ಬಲೂಚ್ ಲಿಬರೇಶನ್ ಆರ್ಮಿ (BLA) ಬೆಂಗಾವಲು ಪಡೆಯ ಮೇಲಿನ ದಾಳಿಯಲ್ಲಿ 90 ಪಾಕಿಸ್ತಾನಿ ಸೈನ್ಯದ ಸಿಬ್ಬಂದಿಯನ್ನು ಕೊಂದಿರುವುದಾಗಿ ಹೇಳಿಕೊಂಡ ಕೆಲವೇ ಗಂಟೆಗಳ ನಂತರ, ಅದರ ವಿಶೇಷ ಪಡೆಗಳ ಘಟಕವಾದ ಮಜೀದ್ ಬ್ರಿಗೇಡ್ ನಡೆಸಿದ ದಾಳಿಯ ಮೊದಲ ದೃಶ್ಯಗಳನ್ನು ಬಿಡುಗಡೆ ಮಾಡಿದೆ.
ಬಿಎಲ್ಎ (BLA) ಬಿಡುಗಡೆ ಮಾಡಿದ ವೀಡಿಯೊ ಬಸ್ ಸ್ಫೋಟಗೊಂಡಿದ್ದನ್ನು ಸೆರೆಹಿಡಿದಿದೆ, ಅದರ ನಂತರ ಬಸ್ನಿಂದ ಬೆಂಕಿ ಜ್ವಾಲೆಗಳು ಹಾಗೂ ಹೊಗೆ ಹೊರಬರುತ್ತಿರುವುದು ಕಂಡುಬಂದಿದೆ. ದಾಳಿಯ ನಂತರದ ಚಿತ್ರಗಳು ಕಾಣಿಸಿಕೊಂಡ ಗಂಟೆಗಳ ನಂತರ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಸ್ಪೋಟದಲ್ಲಿ ಸುಟ್ಟ ಬಸ್ ಮತ್ತು ಇತರ ವಾಹನಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.
ಮಜೀದ್ ಬ್ರಿಗೇಡ್, ಬಲೂಚ್ ಲಿಬರೇಶನ್ ಆರ್ಮಿ(BLA)ಯ ಮತ್ತೊಂದು ಘಟಕವಾದ ಫತೇಹ್ ಸ್ಕ್ವಾಡ್ ಜೊತೆಗೆ ಎಂಟು ಬಸ್ಗಳನ್ನು ಒಳಗೊಂಡ ಮಿಲಿಟರಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡಿದೆ. ಅವುಗಳಲ್ಲಿ ಒಂದು ಸ್ಫೋಟದಲ್ಲಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಬಿಎಲ್ಎ ಹಿಂದಿನ ಹೇಳಿಕೆಯಲ್ಲಿ ತಿಳಿಸಿದೆ.
ಕ್ವೆಟ್ಟಾದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಬಲೂಚಿಸ್ತಾನ್ ಪ್ರಾಂತ್ಯದ ನೋಶ್ಕಿಯಲ್ಲಿ ವಾಹನಗಳು ಹೇಗೆ ಸಂಪೂರ್ಣವಾಗಿ ನಾಶವಾದವು ಎಂಬುದನ್ನು ದಾಳಿಯ ನಂತರದ ದೃಶ್ಯಾವಳಿಗಳು ತೋರಿಸಿವೆ.
ಮತ್ತೊಂದೆಡೆ, ಕ್ವೆಟ್ಟಾದಿಂದ ತಫ್ತಾನ್ಗೆ ತೆರಳುತ್ತಿದ್ದ ಅವರ ಬೆಂಗಾವಲು ಪಡೆ ದಾಳಿಯ ನಂತರ ಕೇವಲ ಏಳು ಸೈನಿಕರು ಸಾವಿಗೀಡಾಗಿದ್ದಾರೆ ಮತ್ತು 21 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನಿ ಸೇನೆ ಹೇಳಿಕೊಂಡಿದೆ. ಐಇಡಿ ಹೊತ್ತ ವಾಹನವೊಂದು ಬಸ್ಗಳಲ್ಲಿ ಒಂದಕ್ಕೆ ಢಿಕ್ಕಿ ಹೊಡೆದು, ಸ್ಫೋಟಗೊಂಡಿತು. ಮತ್ತೊಂದು ಬಸ್ಗೆ ರಾಕೆಟ್-ಪ್ರೊಪೆಲ್ಡ್ ಗ್ರೆನೇಡ್ಗಳು (ಆರ್ಪಿಜಿ) ಬಡಿದವು ಎಂದು ಸೇನೆ ಹೇಳಿದೆ.
