ಸಹಕಾರ ಕಾಯಿದೆ: ಐದು ಸಾಮಾನ್ಯ ಸಭೆ ಪೈಕಿ ಮೂರರಲ್ಲಿ ಸದಸ್ಯರು ಭಾಗಿಯಾಗದಿದ್ದರೆ ಮತದಾನದ ಹಕ್ಕು ರದ್ದು- ಹೈಕೋರ್ಟ್‌

ಬೆಂಗಳೂರು: ಹಲವು ಸೇವೆಗಳ ಬಳಕೆಗೆ ಸಂಬಂಧಿಸಿದ ಕರ್ನಾಟಕ ಸಹಕಾರ ಸೊಸೈಟಿಗಳ ಕಾಯಿದೆ 1959ರ ಸೆಕ್ಷನ್‌ 20 (2) (a-v) ಯ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿ ಹಿಡಿದಿದೆ. ಈ ನಿಬಂಧನೆಯ ಪ್ರಕಾರ ಸದಸ್ಯರು ಐದು ಸಾಮಾನ್ಯ ಸಭೆಗಳ ಪೈಕಿ ಮೂರು ಸಭೆಗಳಲ್ಲಿ ಭಾಗವಹಿಸದಿದ್ದರೆ, ಸತತ ಮೂರು ಸಹಕಾರಿ ವರ್ಷಗಳ ವರೆಗೆ ಇಂತಹ ಕನಿಷ್ಠ … Continued

ಶಿರಸಿ-ಕುಮಟಾದಲ್ಲಿ ಇಎಸ್‌ಐ ಡಿಸ್ಪೆನ್ಸರಿ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ  ಶಿರಸಿ ಹಾಗೂ ಕುಮಟಾದಲ್ಲಿ ಇಎಸ್‌ಐ ಚಿಕಿತ್ಸಾಲಯ (ESI Dispensary)ಗಳ ಸ್ಥಾಪನೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕುರಿತು ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಅವರು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಪತ್ರ ಬರೆದಿದ್ದು, ಶಿರಸಿ ಹಾಗೂ ಕುಮಟಾದಲ್ಲಿಇಎಸ್‌ಐ ಚಿಕಿತ್ಸಾಲಯ (ESI Dispensary)ಗಳ ಸ್ಥಾಪನೆಗೆ … Continued

ಉಪಚುನಾವಣೆ: ಜೆಡಿಎಸ್‌ನಿಂದ ಸಿಂಧಗಿಯಿಂದ ನಾಜಿಯಾ, ಹಾನಗಲ್​ನಿಂದ ನಿಯಾಜ್ ಕಣಕ್ಕೆ

ಬೆಂಗಳೂರು: ಸಿಂಧಗಿ ವಿಧಾನಸಭಾ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿಯಾಗಿ ನಾಜಿಯಾ ಶಕೀಲಾ ಅಂಗಡಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಈಗಾಗಲೇ ಹಾನಗಲ್ ಕ್ಷೇತ್ರಕ್ಕೆ ನಿಯಾಜ್ ಶೇಕ್ ಅವರನ್ನು ಆಯ್ಕ ಮಾಡಿರುವ ಜೆಡಿಎಸ್, ಇದೀಗ ಸಿಂಧಗಿ ಕ್ಷೇತ್ರಕ್ಕೂ ಅಂತಿಮಗೊಳಿಸಿ ಎರಡೂ ಕ್ಷೇತ್ರಗಳಿಗೂ ಅಲ್ಪಸಂಖ್ಯಾತರಿಗೆ ಮಣೆ ಹಾಕಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಕ್ಕಿಂತ … Continued

ಬ್ರಿಟನ್‌ ಪ್ರಯಾಣ ನಿಯಮದ ವಿವಾದ: ಬ್ರಿಟನ್‌ ನಾಗರಿಕರಿಗೆ ಸಂಪರ್ಕತಡೆ ಕಡ್ಡಾಯ ಮಾಡಿ ಭಾರತದ ತಿರುಗೇಟು

ನವದೆಹಲಿ: ಬ್ರಿಟನ್ನಿನಿಂದ ಭಾರತಕ್ಕೆ ಬರುವ ಎಲ್ಲ ಪ್ರಯಾಣಿಕರು, ತಮ್ಮ ವ್ಯಾಕ್ಸಿನೇಷನ್ ಸ್ಥಿತಿಯ ಹೊರತಾಗಿಯೂ, ಈಗ ನೆಗೆಟಿವ್‌ ಆರ್‌ಟಿ-ಪಿಸಿಆರ್ (negative RT-PCR) ವರದಿಯನ್ನು ಹೊಂದಿರಬೇಕು ಮತ್ತು ಭಾರತಕ್ಕೆ ಬಂದ ನಂತರ 10 ದಿನಗಳವರೆಗೆ ಕಡ್ಡಾಯವಾಗಿ ಸಂಪರ್ಕತಡೆ ಹೊಂದಿರಬೇಕು ಎಂದು ಭಾರತ ಕಡ್ಡಾಯಗೊಳಿಸಿದೆ. ಬ್ರಿಟನ್‌ ತನ್ನ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳನ್ನು ಪರಿಷ್ಕರಿಸಿದ ನಂತರ, ಭಾರತದಿಂದ ಬಂದ ಪ್ರಯಾಣಿಕರಿಗೆ ಸಂಪರ್ಕತಡೆಯನ್ನು … Continued

ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತ ಕಂಡಿದ್ದ ಚಿರತೆ- ಕವಲಗೇರಿ ಗ್ರಾಮದಲ್ಲಿ ಸೆರೆ ಸಿಕ್ಕ ಚಿರತೆ ಒಂದೆ: ಡಿಎನ್ಎ ಪರೀಕ್ಷೆಯಿಂದ ದೃಢ

ಧಾರವಾಡ: ಹುಬ್ಬಳ್ಳಿ ನೃಪತುಂಗಬೆಟ್ಟ, ರಾಜನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ ಹಾಗೂ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಸೆರೆ ಹಿಡಿಯಲಾಗಿದ್ದ ಚಿರತೆ ಒಂದೇ ಎಂದು ಡಿಎನ್ಎ ವರದಿಯಲ್ಲಿ ದೃಢಪಟ್ಟಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಇಂದು ಚಿರತೆಯ ಡಿಎನ್‌ಎ … Continued

ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿಯ ಕತ್ತು ಸೀಳಿದ ಭಗ್ನ ಪ್ರೇಮಿ..!

