ಎರಡನೇ ಬಾರಿಗೆ ಚಂದ್ರಯಾನ-3ರ ಕಕ್ಷೆ ಎತ್ತರಿಸಿದ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎರಡನೇ ಬಾರಿಗೆ ಚಂದ್ರಯಾನ-3 ಮಿಷನ್‌ನ ಕಕ್ಷೆಯನ್ನು ಯಶಸ್ವಿಯಾಗಿ ಏರಿಸಿದೆ. ಬಾಹ್ಯಾಕಾಶ ನೌಕೆಯು ಈಗ 200 ಕಿಲೋಮೀಟರ್‌ಗಿಂತಲೂ ಹೆಚ್ಚು ಪರಿಧಿಯಲ್ಲಿ ಹಾರುತ್ತಿದೆ. ಭೂಮಿಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಳ್ಳಲು ಮತ್ತು ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಲು ಅಗತ್ಯವಾದ ನಿಖರವಾದ ಎತ್ತರವನ್ನು ಸಾಧಿಸಲು, ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಇನ್ನೂ ಮೂರು ಕಕ್ಷೆಯನ್ನು … Continued

ಇದು ʼತಮಾಷೆʼ ಮಾಡುವ ವಿಷಯವಲ್ಲ..: ‘ತಮಾಷೆಗಾಗಿ’ ಶಾಲೆಯಲ್ಲಿ ಬಾಲಕಿಯರಿಗೆ ವಿದ್ಯುತ್‌ ಶಾಕ್‌ ; ಇಬ್ಬರು ಎಲೆಕ್ಟ್ರಿಷಿಯನ್‌ಗಳ ಬಂಧನ…!

ಅಮರಾವತಿ : ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹುಡುಗಾಟ ಮಾಡಲು ಹೋಗಿ ಅದು ವಿದ್ಯಾರ್ಥಿನಿಯರ ಜೀವಕ್ಕೇ ಆಪತ್ತು ತಂದೊಡ್ಡುವಂತಹ ಸನ್ನಿವೇಶ ನಿರ್ಮಾಣವಾದ ಕಾರಣಕ್ಕೆ ವಿಜಯವಾಡದಲ್ಲಿ ಇಬ್ಬರು ಎಲೆಕ್ಟ್ರಿಷಿಯನ್‌ಗಳನ್ನು ಬಂಧಿಸಲಾಗಿದೆ. ಬೆಂಚ್‌ ಮೇಲೆ ಕುಳಿತಾಕ್ಷಣ ವಿದ್ಯಾರ್ಥಿನಿಯರಿಗೆ ವಿದ್ಯುತ್‌ ಶಾಕ್‌ ಹೊಡೆಯುವ ನಿಗೂಢವನ್ನು ಬಯಲೆಗಳೆಯಲು ಪೊಲೀಸರೇ ಬರಬೇಕಾಯಿತು. ಆಂಧ್ರಪ್ರದೇಶದ ಈಡುಪುಗಲ್ಲು ಗ್ರಾಮದ ಜಿಲ್ಲಾ ಪರಿಷತ್‌ ಶಾಲೆಯಲ್ಲಿ ಈ … Continued

ಈ ವಾರ ಬಿಜೆಪಿ ನೇತೃತ್ವದ ಎನ್‌ಡಿ ಮೈತ್ರಿಕೂಟದ 30 ಪಕ್ಷಗಳು Vs 24 ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ

ನವದೆಹಲಿ : ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳು ಅಂಕಿ-ಅಂಶಗಳೊಂದಿಗೆ ಹೈ ವೋಲ್ಟೇಜ್ ರಾಜಕೀಯ ಹಣಾಹಣಿಗೆ ಸಿದ್ಧತೆ ನಡೆಸಿವೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಮಂಗಳವಾರ ನವದೆಹಲಿಯಲ್ಲಿ ಬೃಹತ್‌ ಸಭೆ ಮಾಡುವ ಬಗ್ಗೆ ಘೋಷಿಸಿದ್ದು, ಇದಕ್ಕೆ ಸುಮಾರು 30 ಪಕ್ಷಗಳು ಮೈತ್ರಿಗೆ ಬೆಂಬಲವನ್ನು ಪುನರುಚ್ಚರಿಸುವ ನಿರೀಕ್ಷೆಯಿದೆ. ಇದೇವೇಳೆ ತಮ್ಮ … Continued

