ಕಚೋರಿ ತೆಗೆದುಕೊಳ್ಳಲು ಮಾರ್ಗ ಮಧ್ಯೆ ರೈಲು ನಿಲ್ಲಿಸಿದ ಚಾಲಕ; ವಿಡಿಯೋ ವೈರಲ್ ಆದ ನಂತರ ಐವರು ಅಮಾನತು.. ವೀಕ್ಷಿಸಿ

ನವದೆಹಲಿ: ವಿಲಕ್ಷಣ ಘಟನೆಯಲ್ಲಿ ಒಬ್ಬ ರೈಲು ಚಾಲಕ ಕಚೋರಿ ತಿನಿಸಿಗಾಗಿ ರೈಲನ್ನು ಮಧ್ಯದಲ್ಲಿ ನಿಲ್ಲಿಸಿದ್ದಾನೆ..!. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಲಕ್ಷಣ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಬ್ಬ ಟ್ವಿಟ್ಟರ್ ಬಳಕೆದಾರರು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಇದು ರೈಲು ಹಳಿಗಳ ಮಧ್ಯದಲ್ಲಿ ವ್ಯಕ್ತಿ ಕಾಯುತ್ತಿರುವುದನ್ನು ತೋರಿಸುತ್ತದೆ. ಕ್ಲಿಪ್‌ನಲ್ಲಿ … Continued

ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ತಮಿಳುನಾಡಿನಲ್ಲಿ ಕಳುವು ಮಾಡಿದ 500 ವರ್ಷಗಳಷ್ಟು ಹಳೆಯ ಹನುಮಾನ್ ವಿಗ್ರಹ ಶೀಘ್ರ ಭಾರತಕ್ಕೆ ವಾಪಸ್‌

ನವದೆಹಲಿ: ದಶಕದ ಹಿಂದೆ ತಮಿಳುನಾಡಿನಿಂದ ಕದ್ದು ವಿದೇಶಕ್ಕೆ ಸಾಗಿಸಲಾಗಿದ್ದ ಹನುಮಂತನ ವಿಗ್ರಹವನ್ನು ಶೀಘ್ರದಲ್ಲೇ ಭಾರತಕ್ಕೆ ತರಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಬುಧವಾರ ಹೇಳಿದ್ದಾರೆ. ವಿಜಯನಗರ ಕಾಲಕ್ಕೆ ಸೇರಿದ 14-15 ನೇ ಶತಮಾನದ ಪ್ರತಿಮೆಯನ್ನು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಖಾಸಗಿ ಖರೀದಿದಾರ ಬಳಿ ಇರುವುದು ಗೊತ್ತಾಗಿದೆ. ತಮಿಳುನಾಡಿನ ದೇವಸ್ಥಾನದಿಂದ ಕದ್ದ ಐದು ನೂರು … Continued

ಉಕೇನ್-ರಷ್ಯಾ ಯುದ್ಧ: ತನ್ನ ವಾಯು ಪ್ರದೇಶ ಮುಚ್ಚಿದ ಉಕ್ರೇನ್‌, ಆ ದೇಶಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌

ನವದೆಹಲಿ: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೊರಟ ಏರ್ ಇಂಡಿಯಾ ವಿಮಾನವು ದೆಹಲಿಗೆ ಹಿಂತಿರುಗುತ್ತಿದೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಮಧ್ಯೆ ಉಕ್ರೇನ್ತನ್ನ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ಹೇಳಿದೆ. ರಷ್ಯಾದೊಂದಿಗಿನ ಸಂಘರ್ಷದ ನಡುವೆ ಸಾವಿರಾರು ಭಾರತೀಯರು ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು, ಗುರುವಾರ ಬೆಳಿಗ್ಗೆ ರಷ್ಯಾದ ವಿಶೇಷ ಪಡೆಗಳಿಗೆ ಉಕ್ರೇನ್‌ನಲ್ಲಿ ಎರಡು … Continued

