ಡಬ್ಲ್ಯುಎಚ್‌ಒಗೆ ಸಹಾಯ ಮಾಡಲು ಕೋವಿಡ್ ಲಸಿಕೆಗಳಿಗೆ ತುರ್ತು ಬಳಕೆಯ ಅನುಮೋದನೆ ತ್ವರಿತಗೊಳಿಸಲು ಜಿ 20 ಒಪ್ಪಿಗೆ: ಪಿಯೂಷ್ ಗೋಯಲ್

ರೋಮ್: ಕೋವಿಡ್ -19 ಲಸಿಕೆಗಳಿಗೆ ತುರ್ತು ಬಳಕೆಯ ಅನುಮೋದನೆಗಳನ್ನು (ಇಯುಎ) ತ್ವರಿತಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ಸಹಾಯ ಮಾಡಲು ಜಿ 20 ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾನುವಾರ ದೃಢಪಡಿಸಿದ್ದಾರೆ. ರೋಮ್‌ನಲ್ಲಿ ಜಿ 20 ಶೃಂಗಸಭೆಗೆ ಭಾರತದ ತಂಡದಲ್ಲಿರುವ ಗೋಯಲ್, ಜಿ 20 ಶೃಂಗಸಭೆಯಲ್ಲಿ ನಾಯಕರು ‘ರೋಮ್ ಘೋಷಣೆ’ಯನ್ನು ಅಳವಡಿಸಿಕೊಂಡಿದ್ದಾರೆ … Continued

ಪ್ರಭಾಕರ್ ಸೈಲ್ ಆರೋಪ ಆಧಾರ ರಹಿತ ಎಂದು ಕರೆದ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ

ಮುಂಬೈ: ಮುಂಬೈ ಡ್ರಗ್ ಪಾರ್ಟಿ ಪ್ರಕರಣದ ಹೊಸ ಬೆಳವಣಿಗೆಯೊಂದರಲ್ಲಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರು ಪ್ರಭಾಕರ್ ಸೈಲ್ ಮಾಡಿರುವ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಸೈಲ್ ಮಾಡಿರುವ ಆರೋಪಗಳು “ಆಧಾರರಹಿತ” ಎಂದು ಎನ್‌ಸಿಬಿ ಅಧಿಕಾರಿ ಹೇಳಿದ್ದಾರೆ ಮತ್ತು ತಮ್ಮ ವಿರುದ್ಧ ಕಪೋಲಕಲ್ಪಿತ ಕಥೆಯನ್ನು ಕಟ್ಟಲಾಗಿದೆ ಎಂದು ಹೇಳಿದ್ದಾರೆ. ವರದಿಯ ಪ್ರಕಾರ, … Continued

ಕಡಿಮೆ ಲಸಿಕೆ ಪ್ರಮಾಣ ನೀಡಿದ ಜಿಲ್ಲೆಗಳೊಂದಿಗೆ ನವೆಂಬರ್ 3ರಂದು ಪ್ರಧಾನಿ ಮೋದಿ ಪರಿಶೀಲನಾ ಸಭೆ

ನವದೆಹಲಿ: ಕಡಿಮೆ ಲಸಿಕಾಕರಣದ (vaccination) ವ್ಯಾಪ್ತಿಯ ಜಿಲ್ಲೆಗಳೊಂದಿಗೆ ನವೆಂಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನಮಂತ್ರಿಯವರ ಕಚೇರಿಯ ಪ್ರಕಾರ ಜಿ 20 ಶೃಂಗಸಭೆ ಮತ್ತು ಸಿಒಪಿ 26 ರಲ್ಲಿ ಭಾಗವಹಿಸಿದ ನಂತರ ವಿದೇಶದಿಂದ ಹಿಂದಿರುಗಿದ ನಂತರ ಪ್ರಧಾನಿ ಸಭೆ ನಡೆಸಲಿದ್ದಾರೆ. ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಧ್ಯಾಹ್ನ … Continued

