ನಮ್ಮಲ್ಲಿ ಸಾಕಷ್ಟು ಆಮ್ಲಜನಕ ಲಭ್ಯ, ಆಸ್ಪತ್ರೆಗಳಿಗೆ ಸಾಗಿಸುವುದು ಸವಾಲು: ಕೊರತೆ ವರದಿಗಳ ಮಧ್ಯೆ ಸರ್ಕಾರದ ಹೇಳಿಕೆ

ನವ ದೆಹಲಿ: ಖರೀದಿ ಅಥವಾ ನೇಮಕಾತಿ ಆಧಾರದ ಮೇಲೆ ಭಾರತವು ವಿದೇಶದಿಂದ ಆಮ್ಲಜನಕ ಟ್ಯಾಂಕರ್‌ಗಳನ್ನು ಆದೇಶಿಸುತ್ತಿದೆ ಎಂದು ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಭಾರತದಲ್ಲಿ ಸಾಕಷ್ಟು ವೈದ್ಯಕೀಯ ಆಮ್ಲಜನಕ ಲಭ್ಯವಿದೆ, ಅದನ್ನು ಆಸ್ಪತ್ರೆಗಳಿಗೆ ಸಾಗಿಸುವುದು ಸವಾಲು. ನೈಜ-ಸಮಯದ ಟ್ರ್ಯಾಕಿಂಗ್ ಬಳಸಿ, ನಾವು ಆಮ್ಲಜನಕ ಟ್ಯಾಂಕರ್‌ಗಳ ಚಲನೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ” ಎಂದು ಗೃಹ ಸಚಿವಾಲಯದ ಹೆಚ್ಚುವರಿ … Continued

ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು: ಕೋವಿಡ್‌ ಉಲ್ಬಣಕ್ಕೆ ಚುನಾವಣಾ ಆಯೋಗಕ್ಕೆ ಮದ್ರಾಸ್ ಹೈಕೋರ್ಟ್‌ ತರಾಟೆ

ಚೆನ್ನೈ: ತಮ್ಮ ರಾಜಕೀಯ ಜಾಥಾಗಳಲ್ಲಿ ಕೋವಿಡ್ -19 ಮಾರ್ಗಸೂಚಿಗಳನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿದ (ಉಲ್ಲಂಘಿಸಿದ) ರಾಜಕೀಯ ಪಕ್ಷಗಳನ್ನು ತಡೆಯದಿದ್ದಕ್ಕಾಗಿ  ಚುನಾವಣಾ ಆಯೋಗದ (ಇಸಿಐ) ಕ್ರಮ ಖಂಡಿಸಿದ ಮದ್ರಾಸ್ ಹೈಕೋರ್ಟ್ ಸೋಮವಾರ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಉಲ್ಬಣಕ್ಕೆ “ಚುನಾವಣಾ ಆಯೋಗ ಕಾರಣವಾಗಿದೆ ಎಂದು ಹೇಳಿದೆ. ಕಟ್ಟುನಿಟ್ಟಾದ ಕೋವಿಡ್ -19 ಪ್ರೋಟೋಕಾಲ್ ಅನ್ನು ಮತದಾನ ಮಂಡಳಿಯು ರೂಪಿಸದಿದ್ದರೆ … Continued

ಕೋವಿಡ್ ರೋಗಿಗಳಿಗೆ ಚಿಕಿತ್ಸೆ: ಮೊಲ್ನುಪಿರವಿರ್ ಮಾತ್ರೆ 3ನೇ ಹಂತದ ಪ್ರಾಯೋಗಿಕ ಬಳಕೆಗೆ ಅರ್ಜಿ

ಹೈದರಾಬಾದ್‌: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ‘ಮೊಲ್ನುಪಿರವಿರ್‌ ಮಾತ್ರೆಗಳನ್ನು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಅನುಮೋದನೆಗಾಗಿ ನ್ಯಾಟ್ಕೊ ಫಾರ್ಮಾ ಲಿಮಿಟೆಡ್ ಕಂಪನಿ ಕೇಂದ್ರೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ(ಸಿಡಿಎಸ್‌ಸಿಒ) ಅರ್ಜಿ ಸಲ್ಲಿಸಿದೆ. ಅಮೆರಿಕದ ಔಷಧ ಕಂಪನಿ ಮೆರ್ಕ್‌ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪಿಟಿಕ್ಸ್ ಜತೆಯಾಗಿ ಅಭಿವೃದ್ಧಿಪಡಿಸಿರುವ ಮೊಲ್ನುಪಿರವಿರ್‌ (ಎಂಕೆ -4482) ಮಾತ್ರೆಗಳನ್ನು ಎರಡು ಹಂತಗಳಲ್ಲಿ ಪ್ರಾಯೋಗಿಕವಾಗಿ ಕೊರೊನಾ ರೋಗಿಗಳ … Continued

