ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿ. ಶಿಖಾ ಸೇರಿದಂತೆ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಎಎಸ್‌ ಅಧಿಕಾರಿಗಳಾದ ಸಿ. ಶಿಖಾ, ಅಜಯ್ ನಾಗಭೂಷಣ್, ಸಲ್ಮಾ ಫಾಹಿಮಾ, ಕಣಗವಲ್ಲಿ, ರಘುನಂದನ್ ಮೂರ್ತಿ, ಎಂ.ಎಸ್. ಅರ್ಚನಾ, ರಮ್ಯಾ ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿ. ಶಿಖಾ ಅವರು … Continued

ಕೊರೊನಾ ವೈರಸ್‌ ಡೆಲ್ಟಾ ರೂಪಾಂತರದ ವಿರುದ್ಧ ಭಾರತ್ ಬಯೋಟೆಕ್‌ ಕೋವಾಕ್ಸಿನ್ ಪರಿಣಾಮಕಾರಿ: ಅಮೆರಿಕದ ಉನ್ನತ ಸಂಶೋಧನಾ ಸಂಸ್ಥೆ

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವಾಕ್ಸಿನ್, ಕೊರೊನಾ ವೈರಸ್ಸಿನ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆಎಂದು ಇತ್ತೀಚೆಗೆ ಅಮೆರಿಕ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್ಐಹೆಚ್) ನಡೆಸಿದ ಅಧ್ಯಯನಗಳು ಬಹಿರಂಗಪಡಿಸಿದೆ. ಎರಡು ಅಧ್ಯಯನಗಳನ್ನು ನಡೆಸಲಾಯಿತು, ಇದರಲ್ಲಿ ಕೋವಾಕ್ಸಿನ್ ಪಡೆದ ಜನರಿಂದ ರಕ್ತದ ಸೀರಮ್ ಅನ್ನು ಸಂಗ್ರಹಿಸಿ … Continued

4 ಸಹಕಾರಿ ಬ್ಯಾಂಕುಗಳಿಗೆ ವಿತ್ತೀಯ ದಂಡ ವಿಧಿಸಿದ ಆರ್‌ಬಿಐ

ಮುಂಬೈ:ಕೆಲವು ನಿಯಂತ್ರಕ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹೈದರಾಬಾದ್ ಮೂಲದ ಆಂಧ್ರಪ್ರದೇಶ ಮಹೇಶ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್‌ಗೆ 112.50 ಲಕ್ಷ ರೂ.ಗಳ ದಂಡ ಸೇರಿದಂತೆ ನಾಲ್ಕು ಸಹಕಾರ ಬ್ಯಾಂಕ್‌ಗಳಿಗೆ ದಂಡ ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಮಂಗಳವಾರ ತಿಳಿಸಿದೆ. ಅಹಮದಾಬಾದ್‌ನ ಅಹಮದಾಬಾದ್ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌ಗೆ 62.50 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ; ಮುಂಬೈನ ಎಸ್‌ವಿಸಿ ಕೋ-ಆಪರೇಟಿವ್ ಬ್ಯಾಂಕಿಗೆ … Continued

ಭಾರತದಲ್ಲಿ ಕಡಿಮೆಯತ್ತ ದೈನಂದಿನ ಕೊರೊನಾ ಸಾವಿನ ಸಂಖ್ಯೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು ಹೊಸದಾಗಿ 45,951 ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ, ಜೊತೆಗೆ ಇದೇ ಸಮಯದಲ್ಲಿ ಸೋಂಕಿನಿಂದಾಗಿ 817 ಸಾವುಗಳು ಸಂಭವಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 60,729 ಚೇತರಿಕೆಗಳನ್ನು ಕಂಡಿದ್ದು, ಒಟ್ಟು ಚೇತರಿಕೆ 2,94,27,330 ಕ್ಕೆ ತಲುಪಿದೆ. ಭಾರತದಲ್ಲಿ ಒಟ್ಟು … Continued

ಪರೀಕ್ಷೆ, ಟ್ರ್ಯಾಕ್, ಚಿಕಿತ್ಸೆ: ಕೋವಿಡ್ ನಿರ್ವಹಣೆಗೆ 5-ಅಂಶಗಳ ಕಾರ್ಯತಂತ್ರದತ್ತ ಕೇಂದ್ರೀಕರಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಮಂಗಳವಾರ ರಾತ್ರಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪರಿಣಾಮಕಾರಿ ಕೋವಿಡ್‌ -19 ನಿರ್ವಹಣೆಗೆ ಐದು ಅಂಶಗಳ ಕಾರ್ಯತಂತ್ರದತ್ತ ಗಮನ ಹರಿಸುವಂತೆ ಕೇಳಿದೆ. ನಿರ್ಬಂಧಗಳನ್ನು ಸಡಿಲಿಸುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಮಾಪನಾಂಕದ ಮೂಲಕ ನಿರ್ಣಯಿಸಬೇಕು ಎಂದು ಕೇಂದ್ರ ಹೇಳಿದೆ. ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಪ್ರಾಂತ್ಯದ ಆಡಳಿತಗಳಿಗೆ … Continued

ಐವರು ಕೋವಿಡ್‌-19 ರೋಗಿಗಳಲ್ಲಿ ಗುದನಾಳದ ರಕ್ತಸ್ರಾವಕ್ಕೆ ಕಾರಣವಾಗುವ ಸೈಟೊಮೆಗಾಲೊ ವೈರಸ್ ಪತ್ತೆ..! ಅದರ ಕಾರಣಗಳು, ಲಕ್ಷಣಗಳು ಇಲ್ಲಿದೆ..

