ತಮಿಳುನಾಡಿನಲ್ಲಿ ಭಾರೀ ಮಳೆ: ವೆಲ್ಲೂರಿನಲ್ಲಿ ಮನೆ ಕುಸಿದು ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 9 ಜನರು ಸಾವು

ಚೆನ್ನೈ: ಭಾರೀ ಮಳೆಯಿಂದಾಗಿ ಇಂದು (ಶುಕ್ರವಾರ) ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪೆರ್ನಂಪಟ್ಟು ಪ್ರದೇಶದಲ್ಲಿ ಭಾರೀ ಮಳೆಯಿಂದ ಮನೆ ಕುಸಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಜನರು ಸಾವಿಗೀಡಾದ ದುರಂತ ಘಟನೆ ನಡೆದ ವರದಿಯಾಗಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ. ಮನೆಯ … Continued

ವಂಚನೆ ಮಾಡಿದ ಆರೋಪ: ಇಬ್ಬರು ಉದ್ಯಮಿಗಳ ವಿರುದ್ಧ ದೂರು ದಾಖಲಿಸಿದ ದಕ್ಷಿಣ ಭಾರತದ ಖ್ಯಾತ ನಟಿ ಸ್ನೇಹಾ

ಚೆನ್ನೈ: : ಸ್ನೇಹಾ ಮತ್ತು ಪ್ರಸನ್ನ ತಮಿಳು-ತೆಲುಗು ಚಿತ್ರರಂಗದ ಪ್ರಸಿದ್ಧ ಜೋಡಿಗಳಲ್ಲಿ ಒಂದು. ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ಬೆಲೆಬಾಳುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ವರದಿಯ ಪ್ರಕಾರ, ಸಿಮೆಂಟ್ ಕಂಪನಿ ಹೊಂದಿರುವ ಇಬ್ಬರು ಉದ್ಯಮಿಗಳ ವಿರುದ್ಧ ಸ್ನೇಹಾ ಮತ್ತು ಪ್ರಸನ್ನ ಪೊಲೀಸ್ ದೂರು ದಾಖಲಿಸಿದ್ದಾರೆ. ಉದ್ಯಮಿಗಳು ತಮಗೆ ಮೋಸ ಮಾಡಿದ್ದಾರೆ ಎಂದು … Continued

ದೋಣಿ ಆಗಸದಲ್ಲಿ ತೇಲುತ್ತಿದೆಯೋ…? ನದಿಯಲ್ಲಿ ತೇಲುತ್ತಿದೆಯೋ…ಈ ಫೋಟೊಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಯೋ ಅಚ್ಚರಿ..!

ನವದೆಹಲಿ: ಭಾರತದಲ್ಲಿ ಹೆಚ್ಚಿನ ನದಿಗಳು ಮಲೀನಗೊಳ್ಳುತ್ತಿವೆ. ಯಮುನಾ ನದಿಯಂತೂ ವಿಷವನ್ನೇ ತುಂಬಿಕೊಂಡು ಈಗ ನೊರೆ ಕಾರಲು ಆರಂಭಿಸಿದೆ. ಇತ್ತೀಚಿಗೆ ಯಮುನಾ ನದಿ ಮಲಿನಗೊಂಡು, ಅದರ ಮೇಲೆ ವಿಷಕಾರಿ ನೊರೆ ತೇಲುತ್ತಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಈಗ ಮೇಘಾಲಯದ ಸ್ಫಟಿಕದಷ್ಟು ಶುಭ್ರವಾಗಿರುವ ನದಿಯೊಂದರ ಶುಭ್ರತೆಯ ನಿರ್ದಶಣದ ಫೋಟೊವೊಂದು ವೈರಲ್ ಆಗಿದೆ. ಇದು ನೋಡಿದರೆ ಫೋಟೊ … Continued

ಅನ್ನದಾತರ ಪ್ರತಿಭಟನೆಗೆ ಮಣಿದ ಸರ್ಕಾರ..ಮೂರು ಕೃಷಿ ಕಾನೂನಿಗಳಿಗೆ ಗುಡ್‌ ಬೈ ಹೇಳಿದ ಮೋದಿ..ರೈತರ ಹೋರಾಟದ ಘಟನಾವಳಿಗಳ ವಿವರ ಇಲ್ಲಿದೆ

ನವದೆಹಲಿ: ದೆಹಲಿ ಗಡಿಯಲ್ಲಿ ರೈತರ ಸುದೀರ್ಘ ಪ್ರತಿಭಟನೆಗೆ ಕಾರಣವಾದ ಮೂರು ಕೃಷಿ ಕಾನೂನುಗಳನ್ನು ಕೇಂದ್ರವು ಜಾರಿಗೆ ತಂದ ಒಂದು ವರ್ಷದ ನಂತರ, ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು. ಈ ಅವಧಿಯಲ್ಲಿ ರೈತರು ಜಲಫಿರಂಗಿ, ರಾಷ್ಟ್ರವ್ಯಾಪಿ ರಸ್ತೆ ತಡೆ, ಗಣರಾಜ್ಯೋತ್ಸವದಂದು ಹಿಂಸಾಚಾರ, ಸರ್ಕಾರದೊಂದಿಗೆ ಹಲವಾರು ಸುತ್ತಿನ ಮಾತುಕತೆಗಳು, ರೈಲು … Continued

ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟ್ಸಮನ್‌ ಎಬಿ ಡಿವಿಲಿಯರ್ಸ್

ಮಿ. 360 ಡಿಗ್ರಿ ಖ್ಯಾತಿಯ ಸ್ಫೋಟಕ ಬ್ಯಾಟ್ಸಮನ್‌ ಎಬಿ ಡಿವಿಲಿಯರ್ಸ್ (AB de Villiers) ಎಲ್ಲ ಮಾದರಿಯ ಕ್ರಿಕೆಟ್​ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಎಬಿಡಿ ಎಂದೇ ಖ್ಯಾತರಾದ ಅವರು ಈ ಹಿಂದೆಯೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದರು. ಆದರೆ, ಇತರೆ ದೇಶೀಯ ಟೂರ್ನಮೆಂಟ್​ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್‌) ನಲ್ಲಿ ರಾಯಲ್ … Continued

ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ರವಾನೆ ಪ್ರಕರಣ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ಟಿಮ್ ಪೈನ್ ರಾಜೀನಾಮೆ

ಹೊಬಾರ್ಟ್: ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಹಾಗೂ ಅಶ್ಲೀಲ ಚಿತ್ರವನ್ನು ಕಳುಹಿಸಿದ್ದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ತನಿಖೆಗೆ ಒಳಗಾದ ನಂತರ ಟಿಮ್ ಪೈನ್ ಅವರು ಆಸ್ಟ್ರೇಲಿಯಾದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮಹಿಳಾ ಸಹೋದ್ಯೋಗಿಗೆ ಅವರು ಅಶ್ಲೀಲ ಸಂದೇಶ ಕಳುಹಿಸಿದ ನಂತರ ಅದು ವಿವಾದಕ್ಕೆ ಕಾರಣವಾಗಿತ್ತು. ನ್ಯೂಸ್ ಕಾರ್ಪೊರೇಷನ್ ವರದಿ ಪ್ರಕಾರ, ಅನುಭವಿ ವಿಕೆಟ್ … Continued

ತಮಿಳುನಾಡಿನಲ್ಲಿ 40,000 ಬ್ರಾಹ್ಮಣ ವರಗಳಿಗೆ ವಧು ಕ್ಷಾಮ…! ಈಗ ವಧುಗಳಿಗಾಗಿ ಉತ್ತರದತ್ತ ನೋಟ..!!

