ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಡ್ಯೂಟಿಯಲ್ಲಿದ್ದಾಗ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯ ವಿದ್ಯಾರ್ಥಿನಿ ತನ್ನ ವೈಯಕ್ತಿಕ ಡೈರಿಯಲ್ಲಿ ಕೊನೆಯದಾಗಿ ಏನು ಬರೆದಿದ್ದಾರೆ ಎಂಬುದನ್ನು ಆಕೆಯ ತಂದೆ ಬಹಿರಂಗಪಡಿಸಿದ್ದಾರೆ.
ಭಯಾನಕ ಘಟನೆಯ ದಿನ ರಾತ್ರಿ ಪಾಳಿಗೆ ಹೊರಡುವ ಮೊದಲು ವೈಯಕ್ತಿಕ ಡೈರಿಯಲ್ಲಿ ತನ್ನ ಮಗಳು ತನ್ನ ಜೀವನದಲ್ಲಿ ತಾನು ಏನು ಸಾಧಿಸಬೇಕೆಂದು ಬಯಸಿದ್ದಳು ಎಂಬುದರ ಬಗ್ಗೆ ಬರೆದಿದ್ದಾಳೆ ಎಂದು ಆಕೆಯ ತಂದೆ ಹೇಳಿದ್ದಾರೆ. ಆಕೆಯ ತಂದೆಯ ಪ್ರಕಾರ, ಸಂತ್ರಸ್ತೆ ತನ್ನ ಕೊನೆಯ ದಿನಚರಿಯಲ್ಲಿ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ತನ್ನ ಎಂಡಿ ಕೋರ್ಸ್ನಲ್ಲಿ ಚಿನ್ನದ ಪದಕ ಪಡೆಯಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿ ಭಯಾನಕ ಘಟನೆಯ ದಿನ ರಾತ್ರಿ ಪಾಳಿಗೆ ಹೊರಡುವ ಮೊದಲು ಬರೆದಿದ್ದಳು ಎಂದು ತಂದೆ ಹೇಳಿದ್ದಾರೆ.
‘ಇಂಡಿಯಾ ಟುಡೇ ಟಿವಿ’ಗೆ ದೂರವಾಣಿ ಮೂಲಕ ಮಾತನಾಡಿರುವ ಅವರು, ತಮ್ಮ ಮಗಳು ಅಧ್ಯಯನಶೀಲಳಾಗಿದ್ದು, ದಿನಕ್ಕೆ 10–12 ಗಂಟೆ ಓದುತ್ತಿದ್ದಳು. “ಅವಳು ದಿನವಿಡೀ ಪುಸ್ತಕಗಳಲ್ಲಿಯೇ ಮುಳುಗಿರುತ್ತಿದ್ದಳು, ಅವಳು ತುಂಬಾ ಕಷ್ಟಪಟ್ಟಿದ್ದಾಳೆ… ಆದರೆ ಈಗ ಎಲ್ಲವೂ ಛಿದ್ರಗೊಂಡಿದೆ” ಎಂದು ಹೇಳಿದರು.
ತನ್ನ ಮಗಳ ಧೈರ್ಯವನ್ನು ಶ್ಲಾಘಿಸಿದ ತಂದೆ, ಆಕೆ ತಾನು ವೈದ್ಯಳಾಗಬೇಕೆಂಬ ಗುರಿಯನ್ನು ತಲುಪಲು ಸಾಕಷ್ಟು ಹೋರಾಡಿದಳು. ಅವಳನ್ನು ಬೆಳೆಸುವಾಗ ನಾವು ಅನೇಕ ತ್ಯಾಗಗಳನ್ನು ಮಾಡಿದ್ದೇವೆ” ಎಂದರು.
ದೇಶದಾದ್ಯಂತ ತಮ್ಮ ಮಗಳಿಗೆ ಬೆಂಬಲದ ಹೊರಹರಿವಿನಿಂದ “ತುಂಬಿದೆ”. ಇದರಿಂದ ನಾನು ನನ್ನ ಮಗಳನ್ನು ಮರಳಿ ಪಡೆಯುವುದಿಲ್ಲ. ಆದರೆ ನಾನು ಧೈರ್ಯದಿಂದ ಮತ್ತು ಭರವಸೆಯಿಂದ ಇರಲು ಸಾಧ್ಯವಾಗಿದೆ. ದೇಶಾದ್ಯಂತದ ಬೆಂಬಲದ ಪ್ರದರ್ಶನವು ನ್ಯಾಯಕ್ಕಾಗಿ ಹೋರಾಡಲು ನಮಗೆ ಸಾಕಷ್ಟು ಧೈರ್ಯವನ್ನು ನೀಡುತ್ತಿದೆ” ಎಂದು ಅವರು ಇಂಡಿಯಾ ಟುಡೇ ಟಿವಿಗೆ ಹೇಳಿದರು.
ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿದ್ದರ ಕುರಿತು ಮಾತನಾಡಿದ ಅವರು, ಅದರಲ್ಲಿ ಯಾವುದೇ ನಿರ್ದಿಷ್ಟ ತೃಪ್ತಿ ಇಲ್ಲ, ಯಾಕೆಂದರೆ ಯಾವುದೂ ತನ್ನ ಮಗಳನ್ನು ವಾಪಸ್ ತರುವುದಿಲ್ಲ ಎಂದು ಹೇಳಿದರು. ನಾವು ಈಗ ನ್ಯಾಯದ ಭರವಸೆಯಲ್ಲಿದ್ದೇವೆ. ನಾವು ಭರವಸೆ ಕಳೆದುಕೊಳ್ಳಬಾರದು” ಎಂದರು.
ತಮ್ಮ ಮಗಳನ್ನು ಈ ರೀತಿ ಅಮಾನುಷವಾಗಿ ಕೊಂದಿದ್ದಕ್ಕೆ ಅವರಿಗೂ ಇದೇ ರೀತಿಯ ಶಿಕ್ಷೆಯಾಗಬೇಕು ಎಂದ ತಂದೆ, ಘೋರವಾಗಿ ಹತ್ಯೆ ಮಾಡಿದ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. “ಅವರಿಗೆ ಎಷ್ಟು ಬೇಗ ಶಿಕ್ಷೆಯಾಗುತ್ತದೆಯೋ ಅಷ್ಟು ಒಳ್ಳೆಯದು. ನಮಗೆ ಸ್ವಲ್ಪ ಸಮಾಧಾನ ಸಿಗುತ್ತದೆ, ಆದರೂ ನಮ್ಮ ನಷ್ಟವನ್ನು ಯಾವುದೂ ಬದಲಾಯಿಸಲು ಸಾಧ್ಯವಿಲ್ಲ” ಎಂದರು.
ಕಾಲೇಜು ಆಡಳಿತ ಮಂಡಳಿ ತನ್ನ ಮಗಳಿಗೆ ಯಾವತ್ತೂ ಬೆಂಬಲ ನೀಡಿಲ್ಲ ಎಂದರು. ಅಲ್ಲದೆ, ಯಾವುದೇ ಪಕ್ಷದಿಂದಲೂ ರಾಜಕೀಯ ಒತ್ತಡ ಬಂದಿಲ್ಲ ಎಂದು ಹೇಳಿದರು.
ಶುಕ್ರವಾರ (ಆಗಸ್ಟ್ 9) ಬೆಳಗ್ಗೆ ಬಂಗಾಳದ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯರ ಶವ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರ ನಾಗರಿಕ ಸ್ವಯಂಸೇವಕ ಸಂಜೋಯ ರಾಯ್ ಎಂಬಾತನನ್ನು ಬಂಧಿಸಲಾಗಿದೆ.
31 ವರ್ಷದ ಟ್ರೈನಿ ವೈದ್ಯೆಯ ತಂದೆ-ತಾಯಿಗೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಯೊಬ್ಬರು ಆರಂಭದಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ನಾಲ್ಕು ಪುಟಗಳ ಶವಪರೀಕ್ಷೆಯ ವರದಿಯು ಆಕೆಯ ಸಾವಿನ ಬಗ್ಗೆ ಭಯಾನಕ ವಿವರಗಳನ್ನು ಬಹಿರಂಗಪಡಿಸಿತು.
ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ಕೋಲ್ಕತ್ತಾ ಬುಧವಾರ ರಾತ್ರಿ ‘ರಿಕ್ಲೇಮ್ ದಿ ನೈಟ್’ ಪ್ರತಿಭಟನೆಗೆ ಸಾಕ್ಷಿಯಾಯಿತು.ಇದೇ ವೇಳೆ ಗುಂಪೊಂದು ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪ್ರವೇಶಿಸಿ ಸ್ಥಳವನ್ನು ಧ್ವಂಸಗೊಳಿಸಿತು. ಪರಿಣಾಮವಾಗಿ ಹಲವಾರು ಜನರು ಗಾಯಗೊಂಡರು ಮತ್ತು ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಹಾರಿಸಬೇಕಾಯಿತು. ಈ ಸಂಬಂಧ ಒಂಬತ್ತು ಜನರನ್ನು ಬಂಧಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