ಬೆಂಗಳೂರಿನಲ್ಲಿ ಭಾರೀ ಮಳೆ: ಇಬ್ಬರು ಕಾರ್ಮಿಕರು ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮಳೆ ಆರ್ಭಟ ಮುಂದುವರೆದಿದೆ. ನಿನ್ನೆ, ಸೋಮವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕಾರ್ಮಿಕರು ಸಾವಿಗೀಡಾದ ಬಗ್ಗೆ ವರದಿಯಾಗಿದೆ. ಉಲ್ಲಾಳ ಉಪನಗರದ ಉಪಕಾರ ಲೇಔಟ್‌ನಲ್ಲಿ ಪೈಪ್‌ ಲೈನ್ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಪೈಪ್‌ ಲೈನ್ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೂವರು … Continued

ಪ್ರವಾಸಿ ಬೋಟ್‌ ಮೇಲೆ ಜಿಗಿದು ಬಿದ್ದ ಬೃಹತ್‌ ತಿಮಿಂಗಿಲ, 4 ಪ್ರಯಾಣಿಕರಿಗೆ ಗಾಯ…ವೀಕ್ಷಿಸಿ

ಭಯಾನಕ ಘಟನೆಯೊಂದರಲ್ಲಿ, ದೈತ್ಯ ಹಂಪ್‌ಬ್ಯಾಕ್ ತಿಮಿಂಗಿಲವು ಮೆಕ್ಸಿಕೊದಲ್ಲಿ ಪ್ರವಾಸಿ ದೋಣಿಯನ್ನು ಮುರಿದು ಹಾಕಿದೆ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.ಈ ಭಯಾನಕ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕ್ಯಾಲಿಫೋರ್ನಿಯಾದ ಅಹೋಮ್‌ನ ಟೊಪೊಲೊಬಾಂಪೊ ಕೊಲ್ಲಿಯಲ್ಲಿ ಬೃಹತ್ ತಿಮಿಂಗಿಲವು ನೀರಿನಿಂದ ಜಿಗಿದು ದೋಣಿಯಲ್ಲಿ ಉಡಾಯಿಸುವುದನ್ನು ವೀಡಿಯೊ ತೋರಿಸುತ್ತದೆ. ಕ್ಲಿಪ್‌ನಲ್ಲಿ, ದೊಡ್ಡ ಸಸ್ತನಿಯು ಅದರ ಗುಣಲಕ್ಷಣಗಳಲ್ಲಿ ಒಂದಾದ ಚಮತ್ಕಾರಿಕ ಜಿಗಿತ … Continued

ಭಾರೀ ಮಳೆಗೆ ಪ್ರವಾಹ, ಭೂಕುಸಿತದಿಂದ ಕಂಗೆಟ್ಟ ಈಶಾನ್ಯ ಭಾರತ; ಅಸ್ಸಾಂ ಒಂದರಲ್ಲೇ ನಾಲ್ಕು ಲಕ್ಷ ಜನರು ಸಂತ್ರಸ್ತ..!

ಗುವಾಹತಿ: ಪ್ರವಾಹದ ನೀರು ಅಸ್ಸಾಂನ ಹೊಸ ಪ್ರದೇಶಗಳಿಗೆ ಪ್ರವೇಶಿಸುತ್ತಿದ್ದು, ಪ್ರವಾಹದಿಂದ ಅಸ್ಸಾಂನಲ್ಲಿ ಸಂತ್ರಸ್ತರ ಸಂಖ್ಯೆ ನಾಲ್ಕು ಲಕ್ಷಕ್ಕೆ ಏರಿಕೆಯಾಗಿದೆ, ಅಸ್ಸಾಂನ ಬರಾಕ್ ಕಣಿವೆ ಮತ್ತು ದಿಮಾ ಹಸಾವೊ ಜಿಲ್ಲೆ ಮತ್ತು ನೆರೆಯ ರಾಜ್ಯಗಳಾದ ತ್ರಿಪುರಾ, ಮಿಜೋರಾಂ ಮತ್ತು ಮಣಿಪುರಕ್ಕೆ ನಿರಂತರ ಮಳೆಯಿಂದ ಭೂಕುಸಿತಗಳು ಸಂಭವಿಸಿ ರೈಲು ಮತ್ತು ರಸ್ತೆ ಸಂಪರ್ಕಗಳನ್ನು ಸ್ಥಗಿತಗೊಳಿಸಿವೆ. ಅರುಣಾಚಲ ಪ್ರದೇಶ ಮತ್ತು … Continued

ಮೂಡಲಗಿ: ಸಿಡಿಲು ಬಡಿದು ಧಗಧಗನೆ ಹೊತ್ತಿ ಉರಿದ ತೆಂಗಿನ ಮರ …ವೀಕ್ಷಿಸಿ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಸಿಡಲು ಬಡಿದು ತೆಂಗಿನ ಮರ ಧಗಧಗನೆ ಹೊತ್ತಿ ಉರಿದಿದೆ. ಮಂಗಳವಾರ ಸಂಜೆ ನಂತರ ಗುಡುಗು ಸಿಡಿಲು ಅಬ್ಬರಿಸಿದೆ. ಆಗ ಇದ್ದಕ್ಕಿದ್ದಂತೆ ಭಯಂಕರ ಸಿಡಿಲು ತೆಂಗಿನ ಮರಕ್ಕೆ ಬಡಿದಿದೆ. ಅದು ಎಷ್ಟು ಪ್ರಬಲವಾಗಿತ್ತೆಂದರೆ ಹಸಿಯಾದ ತೆಂಗಿನ ಮರ ಬೆಂಕಿಯ ಕೆನ್ನಾಲಿಗೆಗೆ ಧಗಧಗನೆ ಹೊತ್ತಿ ಉರಿದಿದೆ. ಈ ದೃಶ್ಯ … Continued