ಕೇರಳದ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ “ಸೋನಿಯಾ ಗಾಂಧಿ”…!

ಮುನ್ನಾರ್ (ಕೇರಳ): ಸೋನಿಯಾ ಗಾಂಧಿ ಅವರು ಕೇರಳದ ಮುನ್ನಾರ್‌ನಿಂದ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದಕ್ಕಿಂತ ಆಶ್ಚರ್ಯಕರ ವಿಷಯವೆಂದರೆ, ಅವರು ಬಿಜೆಪಿ ಅಭ್ಯರ್ಥಿ…! ಕೇರಳದಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಡಿಸೆಂಬರ್ 9 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ, ಡಿಸೆಂಬರ್ 13 ರಂದು ಮತ ಎಣಿಕೆ ನಡೆಯಲಿದೆ. ಕೇರಳದ ಗಿರಿಧಾಮವಾದ ಮುನ್ನಾರ್‌ನಲ್ಲಿ, ಸ್ಥಳೀಯ ಪಂಚಾಯತ್‌ನ ನಲ್ಲತಣ್ಣಿ … Continued

ಮದುವೆ ದಿನವೇ ಅಪಘಾತ, ಗಾಯಗೊಂಡ ಮದುಮಗಳಿಗೆ ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ಮದುಮಗ…

ಕೊಚ್ಚಿ: ಕೇರಳದ ಆಲಪ್ಪುಳದ ಥಂಪೋಲಿಯಲ್ಲಿ ಅಪರೂಪದ ವಿದ್ಯಮಾನವೊಂದರಲ್ಲಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಮದುವೆಯ ದಿನ ವರ ತಾಳಿ ಕಟ್ಟಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮದುವೆಗಾಗಿ ದೇವಸ್ಥಾನಕ್ಕೆ ತೆರಳುವ ಮುನ್ನ ಮೇಕಪ್ ಮಾಡಿಸಿಕೊಳ್ಳಲು ಮದುವೆ ದಿನ ಬೆಳಿಗ್ಗೆ ಮನೆಯಿಂದ ತೆರಳಿದ್ದ ವಧು ಅವನಿ ಅಪಘಾತದಿಂದ ಗಾಯಗೊಂಡರು. ಆರಂಭದಲ್ಲಿ … Continued

ವೀಡಿಯೊ..| ಮದುವೆಯ ಹೊಸ ಟ್ರೆಂಡ್ : ಅಳಿಯ-ಮಗಳಿಗೆ ‘ನಗದು’ ಉಡುಗೊರೆ ಕೊಡಲು ವ್ಯಕ್ತಿಯ ಶರ್ಟ್‌ ಮೇಲೆ ಪೇಟಿಎಂ ಕ್ಯೂಆರ್ ಕೋಡ್..!

ಭಾರತೀಯ ವಿವಾಹಗಳು ಅವುಗಳ ವೈಭವ, ಸಂಭ್ರಮ, ವರ್ಣರಂಜಿತ ಸಂಪ್ರದಾಯಗಳು ಮತ್ತು ಭಾವನೆಗಳಿಗೆ ಹೆಸರುವಾಸಿಯಾಗಿವೆ. ಕುಟುಂಬಗಳು ಸಾಮಾನ್ಯವಾಗಿ ಅದ್ದೂರಿ ಖರ್ಚು ಮಾಡಿ, ನೂರಾರು ಜನರನ್ನು ಆಹ್ವಾನಿಸಿ ವಿವಾಹವನ್ನು ನಡೆಸುವುದರಿಂದ ಇಲ್ಲಿ ಯಾವುದೂ ಸಣ್ಣ ಮಟ್ಟದಲ್ಲಿ ಇರುವುದಿಲ್ಲ. ಮದುವೆಯಲ್ಲಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಮತ್ತು ಪ್ರಮುಖ ಭಾಗವಾಗಿದೆ, ಇದರಲ್ಲಿ ಅನೇಕರು ನಗದನ್ನು ಲಕೋಟೆಯಲ್ಲಿ ನೀಡಲು ಬಯಸುತ್ತಾರೆ. ಆದರೆ, … Continued

ಮಣ್ಣು ಕುಸಿತದಿಂದ ಪಾರಾಗಲು ಮನೆಯಿಂದ ಸ್ಥಳಾಂತರಗೊಂಡಿದ್ದ ವ್ಯಕ್ತಿ ಅಡುಗೆ ಮಾಡಲೆಂದು ಮನೆಗೆ ಬಂದಾಗ ಪ್ರಾಣವೇ ಹೋಯ್ತು…!

