ಫ್ರಾನ್ಸ್‌ನಿಂದ 26 ರಫೇಲ್-ಎಂ ಯುದ್ಧ ವಿಮಾನ, 3 ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆ ಖರೀದಿಗೆ ರಕ್ಷಣಾ ಮಂಡಳಿ ಅನುಮೋದನೆ

ನವದೆಹಲಿ: ಭಾರತೀಯ ನೌಕಾಪಡೆಗೆ 26 ರಫೇಲ್-ಎಂ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಗೆ ರಕ್ಷಣಾ ಸ್ವಾಧೀನ ಮಂಡಳಿ ಗುರುವಾರ ಅನುಮೋದನೆ ನೀಡಿದೆ. ಇವುಗಳಲ್ಲಿ 22 ರಫೇಲ್ Ms ಯುದ್ಧ ವಿಮಾನ ಮತ್ತು ಅದರ ನಾಲ್ಕು ಅವಳಿ-ಆಸನಗಳ ತರಬೇತು ಆವೃತ್ತಿಯ ಯುದ್ಧ ವಿಮಾನ ಸೇರಿವೆ. ಅಲ್ಲದೆ, ಭಾರತೀಯ ನೌಕಾಪಡೆಗೆ ಮೂರು ಹೆಚ್ಚುವರಿ ಸ್ಕೋಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆಗಳನ್ನು ಸಹ … Continued

ವೀಡಿಯೊ…| ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬಂದ ಶಾಸಕನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಚಂಡೀಗಢ: ಹರಿಯಾಣದ ಗುಲಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುವಾಗ ಪ್ರವಾಹ ವಿಕೋಪಕ್ಕೆ ಹೋದ ಬಗ್ಗೆ ಕೋಪಗೊಂಡ ಮಹಿಳೆಯೊಬ್ಬರು ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಶಾಸಕ ಈಶ್ವರ್ ಸಿಂಗ್ ಅವರಿಗೆ ಬುಧವಾರ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಹರಿಯಾಣದ ಘಗ್ಗರ್ ನದಿಯ ಉಕ್ಕಿ ಹರಿಯುತ್ತಿರುವುದರಿಂದ ಆ ಪ್ರದೇಶದಲ್ಲಿನ ಪ್ರವಾಹದಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ಮಹಿಳೆ ಕೋಪಗೊಂಡಿದ್ದರು.‘ಈಗೇಕೆ ಬಂದಿದ್ದೀರಿ’ ಎಂದು … Continued

ಎಂಟು ಜನರನ್ನು ಮದುವೆಯಾಗಿ ಹಣ-ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ಮಹಿಳೆಗಾಗಿ ಪೊಲೀಸರ ಹುಡುಕಾಟ…!

ಎಂಟು ಮಂದಿಯನ್ನು ಮದುವೆಯಾಗಿ ಹಣ, ಚಿನ್ನಾಭರಣ ಕದ್ದು ಪರಾರಿಯಾಗಿರುವ ರಶೀದಾ ಎಂಬ ಮಹಿಳೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಈ ಯುವತಿ ಮನೆಯಲ್ಲಿದ್ದ ನಗದು, ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದಳು. ರಶೀದಾ ಎಂಬ ಯುವತಿ ಸೇಲಂ ಜಿಲ್ಲೆಯ ತಾರಮಂಗಲದ ಫೈನಾನ್ಷಿಯರ್ ಮೂರ್ತಿ ಅವರೊಂದಿಗೆ ಮದುವೆಯಾಗಿ ಚಿನ್ನಾಭರಣದೊಂದಿಗೆ ಪರಾರಿಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸೇಲಂ … Continued

