಾಟೆ ಬಗ್ಗೆ ತಿಳಿದು ಷಣ್ಮುಗವೇಲ್ ಎಂಬವರು ಸ್ಥಳಕ್ಕೆ ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ರಾತ್ರಿ ಗಸ್ತಿನಲ್ಲಿದ್ದ ಷಣ್ಮುಗವೇಲ್ ಅವರಿಗೆ ತುರ್ತು ಸೇವೆಯಿಂದ ಕರೆ ಬಂದಿತು. ಎಸ್ಟೇಟ್ ಕಾರ್ಮಿಕ ಮೂರ್ತಿ ಮತ್ತು ಆತನ ಮಕ್ಕಳಾದ ತಂಗಪಾಂಡಿಯನ್ ಮತ್ತು ಮಣಿಕಂಡನ್, ಮದ್ಯದ ಅಮಲಿನಲ್ಲಿ ತೀವ್ರ ಗಲಾಟೆಯಲ್ಲಿ ತೊಡಗಿದ್ದರು. ಮಕ್ಕಳು ತಂದೆಯ ಮೇಲೆ ಹಲ್ಲೆ ನಡೆಸಿದಾಗ ಷಣ್ಮುಗವೇಲ್ ಕಲಹವನ್ನು ತಡೆಯಲು ಮಧ್ಯಸ್ಥಿಕೆ ವಹಿಸಿ, ಗಾಯಗೊಂಡ ತಂದೆಗೆ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕರೆಯಲು ಯತ್ನಿಸಿದರು. ಆದರೆ, ತಂಗಪಾಂಡಿಯನ್‌ ಜೊತೆ ಮಾತನಾಡುತ್ತಿದ್ದಾಗ, ಅಡಗಿದ್ದ ಕಿರಿಯ ಮಗ ಮಣಿಕಂಡನ್ ಹೊರಬಂದು ಷಣ್ಮುಗವೇಲ್‌ ಅವರ ಮೇಲೆ ಕುಡುಗೋಲಿನಿಂದ ದಾಳಿ ಮಾಡಿದ. ತಂದೆ ಮತ್ತು ಹಿರಿಯ ಮಗನೂ ದಾಳಿಯಲ್ಲಿ ಭಾಗಿಯಾಗಿ, ಅಧಿಕಾರಿಯನ್ನು ಕೊಚ್ಚಿ ಕೊಂದರು. ಷಣ್ಮುಗವೇಲ್‌ ಅವರ ಚಾಲಕ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳಾದ ಮೂರ್ತಿ, ತಂಗಪಾಂಡಿಯನ್, ಮತ್ತು ಮಣಿಕಂಡನ್ ಪರಾರಿಯಾಗಿದ್ದಾರೆ. ಐದು ವಿಶೇಷ ಪೊಲೀಸ್ ತಂಡಗಳು ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement