ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಸಲಹೆಗಾರ ಫಾರೂಕ್ ಖಾನ್ ರಾಜೀನಾಮೆ, ಬಿಜೆಪಿಯಲ್ಲಿ ಪ್ರಮುಖ ಹುದ್ದೆ ನೀಡುವ ಸಾಧ್ಯತೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಅವರ ಸಲಹೆಗಾರ ಫಾರೂಕ್ ಖಾನ್ ರಾಜೀನಾಮೆ ನೀಡಿದ್ದು, ಬಿಜೆಪಿಯಲ್ಲಿ ಅವರು ದೊಡ್ಡ ಜವಾಬ್ದಾರಿ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಸಲಹೆಗಾರ ಫಾರೂಕ್ ಖಾನ್ ಭಾನುವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. 1990ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ … Continued

ಯುರೋಪಿನ ಅತಿ ದೊಡ್ಡ ಉಕ್ಕಿನ ಘಟಕ ರಷ್ಯಾ-ಉಕ್ರೇನ್ ಯುದ್ಧದಲ್ಲಿ ನಾಶ…ವೀಕ್ಷಿಸಿ

ಕೀವ್‌ (ಉಕ್ರೇನ್): ಯುರೋಪ್‌ನ ಅತಿದೊಡ್ಡ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಒಂದಾದ ಅಜೋವ್‌ಸ್ಟಾಲ್, ಉಕ್ರೇನ್ ಬಂದರು ನಗರವಾದ ಮರಿಯುಪೋಲ್‌ಗೆ ರಷ್ಯಾದ ಪಡೆಗಳು ಮುತ್ತಿಗೆ ಹಾಕಿದ್ದರಿಂದ ತೀವ್ರವಾಗಿ ಹಾನಿಗೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಯುರೋಪ್‌ನಲ್ಲಿನ ಅತಿದೊಡ್ಡ ಲೋಹ ಘಟಕಗಳಲ್ಲಿ ಒಂದು ನಾಶವಾಗಿದೆ. ಉಕ್ರೇನ್‌ಗೆ ಆರ್ಥಿಕವಾಗಿ ನಷ್ಟವು ದೊಡ್ಡದಾಗಿದೆ. ಸುತ್ತಮುತ್ತಲಿನ ಪರಿಸರವು ಧ್ವಂಸಗೊಂಡಿದೆ ಎಂದು ಉಕ್ರೇನಿಯನ್ ಶಾಸಕಿ … Continued

ತೈಲ ರಾಜತಾಂತ್ರಿಕತೆಯ ನಂತರ, ರಷ್ಯಾದಿಂದ ಈಗ ಭಾರತೀಯ ಔಷಧೀಯ ಕಂಪನಿಗಳಿಗೆ ಉತ್ತೇಜನ

ನವದೆಹಲಿ: ನವದೆಹಯಲ್ಲಿರುವ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಅವರು ಮಾಸ್ಕೋದಿಂದ ಹೊರಡುವ ಪಾಶ್ಚಿಮಾತ್ಯ ತಯಾರಕರ ಸ್ಥಾನವನ್ನು ಭಾರತೀಯ ಔಷಧ ಕಂಪನಿಗಳು ಬದಲಿಸಬಹುದು ಹೇಳಿದ್ದಾರೆ ಎಂದು  ವರದಿಗಳು ತಿಳಿಸಿವೆ. ರಷ್ಯಾದ ಮಾರುಕಟ್ಟೆಯಿಂದ ಅನೇಕ ಪಾಶ್ಚಿಮಾತ್ಯ ಕಂಪನಿಗಳ ಹಿಂತೆಗೆದುಕೊಳ್ಳುವಿಕೆಯಿಂದಾಗಿ ಖಾಲಿಯಾದ ಆ ಜಾಗವನ್ನು ವಾಸ್ತವವಾಗಿ ಅನೇಕ ಕೈಗಾರಿಕೆಗಳಲ್ಲಿ, ನಿರ್ದಿಷ್ಟವಾಗಿ, ಔಷಧೀಯ ಕಂಪನಿಗಳನ್ನು ಭಾರತೀಯ ಕಂಪನಿಗಳು ಬದಲಿಸಬಹುದು ಎಂದು ರಷ್ಯಾದ … Continued

