ಟಿಎಂಸಿ ನಾಯಕನ ಮಗನ ಜನ್ಮದಿನದ ಪಾರ್ಟಿಯಲ್ಲಿ ಸಾಮೂಹಿಕ ಅತ್ಯಾಚಾರದ ನಂತರ 9ನೇ ತರಗತಿ ಬಾಲಕಿ ಸಾವು; ಬಲವಂತವಾಗಿ ದಹನ

ನಾಡಿಯಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿ ಎಂಬಲ್ಲಿ ಇತ್ತೀಚೆಗೆ ಜನ್ಮದಿನದ ಸಮಾರಂಭವೊಂದರಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಸಂತ್ರಸ್ತೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ಪಕ್ಷದ ಪಂಚಾಯಿತಿ ಸದಸ್ಯನ ಮಗ ಎಂದು ಬಾಲಕಿಯ ಕುಟುಂಬ ಆರೋಪಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ … Continued

ರಾಮನವಮಿ ಹಿಂಸಾಚಾರ: ಆಸ್ತಿ ಹಾನಿ ವಸೂಲಿ ಮಾಡಲು ಆರೋಪಿಗಳ ಮನೆಗಳನ್ನು ಕೆಡವಿದ ಮಧ್ಯಪ್ರದೇಶ ಸರ್ಕಾರ ..!

ಭಾನುವಾರ ರಾಮನವಮಿ ಮೆರವಣಿಗೆ ವೇಳೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯಲ್ಲಿ, ರಾಜ್ಯ ಸರ್ಕಾರವು ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳಿಂದ ಆಸ್ತಿ ಹಾನಿ ಹಿಂಪಡೆಯಲು ಮನೆಗಳನ್ನು ನೆಲಸಮಗೊಳಿಸಿದೆ. ಸೋಮವಾರ ಛೋಟಿ ಮೋಹನ್ ಟಾಕೀಸ್ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸರ್ಕಾರಿ ಅಧಿಕಾರಿಗಳು ಬುಲ್ಡೋಜರ್‌ಗಳೊಂದಿಗೆ ಅಲ್ಲಿಗೆ ಆಗಮಿಸಿ ಹಿಂಸಾಚಾರ ಎಸಗಿದ ಆರೋಪಿಗಳ ಮನೆಗಳನ್ನು ಕೆಡವಿದರು. … Continued

ಸತ್ತು ಹೋಗಿದ್ದಾನೆಂದು ಭಾವಿಸಿ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದ ವ್ಯಕ್ತಿ 12 ವರ್ಷಗಳ ನಂತರ ಪಾಕಿಸ್ತಾನ ಜೈಲಿನಲ್ಲಿ ಪತ್ತೆ…!

ಬಿಹಾರದ ಬಕ್ಸರ್‌ನ ಛಾವಿ ಮುಸಾಹರ್ ಎಂಬವರು 12 ವರ್ಷಗಳಿಂದ ನಾಪತ್ತೆಯಾಗಿದ್ದರು. ಮೃತನೆಂದು ಭಾವಿಸಿ ಕುಟುಂಬಸ್ಥರು ಆ ವ್ಯಕ್ತಿ ಅಂತ್ಯಕ್ರಿಯೆ ಸಹ ನೆರವೇರಿಸಿದ್ದರು. ಆದರೆ ಈ ವ್ಯಕ್ತಿ ಬದುಕಿದ್ದಾನೆ ಎಂಬುದು ಈಗ ಗೊತ್ತಾಗಿದೆ..! ಈ ವ್ಯಕ್ತಿ ಬದುಕಿದ್ದು ಪಾಕಿಸ್ತಾನದ ಜೈಲಿನಲ್ಲಿದ್ದ…! ಪ್ರಯತ್ನದ ನಂತರ ಶೀಘ್ರದಲ್ಲೇ ಅವರು ತಮ್ಮ ಮನೆಗೆ ಮರಳಲಿದ್ದಾರೆ. ಬಕ್ಸರ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ … Continued

ಆತ್ಮಾಹುತಿಗೂ ಮುನ್ನ ವೀಡಿಯೊ: ವರ್ಗಾವಣೆ ಮಾಡಲು ಹೊಲಸು ಬೇಡಿಕೆ ಇಟ್ಟ ದುರುಳ ಜೆಇ: ಮನನೊಂದು ಲೈನ್‌ಮ್ಯಾನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ..!

ಲಖೀಂಪುರ ಖೇರಿ (ಉತ್ತರ ಪ್ರದೇಶ): ದುರುಳ ಜೂನಿಯರ್‌ ಇಂಜಿನಿಯರ್​​ (ಜೆಇ) ಕಿರುಕುಳದಿಂದಾಗಿ ತೀವ್ರವಾಗಿ ಮನನೊಂದ ಲೈನ್​ಮ್ಯಾನ್​ ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ‘ವರ್ಗಾವಣೆಗಾಗಿ ಒಂದು ಲಕ್ಷ ರೂ. ಲಂಚ ಮತ್ತು ಒಂದು ರಾತ್ರಿಗೆ ನಿನ್ನ ಪತ್ನಿಯನ್ನು ನನ್ನೊಂದಿಗೆ ಕಳುಹಿಸಬೇಕು ಎಂದು ಜೂನಿಯರ್‌ ಇಂಜಿನಿಯರ್​​ (ಜೆಇ) ನಾಗೇಂದ್ರಕುಮಾರ ವಿಕೃತ ಬೇಡಿಕೆ … Continued