ಕುಡಿದು, ಬೆತ್ತಲೆಯಾಗಿ ಅಡ್ಡಾಡಿದ ಜೆಡಿಯು ನಾಯಕನ ಬಂಧನ; ವಿಡಿಯೊ ವೈರಲ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಅವರಿಗೆ ಇರಿಸುಮುರಿಸಾಗುವ ಘಟನೆ ಬಿಹಾರದಲ್ಲಿ ನಡೆದಿದ್ದು, ಜನತಾ ದಳ (ಯುನೈಟೆಡ್) ನಾಯಕ ಜಯ ಪ್ರಕಾಶ್ ಪ್ರಸಾದ್ ಅಲಿಯಾಸ್ ಕಾಲು ಅವರು ನಳಂದಾ ಜಿಲ್ಲೆಯಲ್ಲಿ ಕುಡಿದು ಬೆತ್ತಲೆಯಾಗಿ ತಿರುಗಾಡಿದ ಅವಮಾನಕರ ಘಟನೆ ನಡೆದಿದೆ…! ಜೆಡಿಯು ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ನಳಂದದ ಇಸ್ಲಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಗದೀಶ್‌ಪುರ ಗ್ರಾಮದಲ್ಲಿ ಈ ಅವಮಾನಕರ … Continued

ಉಕ್ರೇನ್ ಬಿಕ್ಕಟ್ಟು : ಭಾರತದ ನಿಲುವನ್ನು ಸ್ವಾಗತಿಸಿದ ರಷ್ಯಾ

ಮುಂಬೈ: ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತದ ‘ಸ್ವತಂತ್ರ ನಿಲುವು’ವನ್ನು ರಷ್ಯಾ ಬುಧವಾರ ಸ್ವಾಗತಿಸಿದೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ವಿಷಯದ ಬಗ್ಗೆ ತನ್ನ ಅಭಿಪ್ರಾಯಗಳು ಉಭಯ ದೇಶಗಳ ನಡುವಿನ ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಭಾರತವು ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಜಾಗತಿಕ ವ್ಯವಹಾರಗಳಿಗೆ ಸ್ವತಂತ್ರ ಮತ್ತು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಂಧನಕ್ಕೊಳಗಾದ ಮಹಾರಾಷ್ಟ್ರ ನವಾಬ್ ಮಲಿಕ್ ಅವರನ್ನು ಮಾರ್ಚ್ 3ರ ವರೆಗೆ ಇಡಿ ವಶಕ್ಕೆ ನೀಡಿದ ಕೋರ್ಟ್‌

ಮುಂಬೈ: ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಅವರನ್ನು ಮುಂಬೈ ವಿಶೇಷ ಕೋರ್ಟ್‌ ಮಾರ್ಚ್ 3ರ ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ. ನವಾಬ್ ಮಲಿಕ್ ಅವರನ್ನು ಬುಧವಾರ ಬೆಳಗ್ಗೆ ದಕ್ಷಿಣ ಮುಂಬೈನಲ್ಲಿರುವ ಇಡಿ ಕಚೇರಿಗೆ … Continued

ಹೈಕೋರ್ಟ್‌ನಲ್ಲಿ ಹಿಜಾಬ್‌ ಪ್ರಕರಣ: ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಾಬ್ ತೆಗೆಯುವುದಿಲ್ಲ ಎಂಬ ವಿದ್ಯಾರ್ಥಿನಿಯರ ಹೇಳಿಕೆ ಸುಳ್ಳು, ಆಧಾರ್ ಕಾರ್ಡಿನಲ್ಲಿ ಹಿಜಾಬ್ ಧರಿಸಿಲ್ಲ: ವಕೀಲ ನಾಗಾನಂದ

ಬೆಂಗಳೂರು: ಶಿಕ್ಷಕರ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ಎಸ್ ನಾಗಾನಂದ ಅವರು, ಬುಧವಾರ ವಾದ ಮುಂದುವರಿಸಿದರು. ಇಬ್ಬರು ಅರ್ಜಿದಾರರು ಸಾರ್ವಜನಿಕ ಸ್ಥಳದಲ್ಲಿ ತಾವು ಯಾವಾಗಲೂ ಹಿಜಾಬ್ ಧರಿಸಿಯೇ ಇರುತ್ತೇವೆ ಎಂಬ ವಿದ್ಯಾರ್ಥಿನಿಯರ ಹೇಳಿಕೆ ಸತ್ಯವಲ್ಲ ಎಂದು ವಾದಿಸಿದ ಅವರು, ಇಬ್ಬರು ಅರ್ಜಿದಾರರು ಹಿಜಾಬ್ ಧರಿಸದ ಆಧಾರ್ ಕಾರ್ಡ್ ಚಿತ್ರವನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು. … Continued

ಅಯ್ಯೋ ರಾಮ.. ಒಂದೇ ಕುಟುಂಬದ ಮೂವರಿಗೆ ಆರು ಬಾರಿ ಕಚ್ಚಿದ ಹಾವು…!