ಕೊಟ್ಟಾಯಂ: ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಯುವಕ ವಿದ್ಯಾರ್ಥನಿಯೋರ್ವಳ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ಕೇರಳದ ಕೊಟ್ಟಾಯಂನ ಪಾಲಾದ ಕಾಲೇಜು ಆವರಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ ನಿತಿನಾ ಮೋಲ್ ( 21) ಎಂಬುವವಳೇ ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ನಿತಿನಾಮೋಲ್ ಪಾಲಾದಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇಂದು ಪರೀಕ್ಷೆ ಬರೆದು … Continued

ಅಕ್ಟೋಬರ್ ಮೊದಲ ವಾರದಿಂದ ಮಾರ್ಚ್‌-2020ರಲ್ಲಿ ಇದ್ದಂತೆ ಎನ್‌ಡಬ್ಲ್ಯುಕೆಆರ್‌ಟಿಸಿ ಪ್ರತಿಷ್ಠಿತ ಸಾರಿಗೆಗಳ ಪುನಾರಂಭ.. ವಿಶೇಷ ರಿಯಾಯ್ತಿ

ಹುಬ್ಬಳ್ಳಿ: ಸಾಲುಸಾಲು ಹಬ್ಬದ ರಜೆಗಳಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಮೊದಲ ವಾರದಿಂದ ಮಾರ್ಚ್‌-2020ರಲ್ಲಿ ಇದ್ದಂತೆ ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆಯನ್ನು ಪುನಾರಂಭ ಮಾಡಲಾಗುವುದು ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಕೋವಿಡ್-19 ರಿಂದ ವಿರಳ ಜನಸಂದಣಿಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಪ್ರತಿಷ್ಠಿತ ಸಾರಿಗೆಗಳನ್ನು ಪ್ರಾರಂಭಿಸಿರಲಿಲ್ಲ. ಆದರೆ ಬೇಡಿಕೆಗಳಿಗೆ ಅನುಗುಣವಾಗಿ ಮುಂಗಡ … Continued

ಮೈಸೂರು ವಿವಿ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ 2021-22ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅ.4 ರಿಂದ ಪೋರ್ಟಲ್‌ ತೆರೆಯಲಾಗುವುದು ಎಂದು ತಿಳಿಸಲಾಗಿದೆ. ಪರೀಕ್ಷೆ ಬರೆಯಲು ಇಚ್ಛಿಸುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ www.uompgadmissions.com ವೀಕ್ಷಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಶಿರಸಿ ಐಎಂಎ ಅಧ್ಯಕ್ಷರಾಗಿ ಡಾ.ರಾಮ ಹೆಗಡೆ ಆಯ್ಕೆ

ಶಿರಸಿ: ಭಾರತೀಯ ವೈದ್ಯಕೀಯ ಸಂಘ ಶಿರಸಿಯ ಶಾಖೆಯ 2021-2022 ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಡಾ. ರಾಮ ಹೆಗಡೆ ಹಾಗೂ ಗೌರವ ಕಾರ್ಯದರ್ಶಿಯಾಗಿ ಡಾ. ರವೀಂದ್ರ ಕೊಳ್ವೇಕರ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ, ಡಾ ವಿಶ್ವನಾಥ ಅಂಕದ್, ಉಪಾಧ್ಯಕ್ಷರಾಗಿ ಡಾ.ವಿನಾಯಕ ತೆಂಬದ್ಮನೆ . ಜಂಟಿ ಕಾರ್ಯದರ್ಶಿಯಾಗಿ, ಡಾ ವಿನಾಯಕ ಎಸ್ . ಕೇಂದ್ರ ಸಮಿತಿ ಸದಸ್ಯರಾಗಿ ಡಾ ಜಿ. … Continued

ಜೆಡಿಎಸ್ ತೊರೆದು ಬಿಜೆಪಿ ಸೇರತ್ತೇನೆ ಎಂದ ಎಂಎಲ್‌ ಸಿ ಸಂದೇಶ ನಾಗರಾಜ್

ಬೆಂಗಳೂರು : ಜಾತ್ಯಾತೀತ ಜನತಾ ದಳವನ್ನು ಒಬ್ಬೊಬ್ಬರೇ ತೊರೆಯುತ್ತಿದ್ದು, ಈಗ ವಿಧಾನ ಪರಿಷತ್ ಸದಸ್ಯ, ಚಲನಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಪಕ್ಷ ತೊರೆದು ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ. ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಜೆಡಿಎಸ್‌ನಿಂದ ಗೆದ್ದು ಪರಿಷತ್‌ ಸದಸ್ಯರಾಗಿರುವ ಸಂದೇಶ್‌ ನಾಗರಾಜ್‌ ಅವರು ಅವಧಿ ಮುಗಿಯುವವರೆಗೂ (ಡಿಸೆಂಬರ್‌) ಪಕ್ಷದಲ್ಲೇ ಮುಂದುವರಿಯಲಿದ್ದಾರೆ. ನಂತರ ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ. … Continued