ರಾಂಚಿ: ರೋಪ್‌ ವೇ ಕೇಬಲ್ ಕಾರ್ ಅಪಘಾತದಲ್ಲಿ 2 ಸಾವು, 22 ಜನರ ಜನರ ರಕ್ಷಣೆ, ರಕ್ಷಣೆಗಾಗಿ ಕಾಯುತ್ತಿರುವ 20ಕ್ಕೂ ಹೆಚ್ಚು ಜನ

ರಾಂಚಿ: ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ತ್ರಿಕುಟ್ ಬೆಟ್ಟಗಳಲ್ಲಿ ಭಾನುವಾರ ಸಂಭವಿಸಿದ ರೋಪ್‌ ವೇ ಕೇಬಲ್ ಕಾರ್ ಡಿಕ್ಕಿಯಲ್ಲಿ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು ರೋಪ್‌ವೇಯಲ್ಲಿ ಸಿಲುಕಿರುವ ಜನರನ್ನು ಹೊರತೆಗೆಯಲು ಇನ್ನೂ ಪ್ರಯತ್ನಿಸುತ್ತಿವೆ. 24 ಗಂಟೆಗಳ ನಂತರ ಸುಮಾರು 22 ಜನರನ್ನು ರಕ್ಷಿಸಲಾಗಿದೆ ಮತ್ತು ಕನಿಷ್ಠ … Continued

ನಟ, ಚಿತ್ರಕಥೆ ಬರಹಗಾರ ಶಿವಕುಮಾರ್ ಸುಬ್ರಮಣ್ಯಂ ನಿಧನ

ಮುಂಬೈ: ನಟ ಮತ್ತು ಚಿತ್ರಕಥೆಗಾರ ಶಿವಕುಮಾರ್ ಸುಬ್ರಮಣ್ಯಂ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ನಟ 1989 ರಲ್ಲಿ ವಿಧು ವಿನೋದ್ ಚೋಪ್ರಾ ಅವರ ಪರಿಂದಾ ಚಿತ್ರದ ಚಿತ್ರಕಥೆಯನ್ನು ಬರೆಯುವುದರೊಂದಿಗೆ ಬಾಲಿವುಡ್‌ನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅವರು 1942: ಎ ಲವ್ ಸ್ಟೋರಿ, ಚಮೇಲಿ, ಹಜಾರೋನ್ ಕ್ವಾಯಿಶೇನ್‌ ಐಸಿ ಮೊದಲಾದ ಗಮನಾರ್ಹ ಚಲನಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ. ಸುಬ್ರಹ್ಮಣ್ಯಂ ಅವರು … Continued

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ ಇಡಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಾರಿ ನಿರ್ದೇಶನಾಲಯ ಸೋಮವಾರ ವಿಚಾರಣೆ ನಡೆಸಿದೆ. ನ್ಯಾಷನಲ್ ಹೆರಾಲ್ಡ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಅವರನ್ನು ಕೇಂದ್ರ ತನಿಖಾ ಸಂಸ್ಥೆ ಪ್ರಶ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ … Continued

ಜೆಎನ್‌ಯು ಹಿಂಸಾಚಾರ: ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲು, ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಿಂದ ಘೇರಾವ್

ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಸಂಜೆ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಘಟನೆಯಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಪ್ರಕಾರ ಗಾಯಗೊಂಡ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚು. ಹಿಂದೂಗಳ ಹಬ್ಬವಾದ ರಾಮನವಮಿಯಂದು ಹಾಸ್ಟೆಲ್ ಮೆಸ್‌ನಲ್ಲಿ ಮಾಂಸಾಹಾರವನ್ನು ನೀಡಲಾಗುತ್ತಿದೆ ಎಂದು ಎಡ ಸಂಘಟನೆಗಳು ಮತ್ತು … Continued

ಜೆಎನ್‌ಯುದಲ್ಲಿ ರಾಮನವಮಿಯಂದು ಮಾಂಸಾಹಾರ ವಿತರಣೆ ವಿವಾದ: ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ, ಹಲವರಿಗೆ ಗಾಯ

ನವದೆಹಲಿ: ರಾಮನವಮಿ ಸಂದರ್ಭದಲ್ಲಿ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಭಾನುವಾರ ಮಧ್ಯಾಹ್ನ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ. ಭಾನುವಾರ ಮಧ್ಯಾಹ್ನ 3:30ಕ್ಕೆ ಕಾವೇರಿ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಮೆಸ್ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ … Continued

ಭಾರತದಿಂದ ಗರಿಷ್ಠ ಸಹಾಯ, ಚೀನಾದಿಂದ ಯಾವುದೇ ಹೊಸ ಹೂಡಿಕೆ ಇಲ್ಲ : ಲಂಕಾ ಮಾಜಿ ಪ್ರಧಾನಿ ವಿಕ್ರಮ ಸಿಂಘೆ

ಕೊಲಂಬೊ: ಶ್ರೀಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಭಾನುವಾರ ಅಧಿಕಾರದಲ್ಲಿರುವ ಸರ್ಕಾರವು “ಹಣಕಾಸು ಸವಾಲುಗಳನ್ನು ಎದುರಿಸುವಲ್ಲಿ ವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಸಂದರ್ಭದಲ್ಲೇ ಚೀನಾವು ಶ್ರೀಲಂಕಾದಲ್ಲಿ ಯಾವುದೇ ಹೂಡಿಕೆಯನ್ನು ಮಾಡಿಲ್ಲ, ಆದರೆ ಭಾರತ ಶ್ರೀಲಂಕಾಕ್ಕೆ ಗರಿಷ್ಠ ಮಟ್ಟದಲ್ಲಿ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ಸರ್ಕಾರ ಅಸಮರ್ಥತೆಯು ದೇಶವನ್ನು ತೀವ್ರವಾದ ಆರ್ಥಿಕ ಮತ್ತು ರಾಜಕೀಯ … Continued