ಭಾರತದಲ್ಲಿ ಮೊದಲ ಬಾರಿಗೆ, ಕೋವಿಡ್‌ ಇಮ್ಯುನೊಕೊಂಪಿಟೆಂಟ್ ( immunocompetent) ರೋಗಿಗಳಲ್ಲಿ ಸೈಟೊಮೆಗಾಲೊ (Cytomegalovirus ) ವೈರಸ್ (ಸಿವಿಎಂ) ಸಂಬಂಧಿತ ಗುದನಾಳದ ರಕ್ತಸ್ರಾವದ ಐದು ಪ್ರಕರಣಗಳು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ವರದಿಯಾಗಿದೆ. ಕೋವಿಡ್ -19 ಸೊಂಕಿಗೆ ಒಳಪಟ್ಟ ನಂತರ ಈ ಎಲ್ಲ ರೋಗಿಗಳು ಈ ಸ್ಥಿತಿಯನ್ನು ಅನುಭವಿಸಿದ್ದಾರೆ. ಸರ್ ಗಂಗಾರಾಮ್ ಆಸ್ಪತ್ರೆಯ ಹಿರಿಯ ವೈದ್ಯರ ತಂಡ … Continued

ಕೋವಿಶೀಲ್ಡ್, ಕೋವಾಕ್ಸಿನ್, ಸ್ಪುಟ್ನಿಕ್ ವಿ, ಮಾಡರ್ನಾ ಲಸಿಕೆಗಳು ಗರ್ಭಿಣಿಯರಿಗೆ,ಹಾಲುಣಿಸುವ ತಾಯಂದಿರಿಗೆ ಸುರಕ್ಷಿತ: ಡಾ ವಿ.ಕೆ.ಪಾಲ್‌

ನವದೆಹಲಿ: ಸರ್ಕಾರದಿಂದ ಅಂಗೀಕರಿಸಲ್ಪಟ್ಟ ಕೋವಿಶೀಲ್ಡ್, ಕೊವಾಕ್ಸಿನ್, ಸ್ಪುಟ್ನಿಕ್ ವಿ ಮತ್ತು ಮೊಡೆರ್ನಾ ಎಂಬ ನಾಲ್ಕು ಕೋವಿಡ್ -19 ಲಸಿಕೆಗಳು ಹಾಲುಣಿಸುವ ತಾಯಂದಿರು ಮತ್ತು ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತವಾಗಿದೆ. ಅವರ ವ್ಯಾಕ್ಸಿನೇಷನ್ ಸಲಹೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಮಂಗಳವಾರ ಹೇಳಿದ್ದಾರೆ. ಲಸಿಕೆಗಳಿಗೆ ಬಂಜೆತನದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಡಾ.ವಿ.ಕೆ ಪಾಲ್ … Continued

ಜುಲೈ 19ರಿಂದ ಆಗಸ್ಟ್‌ 13ರ ವರೆಗೆ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಶಿಫಾರಸು

ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನ ಈ ವರ್ಷ ಜುಲೈ 19 ರಿಂದ ಆಗಸ್ಟ್ 13 ರವರೆಗೆ ನಡೆಸಬೇಕೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಶಿಫಾರಸು ಮಾಡಿದೆ. ದಿನಾಂಕಗಳ ಬಗ್ಗೆ ಚರ್ಚಿಸಲು ಸಿಸಿಪಿಎ ಕಳೆದ ವಾರ ಸಭೆ ಸೇರಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯ ಅಂತಿಮ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು … Continued

ಕೋಲ್ಕತ್ತಾಕ್ಕೆ ಭೇಟಿ ನೀಡಿದ ಎನ್‌ಎಚ್‌ಆರ್‌ಸಿ ತಂಡದ ಸದಸ್ಯರ ಮೇಲೆ ದಾಳಿ ಆರೋಪ; ಪೊಲೀಸ್ ದೂರು ದಾಖಲಾಗಿಲ್ಲ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾನದ ನಂತರದ ಹಿಂಸಾಚಾರದ ದೂರುಗಳನ್ನು ಪರಿಶೀಲಿಸಲು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರಚಿಸಿದ ತಂಡದ ಸದಸ್ಯ ಅತೀಫ್ ರಶೀದ್ ಅವರು ಮಂಗಳವಾರ ದಕ್ಷಿಣ ಉಪನಗರ ಕೋಲ್ಕತ್ತಾದ ಜಾದವ್‌ಪುರ ಪ್ರದೇಶಕ್ಕೆ ಭೇಟಿ ನೀಡಿದಾಗ ಗೂಂಡಾಗಳು ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ದೋಂಪರಾ … Continued

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಮಹಾರಾಷ್ಟ್ರದಲ್ಲಿನ ಕೋವಿಡ್ ಪರಿಸ್ಥಿತಿ ಮತ್ತು ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣಗಳು ವರದಿಯಾದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು,ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಮಂಗಳವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಹಾರಾಷ್ಟ್ರದಿಂದ ಆಗಮಿಸುವ ವ್ಯಕ್ತಿಗಳ ಕುರಿತು ವಿಶೇಷ ಕಣ್ಗಾವಲು ಕ್ರಮಗಳನ್ನು ಅನುಸರಿಸುವ ಸೂಚನೆಗಳನ್ನು ನೀಡಲಾಗಿದೆ. ಮಹಾರಾಷ್ಟ್ರದ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ … Continued