ಪಕ್ಷದ ಆಂತರಿಕ ಕಲಹದ ಮಧ್ಯೆ, ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮರುನೇಮಕ ಮಾಡಿದ ಮಮತಾ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಹೊಸದಾಗಿ ರಚಿಸಲಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯ ನಂತರ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕ ಮಾಡಿದ್ದಾರೆ. ಮಮತಾ ಅವರು ಪಕ್ಷದ ಹಳೆಯ ಸಿಬ್ಬಂದಿ ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಉಪಾಧ್ಯಕ್ಷರಾಗಿ, ಸುಖೇಂದು ಶೇಖರ್ ರಾಯ್ ಅವರನ್ನು ರಾಷ್ಟ್ರೀಯ … Continued

ಗೋಣಿಚೀಲದಲ್ಲಿ ನಾಣ್ಯಗಳನ್ನು ತುಂಬಿಕೊಂಡು ಬಂದು ಸ್ಕೂಟರ್ ಖರೀದಿಸಿದ ಅಸ್ಸಾಂ ವ್ಯಕ್ತಿ..! ವೀಕ್ಷಿಸಿ

ಅಸ್ಸಾಂನ ವ್ಯಕ್ತಿಯೊಬ್ಬರು ಹೊಸ ಸ್ಕೂಟರ್ ಖರೀದಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ವ್ಯಕ್ತಿ ತನ್ನ ಜೀವಮಾನದಲ್ಲಿ ಉಳಿಸಿದ ನಾಣ್ಯಗಳನ್ನು ಮೂಟೆಗಳಲ್ಲಿ ತಂದು ಈ ಸ್ಕೂಟರ್‌ ಖರೀದಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಬಾರ್ಪೇಟಾ ಜಿಲ್ಲೆಯ ಅಂಗಡಿಯವನು ತಿಂಗಳುಗಟ್ಟಲೆ ಹಣವನ್ನು ಉಳಿಸಿ ಮತ್ತು ಹಾಗೂ ನಾಣ್ಯಗಳನ್ನು ತುಂಬಿದ ಚೀಲದೊಂದಿಗೆ ಶೋರೂಮಿಗೆ ಹೋಗಿದ್ದಾರೆ. ಯೂ ಟ್ಯೂಬರ್ ಹಿರಾಕ್ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರನ ಬಂಧಿಸಿದ ಇಡಿ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಇದಕ್ಕೂ ಮುನ್ನ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧದ ತನಿಖೆಯಲ್ಲಿ ಇಕ್ಬಾಲ್ ಕಸ್ಕರನನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಇಡಿ ಮಾಡಿದ ಮನವಿಯನ್ನು ಥಾಣೆ ನ್ಯಾಯಾಲಯವು ಅನುಮೋದಿಸಿತ್ತು. ಕಸ್ಕರ್‌ನನ್ನು ಥಾಣೆ ಜೈಲಿನಿಂದ ಮುಂಬೈ ಪಿಎಂಎಲ್‌ಎ … Continued

ಹಿರಿಯ ಸಿಖ್ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದ

ನವದೆಹಲಿ: ಭಾನುವಾರ ಪಂಜಾಬ್ ಚುನಾವಣೆಗೆ ಮುನ್ನ ದೆಹಲಿಯ ತಮ್ಮ ಮನೆಯಲ್ಲಿ ಹಿರಿಯ ಸಿಖ್ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಾವೆಷ್ಟು ದಬ್ಬಾಳಿಕೆ ಅನುಭವಿಸಿದ್ದೆವು. ನಾನು ಆಗ ಭೂಗತನಾಗಿದ್ದೆ. ಮರೆಮಾಚಲು ಸಿಖ್ ವೇಷ ಧರಿಸುತ್ತಿದ್ದೆ. ಪಗ್ಡಿ ಧರಿಸುತ್ತಿದ್ದೆ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಸಿಖ್ ಸಮುದಾಯ ಜತೆ ಮಾತನಾಡಿದ … Continued

ಯುಎಇ ಜೊತೆ ಭಾರತ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಸಹಿ; ದ್ವಿಪಕ್ಷೀಯ ವ್ಯಾಪಾರ ಬೂಸ್ಟ್, ಎಮಿರೇಟ್ಸ್‌ನಲ್ಲಿ ಐಐಟಿ

ನವದೆಹಲಿ: ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಯುಎಇಯೊಂದಿಗೆ ಭಾರತವು ಶುಕ್ರವಾರ ಐತಿಹಾಸಿಕ ವ್ಯಾಪಾರ ಒಪ್ಪಂದ – ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ(ಸಿಇಪಿಎ)ಕ್ಕೆ ಸಹಿ ಹಾಕಿದೆ. ಇದು ಉಭಯ ದೇಶಗಳ ನಡುವಿನ ಮೊದಲ ಪ್ರಮುಖ ವ್ಯಾಪಾರ ಒಪ್ಪಂದವಾಗಿದ್ದು, ಸೆಪ್ಟೆಂಬರ್ 2021ರಲ್ಲಿ ಪ್ರಾರಂಭವಾದ ಮಾತುಕತೆಗಳು ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿವೆ. ವ್ಯಾಪಾರ ಒಪ್ಪಂದದ ಜಂಟಿ ವಿಷನ್ ಹೇಳಿಕೆಯು … Continued

