ಕಾಂಗ್ರೆಸ್‌ಗೆ ಬಾಹ್ಯ ಬೆಂಬಲದ ಪತ್ರ ನೀಡಿದ ಶರತ್‌ ಬಚ್ಚೇ ಗೌಡ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶಾಸಕ ಶರತ್ ಬಚ್ಚೇಗೌಡ ಗುರುವಾರ (ಫೆ.೨೫) ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‍ಗೆ ಬಾಹ್ಯ ಬೆಂಬಲ ನೀಡುವ ಅಧಿಕೃತ ಪತ್ರ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದ ಆವರಣದಲ್ಲಿ ನಡೆದ ಕಾರ್ಕ್ರಮದಲ್ಲಿ ಶರತ್ ಬಚ್ಚೇಗೌಡ ನೀಡಿದ ಬಾಹ್ಯ ಬೆಂಬಲವನ್ನು ಕಾಂಗ್ರೆಸ್ ಶಾಸಕಾಂಗ … Continued

ಪೆಟ್ರೋಲ್‌ ಬೆಲೆ ಹೆಚ್ಚಳ ಖಂಡಿಸಿ ಎಲೆಕ್ಟ್ರಿಕ್‌ ಬೈಕ್‌ನಲ್ಲಿ ಮಮತಾ ದೀದಿ ಸವಾರಿ

ಕೊಲ್ಕತ್ತಾ: ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಕೂಟರ್‍ನಲ್ಲಿ ಸಂಚರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ದೇಶದಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ರಾಜ್ಯ ಕಾರ್ಯದರ್ಶಿ ನಬಣ್ಣಾ ಅವರೊಂದಿಗೆ ಮುಖ್ಯಮಂತ್ರಿಯವರು ಸ್ಕೂಟರ್‍ನಲ್ಲಿ ಕುಳಿತಿದ್ದರು. ಇದರ ವಿಡಿಯೋ ಈಗ ವೈರಲ್ ಆಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ … Continued

ಡಿಪ್ಲೊಮಾ ಪಠ್ಯ ಕ್ರಮದಲ್ಲಿ ಆಮೂಲಾಗ್ರ ಪರಿಷ್ಕರಣೆ

ಮಂಗಳೂರು: ಶಿಕ್ಷಣ ಕ್ಷೇತ್ರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಅನೇಕ ಕ್ರಾಂತಿಕಾರಕ ಸುಧಾರಣೆಗಳನ್ನು ರಾಜ್ಯ ಸರಕಾರ ಕೈಗೊಂಡಿದ್ದು, ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಮಂಗಳೂರಿನಲ್ಲಿಂದು ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ʼಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌, ರೀಸರ್ಚ್‌ ಡಿಸೈನ್‌ ಲ್ಯಾಬ್‌ ಮತ್ತು ಇಂಡಸ್ಟ್ರೀ … Continued

ಇಂಧನ ಬೆಲೆ ಕಡಿಮೆ ಮಾಡಲು ಕೇಂದ್ರ-ರಾಜ್ಯಗಳ ಮಧ್ಯೆ ಸಮನ್ವಯತೆ ಬೇಕು

ಹೆಚ್ಚುತ್ತಿರುವ ಇಂಧನ ಬೆಲೆಗಳನ್ನು ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಧ್ಯೆ ಸಮನ್ವಯತೆಯ ಅವಶ್ಯಕತೆಯಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಗವರ್ಸರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯದ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ ಏಕೆಂದರೆ ಎರಡೂ ಸರಕಾರಗಳು ತೆರಿಗೆಗಳನ್ನು ವಿಧಿಸುತ್ತಿವೆ. ರಾಜ್ಯಗಳು ಮತ್ತು ಕೇಂದ್ರವು ತಮ್ಮ ಆದಾಯದ ಒತ್ತಡವನ್ನು … Continued

ಬಿಜೆಪಿ ಸೇರಿದ ಬಂಗಾಳ ನಟಿ ಪಾಯಲ್‌ ಸರ್ಕಾರ್‌

ಕೋಲ್ಕತ್ತ: ಬಂಗಾಳಿ ನಟಿ ಪಾಯಲ್‌ ಸರ್ಕಾರ್‌ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ರಾಜ್ಯ ಪಕ್ಷದ ಮುಖ್ಯಸ್ಥ ದಿಲೀಪ್ ಘೋಷ್ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಉಪಸ್ಥಿತಿಯಲ್ಲಿ ಕೇಸರಿ ಪಕ್ಷಕ್ಕೆ ಸೇರಿಕೊಂಡರು. ಕಳೆದ ವಾರ ಜನಪ್ರಿಯ ಬಂಗಾಳಿ ನಟ ಯಶ್ ದಾಸ್‌ಗುಪ್ತಾ ಅವರು ಬಿಜೆಪಿಗೆ ಸೇರಿದರು. ೨ ದಿನಗಳ ಹಿಂದೆ ಮಾಜಿ ಕ್ರಿಕೆಟಿಗ … Continued