ಮೋದಿ’ ಉಪನಾಮʼ ಹೇಳಿಕೆ : ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಮೇಲ್ಮನವಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಕೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರಿಗೆ ಕೆಳ ಹಂತದ ನ್ಯಾಯಾಲಯ ಶಿಕ್ಷೆ ನೀಡಿದ್ದನ್ನು ಎತ್ತಿಹಿಡಿದ ಗುಜರಾತ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗುವ ಮೇಲ್ಮನವಿ ವಿರುದ್ಧ ಕೇವಿಯಟ್‌ (ತಡೆ ಅರ್ಜಿ) ಸಲ್ಲಿಕೆಯಾಗಿದೆ. ಗುಜರಾತ್‌ ಶಾಸಕ ಪೂರ್ಣೇಶ ಮೋದಿ ಈ ಅರ್ಜಿ ಸಲ್ಲಿಸಿದ್ದು, ರಾಹುಲ್‌ ಗಾಂಧಿ ಅವರ ವಿರುದ್ಧ ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದರ … Continued

ಮಾಧ್ಯಮರಂಗದಲ್ಲಿ ಕ್ರಾಂತಿ : ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ ‘ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌’ ಸೃಷ್ಟಿ ‘ಲೀಸಾ’ | ವೀಕ್ಷಿಸಿ

ಟಿವಿ ಚಾನೆಲ್‌ಗಳ ನಿರೂಪಕರ ಸೀಟ್‌ನಲ್ಲಿ ತಂತ್ರಜ್ಞಾನ ಈಗ ಕುಳಿತಿದೆ. ಲೀಸಾ ಹೆಸರಿನ ಕೃತಕಬುದ್ಧಿಮತ್ತೆ (AI-powered ) ಸುದ್ದಿ ನಿರೂಪಕಿಯನ್ನು ಒಡಿಸ್ಸಾದ ಒಟಿವಿ ಪರಿಚಯಿಸಿದೆ. ಸುದ್ದಿ ಮಾಧ್ಯಮ ಕ್ಷೇತ್ರಗಳಲ್ಲಿ ಪತ್ರಕರ್ತರು, ಕಂಟೆಂಟ್‌ ಬರಹಗಾರರು, ವಾರ್ತಾ ವಾಚಕರ ಸ್ಥಾನವನ್ನು ಎಐ ಆಕ್ರಮಿಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಒಟಿವಿ ಎಂಬ ಒಡಿಸ್ಸಾದ ಖಾಸಗಿ ಸುದ್ದಿ ವಾಹಿನಿ ಮೊದಲ ವರ್ಚ್ಯುವಲ್‌ … Continued

ವೀಡಿಯೊ..| ಸೀಮಾ ಹೈದರಳನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ರೆ ಪಾಕಿಸ್ತಾನದ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡ್ತೇವೆ, ಕೊಲ್ತೇವೆ-ಬಲೂಚ್ ಡಕಾಯಿತರ ಬೆದರಿಕೆ

ತನ್ನ ಪಬ್‌ ಜಿ ಪ್ರೇಮಿಗಾಗಿ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಬಂಧಿಸಲ್ಪಟ್ಟ ನಂತರ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇದಾದ ಒಂದು ದಿನದ ನಂತರ ಭಾರತದ ಪ್ರೇಮಿ ಸಚಿನ್‌ ಮತ್ತು ಪಾಕಿಸ್ತಾನಿ ಪ್ರೇಮಿಕಾ ಸೀಮಾ ಹೈದರ್‌ ನಡುವಿನ ಪಬ್‌ ಜಿ (PUBG) ಪ್ರೇಮಕಥೆ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. … Continued

ವೀಡಿಯೊ…| ರೈಲಿನಲ್ಲಿ ಮಹಿಳೆಯರ ಜಂಗೀ ನಿಖಾಲಿ ಕುಸ್ತಿ : ಪರಸ್ಪರ ಕಪಾಳಮೋಕ್ಷ, ಗುದ್ದಾಟ-ಪರಸ್ಪರ ಕೂದಲು ಜಗ್ಗಾಟ

