ಮುಂಬೈ: ಉದ್ಯಮಿಯೊಬ್ಬರಿಗೆ 60 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ ಕುಂದ್ರಾ ವಿರುದ್ಧ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಮತ್ತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ ಕುಂದ್ರಾ ದಂಪತಿ ವಿರುದ್ಧ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ ಮಾಡಿದ ಆರೋಪ ಹೊರಿಸಲಾಗಿದೆ. ಈ ಪ್ರಕರಣವು ಸೆಲೆಬ್ರಿಟಿ ದಂಪತಿಯ ಈಗ ನಿಷ್ಕ್ರಿಯವಾಗಿರುವ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದೆ. ಉದ್ಯಮಿ ದೀಪಕ ಕೊಠಾರಿ ಅವರು 2015-2023ರ ಸುಮಾರಿಗೆ ವ್ಯವಹಾರ ವಿಸ್ತರಣೆಗಾಗಿ ಅವರಿಗೆ 60.48 ಕೋಟಿ ರೂ.ಗಳನ್ನು ನೀಡಿದ್ದರು, ಆದರೆ ಅವರು ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾ ವಿರುದ್ಧ ಉದ್ಯಮಿ ದೀಪಕ ಕೊಠಾರಿ ಎಂಬವರು ಪ್ರಕರಣ ದಾಖಲಿಸಿದ್ದು, ದಂಪತಿ 2015 ಮತ್ತು 2023 ರ ನಡುವೆ ತಮಗೆ 60 ಕೋಟಿ ರೂ. ವಂಚನೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.
ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ನ ನಿರ್ದೇಶಕ ಕೊಠಾರಿ ತಮ್ಮ ದೂರಿನಲ್ಲಿ, ರಾಜೇಶ ಆರ್ಯ ಎಂಬವರು ತಮಗೆ ದಂಪತಿಯನ್ನು ಪರಿಚಯಿಸಿದರು ಎಂದು ಹೇಳಿದ್ದಾರೆ, ಅವರು ಆಗ ಮನೆ ಶಾಪಿಂಗ್ ಮತ್ತು ಆನ್ಲೈನ್ ಚಿಲ್ಲರೆ ವೇದಿಕೆಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿದ್ದರು. ಆ ಸಮಯದಲ್ಲಿ, ದಂಪತಿ ಕಂಪನಿಯ 87.6% ಷೇರುಗಳನ್ನು ಹೊಂದಿದ್ದರು ಎಂದು ಹೇಳಿದ್ದಾರೆ.
ದಂಪತಿ ಆರಂಭದಲ್ಲಿ 12% ಬಡ್ಡಿಯಲ್ಲಿ 75 ಕೋಟಿ ರೂ. ಸಾಲವನ್ನು ಕೋರಿದ್ದರು ಎಂದು ಕೊಠಾರಿ ಹೇಳಿಕೊಂಡಿದ್ದಾರೆ. ನಂತರ ಹೆಚ್ಚಿನ ತೆರಿಗೆಯನ್ನು ತಪ್ಪಿಸಲು “ಹೂಡಿಕೆ”ಯಾಗಿ ಹಣವನ್ನು ವರ್ಗಾಯಿಸಲು ತಮ್ಮನ್ನು ಮನವೊಲಿಸಲಾಯಿತು, ಅದೇ ಸಮಯದಲ್ಲಿ ಮಾಸಿಕ ಆದಾಯ ಮತ್ತು ಅಸಲು ಮರುಪಾವತಿಯ ಭರವಸೆ ನೀಡಲಾಯಿತು.
ಭರವಸೆಗಳ ನಂತರ, ಕೊಠಾರಿ ಅವರು ಏಪ್ರಿಲ್ 2015 ರಲ್ಲಿ ಷೇರು ಚಂದಾದಾರಿಕೆ ಒಪ್ಪಂದದ ಅಡಿಯಲ್ಲಿ 31.95 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ ಮತ್ತು ಸೆಪ್ಟೆಂಬರ್ 2015 ರಲ್ಲಿ ಪೂರಕ ಒಪ್ಪಂದದ ಅಡಿಯಲ್ಲಿ 28.53 ಕೋಟಿ ರೂ.ಗಳನ್ನು ವರ್ಗಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟು ಮೊತ್ತವನ್ನು ಬೆಸ್ಟ್ ಡೀಲ್ ಟಿವಿಯ ಎಚ್ಡಿಎಫ್ಸಿ (HDFC) ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಶಿಲ್ಪಾ ಶೆಟ್ಟಿ ಸೆಪ್ಟೆಂಬರ್ 2016 ರಲ್ಲಿ ಬೆಸ್ಟ್ ಡೀಲ್ ಟಿವಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದಿನ ವರ್ಷ, ಮತ್ತೊಂದು ಒಪ್ಪಂದವನ್ನು ಪೂರೈಸುವಲ್ಲಿ ವಿಫಲವಾಗಿದ್ದಕ್ಕಾಗಿ ಕಂಪನಿಯ ವಿರುದ್ಧ ದಿವಾಳಿತನ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಯಿತು. ಮಧ್ಯವರ್ತಿ ರಾಜೇಶ ಆರ್ಯ ಮೂಲಕ ತನ್ನ ಹಣವನ್ನು ಮರುಪಡೆಯಲು ಪದೇ ಪದೇ ಮಾಡಿದ ಪ್ರಯತ್ನಗಳು ವಿಫಲವಾದವು ಎಂದು ಕೊಠಾರಿ ಆರೋಪಿಸಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ ಕುಂದರ ತಮ್ಮ ಹಣವನ್ನು ವೈಯಕ್ತಿಕ ಲಾಭಕ್ಕಾಗಿ “ಅಪ್ರಾಮಾಣಿಕವಾಗಿ” ಬಳಸಿಕೊಂಡಿದ್ದಾರೆ ಮತ್ತು ತಮ್ಮನ್ನು ವಂಚಿಸಿದ್ದಾರೆ ಎಂದು ತೀರ್ಮಾನಿಸಿ ಅವರು ದೂರು ದಾಖಲಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಆರ್ಥಿಕ ಅಪರಾಧ ವಿಭಾಗಕ್ಕೆ (EOW) ಹಸ್ತಾಂತರಿಸಲಾಗಿದೆ ಏಕೆಂದರೆ ಪ್ರಕರಣದ ಮೊತ್ತವು 10 ಕೋಟಿ ರೂ.ಗಳನ್ನು ಮೀರಿದೆ.


ನಿಮ್ಮ ಕಾಮೆಂಟ್ ಬರೆಯಿರಿ