ಭಾರತದಲ್ಲಿ ಹೊಸದಾಗಿ 16,326 ಕೋವಿಡ್ ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,326 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ಸಮಯದಲ್ಲಿ ಸೋಂಕಿನಿಂದಾಗಿ 666 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ಹಂಚಿಕೊಂಡ ಮಾಹಿತಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 17,677 ಡಿಸ್ಚಾರ್ಜ್‌ಗಳನ್ನು ಕಂಡಿದೆ, ಇದು ಒಟ್ಟು ಚೇತರಿಕೆ ದರವನ್ನು ಸುಮಾರು 98.16 ಪ್ರತಿಶತದಷ್ಟಕ್ಕೆ ಒಯ್ದಿದೆ. … Continued

ಉತ್ತರಾಖಂಡದಲ್ಲಿ ದುರ್ಘಟನೆ: ಹಿಮಪಾತದಿಂದ ನಾಪತ್ತೆಯಾಗಿದ್ದ 17 ಚಾರಣಿಗರಲ್ಲಿ 12 ಮಂದಿ ಶವವಾಗಿ ಪತ್ತೆ

ನವದೆಹಲಿ: ಭಾರೀ ಪ್ರಮಾಣದ ಹಿಮಪಾತದಿಂದ ಉತ್ತರಾಖಂಡದಲ್ಲಿ ಅಕ್ಟೋಬರ್​ 18ರಂದು ದಾರಿ ತಪ್ಪಿದ್ದ 17 ಚಾರಣಿಗರಲ್ಲಿ 12 ಮಂದಿಯ ಮೃತದೇಹವನ್ನು ವಾಯುಸೇನೆ ವಶಕ್ಕೆ ಪಡದುಕೊಂಡಿದ್ದು, ತನ್ನ ಬಹುದೊಡ್ಡ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಅ.18ರಂದು ಮಾರ್ಗದರ್ಶಕ, ಹಮಾಲರು ಮತ್ತು ಪ್ರವಾಸಿಗರು ಸೇರಿ 17 ಜನರು ಚಾರಣಕ್ಕೆ ತೆರಳಿದ್ದರು. ಆದರೆ, ಹಿಮಪಾತದಿಂದ ಎಲ್ಲರು ದಾರಿತಪ್ಪಿದ್ದರು. ಸಮುದ್ರ ಮಟ್ಟದಿಂದ 17,000 ಅಡಿ … Continued

ಮೂರು ತಿಂಗಳ ಕಂದಮ್ಮನ ಹತ್ಯೆ ಮಾಡಿದ ಅಜ್ಜಿ, ಮತ್ತೊಂದು ಮಗುವಿನ ಹತ್ಯೆಗೂ ಯತ್ನ..!

ಚೆನ್ನೈ: ಅಜ್ಜಿಯೋರ್ವಳು ಮೂರು ತಿಂಗಳ ಮೊಮ್ಮಗುವನ್ನೇ ಕೊಲೆ ಮಾಡಿದ್ದಾಳೆ. ಅಲ್ಲದೆ, ಮತ್ತೊಂದು ಮಗುವಿನ ಕೊಲೆಗೂ ಯತ್ನಿಸಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕುಂದಂಪಾಳ್ಯಂ ಮೂಲದ ಭಾಸ್ಕರನ್ ಹಾಗೂ ಐಶ್ವರ್ಯ ಎಂಬ ದಂಪತಿ ಮೂರು ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಅವಳಿ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಮಧುರೈಯಿಂದ ಅಜ್ಜಿಯನ್ನು ಕರೆದುಕೊಂಡು … Continued

ರಿಲಯನ್ಸ್ ಇಂಡಸ್ಟ್ರೀಸ್ ಎರಡನೇ ತ್ರೈಮಾಸಿಕ ಲಾಭ ಶೇ. 43ರಷ್ಟು ಏರಿಕೆ: 13,680 ಕೋಟಿ ರೂ.ಗಳ ನಿವ್ವಳ ಲಾಭ

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಹಣಕಾಸು ವರದಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಪ್ರಕಟಿಸಿದ್ದು, ಕಂಪನಿಯು ತ್ರೈಮಾಸಿಕದಲ್ಲಿ 13,680 ಕೋಟಿ ರೂ.ಗಳ ನಿವ್ವಳ ಲಾಭ ವರದಿ ಮಾಡಿದೆ. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಸುಮಾರು ಶೇಕಡಾ 46.0ರಷ್ಟು ಹೆಚ್ಚಳವಾಗಿದೆ. ಇದೇ ಸಮಯದಲ್ಲಿ, ರಿಲಯನ್ಸ್‌ನ ಕ್ರೂಡೀಕೃತ ಆದಾಯವು 30 ಸೆಪ್ಟೆಂಬರ್ 2021 ಕ್ಕೆ ಕೊನೆಗೊಂಡ … Continued

