ಕೋವಾಕ್ಸಿನ್ ಬೂಸ್ಟರ್ ಡೋಸ್‌ ಪ್ರಯೋಗಗಳು ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲದೆ ದೀರ್ಘಾವಧಿ ಸುರಕ್ಷತೆ ತೋರಿಸುತ್ತವೆ: ಭಾರತ್ ಬಯೋಟೆಕ್

ಹೈದರಾಬಾದ್: ಕೊರೊನಾ ವೈರಸ್ಸಿನ ಹೊಸ ರೂಪಾಂತರ ತಳಿಗಳ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿತ್ವ ಪರೀಕ್ಷಿಸಲು ನಡೆಸಿದ ಪ್ರಯೋಗಗಳು ಲಸಿಕೆಯ ಬೂಸ್ಟರ್ ಡೋಸ್‌ “ಯಾವುದೇ ಗಂಭೀರ ಪ್ರತಿಕೂಲ ಘಟನೆಗಳಿಲ್ಲದೆ ದೀರ್ಘಾವಧಿಯ ಸುರಕ್ಷತೆಯನ್ನು” ಪ್ರದರ್ಶಿಸಿದೆ ಎಂದು ತೋರಿಸಿದೆ ಎಂದು ಭಾರತ ಬಯೋಟೆಕ್‌ ಹೇಳಿದೆ. ಕೋವಾಕ್ಸಿನ್ ಬೂಸ್ಟರ್ ಡೋಸ್‌ ಪ್ರಯೋಗವು ಯಾವುದೇ ಗಂಭೀರ ಪ್ರತಿಕೂಲ ಘಟನೆಗಳಿಲ್ಲದೆ ದೀರ್ಘಾವಧಿಯ ಸುರಕ್ಷತೆಯನ್ನು ಪ್ರದರ್ಶಿಸಿದೆ … … Continued

ಮಹಾರಾಷ್ಟ್ರ: ಬಾಂದ್ರಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 68 ಸಿಬಿಐ ಸಿಬ್ಬಂದಿಗೆ ಕೋವಿಡ್-19 ಸೋಂಕು..!

ಮುಂಬೈ: ಮುಂಬೈನಲ್ಲಿರುವ ತನಿಖಾ ಸಂಸ್ಥೆಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಸಿಬಿಐ)ನ 68 ಉದ್ಯೋಗಿಗಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಗ್ರೇಟರ್ ಮುಂಬೈ ಮಹಾನಗರ ಪಾಲಿಕೆ (ಎಂಸಿಜಿಎಂ) ಶನಿವಾರ ತಿಳಿಸಿದೆ. . ಬಿಕೆಸಿ (BKC) ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು 235 ಉದ್ಯೋಗಿಗಳನ್ನು ಪರೀಕ್ಷಿಸಲು ಸಿಬಿಐ ಬೃಹನ್ಮುಂಬೈ … Continued

ಪ್ರಧಾನಿ ಭದ್ರತಾ ಲೋಪದ ಆರೋಪದ ಬೆನ್ನಲ್ಲೇ ಪಂಜಾಬ್​ನಲ್ಲಿ ನೂತನ ಡಿಜಿಪಿ ನೇಮಕ

ಚಂಡೀಗಢ: ಪಂಜಾಬ್​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ಹಾಗೇ, ಸುಪ್ರೀಂ ಕೋರ್ಟ್​ನಲ್ಲೂ ಈ ಬಗ್ಗೆ ವಿಚಾರಣೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರ ಶನಿವಾರ (ಶನಿವಾರ) ವಿ.ಕೆ. ಭಾವ್ರ ಅವರನ್ನು ಪಂಜಾಬಿನ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ (ಡಿಜಿಪಿ) ನೇಮಕ ಮಾಡಿದೆ. ಯೂನಿಯನ್ ಪಬ್ಲಿಕ್ … Continued

ಪ್ರತಿನಿತ್ಯ 20-22 ಕಿಮೀ ಸೈಕಲ್ ಓಡಿಸುವ ಕೇವಲ 81 ವರ್ಷದ ಅಜ್ಜಿ ಶಾಂತಿ ಬಾಯಿ…!

