ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಲೆವಾಲಾ ಹತ್ಯೆ ನಂತರ ಹಿಂಪಡೆದಿದ್ದ 424 ಜನರ ಭದ್ರತೆ ಮರುಸ್ಥಾಪಿಸಲು ಪಂಜಾಬ್ ಸರ್ಕಾರ ನಿರ್ಧಾರ

ಚಂಡಿಗಡ: ಪಂಜಾಬ್ ಸರ್ಕಾರವು ಗುರುವಾರ ರಾಜ್ಯದ ಎಲ್ಲಾ 424 ವ್ಯಕ್ತಿಗಳ ಭದ್ರತೆಯನ್ನು ಪುನಃಸ್ಥಾಪಿಸಲು ನಿರ್ಧರಿಸಿದೆ. ಅವರ ರಕ್ಷಣೆಯನ್ನು ಹಿಂಪಡೆಯಲಾಗಿತ್ತು. ಜನಪ್ರಿಯ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಭದ್ರತೆಯನ್ನು ಎಎಪಿ ಸರ್ಕಾರ ಮೊಟಕುಗೊಳಿಸಿದ ನಂತರ ಮೋಸೆವಾಲಾ ಅವರು ಹಾಡಹಗಲೇ ಗುಂಡಿಕ್ಕಿ ಕೊಲ್ಲಲ್ಪಟ್ಟ ಕೆಲವು ದಿನಗಳ ನಂತರ ಈ ಬೆಳವಣಿಗೆಯು ನಡೆದಿದೆ. ಮುಚ್ಚಿದ … Continued

ಕಾಶ್ಮೀರದಲ್ಲಿ ಹಿಂದೂಗಳ ಟಾರ್ಗೆಟ್‌ ಹತ್ಯೆ: ಅಜಿತ್ ಅಜಿತ ದೋವಲ್ ಜೊತೆ ಅಮಿತ್ ಶಾ ಉನ್ನತ ಮಟ್ಟದ ಸಭೆ

ನವದೆಹಲಿ: ಕಾಶ್ಮೀರದಲ್ಲಿ ಹಿಂದೂಗಳನ್ನ ಗುರಿಯಾಗಿಸಿಕೊಂಡು ನಡೆಯುತ್ತಿರುವ ಹತ್ಯೆಗಳ ಸರಣಿ ಮುಂದುವರೆದಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೊತೆ ಚರ್ಚಿಸಿದರು. ಪ್ರಧಾನಿ ಕಾರ್ಯಾಲಯದ ಕೇಂದ್ರದ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ಮೂರು ದಿನಗಳಲ್ಲಿ ಕಣಿವೆಯಲ್ಲಿ ಹಿಂದೂಗಳ ಮೇಲಿನ ಎರಡನೇ … Continued

ಕಾಶ್ಮೀರ ಕಣಿವೆಯ ಕಾಶ್ಮೀರಿ ಹಿಂದೂ ಸರ್ಕಾರಿ ನೌಕರರನ್ನು ಜೂನ್ 6ರೊಳಗೆ ‘ಸುರಕ್ಷಿತ ಸ್ಥಳಗಳಿಗೆ’ ಪೋಸ್ಟ್ ಮಾಡಲು ಎಲ್‌ಜಿ ಮನೋಜ್ ಸಿನ್ಹಾ ಆದೇಶ: ವರದಿ

ಕಾಶ್ಮೀರ: ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಮೇಲೆ ಉದ್ದೇಶಿತ ದಾಳಿಗಳು ಹೆಚ್ಚಾದ ನಂತರ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೂನ್ 6ರೊಳಗೆ ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯಗಳ ಪಿಎಂ ಪ್ಯಾಕೇಜ್ ನೌಕರರು ಮತ್ತು ಇತರ ಸದಸ್ಯರನ್ನು ಸುರಕ್ಷಿತ ಸ್ಥಳಗಳಲ್ಲಿ ನಿಯೋಜಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮೇ 31ರಂದು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಹಿಂದೂ … Continued