ಸಿಬಿಐ ತನಿಖೆಗೆ ನೀಡಿರುವ ಸಮ್ಮತಿ ಹಿಂಪಡೆಯಲು ಎಲ್ಲ ಪ್ರಕರಣಗಳಲ್ಲಿಯೂ ರಾಜ್ಯಗಳಿಗೆ ಅಧಿಕಾರವಿಲ್ಲ: ಕೇಂದ್ರ

ನವದೆಹಲಿ: ಸಿಬಿಐ ತನಿಖೆಗೆ ತಾನು ನೀಡಿರುವ ಸಮ್ಮತಿಯನ್ನು ಯಾವುದೇ ಒಂದು ಪ್ರಕರಣದಲ್ಲಾಗಲಿ ಅಥವಾ ಎಲ್ಲ ಪ್ರಕರಣಗಳಲ್ಲೇ ಅಗಲಿ ರಾಜ್ಯ ಸರ್ಕಾರಗಳು ಆದೇಶವೊಂದನ್ನು ಹೊರಡಿಸುವ ಮೂಲಕ ಹಿಂಪಡೆಯುವುದು ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆಯ ಸೆಕ್ಷನ್‌ 6ಕ್ಕೆ ವಿರುದ್ಧವಾಗುತ್ತದೆ ಮತ್ತು ಅಧಿಕಾರವ್ಯಾಪ್ತಿಯ ಹೊರತಾದದ್ದಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ರಾಜ್ಯ ಸರ್ಕಾರಕ್ಕೆ ಸಿಬಿಐ ತನಿಖೆಗೆ … Continued

ಒಂದೇ ಧಾರಾವಾಹಿಯಲ್ಲಿ 300 ಪಾತ್ರಗಳ ನಟನೆಗೆ ಆಸಿಫ್ ಶೇಖಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ ಗೌರವ

ಮುಂಬೈ: ಭಾಬಿಜಿ ಘರ್ ಪರ್ ಹೈ ಧಾರಾವಾಹಿಯ ವಿಭೂತಿ ನಾರಾಯಣ ಮಿಶ್ರಾ ಅವರನ್ನು ಯಾರು ಇಷ್ಟಪಡುವುದಿಲ್ಲ? ವಿಭೂತಿ ನಾರಾಯಣ ಮಿಶ್ರಾ ಅವರ ಪಾತ್ರವನ್ನು ನಿರ್ವಹಿಸುವ ಆಸಿಫ್ ಶೇಖ್ ಅವರು ಕಾರ್ಯಕ್ರಮದಲ್ಲಿ 300 ವಿಭಿನ್ನ ಪಾತ್ರಗಳನ್ನು ಚಿತ್ರಿಸಿದ್ದಾರೆ. ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ನಟನನ್ನು ಲಂಡನ್‌ನ ವರ್ಲ್ಡ್ ಬುಕ್‌ ಆಫ್ ರೆಕಾರ್ಡ್ಸ್‌ ಗುರುತಿಸಿದೆ. ನಟನಿಗೆ ಈಗ … Continued

ಇಸ್ಲಾಂಗೆ ಮತಾಂತರಗೊಳ್ಳಿ ಇಲ್ಲವೇ ಅಫ್ಘಾನಿಸ್ತಾನ ಬಿಟ್ಹೋಗಿ: ಅಫ್ಘಾನ್ ಸಿಖ್ಖರಿಗೆ ಬೆದರಿಕೆ-ವರದಿ

ಕಾಬೂಲ್‌:ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನದಲ್ಲಿ ಈಗ ಸಿಖ್‌ ಧರ್ಮದವರಿಗಿದ್ದ ಬೆದರಿಕೆ ಹೆಚ್ಚಾಗಲಾರಂಭಿಸಿದೆ. ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಸಿಖ್ಖರು ಸುನ್ನಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು ಅಥವಾ ದೇಶವನ್ನು ತೊರೆಯಬೇಕು ಎಂದು ತಾಲಿಬಾನ್‌ ಅವರಿಗೆ ಆಯ್ಕೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಅಫ್ಘಾಣಿಸ್ತಾನವನ್ನು ವಶಪಡಿಸಿಕೊಂಡ ನಂತರ ಸಿಖ್ಖರು ದೇಶದಿಂದ ಪಲಾಯನ ಮಾಡುವುದನ್ನು ಆಯ್ಕೆ ಮಾಡಿಕೊಳ್ಳಬೇಕಾಗಬಹುದು ಎಂದು ವರದಿಗಳು ತಿಳಿಸಿವೆ.  ಅಫ್ಘಾನಿಸ್ತಾನದಲ್ಲಿ ರಚನಾತ್ಮಕ … Continued