ಇಡುಕ್ಕಿ (ಕೇರಳ): ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಸಮೀಪ ಭಾರಿ ಭೂಕುಸಿತ ಸಂಭವಿಸಿ ಕನಿಷ್ಠ ಎಂಟು ಮನೆಗಳು ನೆಲಸಮಗೊಂಡಿದ್ದು, 48 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಅಡಿಮಾಲಿ ಬಳಿಯ ಮನ್ನಂಕಂಡಂನಲ್ಲಿ ನಡೆದಿದೆ ಎಂದು ಭಾನುವಾರ ವರದಿಯಾಗಿದೆ. ಪೊಲೀಸರ ಪ್ರಕಾರ, ಈ ದುರಂತವು ಶನಿವಾರ ರಾತ್ರಿ ಸಂಭವಿಸಿದೆ. ಮೃತರನ್ನು … Continued

“ಸಚಿವನಾದ ನಂತ್ರ ನನ್ನ ಆದಾಯ ನಿಂತುಹೋಗಿದೆ” : ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ನಟ ಸುರೇಶ ಗೋಪಿ…!

ಕಣ್ಣೂರು : ಕೇಂದ್ರ ಸಚಿವ ಸುರೇಶ ಗೋಪಿ ಮತ್ತೆ ನಟನಾ ವೃತ್ತಿಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಿನಿಮಾ ವೃತ್ತಿಯನ್ನು ಮುಂದುವರಿಸಲು ಬಯಸುವುದಾಗಿ ಅವರು ತಿಳಿಸಿದ್ದಾರೆ. ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರು ಲೋಕಸಭಾ ಸಂಸದ ಹಾಗೂ ನಟರೂ ಆಗಿರುವ ಕೇಂದ್ರ ಸಚಿವ ಸುರೇಶ ಗೋಪಿ, ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರದಿಂದ ತಮ್ಮ ಆದಾಯ ಗಣನೀಯವಾಗಿ … Continued

ಆಮ್ಲೆಟ್ ತಿನ್ನುವಾಗ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

ಕಾಸರಗೋಡು : ಆಮ್ಲೆಟ್ ತಿನ್ನುವಾಗ ಗಂಟಲಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಬದಿಯಡ್ಕದ ಚುಲ್ಲಿಕ್ಕಾನ ಮೂಲದ ಪ್ರಸ್ತಕ್ತ ಬರಡ್ಕದ ನಿವಾಸಿ ವಿನ್ಸೆಂಟ್ ಕ್ರಾಸ್ತಾ (52) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಅವರು ತಮ್ಮ ಮನೆಯ ಸಮೀಪವಿರುವ ಸಣ್ಣ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಿದ್ದಾಗ ಈ ಘಟನೆ … Continued

ಕಾಸರಗೋಡು | ಮಗಳ ಮೇಲೆಯೇ ಆ್ಯಸಿಡ್ ಎರಚಿ ಪರಾರಿಯಾದ ಅಪ್ಪ…!

