ಶ್ರೀನಗರ: ಎನ್‌ಕೌಂಟರ್‌ನಲ್ಲಿ ಇಬ್ಬರು ಎಲ್ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ನಗರದಲ್ಲಿ ಇತ್ತೀಚೆಗೆ ನಡೆದ ಸಿಆರ್‌ಪಿಎಫ್ ಪಡೆಗಳ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಪಾಕಿಸ್ತಾನಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಭಾನುವಾರ ಇಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಕೊಂದು ಹಾಕಿವೆ. ಈ ಘಟನೆಯಲ್ಲಿ ಮೂವರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 4 ರಂದು ಸಿಆರ್‌ಪಿಎಫ್ ಮೇಲೆ ದಾಳಿ ನಡೆದ ದಿನದಿಂದ … Continued

60 ಕಿಮೀ ಪ್ರಯಾಣಕ್ಕೆ ಕೇವಲ 5 ರೂ. ವೆಚ್ಚ ತಗಲುವ ಎಲೆಕ್ಟ್ರಿಕ್ ವಾಹನವನ್ನು ಮನೆಯಲ್ಲೇ ನಿರ್ಮಿಸಿದ 67 ವರ್ಷದ ಕೇರಳದ ವ್ಯಕ್ತಿ…ವೀಕ್ಷಿಸಿ

ತಂತ್ರಜ್ಞಾನವು ವಿಕಸನಗೊಂಡಂತೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಸುಲಭವಾಗಿ ಪ್ರವೇಶಿಸುವಂತೆ ಆದ ನಂತರ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ವ್ಯಕ್ತಿಗಳ ಸಂಖ್ಯೆಯೂ ಬೆಳೆಯುತ್ತದೆ. ಅದೇನೇ ಇದ್ದರೂ, ಸಾಮಾನ್ಯವಾಗಿ ಎಲೆಕ್ಟ್ರಿಕ್ ಕಾರುಗಳು ಮತ್ತು ನಿರ್ದಿಷ್ಟವಾಗಿ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ದುಬಾರಿಯಾಗಿವೆ, ಏಕೆಂದರೆ ದೇಶದಲ್ಲಿ ಲಭ್ಯವಿರುವ ಅಗ್ಗದ ಎಲೆಕ್ಟ್ರಿಕ್ ವಾಹನವೆಂದರೆ ಟಾಟಾ ಟಿಗೊರ್ EV, ಇದರ ಬೆಲೆ Rs 11.99 ಲಕ್ಷ … Continued

ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಚಲಿಸುತ್ತಿದ್ದ ಟ್ರಕ್‌ನಿಂದ ದನಗಳನ್ನು ಎಸೆದ ಗೋವುಗಳ ಕಳ್ಳರು..! | ವೀಕ್ಷಿಸಿ

ನವದೆಹಲಿ: ಕಳ್ಳರನ್ನು ಹರ್ಯಾಣ ಪೊಲೀಸರು ಶನಿವಾರ 22 ಕಿಲೋಮೀಟರ್‌ಗಳಷ್ಟು ದೂರ ಬೆನ್ನಟ್ಟಿದ ನಂತರ ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಮತ್ತು ಗೋರಕ್ಷಕರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಗುರುಗ್ರಾಮ್‌ನ ಐವರನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಏಳು ಹಸುಗಳೊಂದಿಗೆ ಪರಾರಿಯಾಗುತ್ತಿದ್ದ ಹಸುಗಳ್ಳರನ್ನು ಮೂರು ಎಸ್ಯುವಿಗಳಲ್ಲಿ ಬೆನ್ನಟ್ಟುತ್ತಿದ್ದ ಜಾಗೃತದಳದ ಮೇಲೆ ಗೋ ಕಳ್ಳರು ಗುಂಡು ಹಾರಿಸಿದ್ದಾರೆ. ಅವರು … Continued

ಜನವಸತಿ ಪ್ರದೇಶದಲ್ಲಿ ರಸ್ತೆ ದಾಟಿದ 25-30 ಅಡಿ ಉದ್ದದ ದೈತ್ಯ ಹೆಬ್ಬಾವು.. ದೃಶ್ಯ ವೀಡಿಯೊದಲ್ಲಿ ಸೆರೆ