ಕೊವಿಡ್ ಲಸಿಕೆ ಬೆಲೆ 265 ರೂ.ಗಳಿಗೆ ಇಳಿಸಲು ಝೈಡಸ್ ಕ್ಯಾಡಿಲಾ ಒಪ್ಪಿಗೆ, ಶೀಘ್ರವೇ ಅಂತಿಮ ನಿರ್ಧಾರ: ವರದಿ

ನವದೆಹಲಿ: ಝೈಡಸ್ ಕ್ಯಾಡಿಲಾ ತನ್ನ ಕೊವಿಡ್ -19 ಲಸಿಕೆ ಬೆಲೆಯನ್ನು 265 ರೂ.ಗಳಿಗೆ ಇಳಿಸಲು ಒಪ್ಪಿಕೊಂಡಿದೆ. ಆದರೆ ಸರ್ಕಾರದ ನಿರಂತರ ಮಾತುಕತೆಗಳ ನಂತರ ಇನ್ನೂ ಅಂತಿಮ ಒಪ್ಪಂದ ಅಂತಿಮವಾಗಿಲ್ಲ  ಎಂದು ವರದಿಗಳು ಹೇಳಿದೆ. ಝೈಡಸ್ ಕ್ಯಾಡಿಲಾ (Zydus Cadila) ಅವರ ZyCov-D 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನಿರ್ವಹಣೆ ನೀಡಲು ಭಾರತದ ಔಷಧ … Continued

2020ರಲ್ಲಿ ಭಾರತದಲ್ಲಿ ಪ್ರತಿದಿನ 31 ಮಕ್ಕಳ ಆತ್ಮಹತ್ಯೆ, ಶೇ 21ರಷ್ಟು ಹೆಚ್ಚಳ: ಎನ್​ಸಿಆರ್​ಬಿ ವರದಿ

ನವದೆಹಲಿ: ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರದ ದತ್ತಾಂಶಗಳು ಈ ಅಂಶವನ್ನು ಪುಷ್ಟೀಕರಿಸಿವೆ. ಕೊರೊನಾ ಪಿಡುಗು ಮಕ್ಕಳ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸಿರಬಹುದು ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (National Crime Records Bureau – NCRB) ಪ್ರಕಾರ 2020ರಲ್ಲಿ ಒಟ್ಟು 11,396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Continued

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ನವದೆಹಲಿ: ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುಣಮುಖರಾಗಿದ್ದು, ಆಸ್ರತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಅನಾರೋಗ್ಯದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಕ್ಟೋಬರ್ 13 ರಂದು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಡೆಂಗೆ ಜ್ವರ ಪತ್ತೆಯಾಗಿತ್ತು. ಅವರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ … Continued

ಅಫ್ಘಾನ್​ ಹುಡುಗಿ ಕಳುಹಿಸಿದ ಕಾಬೂಲ್​ ನದಿ ನೀರಿನಿಂದ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಜಲಾಭಿಷೇಕ ಮಾಡಿದ ಸಿಎಂ ಯೋಗಿ

ಅಯೋಧ್ಯೆ: ರಾಮಜನ್ಮಭೂಮಿಗಾಗಿ ಅಫ್ಘಾನಿಸ್ತಾನದ ಹುಡುಗಿಯೊಬ್ಬಳು ಕಳುಹಿಸಿದ್ದ ಕಾಬೂಲ್​ ನದಿಯ ನೀರಿನಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಶ್ರೀ ರಾಮಜನ್ಮಭೂಮಿಯಲ್ಲಿ ಜಲಾಭಿಷೇಕ ಮತ್ತು ಪೂಜೆ ನೆರವೇರಿಸಿದ್ದಾರೆ. ಇಂಥದ್ದೊಂದು ವಿಶೇಷ ಘಟನೆ ಇಂದು (ಭಾನುವಾರ) ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಸ್ಥಳದಲ್ಲಿ ನಡೆದಿದೆ. ಬಾಲಕಿ ಕಳುಹಿಸಿದ್ದ ಕಾಬೂಲ್​ ನದಿ ನೀರನ್ನು ಗಂಗಾಜಲದೊಂದಿಗೆ ಮಿಶ್ರಣ ಮಾಡಿ, ಮಂದಿರ ನಿರ್ಮಾಣದ ಜಾಗಕ್ಕೆ … Continued

