ಭಾರತದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ, ಸೋಂಕು ಕಡಿಮೆ ಇರುವಲ್ಲಿ ಶಾಲೆ ತೆರೆಯಬಹುದು: ಏಮ್ಸ್​ ಮುಖ್ಯಸ್ಥ

ನವದೆಹಲಿ: ಕೋವಿಡ್​ ನಿಂದಾಗಿ ವರ್ಷದಿಂದ ಶಾಲೆಗಳು ಬಂದ್​ ಆಗಿದ್ದು, ಆನ್​ಲೈನ್​ ಕಲಿಕೆ ಮೂಲಕವೇ ತರಗತಿಗಳು ನಡೆಯುತ್ತಿವೆ. ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡವರಿಗೆ ಈಗಾಗಲೇ ಲಸಿಕೆ ಸಿಕ್ಕಿದ್ದು, ಮಕ್ಕಳ ಲಸಿಕೆಗಳು ಪ್ರಯೋಗ ಹಂತದಲ್ಲಿದೆ. ಮಕ್ಕಳ ಲಸಿಕೆ ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಸಿಗಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮೂರನೇ ಅಲೆ ಸೋಂಕು … Continued

ಪ್ರಜಾಪ್ರಭುತ್ವ, ಅದರ ಸುಸ್ಥಾಪಿತ ಸಂಸ್ಥೆಗಳ ಹಾಳುಮಾಡುವ ಪ್ರಯತ್ನ’: ಪೆಗಾಸಸ್ ವರದಿ ಸಮಯ ಪ್ರಶ್ನಿಸಿದ ಸರ್ಕಾರ

ನವದೆಹಲಿ: ಭಾರತದ ಪ್ರಮುಖ ವ್ಯಕ್ತಿಗಳ ಫೋನ್‌ಗಳನ್ನು ಟ್ಯಾಪ್ ಮಾಡಲು ಪೆಗಾಸಸ್ ಸಾಫ್ಟ್‌ವೇರ್ ಬಳಸಲಾಗುತ್ತಿದೆ ಎಂಬ ವರದಿಗಳು ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಒಂದು ದಿನ ಮೊದಲು ಕಾಣಿಸಿಕೊಂಡಿರುವುದು ‘ಕಾಕತಾಳೀಯವಲ್ಲ’ ಎಂದು ಸರ್ಕಾರ ಸೋಮವಾರ ಹೇಳಿದೆ. ಗೃಹ ಸಚಿವ ಅಮಿತ್ ಶಾ ಅವರು ಟ್ವಿಟರಿನಲ್ಲಿ ‘ಜಾಗತಿಕವಾಗಿ ಭಾರತವನ್ನು ಅವಮಾನಿಸಲು ಬಯಸುವವರು’ ವರದಿಯನ್ನು ವರ್ಧಿಸಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಸಂಜೆ … Continued

ಪೆಗಾಸಸ್‌ನ ಟಾರ್ಗೆಟ್ ಪಟ್ಟಿಯಲ್ಲಿ ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಮೊಬೈಲ್ ನಂಬರ್: ವರದಿ

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿದಂತೆ ಪೆಗಾಸಸ್ ಸ್ಪೈವೇರ್ ಸ್ನೂಪಿಂಗ್ ಸಾಲಿನಲ್ಲಿ ಸೋಮವಾರ ಹೆಚ್ಚಿನ ಪ್ರಮುಖ ಹೆಸರುಗಳು ಹೊರಬಿದ್ದಿವೆ. ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಪೆಗಾಸಸ್ ಸ್ಪೈವೇರ್ ಸ್ನೂಪಿಂಗ್ ಸ್ಫೋಟಗೊಂಡಿತು, ಸುಮಾರು 300 ಭಾರತೀಯರು ಸೇರಿದಂತೆ ಸುಮಾರು 50,000 ದೂರವಾಣಿ ಸಂಖ್ಯೆಗಳು ಡೇಟಾಬೇಸ್ ಸೋರಿಕೆಯ … Continued