ಬೃಹತ್ ಬಳಕೆದಾರರಿಗೆ ಡೀಸೆಲ್ ಬೆಲೆ ಲೀಟರ್‌ಗೆ 25 ರೂ.ಗಳಷ್ಟು ಹೆಚ್ಚಳ

ನವದೆಹಲಿ: ಮುಂಬಯಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಏರಿಕೆಗೆ ಅನುಗುಣವಾಗಿ ಬೃಹತ್ ಬಳಕೆದಾರರಿಗೆ ಸಗಟು ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆಯನ್ನು ಲೀಟರ್‌ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ, ಆದರೆ ಪೆಟ್ರೋಲ್ ಬಂಕ್ ಗಳಲ್ಲಿ ಚಿಲ್ಲರೆ ದರಗಳು ಬದಲಾಗದೆ ಉಳಿದಿವೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೇ ಸುಳಿವು ಇದ್ದಂತೆ ತೈಲ … Continued

ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಂದಲೂ ಸಮಾಜದಲ್ಲಿ ಒಡಕು ಸೃಷ್ಟಿ: ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ವಿವಿಧ ಕಾರಣಗಳಿಗಾಗಿ ಜನರಲ್ಲಿ ಒಡಕು ಮೂಡಿಸುತ್ತವೆ ಎಂದು ಹೇಳಿದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಜಿ 23 ಗುಂಪಿನ ನಾಯಕ ಗುಲಾಂ ನಬಿ ಆಜಾದ್ ಭಾನುವಾರ ಹೇಳಿದ್ದಾರೆ. 1990ರ ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಗಳನ್ನು ಉಲ್ಲೇಖಿಸಿ, ಇದಕ್ಕೆ ಪಾಕಿಸ್ತಾನ ಮತ್ತು ಕಣಿವೆಯಲ್ಲಿ ನಡೆದ ಭಯೋತ್ಪಾದನೆ ಕಾರಣ … Continued

ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್‌ ಪಡೆದ 8-16 ವಾರಗಳ ನಡುವೆ 2ನೇ ಡೋಸ್‌ ತೆಗೆದುಕೊಳ್ಳಬಹುದೆಂದು ಶಿಫಾರಸು: ವರದಿ

ನವದೆಹಲಿ: ಕೋವಿಶೀಲ್ಡ್‌ ಲಸಿಕೆ ಎರಡು ಡೋಸ್‌ಗಳ ನಡುವಿನ ಅವಧಿ ಕಡಿಮೆ ಮಾಡುತ್ತಾ, ಇಮ್ಯುನೈಸೇಶನ್‌ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (NTAGI) ಕೋವಿಡ್ -19 ಲಸಿಕೆಯ ಎರಡನೇ ಡೋಸ್ ಅನ್ನು ಈಗ ಮೊದಲ ಡೋಸ್‌ ತೆಗೆದುಕೊಂಡ 8ರಿಂದ 16 ವಾರಗಳ ನಂತರ ತೆಗೆದುಕೊಳ್ಳಬಹುದು ಎಂದು ಹೇಳಿದೆ. ರಾಷ್ಟ್ರೀಯ ಕೋವಿಡ್-19 ವ್ಯಾಕ್ಸಿನೇಷನ್ ಸ್ಟ್ರಾಟಜಿ ಅಡಿಯಲ್ಲಿ ಪ್ರಸ್ತುತ, ಕೋವಿಶೀಲ್ಡ್‌ನ ಎರಡನೇ … Continued

ವಿಷ ಪ್ರಾಶನದ ಭಯ: 1,000 ವೈಯಕ್ತಿಕ ಸಿಬ್ಬಂದಿ ವಜಾ ಮಾಡಿದ ರಷ್ಯಾ ಅಧ್ಯಕ್ಷ ಪುತಿನ್..!

