ಮಹಿಳೆ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಕ್ರೈಸ್ತ ಪಾದ್ರಿ -ಸ್ವಯಂ ಘೋಷಿತ ʼಪ್ರವಾದಿʼ : ವೀಡಿಯೊ ವೈರಲ್

ಚಂಡೀಗಢ: ಪಂಜಾಬ್ ಮೂಲದ ಸ್ವಯಂ-ಘೋಷಿತ ಕ್ರೈಸ್ತ ಪಾದ್ರಿ ಬಜೀಂದರ್ ಸಿಂಗ್ ಅವರು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಈಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಪಂಜಾಬ್ ಪೊಲೀಸರು ಸ್ವಯಂ ಘೋಷಿತ ಪಾದ್ರಿ ಬಜೀಂದರ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಿದ ವಾರಗಳ ನಂತರ, ಅವರು ತಮ್ಮ ಕಚೇರಿಯಲ್ಲಿ ಪುರುಷ ಮತ್ತು … Continued

ಪಟಿಯಾಲ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ ಬೆಂಗಳೂರಿಗೆ ಏರ್‌ಲಿಫ್ಟ್‌

ಬೆಂಗಳೂರು : ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ ಅವರನ್ನು ಭಾನುವಾರ ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆ ತರಲಾಗಿದೆ.‌ ಚಿಕಿತ್ಸೆಗಾಗಿ ಶಾಂತಕುಮಾರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಕುರುಬೂರು ಶಾಂತಕುಮಾರ ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. … Continued

ಪಂಜಾಬಿನಲ್ಲಿ ಕುರುಬೂರು ಶಾಂತಕುಮಾರ ಕಾರು ಅಪಘಾತ: ಆಸ್ಪತ್ರೆಗೆ ದಾಖಲು

ನವದೆಹಲಿ : ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಅವರ ಕಾರು ಪಂಜಾಬಿನ ಪಟಿಯಾಲ ಬಳಿ ಅಪಘಾತವಾಗಿದ್ದು, ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಶಾಂತಕುಮಾರ ಹಾಗೂ ತಮಿಳುನಾಡಿನ ಮತ್ತೊಬ್ಬ ರೈತ ಮುಖಂಡರಿಗೆ ಗಅಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಕುರುಬೂರು ಶಾಂತಕುಮಾರ ಅವರನ್ನು ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ … Continued

ವೀಡಿಯೊ…| ವೃದ್ಧೆ ಮೇಲೆ ದಾಳಿ ನಡೆಸಿ ಎಳೆದಾಡಿದ ನಾಯಿಗಳ ಗುಂಪು ; ವೃದ್ಧೆಗೆ 40 ಹೊಲಿಗೆ…!

ಪಂಜಾಬ್‌ನ ಖನ್ನಾದ ನೈ ಅಬಾದಿಯಲ್ಲಿ ಬುಧವಾರ ಬೀದಿ ನಾಯಿಗಳು ವೃದ್ಧ ಮಹಿಳೆಯ ಮೇಲೆ ದಾಳಿ ಮಾಡುತ್ತಿರುವ ಆಘಾತಕಾರಿ ವೀಡಿಯೊ ಹೊರಬಿದ್ದಿದೆ. ಮನೆಕೆಲಸದವಳಾಗಿರುವ ವೃದ್ಧೆ ಮನೆಯ ಗೇಟ್ ಕಡೆಗೆ ನುಗ್ಗಿ ಪಾರಾಗಲು ಪ್ರಯತ್ನಿಸಿದರೂ ನಾಯಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ಬೀದಿ ನಾಯಿ ವೃಧೆಯ ಬಟೆಯನ್ನು ಹಿಡಿದೆಳೆದು ಅವಳು ಕೆಳಗೆ ಬೀಳುವಂತೆ ಮಾಡಿತು. ಇತರ ನಾಯಿಗಳು ಬೇಗನೆ ವೃದಧೆಯನ್ನು … Continued

ಇನ್‌ಸ್ಟಾಗ್ರಾಂನಲ್ಲಿ ಅರಳಿದ ಪ್ರೀತಿ…ಫೋನ್‌ ನಲ್ಲಿ ಮದುವೆ ನಿಶ್ಚಯ…ದಿಬ್ಬಣ ಸಮೇತ ಮದುವೆ ಸ್ಥಳಕ್ಕೆ ಹೋದ ಮದುಮಗ…ವಧು ನಾಪತ್ತೆ….!