ಟಿಪಿಸಿಸಿ ಮುಖ್ಯಸ್ಥ ಎ ರೇವಂತ್ ರೆಡ್ಡಿ, ಇತರ ಕಾಂಗ್ರೆಸ್ ಮುಖಂಡರ ಗೃಹಬಂಧನದಲ್ಲಿರಿಸಿದ ತೆಲಂಗಾಣ ಸರ್ಕಾರ

ಹೈದರಾಬಾದ್: ತೆಲಂಗಾಣ ಸರ್ಕಾರ ಕೊಕಾಪೇಟೆ ಭೂಮಿಯನ್ನು ಹರಾಜು ಹಾಕಿದ ರೀತಿಗೆ ವಿರುದ್ಧವಾಗಿ ಕಾಂಗ್ರೆಸ್ಸಿನ ಗಂಭೀರ ಆರೋಪಗಳ ನಂತರ, ತೆಲಂಗಾಣ ಪ್ರದೇಶಕಾಂಗ್ರೆಸ್‌ ಸಮಿತಿ ಮುಖ್ಯಸ್ಥ (ಟಿಪಿಸಿಸಿ) ಮುಖ್ಯಸ್ಥ ಎ ರೇವಂತ್ ರೆಡ್ಡಿ ಸೇರಿದಂತೆ ಹಲವಾರು ನಾಯಕರನ್ನು ಗೃಹಬಂಧನದಲ್ಲಿರಿಸಲಾಯಿತು. ಇಂದಿನಿಂದ (ಸೋಮವಾರ) ಪ್ರಾರಂಭವಾಗುವ ಸಂಸತ್ ಅಧಿವೇಶನಗಳಲ್ಲಿ ಪಾಲ್ಗೊಳ್ಳಲು ಸಂಸದ ರೇವಂತ್ ನವದೆಹಲಿಗೆ ಹೊರಟಿದ್ದರು. ಮಾಜಿ ಸಚಿವ ಆರ್ ದಾಮೋದರ್ … Continued

ಭಾರತದಲ್ಲಿ 24 ಗಂಟೆಯಲ್ಲಿ 38,164 ಮಂದಿಗೆ ಕೊರೊನಾ ಹೊಸ ಸೋಂಕು

ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 38,164 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 499 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಿ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ಅಂಕಿ ಸಂಖ್ಯೆಗಳ ಪ್ರಕಾರ ಕಳೆದ 24ಗಂಟೆಗಳಲ್ಲಿ 38 ಸಾವಿರ ಮಂದಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಪ್ರಮಾಣ 3,11,44,229ರಷ್ಟಾಗಿದೆ. 4,21,665 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಸಕ್ರಿಯ ಪ್ರಕರಣಗಳ … Continued

ಇಂದಿನಿಂದ ಸಂಸತ್ ಅಧಿವೇಶನ: ಬೆಲೆ ಏರಿಕೆ, ಕೋವಿಡ್ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷಗಳ ಸಜ್ಜು

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಮೊದಲ ದಿವೇ ಕಾವೇರುವ ಸಾಧ್ಯತೆಗಳಿವೆ. ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೋವಿಡ್ ನಿರ್ವಹಣೆ ವಿಚಾರಗಳ ಹಿಡಿದು ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಸರ್ಕಾರವು 17 ವಿಧೇಯಗಳನ್ನು ಮಂಡಿಸಲು ಸಿದ್ಧತೆ ನಡೆಸಿದ್ದು, ಇದರಲ್ಲಿ 3 ಸುಗ್ರೀವಾಜ್ಞೆ ಕೂಡ ಸೇರಿವೆ ಎಂದು … Continued

