ಒಲಿಂಪಿಕ್‌ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ತರಬೇತುದಾರ ವಿಜಯ್ ಶರ್ಮಾಗೆ 10 ಲಕ್ಷ ರೂ ಬಹುಮಾನ ಘೋಷಿಸಿದ ಐಒಎ

ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಶನಿವಾರ ಒಲಿಂಪಿಕ್ ಪದಕ ವಿಜೇತರ ತರಬೇತುದಾರರಿಗೆ ನಗದು ಬಹುಮಾನವನ್ನು ಘೋಷಿಸಿದೆ. ಟೋಕಿಯೋ ಒಲಂಪಿಕ್​ ಕ್ರೀಡಾಕೂಟದಲ್ಲಿ ಬೆಳ್ಳಿ ವಿಜೇತ ಮೀರಾಬಾಯಿ ಚಾನು ಅವರ ಐತಿಹಾಸಿಕ ಸಾಧನೆಯ ನಂತರ ತರಬೇತುದಾರ ವಿಜಯ್ ಶರ್ಮಾ ಅವರಿಗೆ 10 ಲಕ್ಷ ರೂ ನಗದು ಬಹುಮಾನವನ್ನು ಘೋಷಿಸಲಾಗಿದೆ. ಒಲಂಪಿಕ್​ ಕ್ರೀಡಾಕೂಟದಲ್ಲಿ ಸ್ಪರ್ದಿಯು ಚಿನ್ನದ ಪದಕ ಗೆದ್ದರೆ … Continued

ಹೊಸ ಆರ್‌ಬಿಐ ನಿಯಮಗಳು: ಆಗಸ್ಟ್ 1 ರಿಂದ ಬದಲಾಗುತ್ತದೆ ಸಂಬಳ, ಪಿಂಚಣಿ ಮತ್ತು ಇಎಂಐ ಪಾವತಿ ನಿಯಮಗಳು, ವಿವರಗಳು ಇಲ್ಲಿದೆ

ಸಂಬಳ, ಪಿಂಚಣಿ ಮತ್ತು ಇಎಂಐ ಪಾವತಿಗಳಂತಹ ಪ್ರಮುಖ ವಹಿವಾಟುಗಳಿಗಾಗಿ ನೀವು ಇನ್ನು ಮುಂದೆ ಕೆಲಸದ ದಿನಕ್ಕಾಗಿ ಕಾಯಬೇಕಾಗಿಲ್ಲ. ಆರ್‌ಬಿಐ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (National Automated Clearing House -NACH ) ನ ನಿಯಮಗಳನ್ನು ಬದಲಾಯಿಸಿದೆ. ಇದು 2021ರ ಆಗಸ್ಟ್ 1 ರಂದು ಜಾರಿಗೆ ಬರಲಿದೆ. ಅಂದರೆ, ನಿಮ್ಮ ಸಂಬಳ ಅಥವಾ ಪಿಂಚಣಿಗೆ ಮನ್ನಣೆ … Continued

ಪಿಎಂ ಮೋದಿ, ಅಮಿತ್ ಶಾ, ಡಿಎಂಕೆ ವಿರುದ್ಧ ವಿವಾದಾತ್ಮಕ ಹೇಳಿಕೆ : ತಮಿಳುನಾಡು ಪಾದ್ರಿ ಬಂಧನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಡಿಎಂಕೆ ಮಂತ್ರಿಗಳ ವಿರುದ್ಧ “ದ್ವೇಷ ಭಾಷಣ” ಮಾಡಿದ ಆರೋಪದ ಮೇಲೆ ತಮಿಳುನಾಡಿನ ಕ್ಯಾಥೊಲಿಕ್ ಪಾದ್ರಿ ಜಾರ್ಜ್ ಪೊನ್ನಯ್ಯ ಅವರನ್ನು ಮಧುರೈನ ಕಲ್ಲಿಕುಡಿಯಲ್ಲಿ ಶನಿವಾರ ಬಂಧಿಸಲಾಗಿದೆ. ಅವರ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಹಿಂದೂ ಗುಂಪುಗಳು ಅವರ ಹೇಳಿಕೆಗಳನ್ನು ಖಂಡಿಸಿ ಆತನ … Continued

