ಭಾರತದಲ್ಲಿ 70 ದಿನಗಳಲ್ಲೇ ಕಡಿಮೆ ಕೊರೊನಾ ದೈನಂದಿನ ಸೋಂಕು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 84,332 ಹೊಸ ಪ್ರಕರಣಗಳು ಮತ್ತು 4,002 ಸಾವುಗಳು ದಾಖಲಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ 70 ದಿನಗಳಲ್ಲಿ ದೇಶವು ವರದಿ ಮಾಡಿದ ಅತಿ ಕಡಿಮೆ ದೈನಂದಿನ ಪ್ರಕರಣ ಇದಾಗಿದೆ. ಇದೇ ಸಮಯದಲ್ಲಿ 1,21,311 ರೋಗಿಗಳು ಚೇತರಿಸಿಕೊಂಡಿದ್ದಾರೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,93,59,155 … Continued

ಮೇ 4 ರಿಂದ 23ನೇ ಬಾರಿಗೆ ಏರಿಕೆ : ಇಂದು ದಾಖಲೆ ಗರಿಷ್ಠಮಟ್ಟ ಮುಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ಎಲ್ಲ ಮಹಾನಗರಗಳಲ್ಲಿ ಸತತ ಎರಡನೇ ಬಾರಿಗೆ ದರಗಳನ್ನು ಹೆಚ್ಚಿಸಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ (ಜೂನ್ 12) ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಮೇ 4 ರಿಂದ ಈ ಹೆಚ್ಚಳವು 23ನೇ ಏರಿಕೆಯಾಗಿದೆ. ಇಂದಿನ (ಶನಿವಾರದ) ಬೆಲೆ ಪರಿಷ್ಕರಣೆಯೊಂದಿಗೆ, ಮುಂಬೈನಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 102.30 ರೂ., ಡೀಸೆಲ್ … Continued

ದೇಶದಲ್ಲಿ 31,219 ಬ್ಲ್ಯಾಕ್​ ಫಂಗಸ್ ಪ್ರಕರಣಗಳು, 2,109 ಸಾವು; ಕರ್ನಾಟಕದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು

ನವದೆಹಲಿ; ಕೋವಿಡ್​-19ನಿಂದ ಚೇತರಿಸಿಕೊಂಡವರಲ್ಲಿ ಮ್ಯುಕರ್​ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಈಗ ಹೆಮ್ಮಾರಿಯಾಗಿ ಕಾಡುತ್ತಿದೆ. ಈ ಭಯಾನಕ ರೋಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಳೆದ ಮೂರು ವಾರಗಳಲ್ಲಿ ಸೋಂಕಿನ ಪ್ರಮಾಣ ಶೇಕಡಾ 150ರಷ್ಟು ಬೆಳೆದಿದೆ. ಮರಣ ಪ್ರಮಾಣ ಶೇಕಡಾ 50ರಷ್ಟಿದೆ. ಸುಮಾರು 20 ದಿನಗಳಲ್ಲಿ ದೇಶದ ವಿವಿಧೆಡೆ 31,216 … Continued

ಅಪರೂಪದ ‘ರಾಪುಂಜೆಲ್’ ಸಿಂಡ್ರೋಮ್ ಹೊಂದಿದ್ದ ಹುಡುಗಿ ಉಳಿಸಿದ ವೈದ್ಯರು, ಹೊಟ್ಟೆಯೊಳಗಿತ್ತು 2 ಕೆಜಿ ಕೂದಲು…!

ಹೈದರಾಬಾದ್: ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ 17 ವರ್ಷದ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಾಲಕಿಯನ್ನು “ರಾಪುಂಜೆಲ್ ಸಿಂಡ್ರೋಮ್” ಎಂಬ ಅಪರೂಪದ ಕಾಯಿಲೆಯಿಂದ ರಕ್ಷಿಸಲಾಗಿದೆ. ಈ ರೋಗದಲ್ಲಿ ಮಾನಸಿಕ ಸಮಸ್ಯೆಗಳಿಂದಾಗಿ ರೋಗಿಗಳು ತಮ್ಮ ಕೂದಲನ್ನು ಸೇವಿಸುತ್ತಾರೆ. ಈ ಸಂದರ್ಭದಲ್ಲಿ, ಶಂಶಾಬಾದಿನ ಹುಡುಗಿ ಕಳೆದ 5 ತಿಂಗಳಿಂದ ಹಾಗೆ ಮಾಡುತ್ತಿದ್ದಳು ಮತ್ತು ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ ಅವರನ್ನೊಳಗೊಂಡ … Continued