ಚಂಡೀಗಡ: ಮೂರು ವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾಗಿದ್ದ ಮನ್‌ಪ್ರೀತ್ ಕೌರ್ ಎಂಬ ಮಹಿಳೆಯನ್ನು ಮದುವೆಯಾಗಲು ಜಲಂಧರ ಮೂಲದ ದೀಪಕಕುಮಾರ(24) ದುಬೈನಿಂದ ಕಳೆದ ತಿಂಗಳು ಭಾರತಕ್ಕೆ ವಾಪಸಾಗಿದ್ದ. ಆದರೆ ಮದುವೆಯ ದಿನ ವಧು ನಾಪತ್ತೆಯಾಗಿದ್ದು, ಆಕೆ ವಿವಾಹಕ್ಕಾಗಿ ಬುಕ್ ಮಾಡಲಾಗಿದೆ ಎಂದು ಹೇಳಿದ ಕಲ್ಯಾಣ ಮಂಟಪಕ್ಕೆ ಮದುಮಗ ದಿಬ್ಬಣದೊಂದಿಗೆ ಬಂದರೆ ಅಲ್ಲಿ ಆ ಹೆಸರಿನ ಕಲ್ಯಾಣ ಮಂಟಪವೇ … Continued

ಧರ್ಮ ಅಪಚಾರ ಪ್ರಕರಣ : ಪಂಜಾಬ್‌ ಮಾಜಿ ಡಿಸಿಎಂ ಸುಖಬೀರ್ ಬಾದಲಗೆ ಟಾಯ್ಲೆಟ್ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿದ ಅಕಾಲ್ ತಖ್ತ್

ಚಂಡೀಗಢ: ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್‌ ಬಾದಲ್ ಮತ್ತು ಅವರ ಸಹ ಮಂತ್ರಿಗಳು ದರ್ಬಾರ್ ಸಾಹಿಬ್‌ನ ಸ್ನಾನಗೃಹ ಮತ್ತು ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲಿದ್ದಾರೆ ಮತ್ತು ಶ್ರೀ ಅಕಾಲ್ ತಖ್ತ್ ಅವರಿಗೆ ನೀಡಿದ ಧಾರ್ಮಿಕ ಶಿಕ್ಷೆಯ ಭಾಗವಾಗಿ ಈ ಅವರು ಈ ಕೆಲಸ ಮಾಡಲಿದ್ದು, ನಂತರ ಭಕ್ತರಿಗೆ ಲಂಗರ್ ಬಡಿಸುತ್ತಾರೆ. ಶ್ರೀ ಅಕಲ್ ತಖ್ತ್ ಸಿಖ್ಖರ … Continued

ದೇಹದೊಳಗೆ ಹೊಕ್ಕಿದ್ದ ದೆವ್ವ ಬಿಡಿಸಲು ಥಳಿಸಿದ ಪಾದ್ರಿ, ಸಹಚರರ ಏಟಿಗೆ ವ್ಯಕ್ತಿಯ ಪ್ರಾಣವೇ ಹೋಯ್ತು..!

ಗುರುದಾಸಪುರ : ಪಾದ್ರಿ ಮತ್ತು ಆತನ ಎಂಟು ಮಂದಿ ಸಹಚರರು “ಶರೀರದೊಳಗೆ ಹೊಕ್ಕಿರುವ ದೆವ್ವ ಬಿಡಿಸಲು 30 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿದ್ದರಿಂದ ಆತ ಸಾವಿಗೀಡಾದ ಘಟನೆ ಪಂಜಾಬ್‌ನ ಗುರುದಾಸಪುರ ಜಿಲ್ಲೆಯಲ್ಲಿ ನಡೆದಿದೆ ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಸ್ಯಾಮ್ಯುಯೆಲ್ ಮಸಿಹ್ ಎಂದು ಗುರುತಿಸಲಾಗಿದ್ದು, ದಿನಗೂಲಿ ಮಾಡುತ್ತಿದ್ದರು. ಅವರು ರೋಗಗ್ರಸ್ತರಾಗಿದ್ದರು ಎಂದು ವರದಿಯಾಗಿದೆ. ಸ್ಯಾಮ್ಯುಯೆಲ್ ಮಸಿಹ್ ಸ್ಥಿತಿಯಿಂದ ಕಳವಳಗೊಂಡ … Continued