ಸಿಎಎ ವಿರೋಧಿ ಪ್ರತಿಭಟನಾಕಾರರಿಂದ ವಸೂಲಿ ಮಾಡಿದ ಆಸ್ತಿ ಹಾನಿಯ ದಂಡ ಹಿಂತಿರುಗಿಸಲು ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ಆರೋಪ ಎದುರಿಸುತ್ತಿರುವವರಿಂದ ವಸೂಲಿ ಮಾಡಲಾದ ದಂಡದ ಹಣವನ್ನು ಅವರಿಗೇ ಮರಳಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿರುವುದಕ್ಕೆ ಪರಿಹಾರವನ್ನು ಕಟ್ಟಿಕೊಡುವ ಸಲುವಾಗಿ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ನೀಡಿದ್ದ ಶೋಕಾಸ್‌ … Continued

2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪು: 38 ಜನರಿಗೆ ಮರಣದಂಡನೆ, 11 ಮಂದಿಗೆ ಸಾಯುವ ವರೆಗೆ ಜೀವಾವಧಿ ಶಿಕ್ಷೆ

ಅಹಮದಾಬಾದ್: 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ 49 ಅಪರಾಧಿಗಳ ಪೈಕಿ 38 ಮಂದಿಗೆ ವಿಶೇಷ ನ್ಯಾಯಾಲಯ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ಇತರ 11 ಅಪರಾಧಿಗಳಿಗೆ ಮರಣದವರೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 56 ಜೀವಗಳನ್ನು ಬಲಿ ಪಡೆದ ಹಾಗೂ 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ ಸರಣಿ ಸ್ಫೋಟ ಪ್ರಕರಣದಲ್ಲಿ ಫೆಬ್ರವರಿ 8 … Continued

ಉತ್ತರ ಪ್ರದೇಶ ಚುನಾವಣೆ 2022: ನಾಲ್ಕನೇ ಹಂತದ ಚುನಾವಣೆಯಲ್ಲಿ 129 ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣ ಇರುವವರು..!

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದತ್ತ ಸಾಗುತ್ತಿರುವಂತೆಯೇ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಬಿಡುಗಡೆ ಮಾಡಿರುವ ವರದಿಯು 621 ರಲ್ಲಿ 129 ಅಂದರೆ 21% ಅಭ್ಯರ್ಥಿಗಳು ಅತ್ಯಾಚಾರ ಮತ್ತು ಕೊಲೆಯಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ. ಚುನಾವಣಾ ಅಫಿಡವಿಟ್‌ಗಳ ವಿಶ್ಲೇಷಣೆಯ ಆಧಾರದ ಮೇಲೆ, 167 (27%) ಅಭ್ಯರ್ಥಿಗಳು ತಮ್ಮ … Continued

ಥಾಣೆಯಲ್ಲಿ ಹಕ್ಕಿ ಜ್ವರ ಭೀತಿ, ಕೋಳಿ ಫಾರಂನಲ್ಲಿ 25,000 ಕೋಳಿಗಳನ್ನು ಸಾಯಿಸಲು ನಿರ್ಧಾರ

ಮುಂಬೈ: ಹಕ್ಕಿಜ್ವರದ ಭೀತಿಯ ಹಿನ್ನೆಲೆಯಲ್ಲಿ ಪೀಡಿತ ಕೋಳಿ ಫಾರಂನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಸುಮಾರು 25,000 ಪಕ್ಷಿಗಳು ಮುಂದಿನ ಕೆಲವೇ ದಿನಗಳಲ್ಲಿ ಸಾಯಲಿವೆ. ಥಾಣೆ ಜಿಲ್ಲೆಯ ಶಹಾಪುರ ತಹಸಿಲ್‌ನ ವೆಹ್ಲೋಲಿ ಗ್ರಾಮದ ಫಾರಂನಲ್ಲಿ ಸುಮಾರು 100 ಕೋಳಿಗಳು ಹಠಾತ್ತನೆ ಮೃತಪಟ್ಟ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥಾಣೆ … Continued

ಭಾರತದಲ್ಲಿ 25,920 ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 15.7% ರಷ್ಟು ಕಡಿಮೆ

ನವದೆಹಲಿ: ಭಾರತದ ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಭಾರತ 25,920 ಹೊಸ ಸೋಂಕುಗಳನ್ನು ವರದಿ ಮಾಡಿದೆ. ಇದು ನಿನ್ನೆಯಿಂದ ಶೇಕಡಾ 15.7 ರಷ್ಟು ಇಳಿಕೆಯಾಗಿದೆ. ಇದೇ ಸಮಯದಲ್ಲಿ ದೇಶವು 492 ಸಾವುಗಳನ್ನು ದಾಖಲಿಸಿದೆ. ದೇಶದ ಒಟ್ಟು ಪ್ರಕರಣ ಈಗ 4,27,80,235 ಆಗಿದ್ದು, ಒಟ್ಟು ಸಾವಿನ ಸಂಖ್ಯೆ 5,10,905 ಆಗಿದೆ. ಕಳೆದ 24 ಗಂಟೆಗಳಲ್ಲಿ … Continued