ಟಾರ್ಗೆಟ್‌ ಹತ್ಯೆಗಳ ಹೆಚ್ಚಳದ ಮಧ್ಯೆ ಕಾಶ್ಮೀರ ಕಣಿವೆ ತೊರೆಯುತ್ತಿರುವ ಹಿಂದೂಗಳು: ವರದಿ

ಕಾಶ್ಮೀರ: ಟಾರ್ಗೆಟ್‌ ಹತ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು ಸೇರಿದಂತೆ ಕಾಶ್ಮೀರದಲ್ಲಿ ವಾಸಿಸುವ ಹಿಂದೂಗಳು ಕಣಿವೆಯನ್ನು ತೊರೆಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗುರುವಾರ (ಜೂನ್ 2) ರಾಜಸ್ಥಾನದ ಬ್ಯಾಂಕ್ ಉದ್ಯೋಗಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಮೇ 1ರಿಂದ ಕಣಿವೆಯಲ್ಲಿ ನಡೆದ ಎಂಟನೇ ಟಾರ್ಗೆಟ್‌ ಹತ್ಯೆಯಾಗಿದ್ದು, ಮತ್ತು ಮುಸ್ಲಿಮೇತರ ಸರ್ಕಾರಿ ನೌಕರರ … Continued

ಗುಜರಾತ್‌ : ಕಾಂಗ್ರೆಸ್‌ ತೊರೆದ ಹಾರ್ದಿಕ್ ಪಟೇಲ್ ಈಗ ಬಿಜೆಪಿಗೆ ಸೇರ್ಪಡೆ

ಗಾಂಧಿನಗರ (ಗುಜರಾತ್): ಕಳೆದ ತಿಂಗಳು ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದ ಹಾರ್ದಿಕ್ ಪಟೇಲ್ ಇಂದು, ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗುಜರಾತ್​ನಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಇಂತಹ ವೇಳೆ ಅವರು ಕಾಂಗ್ರೆಸ್‌ ಬಿಟ್ಟು ಕಮಲ ಹಿಡಿದಿದ್ದಾರೆ. ಗಾಂಧಿನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು … Continued

ಇದೊಂದು ವಿಶಿಷ್ಟ ಮದುವೆ… ತನ್ನನ್ನು ತಾನೇ ಮದುವೆಯಾಗಲಿರುವ 24 ವರ್ಷದ ಗುಜರಾತ್‌ ಯುವತಿ…!

24 ವರ್ಷದ ಕ್ಷಮಾ ಬಿಂದು ಅವರ ಮದುವೆಗೆ ಸ್ಥಳವನ್ನು ನಿಗದಿಪಡಿಸಲಾಗಿದೆ ಮತ್ತು ದಿನಾಂಕವನ್ನು ನಿಗದಿಪಡಿಸಲಾಗಿದೆ. ಆ ಮಹಾದಿನದ ನಿರೀಕ್ಷೆಯಲ್ಲಿ ವಚನಗಳನ್ನು ಬರೆಯಲಾಗಿದೆ. ಇದರಲ್ಲಿ ಕಾಣೆಯಾದ ಏಕೈಕ ವಿಷಯವೆಂದರೆ ಅವಳ ಸಂಗಾತಿ, ಆದರೆ ಗುಜರಾತ್‌ನ ವಡೋದರಾದಿಂದ ಬಂದ ಬಿಂದು ತನ್ನನ್ನು ತಾನೇ ಮದುವೆಯಾಗಲು ಸಿದ್ಧವಾಗಿರುವುದರಿಂದ ಈ ಸಮಸ್ಯೆ ಅವರಿಗೆ ಬರುವುದಿಲ್ಲ…! ಜೂನ್ 11 ರಂದು ನಿಗದಿಯಾಗಿರುವ ವಿವಾಹವು … Continued