ಚೆನ್ನೈ: ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ದೇಶದ ಹೃದಯ ಭಾಗದಲ್ಲಿ ಸಮುದಾಯದ 40,000 ವರಗಳಿಗೆ ವಧುಗಳನ್ನು ಹುಡುಕುವ ವಿಶೇಷ ಅಭಿಯಾನವನ್ನು ತಮಿಳುನಾಡು ಬ್ರಾಹ್ಮಣ ಸಂಘ (ಟಿಬಿಎ) ಪ್ರಾರಂಭಿಸಿದೆ…! ಕಾರಣ ತಮಿಳುನಾಡಿನಲ್ಲಿ ಸಂಭಾವ್ಯ ವಧುಗಳ ಕೊರತೆ. ತಮಿಳುನಾಡು ಬ್ರಾಹ್ಮಣ ಸಂಘ(TBA)ದ ಮಾಸಿಕ ತಮಿಳು ನಿಯತಕಾಲಿಕದ ನವೆಂಬರ್ ಸಂಚಿಕೆಯ ಪ್ರಕಾರ, ಈ ಪರಿಸ್ಥಿತಿಯು ಈಗ ಕನಿಷ್ಠ 10 … Continued

ಅನ್ನದಾತನಿಗೆ ತಲೆಬಾಗಿದ ದುರಹಂಕಾರ..: ರಾಹುಲ್‌ ಗಾಂಧಿ- ತಮ್ಮ ಹಳೆಯ ವಿಡಿಯೊ ಮರುಟ್ವೀಟ್

ನವದೆಹಲಿ: ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ರೈತರ ಸತ್ಯಾಗ್ರಹವು ದುರಹಂಕಾರವನ್ನು ಸೋಲಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ದೇಶದ ಅನ್ನದಾತರು ತಮ್ಮ ಸತ್ಯಾಗ್ರಹದಿಂದ ದುರಹಂಕಾರದ ತಲೆ ಬಗ್ಗಿಸಿದ್ದಾರೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು! ಜೈ ಹಿಂದ್” … Continued

ಸಂಸತ್ತಿನಲ್ಲಿ ಕೃಷಿ ಕಾನೂನು ರದ್ದುಪಡಿಸುವವರೆಗೂ ರೈತರ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ: ರಾಕೇಶ್ ಟಿಕಾಯತ್

ಸಂಸತ್ತಿನಲ್ಲಿ ಕೃಷಿ ಕಾನೂನು ರದ್ದುಪಡಿಸುವವರೆಗೂ ರೈತರ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ: ರಾಕೇಶ್ ಟಿಕಾಯತ್ ನವದೆಹಲಿ: ಪ್ರಧಾನಿ ಮೋದಿಯವರು ಘೋಷಣೆ ಮಾಡಿದಾಕ್ಷಣ ರೈತರ ಹೋರಾಟವನ್ನು ತಕ್ಷಣವೇ ಹಿಂಪಡೆಯುವುದಿಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಶುಕ್ರವಾರ ಹೇಳಿದ್ದಾರೆ. ಸಂಸತ್ತಿನ ಕಾರ್ಯವಿಧಾನಗಳ ನಂತರ ಕಾನೂನುಗಳನ್ನು ರದ್ದುಗೊಳಿಸಿದ ನಂತರವೇ ನಾವು ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ರೈತರ ಇತರ ಸಮಸ್ಯೆಗಳ … Continued

ಮಹತ್ವದ ಘೋಷಣೆ.. ಕೊನೆಗೂ ಮಣಿದ ಸರ್ಕಾರ: ಮೂರು ನೂತನ ಕೃಷಿ ತಿದ್ದುಪಡಿ ಕಾಯ್ದೆಗಳು ರದ್ದು-ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕೃಷಿ ಕಾನೂನುಗಳ ಕುರಿತು ಒಂದು ವರ್ಷದ ಆಂದೋಲನದ ನಂತರ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮೂರು ವಿವಾದಾತ್ಮಕ ಕಾನೂನುಗಳನ್ನು ಕೇಂದ್ರವು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು. ಪ್ರಧಾನಿ ಮೋದಿ ಕೃಷಿ ಕಾನೂನುಗಳ ಬಗ್ಗೆ “ರೈತರ ಒಂದು ವರ್ಗವನ್ನು ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ” ಎಂದು ಹೇಳಿದರು. ಈ ತಿಂಗಳ ಸಂಸತ್ … Continued