ಕಾಸರಗೋಡು : ಹೆಂಡತಿ ಜೊತೆ ಜಗಳಕ್ಕೆ ಸ್ವಂತ ಮಗಳ ಮೇಲೆ ಅಪ್ಪನೇ ಆ್ಯಸಿಡ್ ಎರಚಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ 10:30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಮತ್ತೊಬ್ಬ ಬಾಲಕಿಗೂ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ. ಆ್ಯಸಿಡ್ ಎರಚಿದ ಆರೋಪಿ ದಕ್ಷಿಣ ಕನ್ನಡ … Continued

‘ಬೀಡಿಸ್-ಬಿಹಾರ’ ಪೋಸ್ಟ್ ವಿವಾದ : ರಾಜೀನಾಮೆ ನೀಡಿದ ಕೇರಳ ಕಾಂಗ್ರೆಸ್ ಘಟಕದ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥ

ನವದೆಹಲಿ: ವಿವಾದಾತ್ಮಕ ಪೋಸ್ಟ್‌ ಒಂದು ವಿವಿಧ ರಾಜಕೀಯ ನಾಯಕರಿಂದ ಟೀಕೆಗೆ ಗುರಿಯಾದ ನಂತರ ಕಾಂಗ್ರೆಸ್‌ನ ಕೇರಳ ಘಟಕದ ಸಾಮಾಜಿಕ ಮಾಧ್ಯಮ ಮುಖ್ಯಸ್ಥರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕೇರಳದ ತ್ರಿತಾಲ ಕ್ಷೇತ್ರದ ಎರಡು ಬಾರಿ ಶಾಸಕರಾಗಿರುವ ಮತ್ತು ಈವರೆಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸೆಲ್‌ನ ಮುಖ್ಯಸ್ಥರಾಗಿರುವ ವಿಟಿ … Continued

ಟೆಕ್ಕಿ ಅಪಹರಿಸಿ ಹಲ್ಲೆ ನಡೆಸಿದ ಆರೋಪ ; ಖ್ಯಾತ ನಟಿ ಲಕ್ಷ್ಮಿ ಮೆನನ್, ಇತರ ಮೂವರ ವಿರುದ್ಧ ಪ್ರಕರಣ ದಾಖಲು

ಕೊಚ್ಚಿಯಲ್ಲಿ ಯುವ ಐಟಿ ಉದ್ಯೋಗಿಯನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ನಟಿ ಲಕ್ಷ್ಮಿ ಮೆನನ್ ಮತ್ತು ಅವರ ಮೂವರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ಈಗ ದೊಡ್ಡ ವಿವಾದದ ಕೇಂದ್ರಬಿಂದುವಾಗಿದ್ದಾರೆ. ನಗರ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಅವರ ಪ್ರಕಾರ, ಲಕ್ಷ್ಮಿ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಆದಾಗ್ಯೂ, ನಾಲ್ವರು ಆರೋಪಿಗಳಲ್ಲಿ ಮೂವರು ಈಗಾಗಲೇ ಪೊಲೀಸರ … Continued

ವೀಡಿಯೊ…| ವಿವಾದದ ಬಿರುಗಾಳಿ ಎಬ್ಬಿಸಿದ ಮಾಜಿ ಬಿಗ್‌ ಬಾಸ್‌ ಸ್ಪರ್ಧಿಯ ಗುರುವಾಯೂರು ದೇಗುಲದ ರೀಲ್ ; ‘ಶುದ್ಧೀಕರಣ’ ಆರಂಭ

ಪ್ರಭಾವಿ ಮತ್ತು ಮಾಜಿ ಬಿಗ್ ಬಾಸ್ ಮಲಯಾಳಂ ಸ್ಪರ್ಧಿ ಜಾಸ್ಮಿನ್ ಜಾಫರ್ ಅವರ ವೈರಲ್ ಇನ್‌ಸ್ಟಾಗ್ರಾಮ್ ರೀಲ್ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ, ಇದು ದೇವಾಲಯದ ಅಧಿಕಾರಿಗಳು ಆರು ದಿನಗಳ ಶುದ್ಧೀಕರಣ ಕಾರ್ಯ ಮಡಲು ಪ್ರೇರೇಪಿಸಿದೆ. ಜಾಸ್ಮಿನ್ ಜಾಫರ್‌ ದೇವಾಲಯದ ಪವಿತ್ರ ಕೊಳದಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಅದರಲ್ಲಿ ಅವರು ಪವಿತ್ರ … Continued