ಡ್ರೋನ್​ ದಾಳಿ ಅಪಾಯ ತಪ್ಪಿಸಿಕೊಳ್ಳಲು ಆ್ಯಂಟಿ​ ಡ್ರೋನ್​ ತಂತ್ರಜ್ಞಾನ ಅಳವಡಿಕೆಗೆ ಮುಂದಾದ ತಿರುಪತಿ ದೇವಾಲಯ 

ಡ್ರೋನ್​ ದಾಳಿ ತಪ್ಪಿಸಲು ಒಂದು ಹೊಸ ತಂತ್ರಜ್ಞಾನ ಅಳವಡಿಸಲು ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಮುಂದಾಗಿದೆ. ಆ್ಯಂಟಿ-ಡ್ರೋನ್​​ ಟೆಕ್ನಾಲಜಿಯನ್ನು ಅದು ಯಶಸ್ವಿಯಾಗಿ ಅಳವಡಿಸಿದ್ದೇ ಆದರೆ, ಇಂಥದ್ದೊಂದು ತಂತ್ರಜ್ಞಾನ ಅಳವಡಿಸಿಕೊಂಡ ದೇಶದ ಮೊದಲ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ . ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಆ್ಯಂಟಿ-ಡ್ರೋನ್​ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳಲು ತಿರುಮಲ ದೇವಸ್ಥಾನ … Continued

ಮಹಾರಾಷ್ಟ್ರ ಪ್ರವಾಹ: ವಿದ್ಯುತ್ ಕಡಿತದಿಂದ ಆಮ್ಲಜನಕ ಪೂರೈಕೆ ಸ್ಥಗಿತಗೊಂಡು ಎಂಟು ಕೊರೊನಾ ರೋಗಿಗಳು ಸಾವು

ಮುಂಬೈ: ಅಭೂತಪೂರ್ವ ಮಳೆಯು  ಮಹಾರಾಷ್ಟ್ರದಾದ್ಯಂತ ಹಾನಿಯನ್ನುಂಟು ಮಾಡಿದೆ. ಪ್ರವಾಹ ಪೀಡಿತ ರತ್ನಗಿರಿ ಜಿಲ್ಲೆಯ ಖೇಡ್ ತಹಸೀಲ್‌ನ  ಖಾಸಗಿ ಆಸ್ಪತ್ರೆಯಲ್ಲಿ ಎಂಟು ಕೋವಿಡ್‌ -19 ರೋಗಿಗಳು ಪ್ರವಾಹದಿಂದಾಗಿ ವಿದ್ಯುತ್ ಅಡೆತಡೆಯಿಂದಾಗಿ ಆಮ್ಲಜನಕದ ಪೂರೈಕೆಯ ಕೊರತೆಯಿಂದ ಮೃತಪಟ್ಟರು. ಈ ದುರದೃಷ್ಟಕರ ಘಟನೆಯ ಬಗ್ಗೆ ರತ್ನಗಿರಿ ಜಿಲ್ಲೆಯ ಸ್ಥಳೀಯ ಆಡಳಿತ ತನಿಖೆ ಆರಂಭಿಸಿದೆ. ಜಿಲ್ಲಾಧಿಕಾರಿ ಬಿ. ಎನ್. ಪಾಟೀಲ್ ಅವರ … Continued

ಮಣ್ಣು ಕುಸಿತದಿಂದ ರಸ್ತೆ ನಿರ್ಬಂಧ: ದುರ್ಗಮ ಪ್ರದೇಶದಲ್ಲಿ ಭುಜದ ಮೇಲೆ ಬೈಕ್‌ ಹೊತ್ತೊಯ್ದ ಚಂಬಾ ಬಾಹುಬಲಿ..!

