ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ : ಯುಡಿಎಫ್‌ ಗೆ ಭರ್ಜರಿ ಗೆಲುವು ; ಆಡಳಿತಾರೂಢ ಎಡರಂಗಕ್ಕೆ ಹಿನ್ನಡೆ

ತಿರುವನಂತಪುರಂ: 2025ರ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (UDF) ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳೆರಡರಲ್ಲೂ ಭರ್ಜರಿ ವಿಜಯವನ್ನು ದಾಖಲಿಸಿದೆ. ಆರು ಪ್ರಮುಖ ಮಹಾನಗರ ಪಾಲಿಕೆಗಳಲ್ಲಿ ಯುಡಿಎಫ್ ನಾಲ್ಕರಲ್ಲಿ (ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು) ಭರ್ಜರಿ ಜಯಗಳಿಸಿದೆ.  ಎಲ್‌ಡಿಎಫ್ (LDF) ಕೋಝಿಕ್ಕೋಡ್ ಅನ್ನು ಮಾತ್ರ ಉಳಿಸಿಕೊಂಡಿದೆ. ಆದರೆ, … Continued

ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಮಲೆಯಾಳಂ ನಟ ದಿಲೀಪ ಖುಲಾಸೆ

ಕೊಚ್ಚಿನ್ : 2017 ರಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಲೆಯಾಳಂ ನಟ ದಿಲೀಪ (A8) ಅವರನ್ನು ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೋಮವಾರ (ಡಿಸೆಂಬರ್ 8) ದೋಷಮುಕ್ತಗೊಳಿಸಿದೆ. ಎಂಟು ವರ್ಷಗಳ ಕಾಲ ನಡೆದ ಈ ಸುದೀರ್ಘ ವಿಚಾರಣೆಗೆ ತೆರೆಬಿದ್ದಿದ್ದು, ನ್ಯಾಯಾಧೀಶೆ ಶ್ರೀಮತಿ ಹನಿ … Continued

ಕೇರಳದ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ “ಸೋನಿಯಾ ಗಾಂಧಿ”…!

ಮುನ್ನಾರ್ (ಕೇರಳ): ಸೋನಿಯಾ ಗಾಂಧಿ ಅವರು ಕೇರಳದ ಮುನ್ನಾರ್‌ನಿಂದ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದಕ್ಕಿಂತ ಆಶ್ಚರ್ಯಕರ ವಿಷಯವೆಂದರೆ, ಅವರು ಬಿಜೆಪಿ ಅಭ್ಯರ್ಥಿ…! ಕೇರಳದಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಡಿಸೆಂಬರ್ 9 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ, ಡಿಸೆಂಬರ್ 13 ರಂದು ಮತ ಎಣಿಕೆ ನಡೆಯಲಿದೆ. ಕೇರಳದ ಗಿರಿಧಾಮವಾದ ಮುನ್ನಾರ್‌ನಲ್ಲಿ, ಸ್ಥಳೀಯ ಪಂಚಾಯತ್‌ನ ನಲ್ಲತಣ್ಣಿ … Continued

ಮದುವೆ ದಿನವೇ ಅಪಘಾತ, ಗಾಯಗೊಂಡ ಮದುಮಗಳಿಗೆ ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ಮದುಮಗ…

ಕೊಚ್ಚಿ: ಕೇರಳದ ಆಲಪ್ಪುಳದ ಥಂಪೋಲಿಯಲ್ಲಿ ಅಪರೂಪದ ವಿದ್ಯಮಾನವೊಂದರಲ್ಲಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಮದುವೆಯ ದಿನ ವರ ತಾಳಿ ಕಟ್ಟಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮದುವೆಗಾಗಿ ದೇವಸ್ಥಾನಕ್ಕೆ ತೆರಳುವ ಮುನ್ನ ಮೇಕಪ್ ಮಾಡಿಸಿಕೊಳ್ಳಲು ಮದುವೆ ದಿನ ಬೆಳಿಗ್ಗೆ ಮನೆಯಿಂದ ತೆರಳಿದ್ದ ವಧು ಅವನಿ ಅಪಘಾತದಿಂದ ಗಾಯಗೊಂಡರು. ಆರಂಭದಲ್ಲಿ … Continued

ವೀಡಿಯೊ..| ಮದುವೆಯ ಹೊಸ ಟ್ರೆಂಡ್ : ಅಳಿಯ-ಮಗಳಿಗೆ ‘ನಗದು’ ಉಡುಗೊರೆ ಕೊಡಲು ವ್ಯಕ್ತಿಯ ಶರ್ಟ್‌ ಮೇಲೆ ಪೇಟಿಎಂ ಕ್ಯೂಆರ್ ಕೋಡ್..!

ಭಾರತೀಯ ವಿವಾಹಗಳು ಅವುಗಳ ವೈಭವ, ಸಂಭ್ರಮ, ವರ್ಣರಂಜಿತ ಸಂಪ್ರದಾಯಗಳು ಮತ್ತು ಭಾವನೆಗಳಿಗೆ ಹೆಸರುವಾಸಿಯಾಗಿವೆ. ಕುಟುಂಬಗಳು ಸಾಮಾನ್ಯವಾಗಿ ಅದ್ದೂರಿ ಖರ್ಚು ಮಾಡಿ, ನೂರಾರು ಜನರನ್ನು ಆಹ್ವಾನಿಸಿ ವಿವಾಹವನ್ನು ನಡೆಸುವುದರಿಂದ ಇಲ್ಲಿ ಯಾವುದೂ ಸಣ್ಣ ಮಟ್ಟದಲ್ಲಿ ಇರುವುದಿಲ್ಲ. ಮದುವೆಯಲ್ಲಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಮತ್ತು ಪ್ರಮುಖ ಭಾಗವಾಗಿದೆ, ಇದರಲ್ಲಿ ಅನೇಕರು ನಗದನ್ನು ಲಕೋಟೆಯಲ್ಲಿ ನೀಡಲು ಬಯಸುತ್ತಾರೆ. ಆದರೆ, … Continued

