ವೀಡಿಯೊ..| ಹಿಮಪಾತದ ನಡುವೆ ಇತರರ ಜೊತೆ ಹಿಮದ ನಡುವೆ ಸಿಲುಕಿದ್ದ ವಾಹನ ತಳ್ಳಿದ ಕೇಂದ್ರ ಸಚಿವ ಕಿರಣ ರಿಜಿಜು

ನವದೆಹಲಿ/ತವಾಂಗ್: ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಶೋಂಗಾತ್ಸರ್ ಸರೋವರ ಮತ್ತು ಪಿಟಿ ತ್ಸೊ (PT Tso) ಪ್ರದೇಶದ ನಡುವೆ ಸಂಭವಿಸಿದ ಭಾರೀ ಹಿಮಪಾತದಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ರಸ್ತೆಯಲ್ಲಿ ಸಿಲುಕಿಕೊಂಡಿದ್ದ ವಾಹನವೊಂದನ್ನು ತಳ್ಳಲು ನೆರವಿಗೆ ಧಾವಿಸಿದ್ದು, ಸ್ಥಳೀಯರು ಮತ್ತು … Continued

ವೀಡಿಯೊ…| ಇದು ಕಾಶ್ಮೀರವಲ್ಲ, ರಾಜಸ್ಥಾನ…ಮರುಭೂಮಿಯಲ್ಲಿ ಎಲ್ಲೆಲ್ಲೂ ನೆಲಕ್ಕೆ ಹಿಮದ ಹಾಸು…!

ಜೈಪುರ: ಮರುಭೂಮಿ ಹಾಗೂ ಒಣಹವೆಗೆ ಹೆಸರುವಾಸಿಯಾಗಿರುವ ಹಾಗೂ ಬೇಸಿಗೆಯಲ್ಲಿ 50 ಡಿಗ್ರಿ ತಾಪಮಾನ ಇರುವ ರಾಜಸ್ಥಾನ ಕಳೆದ ಕೆಲ ದಿನಗಳಿಂದ ಕಾಶ್ಮೀರದಂತೆ ಕಾಣಲಾರಂಭಿಸಿದೆ. ರಾಜಸ್ಥಾನದಲ್ಲಿ ಭಾರಿ ಹವಾಮಾನ ಬದಲಾವಣೆ ಕಾಣಿಸಲಾರಂಭಿಸಿದೆ. ಬಿರು ಬಿಸಿಲಿಗೆ ಹೆಸರಾಗಿದ್ದ ರಾಜಸ್ಥಾನದ ಚುರು ಮತ್ತು ಸರ್ದರ್ಶಹರ್ ಸೇರಿದಂತೆ ಹಲವು ಪ್ರದೇಶಗಳು ಹಿಮದಿಂದ ಆವೃತವಾಗಿವೆ. ಮಳೆಯಿಂದಾಗಿ ವಿಪರೀತ ಆಲಿಕಲ್ಲುಗಳು ಬಿದ್ದಿದ್ದು ಆಲಿಕಲ್ಲುಗಳಿಂದ ಆವೃತವಾಗಿರುವ … Continued