ನ್ಯೂಯಾರ್ಕ್‌ನಲ್ಲಿ ಹರಡುತ್ತಿದೆ ನೂತನ ಕೊರೊನಾ ರೂಪಾಂತರಿ ಸೋಂಕು

ಕೊರೊನಾ ವೈರಸ್‌ನ ಹೊಸ ರೂಪಾಂತರಿ ನ್ಯೂಯಾರ್ಕ್‌ನಲ್ಲಿ ವೇಗವಾಗಿ ಹರಡುತ್ತಿದ್ದು, ಅದು ಲಸಿಕೆಯ ಪರಿಣಾಮವನ್ನು ದುರ್ಬಲಗೊಳಿಸುವ ಸಾಮರ್ಥ್ಯ ಹೊಂದಿರುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಬಿ.೧.೫೨೬ ಹೆಸರಿನ ರೂಪಾಂತರಿ ನವಂಬರ್‌ನಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಮೊದಲು ಕಾಣಿಸಿಕೊಂಡಿತ್ತು. ಈಗ ಇದು ವೇಗವಾಗಿ ಹರಡುತ್ತಿದೆ. ಹೊಸ ರೂಪಾಂತರಿ ವೈರಸ್‌ ಬಗ್ಗೆ ಯಾವುದೇ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಸಂಶೋಧನಾ ವರದಿ ಪ್ರಕಟಗೊಂಡಿಲ್ಲವಾದರೂ ಸ್ಥಿರ ಫಲಿತಾಂಶಗಳು … Continued

ತಹಶೀಲ್ದಾರನ ಕೊಲೆಗೆ ಯತ್ನ: ತಂದೆ-ಮಗನ ಬಂಧನ

ಬಾಗಲಕೋಟೆ: ಸಹೋದರರ ನಡುವಿನ ಆಸ್ತಿ ವಿವಾದದಲ್ಲಿ ಆಸ್ತಿ ಪತ್ರದಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಘಟನೆ ಜಮಖಂಡಿಯಲ್ಲಿ ನಡೆದಿದೆ. ರೈತ ಲಕ್ಷ್ಮಣ ಕಿತ್ತೂರು (70) ಹಾಗೂ ಮಗ ಬಸವರಾಜ್‌ ಕಿತ್ತೂರು (48) ಎಂಬುವರಿಂದ ಕೃತ್ಯ ನಡೆದಿದೆ. ಘಟನೆ ಖಂಡಿಸಿ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಪ್ರತಿಭಟನೆ … Continued

ಬಿಜೆಪಿ ರಾಜ್ಯ ಘಟಕದ ವಕ್ತಾರರ ನೇಮಕ

ಬೆಂಗಳೂರು: ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ವಕ್ತಾರರ ನೇಮಕ ಮಾಡಲಾಗಿದೆ. ಮುಖ್ಯ ವಕ್ತಾರರಾಗಿ ಕ್ಯಾ.ಗಣೇಶ ಕಾರ್ಣಿಕ, ವಕ್ತಾರರಾಗಿ ಜಗ್ಗೇಶ, ರಾಜೂಗೌಡ, ರಾಜಕುಮಾರ ಪಾಟೀಲ ತೇಲ್ಕೂರ, ಚಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಗಿರಿಧರ ಉಪಾಧ್ಯಾಯ, ಪಿ.ರಾಜೀವ, 0ಎಂ.ಬಿ.ಜಿರಲಿ, ಮಹೇಶ್‌ ನೇಮಕಗೊಂಡಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ತಿಳಿಸಿದ್ದಾರೆ.

ತಮಿಳುನಾಡು:೯,೧೦, ೧೧ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಉತ್ತೀರ್ಣ..!‌

ತಮಿಳುನಾಡಿನಲ್ಲಿ 9, 10 ಮತ್ತು 11ನೇ ತರಗತಿಗಳಲ್ಲಿ ಕಲಿಯುತ್ತಿರುವ (ರಾಜ್ಯ ಪಠ್ಯಕ್ರಮ) ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಗುರುವಾರ ಪ್ರಕಟಿಸಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಅವರನ್ನು ‘ಆಲ್ ಪಾಸ್’ ಎಂದು ಘೋಷಿಸಿದ್ದಾರೆ. ಮೇ 3 ಮತ್ತು ಮೇ 21 ರ ನಡುವೆ ಸರ್ಕಾರ 12 ನೇ ತರಗತಿ ಪರೀಕ್ಷೆಗಳನ್ನು ಘೋಷಿಸಿದ … Continued

ತಿಂಗಳ ನಂತರ ಮತ್ತೆ ೧೫ ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕಿತರ ಸಂಖ್ಯೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ದೈನಂದಿನ ಕೊರೊನಾ ವೈರಸ್ ಸೋಂಕುಗಳು ಸುಮಾರು ಒಂದು ತಿಂಗಳ ನಂತರ ಮತ್ತೆ 15,000 ದಾಟಿದೆ. ಕಳೆದ ೨೪ ಗಂಟೆಯಲ್ಲಿ ಒಟ್ಟು 16,738 ಸೋಂಕುಗಳು ವರದಿಯಾಗಿದೆ.138 ದೈನಂದಿನ ಹೊಸ ಸಾವುನೋವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಜನವರಿ 29 ರಂದು, 24 ಗಂಟೆಗಳ … Continued