ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ 4 ವರ್ಷ ಜೈಲು ಶಿಕ್ಷೆ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರಿಗೆ ಶುಕ್ರವಾರ ದೆಹಲಿಯ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡದ ಶಿಕ್ಷೆ ಪ್ರಕಟಿಸಿದೆ. 87ರ ಹರೆಯದ ಚೌತಾಲಾ ಅವರನ್ನು ಕಳೆದ ಶನಿವಾರ ಮೇ 21ರಂದು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೆಹಲಿಯ ರೂಸ್ … Continued

ಮುಂಬೈ ಕ್ರೂಸ್‌ ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್- ಸಮೀರ್ ವಾಂಖೆಡೆ ತಂಡದಿಂದ ತಪ್ಪಾಗಿದೆ ಎಂದ ಎನ್‌ಸಿಬಿ; ಕ್ಷಮಿಸಿ ನೋ ಕಾಮೆಂಟ್ಸ್‌ ಎಂದು ಸಮೀರ್‌ ವಾಂಖೆಡೆ

ನವದೆಹಲಿ: ಕಾರ್ಡೆಲಿಯಾ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿದ ನಂತರ ಸಮೀರ್ ವಾಂಖೆಡೆ ನೇತೃತ್ವದ ಮೊದಲ ತನಿಖಾ ತಂಡದಲ್ಲಿ ದೋಷವಿತ್ತು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಉಪ ಮಹಾನಿರ್ದೇಶಕರು ಹೇಳಿದ್ದಾರೆ. ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ಲೀನ್ ಚಿಟ್ ನೀಡಿದೆ. ಈ … Continued

ದೆಹಲಿ ಗಲಭೆ ಆರೋಪಿ, ಪೊಲೀಸರತ್ತ ಗನ್ ತೋರಿಸಿದವನಿಗೆ ಹೀರೊ ರೀತಿ ಸ್ವಾಗತ….! ವೀಕ್ಷಿಸಿ

ನವದೆಹಲಿ: ಫೆಬ್ರವರಿ 2020ರ ಹಿಂಸಾಚಾರದ ವೇಳೆ ಪೊಲೀಸರತ್ತ ಬಂದೂಕು ತೋರಿಸಿ ಜೈಲು ಪಾಲಾದ ದೆಹಲಿ ಗಲಭೆ ಆರೋಪಿಯನ್ನು ನಾಲ್ಕು ಗಂಟೆಗಳ ಪೆರೋಲ್ ನೀಡಿದ ನಂತರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೆರೆಹೊರೆಯವರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಅಸ್ವಸ್ಥರಾಗಿರುವ ತನ್ನ ತಂದೆಯನ್ನು ಭೇಟಿ ಮಾಡಲು ನಾಲ್ಕು ಗಂಟೆಗಳ ಪೆರೋಲ್ ಮಂಜೂರು ಮಾಡಿದ ನಂತರ ಶಾರುಖ್ ಪಠಾಣ್ ಸೋಮವಾರ ಮನೆಗೆ … Continued

ನನ್ನನ್ನು ಸಚಿವ ಸ್ಥಾನದಿಂದ ಮುಕ್ತಗೊಳಿಸಿ: ರಾಜಸ್ಥಾನ ಸಚಿವರ ಟ್ವೀಟ್‌, ಕಾಂಗ್ರೆಸ್ ಸಂಕಷ್ಟಕ್ಕೆ ಮುನ್ಸೂಚನೆ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ ಸಚಿವರೊಬ್ಬರು ರಾಜ್ಯದ ಅಧಿಕಾರಶಾಹಿಯ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿದ್ದಾರೆ ಮತ್ತು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಟ್ವೀಟ್‌ನಲ್ಲಿ, ರಾಜಸ್ಥಾನ ಸಚಿವ ಅಶೋಕ್ ಚಂದ್ನಾ ಅವರು ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ತಮ್ಮನ್ನು ಸಚಿವ ಸ್ಥಾನದಿಂದ ಬಿಡುಗಡೆ ಮಾಡುವಂತೆ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಾಂಕಾ ಅವರಿಗೆ … Continued

ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದ ಮೊದಲ ಹಿಂದಿ ಕಾದಂಬರಿ

ನವದೆಹಲಿ: ದೆಹಲಿ ಮೂಲದ ಲೇಖಕಿ ಗೀತಾಂಜಲಿ ಶ್ರೀ ಮತ್ತು ಅಮೆರಿಕದ ಅನುವಾದಕಿ ಡೈಸಿ ರಾಕ್‌ವೆಲ್ ಅವರು ತಮ್ಮ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗಾಗಿ ಗುರುವಾರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೂಲತಃ ಹಿಂದಿಯಲ್ಲಿ ಬರೆದ ‘ಟಾಂಬ್ ಆಫ್ ಸ್ಯಾಂಡ್’ ಯಾವುದೇ ಭಾರತೀಯ ಭಾಷೆಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಮೊದಲ ಪುಸ್ತಕವಾಗಿದೆ. 2022 ಇಂಟರ್‌ನ್ಯಾಷನಲ್‌ ಬುಕರ್ … Continued

ಕಾಶ್ಮೀರ ಟಿವಿ ಕಲಾವಿದೆ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್ ಉಗ್ರರ ಹತ್ಯೆ: ಪೊಲೀಸರು