ತಂದೆ ಕೊರೊನಾದಿಂದ ಸಾವಿಗೀಡಾದ ನಂತರ  ಕುಟುಂಬ ಪೋಷಿಸಲು ಪುರೋಹಿತಳಾದ 10 ವರ್ಷದ ಬಾಲಕಿ..!

ತಂದೆ ಕೋವಿಡ್ -19 ರಿಂದ ನಿಧನರಾದ ನಂತರ, ತನ್ನ ತಂದೆಯ ಪುರೋಹಿತ ವೃತ್ತಿಯನ್ನು ಕೇವಲ 10 ವರ್ಷದ ಮಗಳು ಶ್ರೀವಿದ್ಯಾ ಮುಂದುವರಿಸಿದ್ದಾಳೆ..! ತೆಲಂಗಾಣದ ನಿಜಾಮಾಬಾದ್ ಜಿಲ್ಲೆಗೆ ಸೇರಿದ ಬೊಗರಾಮ್ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಆಕೆಯ ತಂದೆ ಸಂತೋಷ್ ಪೂಜಾರಿ ಆಗಿದ್ದರು ಮತ್ತು ಕೊರೊನಾ ವೈರಸ್ ಕಾಯಿಲೆಯಿಂದ ಇತ್ತೀಚೆಗೆ ನಿಧನರಾದರು. ಸಾಂಕ್ರಾಮಿಕ ಪರಿಣಾಮ ತನ್ನ ತಂದೆ ಕಳೆದುಕೊಂಡ … Continued

ಕೇಂದ್ರ ಸಂಪುಟ ಪುನಾರಚನೆ ಊಹಾಪೋಹದ ಮಧ್ಯೆ ಮೋದಿ, ನಡ್ಡಾ, ಅಮಿತ್ ಶಾ ಸಭೆ

ನವದೆಹಲಿ: ಕೇಂದ್ರ ಸಂಪುಟ ಪುನಾರಚನೆ ಕುರಿತು ವ್ಯಾಪಕ ಸುದ್ದಿ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. 2019ರ ಮೇನಲ್ಲಿ ಎರಡನೇ ಬಾರಿಗೆ ಸರ್ಕಾರ ರಚಿಸಿದ್ದ ಮೋದಿ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ್ದು, ಈ 2 ವರ್ಷಗಳಲ್ಲಿ ಮೋದಿ ಸರ್ಕಾರ ಸಂಪುಟ ಪುನಾರಚನೆ … Continued

ಕೋವಿಡ್‌-19 ರೋಗದಿಂದ ಚೇತರಿಸಿಕೊಂಡವರಿಗೆ ಈಗ ಕಿವಿ ಕೇಳದ ಸಮಸ್ಯೆ: ದೆಹಲಿಯಲ್ಲಿ 15 ಪ್ರಕರಣಗಳು..!

ನವದೆಹಲಿ: ನೀವು ಇದ್ದಕ್ಕಿದ್ದಂತೆ ಶ್ರವಣ ನಷ್ಟ ಅಥವಾ ಕಿವಿ ಸರಿಯಾಗಿ ಕೇಳದ ಸ್ಥಿತಿ ಅನುಭವಿಸಲು ಪ್ರಾರಂಭಿಸಿದ್ದೀರಾ? ನಿಮ್ಮ ಕಿವಿಯಲ್ಲಿ ಶಿಳ್ಳೆ ಹೊಡೆಯುವುದನ್ನು ನೀವು ಕೇಳುತ್ತೀರಾ? ನೀವು ಇತ್ತೀಚೆಗೆ ಕೊರೊನಾ ವೈರಸ್‌ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಈ ಸುದ್ದಿ ನಿಮಗೆ ಮುಖ್ಯವಾಗಿದೆ. ಕೊರೊನಾ ವೈರಸ್ಸಿನಿಂದ ಚೇತರಿಸಿಕೊಳ್ಳುವ ಅನೇಕ ರೋಗಿಗಳಲ್ಲಿ ಶ್ರವಣ ನಷ್ಟವು ಸಂಭವಿಸುತ್ತಿದೆ ಮತ್ತು ಕೆಲವು ಜನರಲ್ಲಿ, ಈ … Continued

