ಬ್ಯಾರಿಕೇಡ್‌ ತೆರವು ಮಾಡದಿದ್ದರೆ ಮಾತುಕತೆಯಿಲ್ಲ: ರೈತ ಸಂಘಟನೆ

ನವ ದೆಹಲಿ: ದೆಹಲಿ ಗಡಿಯಲ್ಲಿ ಪೊಲೀಸರು ರಸ್ತೆಗಳಲ್ಲಿ ನಿರ್ಮಿಸಿದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವವರೆಗೆ ಹಾಗೂ ಇಂಟರ್‌ನೆಟ್‌ ಸೇವೆಯ ತಡೆಯನ್ನು ತೆರವುಗೊಳಿಸುವವರೆಗೆ ಕೇಂದ್ರ ಸರಕಾರದೊಂದಿಗೆ ಯಾವುದೇ ಔಪಚಾರಿಕ ಮಾತುಕತೆ ನಡೆಸುವುದಿಲ್ಲ ಎಂದು ರೈತ ಹೋರಾಟದ ನೇತೃತ್ವ ವಹಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿದೆ. ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ ಟಿಕಾಯತ್‌,  ಪೊಲೀಸರು ಬ್ಯಾರಿಕೇಡ್‌ ಹಾಕುವ ಮೂಲಕ ರೈತರ … Continued

ಕೊರೋನಾ: ಭಾರತ, ಅಮೆರಿಕ ಸೇರಿ ೨೦ ದೇಶಗಳ ನಾಗರಿಕರಿಗೆ ಸೌದಿ ನಿರ್ಭಂಧ

ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೌದಿ ಅರೆಬಿಯಾ ಭಾರತ ಹಾಗೂ ಅಮೆರಿಕ ಸೇರಿದಂತೆ 20 ದೇಶಗಳ ನಾಗರಿಕರು ತನ್ನ ದೇಶಕ್ಕೆ ಆಗಮಿಸುವುದನ್ನು  ಮಂಗಳವಾರದಿಂದ ನಿಷೇಧಿಸಿದೆ. ಈ “ತಾತ್ಕಾಲಿಕ ನಿಷೇಧ” ರಾಜತಾಂತ್ರಿಕರು, ಸೌದಿ ನಾಗರಿಕರು,  ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಅನ್ವಯಿಸುವುದಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ. ಆದರೆ ಇದು ಸೌದಿ … Continued

ತಾಂತ್ರಿಕ ಸಮಸ್ಯೆ: ಐಟಿಐ ವಿದ್ಯಾರ್ಥಿಗಳ ಪರೀಕ್ಷೆಗೆ ತೊಡಕು

ಬೆಂಗಳೂರು: ತಾಂತ್ರಿಕ ತೊಂದರೆಯಿಂದಾಗಿ ಐಟಿಐ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವ ಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ೧೭೫೦ಕ್ಕೂ ಹೆಚ್ಚು ಐಟಿಐ ಕಾಲೇಜುಗಳಿದ್ದು, ೧ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿದೆ. ಕಳೆದ ವರ್ಷ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಕೊವಿಡ್‌ ಕಾರಣದಿಂದ ಮುಂದೂಡಲಾಗಿತ್ತು. ೨೦೨೦ರ ನವಂಬರ್‌ನಲ್ಲಿ ಪ್ರಾಯೋಗಿಕ ಹಾಗೂ ಎಂಜಿನೀಯರಿಂಗ್‌ ಡ್ರಾಯಿಂಗ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಉಳಿದ ವಿಷಯಗಳ ಪರೀಕ್ಷೆಗಳನ್ನು ಆನ್‌ಲೈನ್‌ … Continued

ವಿಶ್ವದಲ್ಲಿ ಈಗ ಸ್ತನ ಕ್ಯಾನ್ಸರ್‌ ಹೆಚ್ಚು

ನವ ದೆಹಲಿ: ಶ್ವಾಸಕೋಶ ಕ್ಯಾನ್ಸರ್‌ ಹಿಂದಿಕ್ಕಿದ ಸ್ತನ ಕ್ಯಾನ್ಸರ್‌ ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್‌ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಎರಡು ದಶಕಗಳ ಹಿಂದೆ ಶ್ವಾಸಕೋಶ ಕ್ಯಾನ್ಸರ್‌ ಸಾಮಾನ್ಯವಾಗಿತ್ತು, ಆದರೆ ಈಗ ಅದು ದ್ವಿತೀಯ ಸ್ಥಾನ ತಲುಪಿದೆ. ಕರುಳಿನ ಕ್ಯಾನ್ಸರ್‌ ತೃತಿಯ ಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್‌ ತಜ್ಞ ಡಾ. … Continued

ಬಿಜೆಪಿ ಸರ್ಕಾರ ಕೆಟ್ಟು ನಿಂತಿರುವ ಡಕೋಟಾ ಬಸ್:ಸಿದ್ದರಾಮಯ್ಯ

ಬೆಂಗಳೂರು:  ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಈ ಸರ್ಕಾರ ಕೆಟ್ಟು ನಿಂತಿರುವ ಡಕೋಟಾ ಬಸ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿ,   ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್‌ಶೆಟ್ಟರ್ ಅವರು ಸರ್ಕಾರ ಟೇಕ್ … Continued