ಮಣ್ಣು ಕುಸಿತದಿಂದ ಪಾರಾಗಲು ಮನೆಯಿಂದ ಸ್ಥಳಾಂತರಗೊಂಡಿದ್ದ ವ್ಯಕ್ತಿ ಅಡುಗೆ ಮಾಡಲೆಂದು ಮನೆಗೆ ಬಂದಾಗ ಪ್ರಾಣವೇ ಹೋಯ್ತು…!

ಇಡುಕ್ಕಿ (ಕೇರಳ): ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಸಮೀಪ ಭಾರಿ ಭೂಕುಸಿತ ಸಂಭವಿಸಿ ಕನಿಷ್ಠ ಎಂಟು ಮನೆಗಳು ನೆಲಸಮಗೊಂಡಿದ್ದು, 48 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಅಡಿಮಾಲಿ ಬಳಿಯ ಮನ್ನಂಕಂಡಂನಲ್ಲಿ ನಡೆದಿದೆ ಎಂದು ಭಾನುವಾರ ವರದಿಯಾಗಿದೆ. ಪೊಲೀಸರ ಪ್ರಕಾರ, ಈ ದುರಂತವು ಶನಿವಾರ ರಾತ್ರಿ ಸಂಭವಿಸಿದೆ. ಮೃತರನ್ನು … Continued

“ಸಚಿವನಾದ ನಂತ್ರ ನನ್ನ ಆದಾಯ ನಿಂತುಹೋಗಿದೆ” : ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ನಟ ಸುರೇಶ ಗೋಪಿ…!

ಕಣ್ಣೂರು : ಕೇಂದ್ರ ಸಚಿವ ಸುರೇಶ ಗೋಪಿ ಮತ್ತೆ ನಟನಾ ವೃತ್ತಿಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಿನಿಮಾ ವೃತ್ತಿಯನ್ನು ಮುಂದುವರಿಸಲು ಬಯಸುವುದಾಗಿ ಅವರು ತಿಳಿಸಿದ್ದಾರೆ. ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರು ಲೋಕಸಭಾ ಸಂಸದ ಹಾಗೂ ನಟರೂ ಆಗಿರುವ ಕೇಂದ್ರ ಸಚಿವ ಸುರೇಶ ಗೋಪಿ, ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರದಿಂದ ತಮ್ಮ ಆದಾಯ ಗಣನೀಯವಾಗಿ … Continued

ಆಮ್ಲೆಟ್ ತಿನ್ನುವಾಗ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

ಕಾಸರಗೋಡು : ಆಮ್ಲೆಟ್ ತಿನ್ನುವಾಗ ಗಂಟಲಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಬದಿಯಡ್ಕದ ಚುಲ್ಲಿಕ್ಕಾನ ಮೂಲದ ಪ್ರಸ್ತಕ್ತ ಬರಡ್ಕದ ನಿವಾಸಿ ವಿನ್ಸೆಂಟ್ ಕ್ರಾಸ್ತಾ (52) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಅವರು ತಮ್ಮ ಮನೆಯ ಸಮೀಪವಿರುವ ಸಣ್ಣ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಿದ್ದಾಗ ಈ ಘಟನೆ … Continued

ಕಾಸರಗೋಡು | ಮಗಳ ಮೇಲೆಯೇ ಆ್ಯಸಿಡ್ ಎರಚಿ ಪರಾರಿಯಾದ ಅಪ್ಪ…!

ಕಾಸರಗೋಡು : ಹೆಂಡತಿ ಜೊತೆ ಜಗಳಕ್ಕೆ ಸ್ವಂತ ಮಗಳ ಮೇಲೆ ಅಪ್ಪನೇ ಆ್ಯಸಿಡ್ ಎರಚಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ 10:30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಮತ್ತೊಬ್ಬ ಬಾಲಕಿಗೂ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ. ಆ್ಯಸಿಡ್ ಎರಚಿದ ಆರೋಪಿ ದಕ್ಷಿಣ ಕನ್ನಡ … Continued

‘ಬೀಡಿಸ್-ಬಿಹಾರ’ ಪೋಸ್ಟ್ ವಿವಾದ : ರಾಜೀನಾಮೆ ನೀಡಿದ ಕೇರಳ ಕಾಂಗ್ರೆಸ್ ಘಟಕದ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥ

ನವದೆಹಲಿ: ವಿವಾದಾತ್ಮಕ ಪೋಸ್ಟ್‌ ಒಂದು ವಿವಿಧ ರಾಜಕೀಯ ನಾಯಕರಿಂದ ಟೀಕೆಗೆ ಗುರಿಯಾದ ನಂತರ ಕಾಂಗ್ರೆಸ್‌ನ ಕೇರಳ ಘಟಕದ ಸಾಮಾಜಿಕ ಮಾಧ್ಯಮ ಮುಖ್ಯಸ್ಥರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕೇರಳದ ತ್ರಿತಾಲ ಕ್ಷೇತ್ರದ ಎರಡು ಬಾರಿ ಶಾಸಕರಾಗಿರುವ ಮತ್ತು ಈವರೆಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸೆಲ್‌ನ ಮುಖ್ಯಸ್ಥರಾಗಿರುವ ವಿಟಿ … Continued