ಕೋವಿಶೀಲ್ಡ್, ಕೊವಾಕ್ಸಿನ್ ‌ಲಸಿಕೆಗೆ ಮಾರುಕಟ್ಟೆ ಅನುಮೋದನೆ ನೀಡಿದ ಡಿಸಿಜಿಐ, ಆದರೆ ಷರತ್ತುಗಳು ಅನ್ವಯ:ವರದಿ

ನವದೆಹಲಿ: ಕೊರೊನಾ ಸೋಂಕು ತಡೆಗೆ ನೀಡಲಾಗುವ ಕೋವಿಶೀಲ್ಡ್ ಮತ್ರು ಕೊವಾಕ್ಸಿನ್ ಲಸಿಕೆಗೆ ಭಾರತೀಯ ಔಷಧ ಮಹಾನಿಯಂತ್ರಣ ನಿರ್ದೇಶನಾಲಯ ಇಂದು, ಗುರುವಾರ ಮಾರುಕಟ್ಟೆ ಅನುಮೋದನೆ ನೀಡಿದೆ. ಹೊಸ ಔಷಧಗಳು ಮತ್ತು‌‌ ಕ್ಲಿನಿಕಲ್ ಪ್ರಯೋಗಗಳ ನಿಯಮ-2019ರ ನಿಯಮ ಅಡಿಯಲ್ಲಿ ಎರಡೂ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಮಾರುಕಟ್ಟೆ ಅನುಮೋದನೆ ದೊರೆತ ಮಾತ್ರಕ್ಕೆ ಈ ಎರಡೂ ಲಸಿಕೆಗಳು ಜನರಿಗೆ ನೇರವಾಗಿ ಕೈಗೆ … Continued

ಏರ್ ಇಂಡಿಯಾ ಅಧಿಕೃತವಾಗಿ ಮತ್ತೆ ಟಾಟಾ ಅಧೀನಕ್ಕೆ

ನವದೆಹಲಿ: ಏರ್ ಇಂಡಿಯಾ ಗುರುವಾರ ಮತ್ತೆ ಅಧಿಕೃತವಾಗಿ ಟಾಟಾಗಳ ತೆಕ್ಕೆಗೆ ಬಂದಿದೆ. ಗುರುವಾರ ಸಂಜೆ ಸರ್ಕಾರವು ಅಧಿಕೃತವಾಗಿ ಪ್ರಕಟಿಸಿದ ನಂತರ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಏರ್ ಇಂಡಿಯಾವನ್ನು ಟಾಟಾ ಗುಂಪಿನ ಮಡಿಲಿಗೆ ಮರಳಿ ಪಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ … Continued

9 ದಿನಗಳ ನಂತರ ಅರುಣಾಚಲದ ಬಾಲಕನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ ಚೀನಾದ ಸೇನೆ

ನವದೆಹಲಿ: ಚೀನಾದ ಸೇನೆಯು ಅರುಣಾಚಲ ಪ್ರದೇಶದ 17 ವರ್ಷದ ಬಾಲಕ ಮಿರಾಮ್ ಟ್ಯಾರೋನ್‌ ಎಂಬಾತನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. “ಅವರ ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ” ಎಂದು ಕೇಂದ್ರ ಕಾನೂನು ಮತ್ತು ನ್ಯಾಯಮೂರ್ತಿ ಕಿರಣ್ ರಿಜಿಜು ಗುರುವಾರ, (ಜನವರಿ 28) ಹೇಳಿದ್ದಾರೆ. ಅರುಣಾಚಲ ಪ್ರದೇಶದ ಸಿಯುಂಗ್ಲಾ ವ್ಯಾಪ್ತಿಯ ಲುಂಗ್ಟಾ ಜೋರ್ ಪ್ರದೇಶದ 17 … Continued

ರಾಷ್ಟ್ರ ರಾಜಧಾನಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ…! ವಿಡಿಯೊ ವೈರಲ್‌ ನಂತರ ನಾಲ್ವರ ಬಂಧನ

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಕೂದಲು ಕತ್ತರಿಸಿ ಮುಖಕ್ಕೆ ಮಸಿ ಬಳಿದ ಆಕೆಯ ನೆರೆಹೊರೆಯವರು ಅವಳನ್ನು ಪರೇಡ್‌ ಮಾಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ..! ಅವಳನ್ನು ಪರೇಡ್‌ ಮಾಡಿದ್ದಲ್ಲದೆ ಹರ್ಷೋದ್ಗಾರದ ನಡುವೆ ಥಳಿಸಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗ ಇಂದು, ಗುರುವಾರ ತಿಳಿಸಿದೆ. ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ಮಹಿಳೆಯನ್ನು … Continued

ಜಗತ್ತಿನ 2ನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದ ಟಿಸಿಎಸ್

ನವದೆಹಲಿ: ಭಾರತೀಯ ಹೆಮ್ಮೆಯ ಸಂಸ್ಥೆ, ಟಿಸಿಎಸ್ ಜಗತ್ತಿನ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ. ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ 2022ರ ಪ್ರಮುಖ 500 ಐಟಿ ಸೇವಾ ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಇನ್ ಫೋಸಿಸ್ ಕಂಪನಿ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಜಗತ್ತಿನ ಐದು ಪ್ರಮುಖ ಕಂಪನಿಗಳಲ್ಲಿ ಎರಡು ಭಾರತೀಯ ಕಂಪನಿಗಳು ಸ್ಥಾನ … Continued

ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ- ಟಿ20 ಸರಣಿಗೆ ಭಾರತದ ತಂಡ ಪ್ರಕಟ

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತದ ತಂಡವನ್ನು ಪ್ರಕಟಿಸಲಾಗಿದೆ. ಗಾಯದ ಕಾರಣ ಸೌತ್ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದಾರೆ. ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ಪರ ಆಡಿದ್ದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಸ್ಪೋಟಕ ಬ್ಯಾಟರ್ ದೀಪಕ್ ಹೂಡಾ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ … Continued

ಓಮಿಕ್ರಾನ್ ಸೋಂಕಿತರು ಗಮನಾರ್ಹ ರೋಗನಿರೋಧಕ ಪ್ರತಿಕ್ರಿಯೆ ಹೊಂದಿದ್ದಾರೆ, ಇದು ಡೆಲ್ಟಾ ರೂಪಾಂತರವನ್ನೂ ತಟಸ್ಥಗೊಳಿಸಬಹುದು: ಐಸಿಎಂಆರ್‌ ಅಧ್ಯಯನ

ನವದೆಹಲಿ: ಕೋವಿಡ್-19ರ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾದವರು ಗಮನಾರ್ಹವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೊಂದಿದ್ದಾರೆ, ಇದು ಓಮಿಕ್ರಾನ್ ಮಾತ್ರವಲ್ಲದೆ ಡೆಲ್ಟಾ ರೂಪಾಂತರ ಮತ್ತು ಇತರ ಕಾಳಜಿಯ ರೂಪಾಂತರಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಅಧ್ಯಯನವು ತೋರಿಸಿದೆ. . ಅಧ್ಯಯನವು SARS-CoV-2 ನ B.1, ಆಲ್ಫಾ, ಬೀಟಾ, ಡೆಲ್ಟಾ, … Continued

ಕರ್ನಾಟಕದ ಯೋಧ ಕಾಶಿರಾಯ ಸೇರಿ ಆರು ಜನರಿಗೆ ಶೌರ್ಯ ಪ್ರಶಸ್ತಿ ಪ್ರದಾನ

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಜೊತೆ ಹೋರಾಡಿ ಹುತಾತ್ಮರಾದ ಕರ್ನಾಟಕದ ವೀರ ಯೋಧ ಕಾಶಿರಾಯ​​ ಬಮ್ಮನಹಳ್ಳಿ ಸೇರಿದಂತೆ ಆರು ಜನರಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಪ್ರಶಸ್ತಿ ದೆಹಲಿಯಲ್ಲಿ ಬುಧವಾರ ಪ್ರಶಸ್ತಿ ಪ್ರದಾನ ಮಾಡಿದರು. 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆರು ಮಂದಿ ವೀರಯೋಧರಿಗೆ ಶೌರ್ಯ ಪ್ರಶಸ್ತಿ ನೀಡಲಾಗಿದೆ. ಈ ಪೈಕಿ … Continued

ಮುಕ್ತ ಮಾರುಕಟ್ಟೆ ಅನುಮೋದನೆ ನಂತರ ಕೋವಿಶೀಲ್ಡ್-ಕೋವಾಕ್ಸಿನ್‌ 275 ರೂ.ಗಳಾಗುವ ಸಾಧ್ಯತೆ

ನವದೆಹಲಿ: ಕೊರೊನಾ ವೈರಸ್ ವಿರುದ್ಧ ಲಸಿಕೆಗಳನ್ನು ಕೈಗೆಟುಕುವಂತೆ ಮಾಡುವ ಪ್ರಯತ್ನದಲ್ಲಿ, ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಎರಡು ಕೋವಿಡ್-19 ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನ ಬೆಲೆಯನ್ನು ಪ್ರತಿ ಡೋಸ್‌ಗೆ 150 ಹೆಚ್ಚುವರಿ ಸೇವಾ ಶುಲ್ಕ ದೊಂದಿಗೆ 275 ರೂ.ಗಳಿಗೆ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ (ಇಯುಎ) ಪಡೆದಿರುವ ಎರಡು ಲಸಿಕೆಗಳು … Continued

ಅರುಣಾಚಲದ ಬಾಲಕನ ಭಾರತಕ್ಕೆ ಹಿಂದಿರುಗಿಸುವುದು ದೃಢಪಡಿಸಿದ ಚೀನಾದ: ಕಿರಣ್ ರಿಜಿಜು

ನವದೆಹಲಿ: ಅರುಣಾಚಲ ಪ್ರದೇಶದ 17 ವರ್ಷದ ಬಾಲಕ ಮಿರಾಮ್ ಟ್ಯಾರೋನ್‌ನನ್ನು ಶೀಘ್ರದಲ್ಲೇ ಭಾರತಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಚೀನಾದ ಪಿಎಲ್‌ಎ ಖಚಿತಪಡಿಸಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಅರುಣಾಚಲ ಪ್ರದೇಶದ ಯುವ ಭಾರತೀಯ ಮಿರಾಮ್ ಟ್ಯಾರೋನ್ ಅವರನ್ನು ಭಾರತಕ್ಕೆ ಹಿಂದಿರುಗಿಸಲಾಗುವುದು ಎಂದು ಚೀನಾದ ಪಿಎಲ್‌ಎ ದೃಢಪಡಿಸಿದೆ. ಸುಗಮವಾಗಿ ಮುಂದುವರಿಯಲು … Continued