ಇಂದಿನಿಂದ ದೆಹಲಿ-ಇತರ ನಗರಗಳಲ್ಲಿ ಕೆಜಿಗೆ 80 ರೂ.ನಂತೆ ಟೊಮೆಟೊ ಮಾರಾಟ : ಕೇಂದ್ರ ಸರ್ಕಾರ

ನವದೆಹಲಿ: ಟೊಮ್ಯಾಟೊ ಬೆಲೆಗಳು ಗಗನಕ್ಕೇರುತ್ತಿರುವ ಮಧ್ಯೆ, ಕೇಂದ್ರ ಸರ್ಕಾರವು ಭಾನುವಾರ ದೆಹಲಿ-ಎನ್‌ಸಿಆರ್ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ಇತರ ಸ್ಥಳಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಟೊಮೆಟೊಗಳ 80 ರೂ.ಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿದೆ. ದೇಶದ 500ಕ್ಕೂ ಹೆಚ್ಚು ಅಧಿಕ ಕಡೆಗಳಲ್ಲಿ ಪರಿಸ್ಥಿತಿಯ ಮರು ಮೌಲ್ಯಮಾಪನದ ನಂತರ ಟೊಮೆಟೊ ಬೆಲೆಯನ್ನು ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿತು. ಗ್ರಾಹಕರಿಗೆ ಪರಿಹಾರ … Continued

ದೆಹಲಿ ಸುಗ್ರೀವಾಜ್ಞೆ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲಿಸಿದ ನಂತರ ಬೆಂಗಳೂರು ಪ್ರತಿಪಕ್ಷಗಳ ಸಭೆಯಲ್ಲಿ ಭಾಗಿಯಾಗ್ತೇವೆ ಎಂದ ಎಎಪಿ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಒಗ್ಗಟ್ಟಿನ ಕಾರ್ಯತಂತ್ರವನ್ನು ನಿರ್ಧರಿಸಲು ಆಮ್ ಆದ್ಮಿ ಪಾರ್ಟಿ ನಾಳೆ (ಜುಲೈ ೧೭) ಕರ್ನಾಟಕದ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಮುಖ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಲಿದೆ. ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಪ್ರಮುಖ ರಾಜಕೀಯ ಸಮಿತಿಯ ಸಭೆಯ ನಂತರ ಮತ್ತು ದೆಹಲಿಯ ಅಧಿಕಾರಶಾಹಿಯ ಮೇಲೆ ಹಿಡಿತ … Continued

ಸಹೋದರಿಯರ ಮೇಲೆ ಲೈಂಗಿಕ ದೌರ್ಜನ್ಯ : ಬಿಜೆಪಿ ಮುಖಂಡನ ಮಗ ಸೇರಿ ನಾಲ್ವರ ವಿರುದ್ಧ ಆರೋಪ

ಭೋಪಾಲ್: ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಅಪ್ರಾಪ್ತ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ವರು ಆರೋಪಿಗಳಲ್ಲಿ ಮಧ್ಯಪ್ರದೇಶ ಬಿಜೆಪಿ ನಾಯಕನ ಮಗ ಸೇರಿದ್ದಾನೆ. ಸಂತ್ರಸ್ತ ಹೆಣ್ಣುಮಕ್ಕಳ ಸಂಬಂಧಿಕರು ಮತ್ತು ಸ್ಥಳೀಯರು ಕ್ರಮಕ್ಕಾಗಿ ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರದೇಶವು … Continued

ವೀಡಿಯೊ…: ಮಕ್ಕಳು ಮಮ್ಮಿ..ಮಮ್ಮಿ.. ಎಂದು ಕೂಗುತ್ತಿದ್ದಾಗಲೇ ಫೋಟೊ ತೆಗೆಯುವಾಗ ಸಮುದ್ರ ಪಾಲಾದ ಮಹಿಳೆ

ಮುಂಬೈ: ಬಾಂದ್ರಾದ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಪತಿ ಹಾಗೂ ಮಕ್ಕಳು ನೋಡನೋಡುತ್ತಿದ್ದಂತೆಯೇ 32 ವರ್ಷದ ಜ್ಯೋತಿ ಸೋನಾರ್ ಎಂಬ ಮಹಿಳೆಯನ್ನು ಭಾರಿ ಅಲೆ ಸಮುದ್ರಕ್ಕೆ ಎಳೆದೊಯ್ದಿದೆ. ದಂಪತಿ ಬಂಡೆಯ ಮೇಲೆ ಕುಳಿತಿದ್ದರು ಮತ್ತು ಅವರ ಮಕ್ಕಳು ಸಂತೋಷದಾಯಕ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದರು, ಆಗ ದುರದೃಷ್ಟಕರ ಘಟನೆ ನಡೆದಿದೆ. ಶಕ್ತಿಯುತವಾದ ಅಲೆಯು ಅಪ್ಪಳಿಸಿದಾಗ ಕಣ್ಣು ಮಿಟುಕಿಸುವುದರಲ್ಲಿ ಎಲ್ಲವೂ … Continued

