ಭಾರತದಲ್ಲಿ ತುರ್ತು ಬಳಕೆಗೆ ಮಾಡರ್ನಾ ಕೋವಿಡ್‌ ಲಸಿಕೆ ಆಮದಿಗೆ ಸಿಪ್ಲಾಕ್ಕೆ ಅನುಮೋದನೆ ನೀಡಿದ ಡಿಸಿಜಿಐ

ನವದೆಹಲಿ: ಅನುಮೋದನೆ ಕೋರಿದ ಕೆಲವೇ ಗಂಟೆಗಳ ನಂತರ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಎ) ಮಂಗಳವಾರ ಸಿಪ್ಲಾಗೆ ಮಾಡರ್ನಾ ಅವರ ಕೋವಿಡ್ -19 ಲಸಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿತು. ಕೇಂದ್ರವು ಶೀಘ್ರದಲ್ಲೇ ವಿವರವಾದ ಪ್ರಕಟಣೆ ನೀಡುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಸಿಪ್ಲಾ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಔಷಧೀಯ … Continued

ಸಹಕಾರಿ ಬ್ಯಾಂಕುಗಳಿಗೆ ಮಹತ್ವದ್ದು.. ಕೋರ್ ನಿರ್ವಹಣೆ ಹೊರಗುತ್ತಿಗೆ ಮಾಡಬೇಡಿ: ಸಹಕಾರಿ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ

ಮುಂಬೈ: ನೀತಿ ನಿರೂಪಣೆ, ಆಂತರಿಕ ಲೆಕ್ಕಪರಿಶೋಧನೆ ಮತ್ತು ಅನುಸರಣೆ, ಕೆವೈಸಿ ಮಾನದಂಡಗಳ ಅನುಸರಣೆ, ಸಾಲ ಮಂಜೂರಾತಿ ಮತ್ತು ಹೂಡಿಕೆ ಬಂಡವಾಳದ ನಿರ್ವಹಣೆಯಂತಹ ಪ್ರಮುಖ ನಿರ್ವಹಣಾ ಕಾರ್ಯಗಳನ್ನು ಹೊರಗುತ್ತಿಗೆ ಮಾಡದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸಹಕಾರಿ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಸಹಕಾರಿ ಬ್ಯಾಂಕುಗಳಿಂದ ಹಣಕಾಸು ಸೇವೆಗಳ ಹೊರಗುತ್ತಿಗೆ ಅಪಾಯವನ್ನು ನಿರ್ವಹಿಸಲು ಮಾರ್ಗಸೂಚಿಗಳನ್ನು ನೀಡುವ ಕೇಂದ್ರ ಬ್ಯಾಂಕ್, … Continued

ಲಸಿಕೆ ಪಡೆಯಲು ಹಿಂಜರಿಕೆ ಬೇಡ :ಡಾ.ಅಜಿತಪ್ರಸಾದ

ಧಾರವಾಡ: ಕೋವಿಡ್ ಸಾಂಕ್ರಾಮಿಕ ರೋಗ ತಡೆಯಲು ಲಸಿಕೆ ರಾಮಬಾಣವಾಗಿದೆ. ಸಾಂಕ್ರಾಮಿಕ ರೋಗದಿಂದ ಶೈಕ್ಷಣಿಕ ಪ್ರಗತಿಗೆ ಕುಂಠಿತಗೊಂಡಿದೆ. ಶಿಕ್ಷಣ ವ್ಯವಸ್ಥೆ ಮತ್ತೆ ಮೊದಲನೆ ಸ್ಥಿತಿಗೆ ಮರಳಬೇಕಾದರೆ ಎಲ್ಲ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡು ತರಗತಿಗಳಿಗೆ ಹಾಜರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಜೆಎಸ್‌ಎಸ್ ವಿತ್ತಾಧಿಕಾರಿ ಡಾ.ಅಜಿತ ಪ್ರಸಾದ ಹೇಳಿದರು. ನಗರದ ಜೆಎಸ್‌ಎಸ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಸಿದ್ದ ಕೋವಿಡ್ ಲಸಿಕಾ … Continued

ಕೇಂದ್ರದ ನಿರ್ಧಾರಕ್ಕೆ ಪುರಾವೆ..ಆಸ್ಟ್ರಾಜೆನಿಕಾ (ಕೋವಿಶೀಲ್ಡ್‌) ಡೋಸ್‌ ನಡುವೆ 10 ತಿಂಗಳ ಅಂತರವಿದ್ದರೆ ಹೆಚ್ಚು ಆ್ಯಂಟಿಬಾಡಿ ಬೂಸ್ಟ್‌: ಆಕ್ಸ್‌ಫರ್ಡ್ ಅಧ್ಯಯನ,

ಭಾರತದ ಕೋವಿಶೀಲ್ಡ್‌ ಲಸಿಕೆಯ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಿರುವುದಕ್ಕೆ ಸಾಕಷ್ಟು ಆಕ್ಷೇಪಗಳೂ ವ್ಯಕ್ತವಾಗಿವೆ. ಹಲವರು ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದು, ಲಸಿಕೆಯ ಕೊರತೆಯಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಆದರೆ, ಕೋವಿಶೀಲ್ಡ್‌ನ ಮೂಲ ಹೆಸರಿನ ಬ್ರಿಟನ್‌ ಲಸಿಕೆ ಆಸ್ಟ್ರಾ ಜೆನಿಕಾದ ಲಸಿಕೆಯ ಡೋಸ್‌ಗಳ ನಡುವಿನ ಅಂತರದ ಬಗ್ಗೆ … Continued