ಮುಂಗಾರು ಮಳೆಗೆ ತುಂಬಿ ಹರಿಯುತ್ತಿರುವ ನದಿಗಳು: ರಾಜ್ಯದ 18 ಡ್ಯಾಂಗಳಿಗೆ ನೀರು

ಬೆಂಗಳೂರು: ಪೂರ್ವ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಜುಲೈ 21 ರವರೆಗೆ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮುಂಗಾರು ಮಳೆಗೆ ರಾಜ್ಯದ ಹಲವು ನದಿಗಳು ತುಂಬಿ ಹರಿಯುತ್ತಿವೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚಾಗಿದೆ. ಮಂಡ್ಯದ ಕೆಆರ್‌ಎಸ್, ಉತ್ತರ ಕನ್ನಡ ಜಿಲ್ಲೆಯ ಸೂಪಾ ಡ್ಯಾಂ, … Continued

ಪೆಗಾಸಸ್ ಸ್ಪೈ ವೇರ್ ಬಳಸಿ 40ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರ ಫೋನ್ ಹ್ಯಾಕ್; ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದ ಸರ್ಕಾರ ?

ನವದೆಹಲಿ: ಇಸ್ರೇಲಿನ ಗೂಢಚರ ತಂತ್ರಾಂಶ ಪೆಗಾಸಸ್ ಬಳಸಿಕೊಂಡು ಭಾರತದ ಪ್ರಮುಖ ಪತ್ರಕರ್ತರು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ಕಣ್ಣಿಟ್ಟಿರುವುದು ಬೆಳಕಿಗೆ ಬಂದಿರುವುದಾಗಿ “ದಿ ವೈರ್” ವರದಿ ಮಾಡಿದೆ. ಭಾರತದ 40 ಪತ್ರಕರ್ತರು ಹಾಗೂ   ಹನ್ನೆರಡು  ಸಾಮಾಜಿಕ ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಕೆಲವು ಸಚಿವರು, ವಿರೋಧ … Continued

ಕನ್ನಡ ಸೇರಿ 11 ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಅವಕಾಶ

ನವದೆಹಲಿ:ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ)ಯು 11 ಪ್ರಾದೇಶಿಕ ಭಾಷೆಗಳಲ್ಲಿ ಬಿಟೆಕ್ ಕಾರ್ಯಕ್ರಮಗಳಿಗೆ ಅನುಮತಿ ನೀಡಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ಪ್ರಕಟಿಸಿದ್ದಾರೆ. ಹಿಂದಿ, ಮರಾಠಿ, ತಮಿಳು, ತೆಲುಗು, ಕನ್ನಡ, ಗುಜರಾತಿ, ಮಲಯಾಳಂ, ಬಂಗಾಳಿ, ಅಸ್ಸಾಮಿ, ಪಂಜಾಬಿ ಮತ್ತು ಒಡಿಯಾ ಈ ಭಾಷೆಗಳಲ್ಲಿ ಈಗ ತಾಂತ್ರಿಕ ಶಿಕ್ಷಣ ನೀಡಬಹುದಾಗಿದೆ.. ಮುಖ್ಯವಾಹಿನಿಯ ಶಿಕ್ಷಣದಲ್ಲಿ … Continued

ನವಜೋತ್ ಸಿಂಗ್ ಸಿಧು -ಅಮರಿಂದರ್ ಜಗಳದ ಮಧ್ಯೆಯೇ ಪಂಜಾಬ್ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಾಗಿ ಸಿಧುಗೆ ಮಣೆ ಹಾಕಿದ ಸೋನಿಯಾ

ನವದೆಹಲಿ; ಊಹಾಪೋಹ ಮತ್ತು ನಿರೀಕ್ಷೆಯ ಮಧ್ಯೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಿಧು ಮತ್ತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಡುವೆ ಉದ್ವಿಗ್ನತೆ ಇದೆ ಎಂಬ ವರದಿಗಳ ನಡುವೆ ಈ ಸುದ್ದಿ ಬಂದಿದೆ. ಈ ನೇಮಕಾತಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಕ್ಷಣದಿಂದ ಜಾರಿಗೆ … Continued