7 ನೇ ವೇತನ ಆಯೋಗ: ಡಿಎ, ಡಿಆರ್ ಬಾಕಿ, ಕೇಂದ್ರ ಸರ್ಕಾರದ ಜೊತೆ ಜೆಸಿಎಂ ರಾಷ್ಟ್ರೀಯ ಮಂಡಳಿ ಸಭೆ ನಿಗದಿ

ನವದೆಹಲಿ; ಡಿಎ (Dearness Allowance) ಮತ್ತು ಡಿಆರ್(Dearness Relief) ಬಗ್ಗೆ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಒಳ್ಳೆಯ ಸುದ್ದಿಗಾಗಿ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಸಂಘಟನೆಯಾದ ಜೆಸಿಎಂನ ರಾಷ್ಟ್ರೀಯ ಮಂಡಳಿಯ ಸಭೆಯನ್ನು ಈ ತಿಂಗಳ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಿಗದಿಪಡಿಸಲಾಗಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮತ್ತು … Continued

ಕೋವಿಡ್​ ವಿಚಾರದಲ್ಲಿ ಕೇಂದ್ರ ವಿರುದ್ಧ ಆರೋಪ: ಲಕ್ಷದ್ವೀಪದ ನಟಿ ಐಷಾ ಸುಲ್ತಾನ್​ ದೇಶದ್ರೋಹ ಪ್ರಕರಣ

ಕೋವಿಡ್​ ವಿಚಾರದಲ್ಲಿ ಕೇಂದ್ರದ ವಿರುದ್ಧ ಮಾತನಾಡಿರುವ ಲಕ್ಷದ್ವೀಪದ ನಟಿ ಆಯಿಷಾ ಸುಲ್ತಾನ್​ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಇದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಯಿಷಾ ಇತ್ತೀಚೆಗೆ ಮಾಧ್ಯಮವೊಂದರ ಚರ್ಚೆಯಲ್ಲಿ ಭಾಗಿಯಾಗಿದ್ದಾಗ ಲಕ್ಷದ್ವೀಪದಲ್ಲಿ ಕೊರೊನಾ ಹೆಚ್ಚಲು ಇಲ್ಲಿನ ಅಡ್ಮಿನಿಸ್ಟ್ರೇಟರ್​ ಪ್ರಫುಲ್​ ಪಟೇಲ್​ ಅವರ ನಿರ್ಧಾರವೇ ಕಾರಣ. ಮತ್ತು ಲಕ್ಷದ್ವೀಪದ ವಿರುದ್ಧ ಕೇಂದ್ರ ಸರ್ಕಾರ ಬಯೋ ವೆಪನ್​ … Continued

ಎಫ್‌ಡಿಎ ನಿರ್ಧಾರ ನಮ್ಮ ಮೇಲೆ ಪರಿಣಾಮ ಬೀರಲ್ಲ: ಕೊವಾಕ್ಸಿನ್‌ಗೆ ಇಯುಎ ನೀಡಲು ಅಮೆರಿಕ ನಿರಾಕರಿಸಿದ ನಂತರ ಸರ್ಕಾರದ ಹೇಳಿಕೆ

ನವದೆಹಲಿ: ಅಮೆರಿಕದ ಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ) ಕೊವಾಕ್ಸಿನ್‌ಗೆ ತುರ್ತು-ಬಳಕೆಯ ಅನುಮೋದನೆ ನಿರಾಕರಿಸಿದ ಕೆಲವೇ ಗಂಟೆಗಳ ನಂತರ, ಇದು ಭಾರತವು ಕೋವಿಡ್ -19 ಲಸಿಕೆಯನ್ನು ನಿರಂತರವಾಗಿ ಬಳಸುವುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಒತ್ತಿಹೇಳಿದೆ. ನವದೆಹಲಿಯಲ್ಲಿ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ, ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಅವರು … Continued