ಬೋಗಸ್‌ ಬಿಲ್‌ ತೆಗೆದುಕೊಂಡಿದ್ದರೆ ತನಿಖೆ:ಕಾರಜೋಳ

ಬೆಂಗಳೂರು: ಯಾವುದೇ ಕೆಲಸ ಮಾಡದೆ ಬೋಗಸ್ ಬಿಲ್ ಮಾಡಿ ತೆಗೆದುಕೊಂಡಿದ್ದರೆ ಇಲಾಖೆಯ ಉನ್ನತಾಧಿಕಾರಿಗಳಿಂದ ತನಿಖೆ ಮಾಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನ ಪರಿಷತ್ತಿಗೆ ತಿಳಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಆ ವರ್ಗದ ಮನೆಗಳಿಂದ ಹಿಡಿದು ಶಾಲೆ, ಮಾರುಕಟ್ಟೆ, ದೇವಾಲಯದವರೆಗೂ ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಅವರು ಹೋಗಿ ಬರುವ ಶಾಲೆ, … Continued

ದೆಹಲಿ ಘರ್ಷಣೆ: ದೀಪ ಸಿಧು ಮಾಹಿತಿ ಕೊಟ್ಟವರಿಗೆ ೧ ಲಕ್ಷ ರೂ. ಬಹುಮಾನ

ನವ ದೆಹಲಿ:  ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ  ರೈತರ  ಪ್ರತಿಭಟನೆ ವೇಳೆ  ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಟ, ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಹಾಗೂ ಇತರ ಮೂವರ  ಮಾಹಿತಿ ನೀಡಿದವರಿಗೆ ಪೊಲೀಸರು ಒಂದು ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.ಇದಲ್ಲದೆ ಬೂಟಾ ಸಿಂಗ್, ಸುಖ್‍ದೇವ್ ಸಿಂಗ್ ಹಾಗೂ ಮತ್ತಿಬ್ಬರ ಸುಳಿವು ನೀಡಿದವರಿಗೆ ಐವತ್ತು ಸಾವಿರ ರೂ.ಗಳ  … Continued

ಎಚ್‌ಎಎಲ್‌:ಮತ್ತೊಂದು ಯುದ್ಧವಿಮಾನ ಉತ್ಪಾದನಾ ಘಟಕ ಲೋಕಾರ್ಪಣೆ

ಬೆಂಗಳೂರು: ರಕ್ಷಣಾ ಸಚಿವ ರಾಜನಾಥ ಸಿಂಗ್‌ ಇಲ್ಲಿನ ಹಿಂದೂಸ್ಥಾನ ಏರೊನಾಟಿಕ್ಸ್‌ ಲಿಮಿಟೆಡ್‌ನಲ್ಲಿ ದ್ವಿತೀಯ ಯುದ್ಧವಿಮಾನ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಯುದ್ಧವಿಮಾನ ಉತ್ಪಾದನೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದ್ದು, ಭಾರತೀಯ ಫೈಟರ್ಜೆ‌ಟ್‌ ಎಲ್‌ಸಿಎ ತೇಜಸ್‌ ಉತ್ಪಾದನೆಯನ್ನು ಪ್ರತಿ ವರ್ಷಕ್ಕೆ ೧೬ಕ್ಕೆ ಹೆಚ್ಚಿಸಲಾಗುವುದು ಎಂದರು. ನಾವು ಯುದ್ಧ ವಿಮಾನಗಳಿಗಾಗಿ ಅನ್ಯ ದೇಶಗಳನ್ನು ಅವಲಂಬಿಸುವುದಿಲ್ಲ ಎಂದು ಅವರು … Continued

ಟಿಎಂಸಿಯಿಂದ ಬಿಜೆಪಿಗೆ ಸಾಮೂಹಿಕ ವಲಸೆ ತಡೆಗೆ ನಿರ್ಧಾರ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನಿಂದ  ಬಿಜೆಪಿಗೆ ಸಾಮೂಹಿಕ ವಲಸೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿರು ತಮ್ಮ ಪಕ್ಷ ಆಡಳಿತ ಪಕ್ಷದ “ಬಿʼ ಟೀಮ್‌ ಆಗಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಂದೆ ಪಕ್ಷದ ಸ್ಥಳಿಯ  ಮುಖಂಡರ ಸಲಹೆ ಪಡೆದುಕೊಂಡು ಆಯ್ಕೆ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಬಿಜೆಪಿ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗಿಯ ತಿಳಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ … Continued

ಪಾಕ್‌ ಪರ ಘೋಷಣೆ ಇಂದು ಆರೋಪಿಗಳ ವಿಚಾರಣೆ

ಹುಬ್ಬಳ್ಳಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳಿಗೆ ನ್ಯಾಯಾಲಯ ಸಮನ್ಸ್‌ ನೀಡಿದ ಹಿನ್ನೆಲೆಯಲ್ಲಿ ಬುಧವಾರ ೫ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯಕ್ಕೆ ಮೂವರು ಆರೋಪಿಗಳು ಹಾಜರಾದರು. ಭಾರಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಧೀಶರು  ಮುಂದಿನ ವಿಚಾರಣೆಯನ್ನು ಮಾರ್ಚ್‌ ೧೦ಕ್ಕೆ ಮುಂದೂಡಿದರು. ನಗರದ ಕಾಲೇಜೊಂದರಲ್ಲಿ … Continued