ಶಿಮ್ಲಾ: ಸವಾರನೋರ್ವ ಬೈಕ್ ಹೆಗಲ ಮೇಲೆ ಹೊತ್ತು ರಸ್ತೆ ದಾಟಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಕಣಿವೆಯಲ್ಲಿ ನಡೆದಿದೆ. ಈಗ ಬೈಕ್ ಸವಾರನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವಾರದಿಂದ ಹಿಮಾಚಲ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿದೆ. ಬಹುತೇಕ ಗ್ರಾಮಗಳು  ಭಾರಿ ಮಳೆಯಿಂದ ಸಂಪರ್ಕ ಕಳೆದುಕೊಂಡಿವೆ. ಕಣಿವೆ ಭಾಗಗಳಲ್ಲಿ ರಸ್ತೆ ಮೇಲೆ ಅಪಾರ … Continued

ಮಹತ್ವದ ಬೆಳವಣಿಗೆಯಲ್ಲಿ ಕಾಶಿ ವಿಶ್ವನಾಥ ಮಂದಿರಕ್ಕೆ ಭೂಮಿ ನೀಡಿದ ಜ್ಞಾನವಪಿ ಮಸೀದಿ ಆಡಳಿತ ಮಂಡಳಿ..!

ವಾರಣಾಸಿ: ಮಹತ್ವದ ಬೆಳವಣಿಗೆಯಲ್ಲಿ ಕೋಮು ಸಾಮರಸ್ಯದ ವಿಶಿಷ್ಟ ಪ್ರದರ್ಶನದಲ್ಲಿ, ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಪಿ ಮಸೀದಿ ಪ್ರಕರಣದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್‌ಗಾಗಿ ಜ್ಞಾನವಪಿ ಮಸೀದಿ ಆಡಳಿತ ಮಂಡಳಿಯು 1700 ಚದರ ಅಡಿ ಭೂಮಿಯನ್ನು ಹಸ್ತಾಂತರಿಸಿದೆ. ಜ್ಞಾನವಪಿ ಮಸೀದಿಯ ಪಕ್ಕದಲ್ಲಿರುವ ಈ ಭೂಮಿಯನ್ನು ಕಾಶಿ ವಿಶ್ವನಾಥ ದೇವಾಲಯದ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ. ಪ್ರತಿಯಾಗಿ, ದೇವಾಲಯ ಆಡಳಿತವು ಜ್ಞಾನವಪಿ ಮಸೀದಿ ಮತ್ತು … Continued

ಟೋಕಿಯೊ ಒಲಿಂಪಿಕ್‌: ಭಾರತಕ್ಕೆ ಮೊದಲ ಪದಕ, ವೇಟ್‌ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ

ಟೋಕಿಯೊ: ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಶನಿವಾರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಿಳಾ 49 ಕೆಜಿ ವಿಭಾಗದಲ್ಲಿ 2020 ರ ಟೋಕಿಯೋ ಕ್ರೀಡಾಕೂಟದಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆಜಿ ತೂಕದ … Continued

ರಾಜ್ಯದಲ್ಲಿಯೂ ಆರ್ಥಿಕ ದುರ್ಬಲರಿಗೆ ಶೇ.೧೦ ಮೀಸಲಾತಿ: ಸರ್ಕಾರದಿಂದ ಶೀಘ್ರ ಅಧಿಸೂಚನೆ

ಬೆಂಗಳೂರು: ರಾಜ್ಯದ ನಾಗರಿಕ ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ  ಅಥವಾ ಮೇಲ್ಜಾತಿಗಳ ಜನರಿಗೆ ಶೇ.೧೦ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ವರ್ಜಗದ ಜನರಿಗೆ ಶೇ.೧೦ರಷ್ಟು ಮೀಸಲಾತಿ ನೀಡುವ ಸಂಬಂಧ ಶೀಘ್ರದಲ್ಲೇ … Continued

ಭಾರಿ ಮಳೆಯಿಂದ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 136ಕ್ಕೆ ಏರಿಕೆ: 84,000 ಜನರ ಸ್ಥಳಾಂತರ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಮುಂಬೈ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಭೂಕುಸಿತ ಮತ್ತು ಪ್ರವಾಹ ಸೇರಿದಂತೆ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 136 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಹೆಚ್ಚಿನ ಸಾವುಗಳು ರಾಯ್ಗಡ್ ಮತ್ತು ಸತಾರಾ ಜಿಲ್ಲೆಗಳಿಂದ ಬಂದಿವೆ. ಮಳೆಯು ಹಲವಾರು ಜಿಲ್ಲೆಗಳಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೆ ಕಾರಣವಾಗಿದೆ. ಸಶಸ್ತ್ರ ಪಡೆಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ … Continued