ಮಾಸ್ಕೋ; ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗೆ ಸ್ವತಃ ಪ್ರಾಣದ ಹೆಸರಿಕೆ ಇರುವಂತೆ ತೋರುತ್ತಿದ್ದು, ಇದೇ ಕಾರಣಕ್ಕೆ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಅವರು 1,000 ರ ವೈಯುಕ್ತಿಕ ಸಿಬ್ಬಂದಿ ಬದಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಂದು ವರದಿಯ ಪ್ರಕಾರ, ವ್ಲಾದಿಮಿರ್ ಪುತಿನ್ ಅವರಿಗೆ ತನ್ನ ಭವಿಷ್ಯದ ಕ್ರಮಗಳು … Continued

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿಎನ್ ಬಿರೇನ್ ಸಿಂಗ್ ಮಣಿಪುರದ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆ

ಇಂಫಾಲ: ಇಂಫಾಲದಲ್ಲಿ ನಡೆದ ಮಣಿಪುರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಣಿಪುರದ ಹಂಗಾಮಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಬಿಜೆಪಿಯ ಹಿರಿಯ ನಾಯಕ ತೊಂಗಂ ಬಿಸ್ವಜಿತ್ ಸಿಂಗ್ ಹೆಸರು ಕೇಳಿ ಬಂದಿತು. ಅಲ್ಲದೆ ಸ್ಪೀಕರ್ ಯುಮ್ನಮ್ ಖೇಮ್‌ಚಂದ್ ಸಿಂಗ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಅಂತಿಮವಾಗಿ … Continued

ಹೋಳಿ ಹಬ್ಬದ ದಿನ ನೀರಿನಿಂದ ತುಂಬಿದ ಬಲೂನ್ ತಾಗಿ ಆಟೊವೇ ಪಲ್ಟಿ…ದೃಶ್ಯ ವೀಡಿಯೊದಲ್ಲಿ ಸೆರೆ

ಬಾಗಪತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಾಸ್ತವದಲ್ಲಿ, ಚಲಿಸುತ್ತಿದ್ದ ಆಟೋಗೆ ನೀರಿನಿಂದ ತುಂಬಿದ ಬಲೂನ್‌ನಿಂದ ಹೊಡೆದಿದ್ದರಿಂದ ಆಟೋ ಪಲ್ಟಿಯಾಗಿದೆ. ಆಟೋ ಪಲ್ಟಿಯಾದಾಗ ಆಟೋದಲ್ಲಿ ಸವಾರರಿದ್ದರು ಎಂದು ಹೇಳಲಾಗಿದೆ. ಸದ್ಯ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಈ ಘಟನೆಯು ಬಾಗ್‌ಪತ್‌ನ ದೆಹಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ … Continued

25 ವರ್ಷಗಳ ನಂತರ ಒಂದಾದ ಲಾಲುಪ್ರಸಾದ ಯಾದವ್-ಶರದ್‌ ಯಾದವ್ : ಆರ್‌ಜೆಡಿಯೊಂದಿಗೆ ಎಲ್‌ಜೆಡಿ ವಿಲೀನ

ನವದೆಹಲಿ: ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಅವರು ಭಾನುವಾರ ತಮ್ಮ ಲೋಕತಾಂತ್ರಿಕ ಜನತಾ ದಳವನ್ನು (ಎಲ್‌ಜೆಡಿ) ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದೊಂದಿಗೆ (ಆರ್‌ಜೆಡಿ) ವಿಲೀನಗೊಳಿಸಿದ್ದಾರೆ. ಎರಡು ಪಕ್ಷಗಳ ವಿಲೀನವನ್ನು ಘೋಷಿಸಿದ ನಂತರ, ಶರದ್ ಯಾದವ್ ಈ ಕ್ರಮವು “ಸಂಯುಕ್ತ ವಿರೋಧದ (ರಚನೆ) ಕಡೆಗೆ ಮೊದಲ ಹೆಜ್ಜೆ” ಎಂದು ಹೇಳಿದ್ದಾರೆ. ಆರ್‌ಜೆಡಿಯೊಂದಿಗೆ … Continued