ಜಬಲ್ಪುರ(ಮಧ್ಯಪ್ರದೇಶ): ನೀವು ಉನ್ನತ ಚೇತನವನ್ನು ಹೊಂದಿದ್ದರೆ, ಏನನ್ನಾದರೂ ಮಾಡುವ ಉತ್ಸಾಹವನ್ನು ಹೊಂದಿದ್ದರೆ, ವಯಸ್ಸಾದರೂ ನಿಮ್ಮ ದಾರಿಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬ ನಾಣ್ಣುಡಿಯನ್ನು ನಿಜವಾಗಿಸಿದವರು ಜಬಲ್ಪುರದ ವರ್ಷದ ಶಾಂತಿ ಬಾಯಿಯವರು. ಅವರು ತಮ್ಮ 81 ವರ್ಷದ ಇಳಿ ವಯಸ್ಸಿನಲ್ಲಿ ಪ್ರತಿದಿನ 20 ರಿಂದ 22 ಕಿಲೋಮೀಟರ್ ಸೈಕಲ್ ತುಳಿಯುತ್ತಾರೆ..! ಶಾಂತಿ ಬಾಯಿ ಅವರು ಒಬ್ಬಂಟಿಯಾಗಿ ವಾಸಿಸುತ್ತಾರೆ. ಅವರ … Continued

15-18 ವಯಸ್ಸಿನ 2 ಕೋಟಿ ಮಕ್ಕಳಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ: ಸಚಿವ ಮಾಂಡವಿಯಾ

ನವದೆಹಲಿ: ಮಕ್ಕಳಿಗಾಗಿ ಆರಂಭಿಸಿದ ಕೊರೊನಾ ಲಸಿಕಾಕರಣ ಅಭಿಯಾನದಲ್ಲಿ ಒಂದು ವಾರದೊಳಗೆ 15-18 ವಯಸ್ಸಿನ 2 ಕೋಟಿ ಮಕ್ಕಳು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌‌ಸುಖ್‌ ಮಾಂಡವಿಯಾ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಇದು ಒಳ್ಳೆಯ ಬೆಳವಣಿಗೆ. 15-18 ವರ್ಷದೊಳಗಿನ 2 ಕೋಟಿಗೂ ಅಧಿಕ ಮಕ್ಕಳು ತಮ್ಮ ಮೊದಲ … Continued

ಮುಂಬೈನಲ್ಲಿ ಕೋವಿಡ್‌ ಲಸಿಕೆಯ ಒಂದೂ ಡೋಸ್‌ ಹಾಕಿಸಿಕೊಳ್ಳದ ಶೇ. 96ರಷ್ಟು ಕೊರೊನಾ ಸೋಂಕಿತರು ಐಸಿಯುಗೆ ದಾಖಲು…!

ನವದೆಹಲಿ:  ದೇಶದಲ್ಲಿ ಇನ್ನೂ ಅನೇಕರು ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಮುಂಬೈನಲ್ಲಿ  ಲಸಿಕೆ ಪಡೆಯದೆ ಈಗ ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಬಹುತೇಕರು ಐಸಿಯುಗೆ ದಾಖಲಾಗಿದ್ದಾರೆ. ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಐಸಿಯುಗೆ ದಾಖಲಾಗಿರುವವರ ಪೈಕಿ ಶೇ.96ರಷ್ಟು ಕೊರೊನಾ ರೋಗಿಗಳು ಒಂದು ಡೋಸ್ ಕೊರೊನಾ ಲಸಿಕೆಯನ್ನೂ ಪಡೆಯದವರು ಎಂದು ವರದಿಯಾಗಿದೆ.  ಇದು ಕೊರೊನಾ … Continued

ಪ್ರಧಾನಿ ಭದ್ರತೆ ಲೋಪವಾದ ಸ್ಥಳದ ಸಮೀಪದಲ್ಲಿ ಪಾಕ್ ದೋಣಿ ಪತ್ತೆ..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವಾಗಲೇ ಭದ್ರತಾ ಲೋಪ ನಡೆದಿದ್ದ ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ ಗಡಿಭಾಗದ ಔಟ್‍ಪೋಸ್ಟ್ ಬಳಿ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ಅದನ್ನು ಬಿಎಸ್‍ಎಫ್ ವಶಕ್ಕೆ ಪಡೆದುಕೊಂಡಿದೆ. ಗಡಿಯಲ್ಲಿರುವ ಟಿಡಿ ಮಾಲ್ ಔಟ್‍ಪೋಸ್ಟ್ ಬಳಿ ಬಿಎಸ್‍ಎಫ್‍ನ 136ನೆ ಬೆಟಾಲಿಯನ್‍ಗೆ ಸೇರಿದ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ … Continued

ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ಚುನಾವಣೆ ವೇಳಾಪಟ್ಟಿ ಪ್ರಕಟ :ಜನವರಿ 15ರ ವರೆಗೆ ಸಮಾವೇಶ, ರೋಡ್‌ಶೋಗಳಿಗೆ ನಿಷೇಧ

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು, ಶನಿವಾರ ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ, ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಫೆಬ್ರವರಿ 10ರಿಂದ ಮಾರ್ಚ್ 7 ರ ನಡುವೆ ಮತದಾನ ನಡೆಯಲಿದೆ. ಐದು ರಾಜ್ಯಗಳ ಚುನಾವಣೆಯು 7 ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಹೆಚ್ಚುತ್ತಿರುವ ಕೋವಿಡ್ … Continued

ಭಾರೀ ಹಿಮಪಾತದ ನಡುವೆಯೇ ದೇಶದ ಹಿಮಚ್ಛಾದಿತ ದೇಶದ ಗಡಿ ಕಾಯ್ತಾರೆ ನಮ್ಮ ಸೈನಿಕರು: ಹೇಗೆ ಬಂಡೆಯಂತೆ ನಿಲ್ತಾರೆ, ಗಸ್ತು ತಿರುಗ್ತಾರೆ…! ವೀಕ್ಷಿಸಿ

ನವದೆಹಲಿ: ಇಡೀ ಉತ್ತರ ಭಾರತ ತೀವ್ರ ಚಳಿಯಿಂದ ತತ್ತರಿಸಿದೆ. ಎತ್ತರದ ಪ್ರದೇಶಗಳಲ್ಲಿನ ಪರಿಸ್ಥಿತಿಯಂತೂ ಇನ್ನಷ್ಟು ಕಠಿಣವಾಗಿದೆ, ತಾಪಮಾನವು  ಶೂನ್ಯ ಮಟ್ಟಕ್ಕೆ ಇಳಿಯುತ್ತದೆ. ಅಂತಹ ವಾತಾವರಣದಲ್ಲಿ ಹೊರಗೆ ಹೋಗುವುದನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟ; ಚಳಿಗೆ ಹೆಪ್ಪುಗಟ್ಟಿ ಸಾಯುವ ಭಯ ಸಹ ಎದುರಾಗುತ್ತದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಿಮಚ್ಛಧಿತ ಗಡಿಪ್ರದೇಶಗಳಲ್ಲಿ ಭಾರತೀಯ ಸೇನೆಯ ಸೈನಿಕರು ದೇಶವನ್ನು ಕಾಪಾಡುವಲ್ಲಿ ನಿರತರಾಗಿದ್ದಾರೆ, … Continued

ದೇವರಿಗೇ ಸಮನ್ಸ್ ಜಾರಿ ಮಾಡಿದ ತಮಿಳುನಾಡಿನ ಕೋರ್ಟ್ !

ಚೆನ್ನೈ: ದೇವರಿಗೆ ಸಮನ್ಸ್…! ತಮಿಳುನಾಡಿನ ಕುಂಭಕೋಣಂ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ದೇವರಿಗೇ ಸಮನ್ಸ್‌ ನೀಡಿತ್ತು.. ಈಗ ಇದನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ತಿರುಪುರ ಜಿಲ್ಲೆಯ ಸಿವಿರಿಪಾಲಯಂನ ಪರಶಿವನ್ ಸ್ವಾಮಿ ದೇವರಿಗೇ ಕುಂಭಕೋಣಂನ ನ್ಯಾಯಾಲಯವೊಂದು ಜನವರಿ 6ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಮೂಲ ವಿಗ್ರಹ ಕಳುವಿನ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಕುಂಭಕೋಣಂನ ನ್ಯಾಯಾಲಯವು ಇದು ಮೂಲ … Continued