ಕೋವಿಡ್ 19 ರ ವಿರುದ್ಧ ಹೋರಾಟದಲ್ಲಿ ಕುಟುಂಬ ಬೆಂಬಲಿಸಲು ಐಪಿಎಲ್‌ನಿಂದ ಹೊರಬಂದ ಸ್ಪಿನ್‌ ಮಾಂತ್ರಿಕ ಆರ್ ಅಶ್ವಿನ್

ಡೆಲ್ಹಿ ಕ್ಯಾಪಿಟಲ್ಸ್ ಸ್ಪಿನ್ನರ್ ಹಾಗೂ ಭಾರತದ ಕ್ರಿಕೆಟ್‌ ತಂಡದ ಆಟಗಾರ ಆರ್‌. ಅಶ್ವಿನ್ ಐಪಿಎಲ್ 2021 ರಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಮತ್ತು COVID-19 ವಿರುದ್ಧದ ಹೋರಾಟದಲ್ಲಿ ತಮ್ಮ ಕುಟುಂಬದೊಂದಿಗೆ ಇರಲು ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಸದ್ಯ ನಿರ್ಗಮಿಸುವುದಾಗಿ ಹೇಳಿದ್ದಾರೆ. ಭಾನುವಾರ ತನ್ನ ಊರಾದ ಚೆನ್ನೈನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ ಅಶ್ವಿನ್, ಟಿ- … Continued

ಕೋವಿಡ್ -19 ಹೋರಾಟದಲ್ಲಿ ಭಾರತಕ್ಕೆ ಬೆಂಬಲದ ಭರಸವೆ ನೀಡಿದ ಗೂಗಲ್ ಸಿಇಒ ಸುಂದರ್ ಪಿಚೈ

ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕೋವಿಡ್ -19 ರ ಎರಡನೇ ಅಲೆಯ ವಿರುದ್ಧದ ಭಾರತದ ಯುದ್ಧದಲ್ಲಿ ಬೆಂಬಲ ನೀಡುವ ವಾಗ್ದಾನ ಮಾಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಅನ್ನು ಉದ್ದೇಶಿಸಿ ತೂಫಾನ್’ (ಚಂಡಮಾರುತ) ಎಂದು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟು ಅನಾಹುತಕಾರಿಯಾಗಿದೆ. … Continued

ಭಾರತದಲ್ಲಿ ಸತತ ಐದನೇ ದಿನವೂ 3 ಲಕ್ಷ ದಾಟಿದ ಕೊರೊನಾ ಹೊಸ ಸೋಂಕು..ಇಳಿಯದ ಸಾವಿನ ಸಂಖ್ಯೆ

ನವ ದೆಹಲಿ: ಸೋಮವಾರ ಬೆಳಿಗ್ಗೆ 8 ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ಭಾರತವು 3.52 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟು ಸೋಂಕುಗಳನ್ನು 1.73 ಕೋಟಿಗೆ ತಲುಪಿದೆ. ಈ ಪೈಕಿ ಪ್ರಸ್ತುತ 28 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿದ್ದರೆ, 1.43 ಕೋಟಿ ಜನರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,812 ಹೊಸ … Continued

ಸ್ಟಾಕ್ ಇಲ್ಲ.. ಮೇ 1ರಂದು ಎಲ್ಲರಿಗೂ ಲಸಿಕೆ ಆರಂಭಿಸಲು ಸಾಧ್ಯವಿಲ್ಲ ಎಂದ ಕಾಂಗ್ರೆಸ್‌ ಆಡಳಿತದ ನಾಲ್ಕು ರಾಜ್ಯಗಳು

