8 ಕೋಟಿ ರೂ. ಕೊಡಲು ನಿರಾಕರಿಸಿದ್ದಕ್ಕೆ ಪತಿಯನ್ನು ಕೊಂದ ಮಹಿಳೆ… ದೇಹ ಸುಡಲು 800 ಕಿ.ಮೀ. ಪ್ರಯಾಣ…ಕರ್ನಾಟಕದಲ್ಲಿ ಮೂವರ ಬಂಧನ

ಬೆಂಗಳೂರು : ಕೊಡಗು ಜಿಲ್ಲೆಯ ಎಸ್ಟೇಟ್‌ ಒಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾದ ತೆಲಂಗಾಣ ಉದ್ಯಮಿಯ ಹತ್ಯೆ ಪ್ರಕಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದಾರೆ. ಆತನ ಎರಡನೇ ಪತ್ನಿ ಹಾಗೂ ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 8 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಮಹಿಳೆ ಆತನನ್ನು ಕೊಂದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮೃತ ಉದ್ಯಮಿಯನ್ನು ರಮೇಶ … Continued

ಎಸ್‌ಡಿಎ ಹುದ್ದೆಗೆ ನಕಲಿ ಅಂಕಪಟ್ಟಿ ಸೃಷ್ಟಿಸಿದ್ದ ಜಾಲ ಭೇದಿಸಿದ ಪೊಲೀಸರು ; 48 ಮಂದಿ ಬಂಧನ, ಅವರಲ್ಲಿ ಮೂವರು ಸರ್ಕಾರಿ ನೌಕರರು..!

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿದ್ದ ನಕಲಿ ಅಂಕಪಟ್ಟಿ( Fake marks card) ದಂಧೆಯ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, 3 ಸರ್ಕಾರಿ ಅಧಿಕಾರಿಗಳು ಸೇರಿ 48 ಮಂದಿಯನ್ನು ಬಂಧಿಸಿದ್ದಾರೆ. ಈ ಧಂದೆಯ ಕಿಂಗ್ ಪಿನ್ ತಲೆಮರೆಸಿಕೊಂಡಿದ್ದಾನೆ . ದ್ವಿತೀಯ ದರ್ಜೆ ಸಹಾಯಕ ಬ್ಯಾಕ್‌ಲ್ಯಾಗ್‌ ಹುದ್ದೆಗೆ ನಕಲಿ ದಾಖಲೆ ಸಲ್ಲಿಸಿ ಉದ್ಯೋಗ ಪಡೆಯಲು ನಕಲಿ ಅಂಕಪಟ್ಟಿ ಒದಗಿಸಿದ್ದ … Continued

ವಾಹನಗಳಿಗೆ ಕಣ್ಣುಕುಕ್ಕುವ ಎಲ್‌ಇಡಿ ಲೈಟ್‌ ಹಾಕಿಸಿದ್ದೀರಾ : ಜುಲೈ 1ರಿಂದ ಬೀಳಲಿದೆ ದಂಡ…

ಬೆಂಗಳೂರು : ಕೇಂದ್ರ ಮೋಟಾರು ಕಾಯಿದೆಯ ಮಾನದಂಡದಂತೆ ವಾಹನಗಳಿಗೆ ಹೆಡ್‌ಲೈಟ್‌ ಅಳವಡಿಸಬೇಕು. ಈ ಕಾಯಿದೆ ಉಲ್ಲಂಘಿಸಿ ಹೆಚ್ಚು ಪ್ರಕಾಶಮಾನವಾದ ಅಥವಾ ಕಣ್ಣಿಗೆ ಕುಕ್ಕುವಂತಹ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಅಳವಡಿಸುವ ಹಾಗಿಲ್ಲ. ಈ ಬಗ್ಗೆ ಜುಲೈ 1ರಿಂದ ರಾಜ್ಯ ಪೊಲೀಸ್‌ ವಿಶೇಷ ಅಭಿಯಾನ ಕೈಗೊಳ್ಳಲಿದೆ. ವಾಹನಗಳಿಗೆ ಕಣ್ಣಿಗೆ ಕುಕ್ಕುವಂತಹ ಎಲ್ಇಡಿ ದೀಪ ಅಳವಡಿಸಿದ್ದರೆ ಅಂತಹ ವಾಹನ ಸವಾರರ ವಿರುದ್ಧ … Continued

ಪಿಎಫ್‌ಐ ಮೇಲೆ ಏಕಕಾಲಕ್ಕೆ ದಾಳಿ, 80 ಮಂದಿ ವಶಕ್ಕೆ : ಎಡಿಜಿಪಿ ಅಲೋಕಕುಮಾರ

ಬೆಂಗಳೂರು: ಇಂದು, ಮಂಗಳವಾರ ಮುಂಜಾನೆ 3 ಗಂಟೆಯಿಂದಲೇ ಪೊಲೀಸರು, ರಾಜ್ಯಾದ್ಯಂತ ಪಿಎಫ್‍ಐ ಪದಾಧಿಕಾರಿಗಳು ಮತ್ತು ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕಕುಮಾರ ತಿಳಿಸಿದ್ದಾರೆ. ಈವರೆಗೆ 80 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಎಸ್ಪಿಗಳು, ನಗರಗಳಲ್ಲಿ … Continued