ಮುಂಬೈ ಕ್ರೂಸ್‌ ಡ್ರಗ್ಸ್ ಪ್ರಕರಣ: ಎನ್‌ಸಿಬಿಯಿಂದ 4 ಗಂಟೆಗಳ ಕಾಲ ನಟಿ ಅನನ್ಯಾ ಪಾಂಡೆ ವಿಚಾರಣೆ, ಅಕ್ಟೋಬರ್ 25 ರಂದು ಮತ್ತೆ ಹಾಜರಾಗಲು ಸೂಚನೆ

ಮುಂಬೈ : ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಿವುಡ್‌ ನಟಿ ಅನನ್ಯ ಪಾಂಡೆಯನ್ನು ಶುಕ್ರವಾರ ಸುಮಾರು ನಾಲ್ಕು ಗಂಟೆಗಳ ಕಾಲ ಮುಂಬೈನಲ್ಲಿರುವ ತಮ್ಮ ಕಚೇರಿಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ (ಎನ್‌ಸಿಬಿ)ಅಧಿಕಾರಿಗಳು ವಿಚಾರಣೆ ನಡೆಸಿದರು.. ಅಕ್ಟೋಬರ್ 25ರಂದು ಸೋಮವಾರ ಮೂರನೇ ಸುತ್ತಿನ ವಿಚಾರಣೆಗಾಗಿ ಮತ್ತೆ ಹಾಜರಾಗಲು ಎನ್‌ಸಿಬಿ ಸೂಚಿಸಿದೆ. ಎನ್‌ಸಿಬಿ ಅಧಿಕಾರಿಗಳಿಗೆ ಶುಕ್ರವಾರ ಅನನ್ಯ ಪಾಂಡೆಯವರನ್ನು … Continued

ವಿಮಾನ ನಿಲ್ದಾಣದಲ್ಲಿ ಪ್ರತಿ ಬಾರಿಯೂ ಕೃತಕ ಕಾಲು ತೆಗೆಸುವ ಸಿಬ್ಬಂದಿ: ಸುಧಾ ಚಂದ್ರನ್ ಕ್ಷಮೆಯಾಚಿಸಿದ ಸಿಐಎಸ್‌ಎಫ್

ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಶುಕ್ರವಾರ ನಟಿ ಹಾಗೂ ಭರತನಾಟ್ಯ ಸುಧಾ ಚಂದ್ರನ್ ಅವರ ಕ್ಷಮೆಯಾಚಿಸಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಅವರ ಕೃತಕ ಕಾಲನ್ನು ಬಿಚ್ಚಿ ತೋರಿಸುವಂತೆ ಸೂಚಿಸುವ ಮೂಲಕ ಅವಮಾನ ಮಾಡಲಾಗಿತ್ತು ಎಂದು ಸುಧಾ ಚಂದ್ರನ್‌ ಹೇಳಿದ್ದರು ಹಾಗೂ ಈ ಕುರಿತು ಪ್ರಧಾನಿ ಹಾಗೂ ಸರ್ಕಾರಕ್ಕೂ ಮನವಿ ಮಾಡಿದ್ದರು. … Continued

ತಿರುಪತಿ ದೇವಸ್ಥಾನಕ್ಕೆ ವಿಶೇಷ ಪ್ರವೇಶ ದರ್ಶನ : ಆನ್​​ಲೈನ್​​ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ

ತಿರುಮಲ: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಆಡಳಿತ ಮಂಡಳಿತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300 ರೂ.gL ಟಿಕೆಟುಗಳನ್ನು ಬಿಡುಗಡೆ ಮಾಡಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶೇಷ ದರ್ಶನ ಪಡೆಯಲು ಬಯಸುವವರು ಶುಕ್ರವಾರ ಬೆಳಗ್ಗೆ 9 ರಿಂದ ಟಿಕೆಟ್​​ ಕಾಯ್ದಿರಿಸಬಹುದಾಗಿದೆ ಎಂದು ತಿಳಿಸಲಾಗಿದ್ದು, ಟಿಕೆಟ್‌ಗಳನ್ನು ವರ್ಚುಯಲ್‌ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ … Continued