“ಕ್ವೆಟ್ಟಾದಿಂದ ತಫ್ತಾನ್ಗೆ ಪ್ರಯಾಣಿಸುತ್ತಿದ್ದ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಲಾಯಿತು. ಏಳು ಬಸ್ಗಳು ಮತ್ತು ಎರಡು ವಾಹನಗಳನ್ನು ಒಳಗೊಂಡ ಬೆಂಗಾವಲು ಪಡೆ ಅವರ ಗುರಿಯಾಗಿತ್ತು. ಒಂದು ಬಸ್ಗೆ ಐಇಡಿ ತುಂಬಿದ ವಾಹನವು ಡಿಕ್ಕಿ ಹೊಡೆದಿದೆ, ಬಹುಶಃ ಇದು ಆತ್ಮಾಹುತಿ ದಾಳಿ, ಇನ್ನೊಂದು ರಾಕೆಟ್-ಪ್ರೊಪೆಲ್ಡ್ ಗ್ರೆನೇಡ್ಗಳಿಂದ (ಆರ್ಪಿಜಿ) ದಾಳಿ ಮಾಡಲಾಗಿದೆ ”ಎಂದು ಪಾಕಿಸ್ತಾನಿ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಎಲ್ಎ ತನ್ನ ಅಧಿಕೃತ ಹೇಳಿಕೆಯಲ್ಲಿ, ಫತೇಹ್ ಸ್ಕ್ವಾಡ್ ಸ್ಫೋಟದ ನಂತರ ಬೆಂಗಾವಲು ಪಡೆಯನ್ನು ಸಮೀಪಿಸಲಾಯಿತು, ನಂತರ ಅದನ್ನು ಸುತ್ತುವರೆದು ವಾಹನದಲ್ಲಿದ್ದ ಎಲ್ಲಾ ಮಿಲಿಟರಿ ಸಿಬ್ಬಂದಿಯನ್ನು ವ್ಯವಸ್ಥಿತವಾಗಿ ಕೊಂದುಹಾಕಲಾಯಿತು” ಎಂದು ಹೇಳಿಕೊಂಡಿದೆ.
ದಾಳಿಯನ್ನು ಖಂಡಿಸಿರುವ ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು ಬೆಂಗಾವಲು ಪಡೆ ಏಳು ಬಸ್ಗಳು ಮತ್ತು ಎರಡು ಕಾರುಗಳನ್ನು ಹೊಂದಿದ್ದು, ಪಾಕಿಸ್ತಾನಿ ಸೈನಿಕರ ಪ್ರಾಣಹಾನಿಗಾಗಿ ದುಃಖ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಿಂದ ಖನಿಜ-ಸಮೃದ್ಧ ಪ್ರದೇಶವನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿರುವ ಬಿಎಲ್ಎ ಮತ್ತು ಕಳೆದ ವಾರ ಪೇಶಾವರಕ್ಕೆ ಹೋಗುವ ರೈಲನ್ನು ಹೈಜಾಕ್ ಮಾಡಿತ್ತು, ಹಾಗೂ ಅದರಲ್ಲಿದ್ದ ಎಲ್ಲಾ 214 ಮಿಲಿಟರಿ ಒತ್ತೆಯಾಳುಗಳನ್ನು ಕೊಂದಿರುವುದಾಗಿ ಎಂದು ಹೇಳಿಕೊಂಡಿದೆ. ಬಲೂಚ್ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿದರೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು ಎಂಬ ಷರತ್ತಿಗೆ ಪಾಕಿಸ್ತಾನ ಸರ್ಕಾರಕ್ಕೆ ನೀಡಿದ್ದ 48 ಗಂಟೆಗಳ ಗಡುವಿನೊಳಗೆ ಕ್ರಮಕೈಗೊಳ್ಳದ ಕಾರಣ ಪ್ರತಿಕಾರವಾಗಿ ಇದು ನಡೆದಿದೆ ಎಂದು ಗುಂಪು ಹೇಳಿಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