ಚಿತ್ತೂರು(ಆಂಧ್ರ ಪ್ರದೇಶ): ಸರ್ಪ ದ್ವೇಷ ಸಾಧಿಸುತ್ತದೆ ಎಂಬುದು ವಾಡಿಕಯಲ್ಲಿರುವ ಮತು. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಇಲ್ಲೊಂದು ಘಟನೆ ಹಾವು ನಿಜವಾಗಿಯೂ ದ್ವೇಷ ಸಾಧಸಿತ್ತದೆಯೇ ಎಂದು ವಿಚಾರ ಮಾಡುವಂತೆ ಮಾಡಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಲಯದಲ್ಲಿ ಕುಟುಂಬವೊಂದರ ಮೇಲೆ ಹಾವು ಹಗೆ ಸಾಧಿಸುವ ಘಟನೆ ವರದಿಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಒಂದೇ … Continued

ತಿರುಪತಿ ಜಿಲೇಬಿ ಪ್ರಸಾದದ ಬೆಲೆ ಹೆಚ್ಚಿಸಿದ ಟಿಟಿಡಿ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತನ್ನ ಪ್ರಸಾದದ ಬೆಲೆಗಳನ್ನು ಏರಿಕೆ ಮಾಡಿದ್ದು, ಜಿಲೇಬಿ (Jilebi) ಪ್ರಸಾದದ ಬೆಲೆಯನ್ನು ಹೆಚ್ಚಿಸಿದೆ. ಈ ಹಿಂದೆ 100 ರೂಪಾಯಿ ಇದ್ದ ಜಿಲೇಬಿ ಬೆಲೆಯನ್ನು ಈಗ 500 ರೂ.ಗಳಿಗೆ ಏರಿಕೆ ಮಾಡಿದೆ. ಆದರೆ ಟಿಟಿಡಿ ಈ ಬಾರಿ ಲಡ್ಡು ಬೆಲೆಯನ್ನು ಏರಿಕೆ ಮಾಡಿಲ್ಲ. ದೇವಸ್ಥಾನವು ತನ್ನ ಸೇವೆಗಳನ್ನು ಮರಳಿ ಆರಂಭಿಸಿದ … Continued

10, 12ನೇ ತರಗತಿಗಳಿಗೆ ಆಫ್‌ಲೈನ್‌ ಪರೀಕ್ಷೆ ನಡೆಸದಿರಲು ಕೋರಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಹತ್ತು ಮತ್ತು ಹನ್ನೆರಡನೇ ತರಗತಿಗಳಿಗೆ ವಿವಿಧ ಶಿಕ್ಷಣ ಮಂಡಳಿಗಳು ನಡೆಸುವ ಪರೀಕ್ಷೆಗಳನ್ನು ಭೌತಿಕವಾಗಿ/ಆಫ್‌ಲೈನ್‌ ವಿಧಾನದಲ್ಲಿ ನಡೆಸದಂತೆ ಕೋರಿ ಹದಿನೈದು ರಾಜ್ಯಗಳ ಶಾಲಾ ವಿದ್ಯಾರ್ಥಿಗಳು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಅಧಿಕಾರಿಗಳು ಪರೀಕ್ಷೆಯ ನಿಯಮಗಳು ಮತ್ತು ದಿನಾಂಕಗಳನ್ನು ಇನ್ನೂ ನಿರ್ಧರಿಸದ ಕಾರಣ ಅರ್ಜಿಯು ಅಕಾಲಿಕವಾಗಿದ್ದು ತಪ್ಪು ಸಲಹೆಯಿಂದ ಕೂಡಿದೆ ಎಂದು ನ್ಯಾಯಮೂರ್ತಿ ಎ.ಎಂ. … Continued