ಮುಂಬೈ: ದಾದಾ ಸಾಹೇಬ ಪ್ರಶಸ್ತಿ ಪುರಸ್ಕೃತ ಹಿಂದಿ ಚಿತ್ರರಂಗದ ಹಿರಿಯ ನಟ ಮತ್ತು ಚಲನಚಿತ್ರ ನಿರ್ದೇಶಕರಾದ ಮನೋಜಕುಮಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಟ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಮನೋಜಕುಮಾರ ಅವರು ನಿಧನರಾಗಿದ್ದನ್ನು ಅವರ ಪುತ್ರ ಕುನಾಲ್ ಗೋಸ್ವಾಮಿ ದೃಢಪಡಿಸಿದ್ದಾರೆ ಎಂದು ಎಎನ್ಐಗೆ ಸುದ್ದಿ ವರದಿ ಮಾಡಿದೆ. ದೀರ್ಘಕಾಲದವರೆಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳೊಂದಿಗೆ ಹೋರಾಡಿದ ನಂತರ ಅವರು ಶುಕ್ರವಾರ ಮುಂಜಾನೆ 3:30 ರ ಸುಮಾರಿಗೆ ನಿಧನರಾದರು ಎಂದು ಹೇಳಿದರು. ನಟನ ಪಾರ್ಥಿವ ಶರೀರವನ್ನು ಜುಹುದಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗುತ್ತದೆ. ಶನಿವಾರ ಪವನ್ ಹನ್ಸ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ.
ಮನೋಜಕುಮಾರ ಅವರ ಮೂಲ ಹೆಸರು ಹರಿಕೃಷ್ಣನ್ ಗಿರಿ ಗೋಸ್ವಾಮಿ. ಅವರು 1937 ರಲ್ಲಿ ಅಬೋಟಾಬಾದ್ನಲ್ಲಿ ಜನಿಸಿದರು, ಅದು ಈಗಿನ ಪಾಕಿಸ್ತಾನದಲ್ಲಿದೆ. ಅಬೋಟಾಬಾದ್ ಬ್ರಿಟಿಷ್ ಇಂಡಿಯಾದ ವಾಯುವ್ಯ ಫ್ರಾಂಟಿಯರ್ ಪ್ರಾಂತ್ಯದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ (ಈಗ ಪಾಕಿಸ್ತಾನದಖೈಬರ್ ಪಖ್ತುಂಕ್ವಾ ಪ್ರದೇಶ). ವಿಭಜನೆಯ ಸಮಯದಲ್ಲಿ ಅವರು ಮತ್ತು ಅವರ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತು. ಅವರು 1957 ರಲ್ಲಿ ‘ಫ್ಯಾಶನ್’ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಆದರೆ, ಅವರ ‘ಕಾಂಚ್ ಕಿ ಗುಡಿಯಾ’ ಚಿತ್ರವು ಅವರಿಗೆ ಉದ್ಯಮದಲ್ಲಿ ಮೊದಲ ಬ್ರೇಕ್ ನೀಡಿತು. ಮನೋಜಕುಮಾರ ದೇಶಭಕ್ತಿಯ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ಅವರ ಕೆಲವು ಹಿಟ್ ಚಿತ್ರಗಳಲ್ಲಿ ‘ಪುರಬ್ ಔರ್ ಪಶ್ಚಿಮ್, ‘ಕ್ರಾಂತಿ’ ಮತ್ತು ‘ರೋಟಿ, ಕಪಡಾ ಔರ್ ಮಕಾನ್’ ಸೇರಿವೆ.
ಮನೋಜಕುಮಾರ ಅವರು ದೇಶಭಕ್ತಿಯ ವಿಷಯಗಳ ಚಲನಚಿತ್ರಗಳ ಮೂಲಕ ಹೆಸರಾಗಿದ್ದರು. ಅವರ ಕೆಲವು ಜನಪ್ರಿಯ ಸಿನೆಮಾಗಳಲ್ಲಿ “ಶಹೀದ್” (1965), “ಉಪಕಾರ್” (1967), “ಪುರಬ್ ಔರ್ ಪಶ್ಚಿಮ್” (1970), ಮತ್ತು “ರೋಟಿ ಕಪ್ಡಾ ಔರ್ ಮಕಾನ್” (1974) ಸೇರಿವೆ. ಅಂತಹ ಚಲನಚಿತ್ರಗಳೊಂದಿಗೆ ಅವರ ಒಡನಾಟದಿಂದಾಗಿ, ನಟನನ್ನು “ಭರತಕುಮಾರ” ಎಂದು ವ್ಯಾಪಕವಾಗಿ ಕರೆಯಲಾಯಿತು. ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಅವರು ‘ಉಪಕಾರ್’, ‘ಶೋರ್’, ‘ಜೈ ಹಿಂದಿ’ ಮುಂತಾದ ಟೈಮ್ಲೆಸ್ ಕ್ಲಾಸಿಕ್ ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ.
ಅವರು “ಹರಿಯಾಲಿ ಔರ್ ರಾಸ್ತಾ”, “ವೋ ಕೌನ್ ಥಿ”, “ಹಿಮಾಲಯ ಕಿ ಗಾಡ್ ಮೇ”, “ದೋ ಬದನ್”, “ಪತ್ತರ್ ಕೆ ಸನಮ್”, “ನೀಲ್ ಕಮಾಲ್”, ಮತ್ತು “ಕ್ರಾಂತಿ” ಮುಂತಾದ ಹಲವಾರು ಜನಪ್ರಿಯ ಚಲನಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.
ಮನೋಜಕುಮಾರ ಅವರು ಭಾರತೀಯ ಚಿತ್ರರಂಗದ ಮೇರು ನಟರಲ್ಲಿ ಒಬ್ಬರು ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 1992 ರಲ್ಲಿ ಪದ್ಮಶ್ರೀ ಮತ್ತು 2015 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಏಳು ಫಿಲ್ಮ್ಫೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಚಿತ್ರ ನಿರ್ಮಾಪಕ ಅಶೋಕ ಪಂಡಿತ್ ಅವರು ಮನೋಜಕುಮಾರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಇದು ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ. ಭಾರತೀಯ ಚಿತ್ರರಂಗದ ‘ಸಿಂಹ’ ಮನೋಜಕುಮಾರಜಿ ಇನ್ನಿಲ್ಲ… ಇದು ಉದ್ಯಮಕ್ಕೆ ದೊಡ್ಡ ನಷ್ಟ ಮತ್ತು ಇಡೀ ಉದ್ಯಮವು ಅವರನ್ನು ಕಳೆದುಕೊಂಡಿದೆ” ಎಂದು ಅವರು ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