ಓಡಿಹೋದ ಪ್ರೇಮಿಗಳು : ಸೇಡು ತೀರಿಸಿಕೊಳ್ಳಲು ಪ್ರಿಯಕರನ ಸಹೋದರಿ ಮೇಲೆ ಯುವತಿ ಸಂಬಂಧಿಕರಿಂದ ಸಾಮೂಹಿಕ ಅತ್ಯಾಚಾರ…!

ಲೂಧಿಯಾನ: ತನ್ನ ಮಗಳೊಂದಿಗೆ ಪ್ರಿಯಕರನೊಂದಿಗೆ ಓಡಿಹೋದ ನಂತರ ಈ ಅವಮಾನದ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ಮೂವರು ಕುಟುಂಬ ಸದಸ್ಯರೊಂದಿಗೆ ಸೇರಿ ಮಗಳ ಪ್ರಿಯಕರನ ವಿವಾಹಿತ ಸಹೋದರಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಗೋರಖಪುರದ ಆರೋಪಿಗಳು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಈ ಕೃತ್ಯವನ್ನು ರೆಕಾರ್ಡ್ … Continued

ಶಿವಸೇನಾ ಮುಖಂಡ ಸಂದೀಪ ಥಾಪರ್ ಮೇಲೆ ಮಾರಕಾಸ್ತ್ರದಿಂದ ‘ನಿಹಾಂಗ್ ಸಿಖ್ಖʼರ ದಾಳಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶಿವಸೇನೆಯ ಪಂಜಾಬ್ ನಾಯಕ ಸಂದೀಪ ಥಾಪರ್ ಗೋರಾ (58) ಅವರ ಮೇಲೆ ಲೂಧಿಯಾನದಲ್ಲಿ ನಿಹಾಂಗ್ ಸಿಖ್ ವೇಷಧಾರಿ ವ್ಯಕ್ತಿಗಳು ಕತ್ತಿಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಸಂದೀಪ ಥಾಪರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪಂಜಾಬ್‌ ಶಿವಸೇನೆ ಮುಖಂಡ ಸಂದೀಪ ಥಾಪರ್ ಮೇಲೆ ಶುಕ್ರವಾರ ಮುಂಜಾನೆ ಸಾರ್ವಜನಿಕರ ಮುಂದೆಯೇ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಖಡ್ಗಗಳಿಂದ ದಾಳಿ … Continued

ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

ಚಂಡೀಗಢ: ಪಂಜಾಬ್‌ನ ಫಿರೋಜಪುರದ ಗುರುದ್ವಾರವೊಂದರಲ್ಲಿ ಶನಿವಾರ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ನ ಕೆಲವು ಪುಟಗಳನ್ನು ಹರಿದು ಹಾಕಿದ್ದಾನೆಂದು ಆರೋಪಿಸಿ 19 ವರ್ಷದ ಯುವಕನನ್ನು ಹೊಡೆದು ಕೊಲ್ಲಲಾಗಿದೆ. ಬಂಡಲಾ ಗ್ರಾಮದ ಗುರುದ್ವಾರ ಬಾಬಾ ಬೀರ್ ಸಿಂಗ್‌ನಲ್ಲಿ ಬಕ್ಷೀಶ್ ಸಿಂಗ್ ಎಂಬಾತ ಈ ಕೃತ್ಯ ಎಸಗಿದ್ದು, ನಂತರ ಕೋಪಗೊಂಡ ಗುಂಪು ಆತನನ್ನು ಹಿಡಿದು ಥಳಿಸಿದೆ ಎಂದು … Continued