ವಯಸ್ಸಾಗುವಿಕೆ ಪ್ರಕ್ರಿಯೆಯನ್ನೇ ಹಿಮ್ಮೆಟ್ಟಿಸುವ ರಾಸಾಯನಿಕ ಕಾಕ್ಟೈಲ್ ಕಂಡುಹಿಡಿದಿದ್ದೇವೆ ಎಂದ ಹಾರ್ವರ್ಡ್ ಸಂಶೋಧಕರು…!

ಹಾರ್ವರ್ಡ್‌ನ ವಿಜ್ಞಾನಿಗಳು ಔಷಧಿಗಳ ಕಾಕ್‌ಟೈಲ್ (ಮಿಶ್ರಣ) ಅನ್ನು ಕಂಡುಹಿಡಿದಿದ್ದಾರೆ, ಅದನ್ನು ಮಾತ್ರೆಯಾಗಿ ಸಂಯೋಜಿಸಬಹುದು, ಹಾಗೂ ಅದು ವಯಸ್ಸಾಗುವಿಕೆಯನ್ನು ಹಿಮ್ಮೆಟ್ಟಿಸುತ್ತದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. “ಕೆಮಿಕಲಿ ಇಂಡ್ಯೂಸ್ಡ್ ರಿಪ್ರೊಗ್ರಾಮಿಂಗ್ ಟು ರಿವರ್ಸ್ ಸೆಲ್ಯುಲಾರ್ ಏಜಿಂಗ್” ಎಂಬ ಹೆಸರಿನ ಅಧ್ಯಯನವನ್ನು ಸಂಶೋಧಕರು ಜುಲೈ 12 ರಂದು ಏಜಿಂಗ್ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. ತಂಡವು ಆರು ರಾಸಾಯನಿಕ ಕಾಕ್‌ಟೈಲ್ … Continued

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿದ ಸಮಾಜವಾದಿ ಪಕ್ಷದ ಮಾಜಿ ಮಿತ್ರ ಪಕ್ಷ ಎಸ್‌ಬಿಎಸ್‌ಪಿ

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ)ವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಮರಳಿದೆ. ಎಸ್‌ಬಿಎಸ್‌ಪಿ ಮುಖ್ಯಸ್ಥ ಓಪಿ ರಾಜಭರ್ ಅವರು ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಪಕ್ಷದ ಸೇರುವಿಕೆಯನ್ನು ಅಧಿಕೃತಗೊಳಿಸಿದರು. ಎನ್‌ಡಿಎ ಮೈತ್ರಿಕೂಟಕ್ಕೆ ರಾಜಭರ್ … Continued

ಬಿಜೆಪಿ ಕಾರ್ಯಕರ್ತನ ಅಪಹರಣ; ಮುಖದ ಮೇಲೆ ಮೂತ್ರ ವಿಸರ್ಜಿಸಿ ಕ್ರೌರ್ಯ ಮೆರೆದ ಟಿಎಂಸಿ ಕಾರ್ಯಕರ್ತರು : ವರದಿ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಟಿಎಂಸಿ ಮುಖಂಡರು ಬಿಜೆಪಿ ಕಾರ್ಯಕರ್ತನನ್ನು ಅಪಹರಿಸಿ, ಮುಖದ ಮೇಲೆ ಮೂತ್ರ ಮಾಡಿದ ಘಟನೆ ವರದಿಯಾಗಿದೆ. ವರದಿ ಪ್ರಕಾರ, ಗುರುವಾರ ರಾತ್ರಿ, ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯ ಪೋಲಿಂಗ್ ಏಜೆಂಟ್ ಆಗಿದ್ದ ಬಿಜೆಪಿ ಕಾರ್ಯಕರ್ತನನ್ನು ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಅಪಹರಿಸಿ ಗಾರ್ಬೆಟಾದಲ್ಲಿನ ಪಕ್ಷದ ಸ್ಥಳೀಯ … Continued