ಸಾಯುವ ಕೆಲವೇ ತಾಸಿನ ಮೊದಲು ಅಜ್ಜಿ ನನಗೆ ಹೇಳಿದ್ದಳು, ಅಳಬೇಡ…: ಇಂದಿರಾ ಗಾಂಧಿ ಸಾವಿನ ಭಾವನಾನ್ಮಕ ವಿಡಿಯೊ ಹಂಚಿಕೊಂಡ ರಾಹುಲ್

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ಭಾವನಾತ್ಮಕ ವಿಡಿಯೊ ಹಂಚಿಕೊಳ್ಳುವ ಮೂಲಕ 1984ರಲ್ಲಿ ಇದೇ ದಿನ ದೆಹಲಿಯಲ್ಲಿ ಹತ್ಯೆಗೀಡಾದ ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸ್ಮರಿಸಿಕೊಂಡಿದ್ದಾರೆ. ಮೂರು ನಿಮಿಷಗಳ ವೀಡಿಯೊದಲ್ಲಿ ರಾಹುಲ್‌ ಗಾಂಧಿ (ಆಗ ಅವರಿಗೆ ಕೇವಲ 14 ವರ್ಷ) ಅಂತ್ಯಕ್ರಿಯೆಯಲ್ಲಿ ಅಳುತ್ತಿರುವ ಹೃದಯ ಮಿಡಿಯುವ ದೃಶ್ಯಗಳಿವೆ – … Continued

ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌ಗೆ ಕೊರೊನಾ ಸೋಂಕು

ನವದೆಹಲಿ: ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ಅವರಿಗೆ ಕೋವಿಡ್ -19 ಸೋಂಕು ತಗುಲಿದೆ. 47 ವರ್ಷದ ನಟಿ, ಭಾನುವಾರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಾನು ಕೊರೊನಾ ವೈರಸ್‌ಗೆ ತುತ್ತಾಗಿರುವುದಾಗಿ ಹೇಳಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕವಾಗಿರುವುವುದಾಗಿ ತಿಳಿಸಿರುವ ಅವರು, “ನಾನು ಕೋವಿಡ್-19 ಧನಾತ್ಮಕ ಪರೀಕ್ಷೆ ಮಾಡಿದ್ದೇನೆ. ನಾನು ಚೆನ್ನಾಗಿದ್ದೇನೆ ಮತ್ತು ಮನೆಯ ಹೋಮ್‌ ಕ್ವಾರಂಟೈನ್‌ನಲ್ಲಿ ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ, ಕಳೆದ ಕೆಲವು … Continued

ಭಾರತದ ಅಗ್ನಿ-5 ಕ್ಷಿಪಣಿ ಪರೀಕ್ಷೆಯಿಂದ ಬೆಚ್ಚಿಬಿದ್ದ ಚೀನಾ..: ಉಡಾವಣೆ ದೇಶೀಯ ಸಮಸ್ಯೆಗಳಿಂದ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಎಂದ ಚೀನಾ ಮುಖವಾಣಿ

ನವದೆಹಲಿ: ಮೇಲ್ಮೈಯಿಂದ ಮೇಲ್ಮೈಗೆ ( surface-to-surface ) ಹಾರುವ ಅಗ್ನಿ-5 ಕ್ಷಿಪಣಿ ಉಡಾವಣೆಯಿಂದ ಬೆಚ್ಚಿಬಿದ್ದಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಇದನ್ನು ತನ್ನ ದೇಶೀಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಭಾರತದ ಪ್ರಯತ್ನ ಎಂದು ಬಣ್ಣಿಸಿದೆ. ಸಿಸಿಪಿ (CCP) ಮುಖವಾಣಿ ಗ್ಲೋಬಲ್ ಟೈಮ್ಸ್ ಸಂಪಾದಕೀಯದಲ್ಲಿ, ಚೀನಾ ವಿರುದ್ಧ ಅಗ್ನಿ-5 ಪರೀಕ್ಷೆಯಲ್ಲಿ ಭಾರತೀಯ ಮಾಧ್ಯಮದ ಪ್ರಚಾರವು ದೇಶೀಯ … Continued