ಮೊಬೈಲ್‌ ನೆಟ್‌ವರ್ಕ್‌ಗೆಂದು ಮರ ಹತ್ತಿದ ಹುಡುಗರು, ಸಿಡಿಲು ಬಡಿದು ಓರ್ವ ಸಾವು, ಮೂವರಿಗೆ ಗಾಯ

ಪಾಲ್ಘರ್‌: ಮೊಬೈಲ್‌ ನೆಟ್‌ವರ್ಕ್‌ಗಾಗಿ ಮರ ಹತ್ತಿದ ಸುಮಾರು 15 ವರ್ಷದ ಹುಡುಗನೊಬ್ಬ ಸಿಡಿಲಿನ ಬಡಿದು ಮೃತ ಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಸಂಭವಿಸಿದೆ. ದುರ್ಘಟನಯಲ್ಲಿ ಇತರ ಮೂವರು ಹುಡುಗರು ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಪಾಲ್ಘರ್‌ನ ದಹನು ತಾಲೂಕಿನ ಮಂಕಾರ್‌ಪದ ಎಂಬಲ್ಲಿ ನಾಲ್ವರು ಹುಡುಗರು ದನ ಮೇಯಿಸಲು ಬಯಲಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು … Continued

ಟ್ವಿಟರ್ ಎಂಡಿಗೆ ರಿಲೀಫ್‌ ನೀಡುವ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಉತ್ತರ ಪ್ರದೇಶ ಸರ್ಕಾರ

ಲಕ್ನೋ: ಈ ತಿಂಗಳ ಆರಂಭದಲ್ಲಿ ಗಾಜಿಯಾಬಾದ್‌ನಲ್ಲಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಬಂಧನದಿಂದ ರಕ್ಷಣೆ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತೆರಳಿದೆ. ಇದಕ್ಕೂ ಮುನ್ನ ಜೂನ್ 24 ರ ಆದೇಶದಲ್ಲಿ ಘಜಿಯಾಬಾದ್‌ನಲ್ಲಿ … Continued

ಜುಲೈ 31ರೊಳಗೆ ವಲಸಿಗರಿಗಾಗಿ ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆ ಜಾರಿಗೊಳಿಸಿ:ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ವಲಸಿಗರಿಗೆ ದೇಶಾದ್ಯಂತ ಸಬ್ಸಿಡಿ ಆಹಾರವನ್ನು ಪಡೆಯಲು ಅವಕಾಶ ನೀಡುವ ಉದ್ದೇಶದಿಂದ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆ’ ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ 31 ರ ಗಡುವನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಿಗದಿಪಡಿಸಿದೆ. ಸಾಂಕ್ರಾಮಿಕ ರೋಗದ ಅಂತ್ಯದ ವರೆಗೆ ವಲಸೆ ಕಾರ್ಮಿಕರಲ್ಲಿ ಉಚಿತ ವಿತರಣೆಗೆ ಪಡಿತರವನ್ನು ಒದಗಿಸುವಂತೆ ನ್ಯಾಯಮೂರ್ತಿ … Continued

ಎರಡಲ್ಲ.. ಮೂರು..! ಮಹಿಳೆಗೆ ನಿಮಿಷದ ಅಂತರದಲ್ಲಿ ಮೂರು ಕೋವಿಡ್ -19 ಲಸಿಕೆ ಡೋಸ್‌ ನೀಡಿದ ಆರೋಗ್ಯ ಸಿಬ್ಬಂದಿ..!

ಥಾಣೆ: ಆನಂದನಗರದ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಶುಕ್ರವಾರ ತನಗೆ ಮೂರು ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ಥಾಣೆ ಮೂಲದ 28 ವರ್ಷದ ಮಹಿಳೆ ಹೇಳಿದ್ದಾರೆ. ಗಾಬರಿಗೊಂಡ ಮಹಿಳೆ ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ (ಟಿಎಂಸಿ) ಉದ್ಯೋಗಿಯಾಗಿರುವ ಪತಿಗೆ ಈ ಘಟನೆಯನ್ನು ವಿವರಿಸಿದ ನಂತರ ತೀವ್ರ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಪತಿ ಸ್ಥಳೀಯ ಕಾರ್ಪೋರೇಟರ್ … Continued

ವಿರೂಪಗೊಳಿಸಿದ ಭಾರತದ ನಕ್ಷೆ ಪ್ರಕಟ: ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲು

ನವದೆಹಲಿ: ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರತದ ವಿಕೃತ ನಕ್ಷೆಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಜರಂಗದಳದವರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸೋಮವಾರ ಸಂಜೆ ಬುಲಂದ್‌ಶಹರ್ ಜಿಲ್ಲೆಯ ಖುರ್ಜಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ … Continued

ಜಮ್ಮು ಐಎಎಫ್ ವಾಯು ನೆಲೆಗೆ ದ್ರೋನ್‌ ದಾಳಿ: ಎನ್‌ಐಎಗೆ ತನಿಖೆ ಹೊಣೆ

ಶ್ರೀನಗರ್: ಭಾರತೀಯ ವಾಯುಸೇನೆ ನಿಯಂತ್ರಣದ ಜಮ್ಮು ವಾಯುನೆಲೆ ಮೇಲೆ ನಡೆದ ಡ್ರೋನ್ ದಾಳಿ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ಕ್ಕೆ ವಹಿಸಿದೆ. ಜೂನ್ 27ರ ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದರು. ಬೆಳಗಿನ ಜಾವ … Continued