ಖ್ಯಾತ ಸಂತೂರ್ ವಾದಕ ಭಜನ್ ಸೊಪೋರಿ ಇನ್ನಿಲ್ಲ

ನವದೆಹಲಿ: ಖ್ಯಾತ ಸಂತೂರ್ ವಾದಕ ಮತ್ತು ಖ್ಯಾತ ಸಂಗೀತ ಸಂಯೋಜಕ ಪಂಡಿತ್ ಭಜನ್ ಸೊಪೋರಿ ಗುರುವಾರ ನಿಧನರಾದರು. ಅವರು ಗುರ್ಗಾಂವ್‌ನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೊಪೊರಿಯವರು ಅವರ ಪತ್ನಿ ಮತ್ತು ಇಬ್ಬರು ಪುತ್ರರಾದ ಸೊರಭ್ ಮತ್ತು ಅಭಯ್ ಅವರನ್ನು ಅಗಲಿದ್ದಾರೆ. ಅಭಯ್ ಕೂಡಾ ಸಂತೂರ್ ವಾದಕರಾಗಿದ್ದಾರೆ. 1948 ರಲ್ಲಿ ಜನಿಸಿದ ಪಂಡಿತ್ ಭಜನ್ ಸೊಪೋರಿ … Continued

ಪ್ರಯಾಣಿಕರ ಸುರಕ್ಷತೆ ನಿಯಮ ಉಲ್ಲಂಘನೆ: ಏರ್​ ವಿಸ್ತಾರಾಗೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ನವದೆಹಲಿ : ಪ್ರಯಾಣಿಕರ ಸುರಕ್ಷತೆ ಕುರಿತು ನಿಯಮ ಉಲ್ಲಂಘನೆ ಮಾಡಿದ ಏರ್‌ ವಿಸ್ತಾರಾಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) 10 ಲಕ್ಷ ರೂ.ಗಳ ದಂಡ ಹಾಕಿದೆ. ಮಧ್ಯಪ್ರದೇಶದ ಇಂದೂರ್‌ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿದ್ದ ವಿಮಾನವನ್ನು ತರಬೇತಿಯಿಲ್ಲದೆ ಪೈಲಟ್‌ನಿಂದ ಲ್ಯಾಂಡಿಂಗ್‌ ಮಾಡಿಸಿದ್ದಕ್ಕಾಗಿ ದಂಡ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಗಳ ಪ್ರಕಾರ ಸಿಮ್ಯುಲೇಟರ್​​ನಲ್ಲಿ ಅಗತ್ಯ ತರಬೇತಿ … Continued

ಸೋನಿಯಾ ಗಾಂಧಿಗೆ ಕೊರೊನಾ ಸೋಂಕು ದೃಢ

ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿ ಮುಂದೆ ಹಾಜರಾಗುವ ಕೆಲವೇ ದಿನಗಳ ಮೊದಲು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಅವರು ಜೂನ್ 8 ರಂದು ತನಿಖೆಗಾಗಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕು. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಕಳೆದ ವಾರದಲ್ಲಿ ಸೋನಿಯಾ ಗಾಂಧಿ ಅವರು … Continued

ಕಾಶ್ಮೀರದಲ್ಲಿ ಗುಂಡಿಕ್ಕಿ ಬ್ಯಾಂಕ್ ಮ್ಯಾನೇಜರ್ ಹತ್ಯೆ: ಮುಂದಿವರಿದ ಹಿಂದೂಗಳ ಮೇಲಿನ ಉದ್ದೇಶಿತ ಹಿಂಸಾಚಾರ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಹತ್ಯೆಗೈದ ಮತ್ತೊಂದು ಘಟನೆಯಲ್ಲಿ, ಜೂನ್ 2, ಗುರುವಾರದಂದು ಕುಲ್ಗಾಮ್‌ನಲ್ಲಿ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅರೆ, ಮೋಹನ್ ಪೋರಾದಲ್ಲಿರುವ ಎಲ್ಲಕ್ವೈ ದೇಹತಿ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿದ್ದ ವಿಜಯಕುಮಾರ್ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ರಾಜಸ್ಥಾನದ … Continued