ಶ್ರೀನಗರ: ಕಾಶ್ಮೀರಿ ಕಿರುತೆರೆ ನಟಿ ಅಮ್ರೀನ್ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಕಾಶ್ಮೀರದ ಅವಂತಿಪೋರಾದಲ್ಲಿ ಕೊಲ್ಲಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬೆಳಿಗ್ಗೆ ತಿಳಿಸಿದ್ದಾರೆ. ಕಿರುತೆರೆ ಕಲಾವಿದೆ ಅಮ್ರೀನ್ ಭಟ್ ಅವರ ಹೇಯ ಹತ್ಯೆ ಪ್ರಕರಣವನ್ನು 24 ಗಂಟೆಗಳಲ್ಲಿ ಭೇದಿಸಲಾಗಿದೆ… ಕಾಶ್ಮೀರ ಕಣಿವೆಯಲ್ಲಿ ಮೂರು ದಿನಗಳಲ್ಲಿ ಹತ್ಯೆಯಾದ ಜೈಶ್-ಎ-ಮೊಹಮ್ಮದ್ … Continued

ನಾಯಿಗೆ ವಾಕಿಂಗ್‌ ಮಾಡಿಸಲು ದೆಹಲಿ ಸ್ಟೇಡಿಯಂ ಖಾಲಿ ಮಾಡಿಸಿದ ಐಎಎಸ್ ಅಧಿಕಾರಿ ಲಡಾಖ್‌ಗೆ, ಪತ್ನಿ ಅರುಣಾಚಲಕ್ಕೆ ವರ್ಗಾವಣೆ..!

ನವದೆಹಲಿ: ತನ್ನ ನಾಯಿಯನ್ನು ವಾಕ್‌ ಮಾಡಿಸಲು (ನಡೆದಾಡಿಸಲು) ದೆಹಲಿಯ ಕ್ರೀಡಾಂಗಣವನ್ನು ತೆರವುಗೊಳಿಸಿದ ಅಧಿಕಾರಿ ಸಂಜೀವ್ ಖಿರ್ವಾರ್ ಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರನ್ನು ಲಡಾಖ್‌ಗೆ ವರ್ಗಾಯಿಸಲಾಗಿದೆ. ಅವರ ಪತ್ನಿ ರಿಂಕು ದುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಭಾರತೀಯ ಆಡಳಿತ ಸೇವೆಗಳ ಅಧಿಕಾರಿಯು ತನ್ನ ನಾಯಿ ವಾಕ್ … Continued

ವೃದ್ಧ ತಂದೆ-ತಾಯಿಗಳಿಗೆ ಕಿರುಕುಳ ನೀಡುವ ಮಕ್ಕಳನ್ನು ಮನೆಯಿಂದ ಹೊರಹಾಕಿ ಎಂದ ಕೋರ್ಟ್‌

ಹರಿದ್ವಾರ: ತಮ್ಮ ತಂದೆ-ತಾಯಿಗಳಿಗೆ ಕಿರುಕುಳ ನೀಡಿದ ಆರು ವೃದ್ಧ ದಂಪತಿಗಳ ಮಕ್ಕಳಿಗೆ ಒಂದು ತಿಂಗಳೊಳಗೆ ಮನೆ ಖಾಲಿ ಮಾಡುವಂತೆ ಹರಿದ್ವಾರ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ನ್ಯಾಯಾಲಯ ಗುರುವಾರ ಆದೇಶಿಸಿದೆ. ಹಾಗೂ ಆದೇಶ ಪಾಲಿಸದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ತಮ್ಮ ಮನೆಯಲ್ಲಿ ವಾಸಿಸುತ್ತಿರುವಾಗ ಪೋಷಕರನ್ನು ನಿಂದಿಸುವ ಮಕ್ಕಳನ್ನು ಆಸ್ತಿಯಿಂದ … Continued

ಬಾಲಿವುಡ್ ನಟರಾದ ಶಾರುಖ್ ಖಾನ್‌- ಅಜಯ್ ದೇವಗನ್‌ಗೆ ತಲಾ 5 ರೂಪಾಯಿ ಮನಿ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ..! ಕಾರಣವೇನೆಂದರೆ

ಖಾರ್ಗೋನ್ (ಮಧ್ಯಪ್ರದೇಶ): ಸಹೋದರರ ದಿನದ ಮುನ್ನಾದಿನದಂದು, ಖಾರ್ಗೋನ್‌ನ ಮೊದಲ ವರ್ಷದ ವಿದ್ಯಾರ್ಥಿನಿಯೊಬ್ಬಳು ಪಾನ್ ಮಸಾಲಾ ಜಾಹೀರಾತನ್ನು ತೊರೆಯುವಂತೆ ಬಾಲಿವುಡ್ ತಾರೆಗಳಾದ ಶಾರುಖ್ ಖಾನ್ ಮತ್ತು ಅಜಯ್ ದೇವಗನ್‌ಗೆ ವಿನಂತಿಸಿದ್ದಾಳೆ. ಖಾರ್ಗೋನ್‌ನ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಥಮ ವರ್ಷದ ಕಲಾ ವಿದ್ಯಾರ್ಥಿ ಧಡ್ಕನ್ ಆಶೀರ್ವಾದ್ ಜೈನ್ ಬಾಲಿವುಡ್‌ ನಟರಾದ ಶಾರುಖ್ ಖಾನ್ ಮತ್ತು ಅಜಯ್ ದೇವಗನ್‌ಗೆ ತಲಾ … Continued

ಅಸ್ಸಾಂ: ಸಾಮೂಹಿಕ ಅತ್ಯಾಚಾರ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸರಿಂದ ಗುಂಡೇಟು

ಕೊಕ್ರಜಾರ್: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನಾದ ವ್ಯಕ್ತಿಯೊಬ್ಬ ಗುರುವಾರ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹಾರಿಸಿ ಗಾಯಗೊಂಡಿರುವ ಘಟನೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ರಾತ್ರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಅತ್ಯಾಚಾರದ ಘಟನೆಯನ್ನು ಚಿತ್ರೀಕರಿಸಿದ್ದ ಮೊಬೈಲ್ ಹ್ಯಾಂಡ್‌ಸೆಟ್‌ … Continued