ನವ ದೆಹಲಿ: ಲಸಿಕೆಗಳನ್ನು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತೆರೆಯುವ ಐದು ದಿನಗಳ ಮೊದಲು, ಪ್ರತಿಪಕ್ಷ ಆಡಳಿತ ನಡೆಸುತ್ತಿರುವ ನಾಲ್ಕು ರಾಜ್ಯಗಳು  ಸಾಕಷ್ಟು ಲಸಿಕೆಗಳನ್ನು ಹೊಂದಿರದ ಕಾರಣ ಮೇ 1 ರಂದು ಲಸಿಕೆ ಆರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಭಾನುವಾರ ಹೇಳಿವೆ. ಮೇ 15ರ ವರೆಗೆ ಮೊದಲು ಕೋವಿಶೀಲ್ಡ್‌ ಡೋಸೇಜ್ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು … Continued

ಭಾರತದ ಕೋವಿಡ್‌ ಪರಿಸ್ಥಿತಿಯಿಂದ ನಾನು ಎದೆಗುಂದಿದ್ದೇನೆ’: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ತರಂಗದಿಂದಾಗಿ ಭಾರತದ ಪ್ರಸ್ತುತ ಪರಿಸ್ಥಿತಿಯೊಂದಿಗೆ ಎದೆಗುಂದಿದ್ದೇನೆ ಎಂದು ಹೇಳಿದ್ದಾರೆ. ಭಾರತದ ಪ್ರಸ್ತುತ ಪರಿಸ್ಥಿತಿಯಿಂದ ನಾನು ಎದೆಗುಂದಿದ್ದೇನೆ. ಅಮೆರಿಕ ಸರ್ಕಾರವು ಸಹಾಯ ಮಾಡಲು ಸಜ್ಜುಗೊಳಿಸುತ್ತಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ” ಎಂದು ಸತ್ಯ ನಾಡೆಲ್ಲಾ ಟ್ವೀಟ್ ಮಾಡಿದ್ದಾರೆ. ಪರಿಹಾರ ಪ್ರಯತ್ನಗಳಿಗೆ ಮತ್ತು ನಿರ್ಣಾಯಕ ಆಮ್ಲಜನಕ ಸಾಂದ್ರತೆಯ … Continued

ಭಾರತದಲ್ಲಿ ಕೋವಿಶೀಲ್ಡ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳು ತುರ್ತಾಗಿ ರವಾನೆ: ಅಮೆರಿಕ ಹೇಳಿಕೆ

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಭಾನುವಾರ ಭಾರತದ ವಿದೇಶಾಂಗ ಸಚಿವ ಅಜಿತ್ ದೋವಲ್ ಅವರೊಂದಿಗೆ ಮಾತನಾಡಿ ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಹೆಚ್ಚಿನ ಸರಬರಾಜು, ಸಂಪನ್ಮೂಲಗಳು, ಕಚ್ಚಾ ವಸ್ತುಗಳನ್ನು ನಿಯೋಜಿಸಲು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ … Continued

ಕೈಗಾರಿಕೆಗಳು ವೈದ್ಯಕೀಯ ಉದ್ದೇಶ ಬಿಟ್ಟು ಬೇರೆ ಉದ್ದೇಶಕ್ಕೆ ಆಮ್ಲಜನಕ ಉತ್ಪಾದಿಸುವ ಹಾಗಿಲ್ಲ: ಕೇಂದ್ರ ಸರ್ಕಾರ ಆದೇಶ

ನವ ದೆಹಲಿ: ಕೊವಿಡ್ ಸೋಂಕಿತರ ಚಿಕಿತ್ಸೆಗಾಗಿ ತುರ್ತು ಕ್ರಮ ಕೈಗೊಂಡಿರುವ ಕೇಂದ್ರ ಗೃಹ ಇಲಾಖೆ ವೈದ್ಯಕೀಯ ದ್ರವ ಆಮ್ಲಜನಕ ವೈದ್ಯಕೀಯೇತರ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ ಹಾಗೂ ದೇಶದಲ್ಲಿ ಯಾವುದೇ ಕೈಗಾರಿಕೆಗಳು ವೈದ್ಯಕೀಯ ಉದ್ದೇಶಕ್ಕೆ ಮಾತ್ರ ದ್ರವಿಕೃತ ಆಮ್ಲಜನಕವನ್ನು ಉತ್ಪಾದಿಸಬೇಕು. ಇದರಿಂದ ಯಾರಿಗೂ ವಿನಾಯಿತಿ ಇಲ್ಲ ಎಂದು ಕೇಂದ್ರ ಸರ್ಕಾರ  ಭಾನುವಾರ ಆದೇಶಿಸಿದೆ. ಈ ಕುರಿತು ಎಲ್ಲ … Continued