ಕೋಲ್ಕತ್ತಾ: ಕೋಲ್ಕತ್ತಾದ ಲೋಕಲ್‌ ರೈಲಿನಲ್ಲಿ ಮಹಿಳೆಯರು ಪರಸ್ಪರ ಹೊಡೆದಾಡುತ್ತಿರುವುದನ್ನು ತೋರಿಸುವ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಆಯುಷಿ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳಾ ಕಂಪಾರ್ಟ್‌ಮೆಂಟ್‌ನೊಳಗೆ ಮಹಿಳೆಯರು ಹೊಡೆದಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರು ಚಪ್ಪಲಿ ಮತ್ತು ಮುಷ್ಟಿಯಿಂದ ಹೊಡೆದಾಡಿಕೊಂಡಿದ್ದಾರೆ. ಒಬ್ಬರ ಮೇಲೆ ಒಬ್ಬರು ಕಿರುಚಾಟ ಮತ್ತು ದೈಹಿಕವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. … Continued

ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ಕಸ್ಟಡಿಯಲ್ಲಿದ್ದ ಗ್ಯಾಂಗ್‌ಸ್ಟರಗೆ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಜೈಪುರ: ರಾಜಸ್ಥಾನದ ಭರತಪುರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಕೊಲೆ ಪ್ರಕರಣದ ಆರೋಪಿ ಗ್ಯಾಂಗ್‌ಸ್ಟರ್ ಕುಲದೀಪ್ ಜಘೀನಾ ಎಂಬಾತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ದುಷ್ಕರ್ಮಿಗಳು ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆಕೋರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರು ಗ್ಯಾಂಗ್‌ಸ್ಟರ್ ಕುಲದೀಪ್ ಜಘೀನಾನನ್ನು ಜೈಪುರ ಜೈಲಿನಿಂದ ಭರತಪುರ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿದೆ. … Continued

ಟೊಮೆಟೊ ಬೆಲೆ ಭಾರೀ ಹೆಚ್ಚಳ: ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ಸಿಗುವಂತೆ ಮಾಡಲು ಈ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಟೊಮೆಟೊ ದರಗಳು ದಾಖಲೆ ಏರಿಕೆ ಕಂಡಿದ್ದು, ವಾರಗಳಿಂದ ಪ್ರತಿ ಕಿಲೋಕ್ಕೆ 100 ರೂಪಾಯಿ ದಾಟಿದೆ. ಕೇಂದ್ರ ಸರ್ಕಾರ ಇಂದು ಟೊಮೆಟೊ ಬೆಲೆ ನಿಯಂತ್ರಣಕ್ಕೆ ಕ್ರಮಗಳನ್ನು ಪ್ರಕಟಿಸಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊಗಳನ್ನು ಖರೀದಿಸಿ ಅದನ್ನು ಟೊಮೆಟೊ ದರ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಿತರಿಸಲು ರಾಷ್ಟ್ರೀಯ ಕೃಷಿ … Continued

2010ರಲ್ಲಿ ಕೇರಳದ ಪ್ರೊಫೆಸರ್ ಕೈ ಕಡಿದ ಪ್ರಕರಣ : ಪಿಎಫ್‌ಐನ ಆರು ಮಂದಿಗೆ ಶಿಕ್ಷೆ

ಕೊಚ್ಚಿ: 2010ರಲ್ಲಿ ಕೇರಳದ ಕಾಲೇಜು ಪ್ರಾಧ್ಯಾಪಕರೊಬ್ಬರ ಕೈ ಕೊಚ್ಚಿದ ಪ್ರಕರಣದಲ್ಲಿ ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಾಗಿರುವ ಆರು ಮಂದಿಯನ್ನು ಅಪರಾಧಿಗಳೆಂದು ಕೇರಳದ ವಿಶೇಷ ಎನ್‌ಐಎ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಪ್ರಕರಣದ ಎರಡನೇ ಹಂತದ ವಿಚಾರಣೆಯಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಅನಿಲ ಕೆ. ಭಾಸ್ಕರ ಅವರು ಭಾರತೀಯ … Continued