ಇದು ಅಂತಿಂತ ಹಾವಲ್ಲ, ಬರೋಬ್ಬರಿ 25-30 ಅಡಿಗಳಷ್ಟು ಉದ್ದವಿದೆ. ಈ ದೈತ್ಯ ಹೆಬ್ಬಾವು ಒಡಿಶಾದ ನಬರಂಗಪುರ ಜಿಲ್ಲೆಯ ರಸ್ತೆಯೊಂದರಲ್ಲಿ ಕಾಣಿಸಿಕೊಂಡಿದೆ. ಹಾವು ಸುಮಾರು 25-30 ಅಡಿ ಉದ್ದವಿರಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರ ರಾತ್ರಿ ಖಾತಿಗುಡ ಜವಾಹರ ನವೋದಯ ವಿದ್ಯಾಲಯದ ಮುಂದಿನ ಮುಖ್ಯರಸ್ತೆ ದಾಟುತ್ತಿದ್ದಾಗ ಸ್ಥಳೀಯರು ಹಾವನ್ನು ಕಂಡಿದ್ದಾರೆ. ಈ ದೈತ್ಯ ಹೆಬ್ಬಾವು ರಸ್ತೆ ದಾಟುವಾಗ ಮೊಬೈಲ್‌ನಲ್ಲಿ … Continued

ಇಮ್ರಾನ್ ಖಾನ್: ಕ್ರಿಕೆಟ್ ವೃತ್ತಿ ಜೀವನದ ಯಶಸ್ಸನ್ನು ರಾಜಕೀಯದಲ್ಲಿ ಪುನರಾವರ್ತಿಸಲು ವಿಫಲನಾದ ನಾಯಕ… ಇಮ್ರಾನ್‌ ಸವೆಸಿದ ಏಳುಬೀಳಿನ ದಾರಿ

ಇಸ್ಲಾಮಾಬಾದ್: 1992ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ದುರ್ಬಲ ತಂಡವನ್ನು ಚಾಂಪಿಯನ್‌ ಆಗಿ ಪರಿವರ್ತಿಸಿದ ಪಾಕಿಸ್ತಾನದ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್, ರಾಜಕೀಯದಲ್ಲಿ ಅದೇ ವರ್ಚಸ್ಸನ್ನು ಪುನರಾವರ್ತಿಸಲು ವಿಫಲರಾದರು. ಅಲ್ಲಿ ಅವರು ತಮ್ಮ ಮೊದಲ ಇನ್ನಿಂಗ್ಸ್‌ನ ಮಧ್ಯದಲ್ಲಿ ದೃಢವಾದ ವಿರೋಧ ಪಕ್ಷಗಳಿಂದ ರನೌಟ್ ಆದರು. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪರಿಣಾಮಕಾರಿಯಾಗಿ ಬಹುಮತವನ್ನು ಕಳೆದುಕೊಂಡ ಖಾನ್ ಅವರು ಸಂಸತ್ತನ್ನು ವಿಸರ್ಜಿಸಿದರು … Continued

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಭಾರತೀಯ ಮೂಲದ ಕಲ್ಟ್‌ ನಾಯಕ ಬ್ರಿಟನ್‌ ಜೈಲಿನಲ್ಲಿ ಸಾವು

ಲಂಡನ್‌: ಲಂಡನ್‌ನಲ್ಲಿ ರಹಸ್ಯವಾದ ಉಗ್ರ ಮಾವೋವಾದಿ ಕಲ್ಟ್‌ ನಡೆಸುತ್ತಿದ್ದ ಹಾಗೂ ಆರು ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಬ್ರಿಟನ್‌ ನ್ಯಾಯಾಲಯದಿಂದ 23 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಲ್ಲಿಯೇ ಮೃತಪಟ್ಟಿದ್ದಾರೆ. ಕಾಮ್ರೇಡ್ ಬಾಲಾ ಎಂದು ಅವರ ಅನುಯಾಯಿಗಳಿಗೆ ತಿಳಿದಿರುವ ಅರವಿಂದನ್ ಬಾಲಕೃಷ್ಣನ್ ಅವರು 2016 ರಲ್ಲಿ ಆರು ಅಸಭ್ಯ … Continued

ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡು ಮಾಯಾವತಿಯನ್ನು ಸಿಎಂ ಅಭ್ಯರ್ಥಿ ಮಾಡುವುದಾಗಿ ಆಫರ್‌ ನೀಡಿದ್ದೆವು, ಆದ್ರೆ ಅವರು ಸ್ಪಂದಿಸಲೇ ಇಲ್ಲ: ರಾಹುಲ್ ಗಾಂಧಿ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಬಹುಜನ್ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ಹಾಗೂ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿಯವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ಕಾಂಗ್ರೆಸ್ ಅವರಿಗೆ ಆಫರ್‌ ನೀಡಿತ್ತು. ಆದರೆ ಮಾಯಾವತಿ ನಮ್ಮ ಜತೆ ಮಾತನಾಡಲೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ಬಿಎಸ್‌ಪಿ ಜತೆ ಮೈತ್ರಿ ಸಾಧಿಸಲು … Continued

ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ನನ್ನು ಭಯೋತ್ಪಾದಕ ಎಂದು ಘೋಷಿಸಿದ ಭಾರತ

ನವದೆಹಲಿ: ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್​ ಸಯೀದ್​ಗೆ 31 ವರ್ಷ ಜೈಲು ಶಿಕ್ಷೆ ಘೋಷಣೆಯಾದ ಬೆನ್ನಲ್ಲೇ ಭಾರತದಿಂದ ಮತ್ತೊಂದು ಮಹತ್ವದ ಘೋಷಣೆ ಹೊರಬಿದ್ದಿದೆ. ಈಗ ಭಾರತದ ಗೃಹ ಸಚಿವಾಲಯವು ಹಫೀಜ್​ ಸಯೀದ್ ಮಗ ಭಯೋತ್ಪಾದಕ ಎಂದು ಮಹತ್ವದ ಆದೇಶ ಪ್ರಕಟಿಸಿದೆ. ಮುಂಬೈನಲ್ಲಿ 2008ರ ನವೆಂಬರ್​ 26ರಂದು ನಡೆದು ಉಗ್ರದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಈ ತೈಬಾ … Continued

ಬಾಲಿವುಡ್‌ ನಟಿ ಸೋನಂ ಕಪೂರ್ ದೆಹಲಿ ನಿವಾಸದಲ್ಲಿ 2.4 ಕೋಟಿ ರೂ.ಗಳ ಮೌಲ್ಯದ ವಸ್ತುಗಳು ಕಳ್ಳತನ

ಬಾಲಿವುಡ್‌ ನಟಿ ಸೋನಂ ಕಪೂರ್ ಮತ್ತು ಅವರ ಪತಿ ಆನಂದ್ ಅಹುಜಾ ಅವರ ದೆಹಲಿ ಮನೆಯಲ್ಲಿ ಫೆಬ್ರವರಿಯಲ್ಲಿ ಕಳ್ಳತನ ನಡೆದಿದ್ದು, 2.4 ಕೋಟಿ ರೂಪಾಯಿ ಮೌಲ್ಯದ ನಗದು, ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಶನಿವಾರ ಅಧಿಕೃತವಾಗಿ ತಿಳಿದುಬಂದಿದೆ. ಘಟನೆಯನ್ನು ದೃಢಪಡಿಸಿದ ಪೊಲೀಸ್ ಉಪ ಆಯುಕ್ತ (ನವದೆಹಲಿ ಜಿಲ್ಲೆ) ಅಮೃತಾ ಗುಗುಲೋತ್, … Continued

ಗುಜರಾತಿನಲ್ಲಿ ಹೆಚ್ಚು ಹರಡು ಕೊರೊನಾ ವೈರಸ್‌ನ ‘XE’ ತಳಿ ಪತ್ತೆ: ವರದಿ

ನವದೆಹಲಿ: ಸದ್ಯ ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ಸಿ ಒಮಿಕ್ರಾನ್‌ ರೂಪಾಂತರಿಯ ಹೈಬ್ರಿಡ್‌ ವೈರಸ್‌ ಎಕ್ಸ್ ಇ ಸೋಂಕು ಗುಜರಾತ್‍ನಲ್ಲಿ ವ್ಯಕ್ತಿಯೊಬ್ಬನಿಗೆ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಮೂರು ದಿನಗಳ ಹಿಂದೆಯಷ್ಟೇ ಮುಂಬೈನಲ್ಲಿ ಇದೇ ಮಾದರಿಯ ಸೋಂಕು ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡಿತ್ತು. ಆದರೆ ದೃಢಪಟ್ಟಿರಲಿಲ್ಲ. ಈಗ ಗುಜರಾತ್‍ನಲ್ಲಿ ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೊಸ ಮಾದರಿಯ ಎಕ್ಸ್ … Continued