ಬೆಂಗಳೂರು ಡಿ ಜೆ ಹಳ್ಳಿ ಗಲಭೆ ಪ್ರಕರಣ: ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿಯಿಂದ ದಾಳಿ ಭಯೋತ್ಪಾದನಾ ಕೃತ್ಯ ಎಂದ ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ಠಾಣೆಗಳ ಮೇಲೆ ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಬಳಸಿ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯಿದೆ (ಯುಎಪಿಎ) ಸೆಕ್ಷನ್ 15ರ ಅಡಿ ‘ಭಯೋತ್ಪಾದನಾ ಕೃತ್ಯ’ ಎನಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ಹೇಳಿದೆ. ಬೆಂಗಳೂರಿನ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪೊಲೀಸ್ ಠಾಣೆಗಳ … Continued

ರಸ್ತೆಯಲ್ಲಿ ಜಿಮ್ನಾಸ್ಟ್‌ ತರಹ ಪಲ್ಟಿ ಹೊಡೆಯುವ ಹುಡುಗನ ವೀಡಿಯೊ ಹಂಚಿಕೊಂಡ ಉದ್ಯಮಿ ಆನಂದ ಮಹೀಂದ್ರಾ: ಅದ್ಭುತ ಕೌಶಲ್ಯಕ್ಕೆ ಪ್ರಶಂಸೆ | ವೀಕ್ಷಿಸಿ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ ಹೊಸ ಪೋಸ್ಟ್‌ನಲ್ಲಿ “ಮುಂದಿನ ಪೀಳಿಗೆಯ ಪ್ರತಿಭೆ”ಯ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ ಮತ್ತು ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 17-ಸೆಕೆಂಡಿನ ವೀಡಿಯೊ ಕ್ಲಿಪ್ ರಸ್ತೆಯಲ್ಲಿ ಪಲ್ಟಿ ಹೊಡೆಯುತ್ತಿರುವ ಚಿಕ್ಕ ಹುಡುಗನದಾಗಿದೆ. ತಮ್ಮ ಪೋಸ್ಟ್‌ನಲ್ಲಿ, ಆನಂದ್ ಮಹೀಂದ್ರಾ ಅವರು ತಮಿಳುನಾಡಿನ ತಿರುನಲ್ವೇಲಿ ಬಳಿಯ ಹಳ್ಳಿಯಲ್ಲಿ ಹುಡುಗನನ್ನು ನೋಡಿದ ಅವರ ಸ್ನೇಹಿತರೊಬ್ಬರು ವೀಡಿಯೊವನ್ನು … Continued

ಮೈ ಝುಂ ಎನ್ನುವ ವೀಡಿಯೊ: ಬೈಕ್ ರಿವರ್ಸ್ ತೆಗೆದುಕೊಳ್ಳವಾಗ ಆಕಸ್ಮಿಕವಾಗಿ ಆಳ ಗುಂಡಿಗೆ ಬಿದ್ದ ವ್ಯಕ್ತಿ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಂಡಕ್ಕೆ ಬೈಕ್ ಹಿಂತೆಗೆದುಕೊಳ್ಳುವಾಗ ವ್ಯಕ್ತಿಯೊಬ್ಬ ರಸ್ತೆಯಲ್ಲಿನ ದೈತ್ಯಾಕಾರದ ಮತ್ತು ಆಳವಾದ ಗುಂಡಿಯಲ್ಲಿ ಬೈಕ್‌ ಜೊತೆಯೇ ಬಿದ್ದ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ‘ವೈ ಮೆನ್ ಲಿವ್ ಲೆಸ್’ ಎಂಬ ಹ್ಯಾಂಡಲ್‌ನಿಂದ ಭಾನುವಾರ ಟ್ವಿಟರ್‌ನಲ್ಲಿ ಈ ಕಿರು ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ. ಮೈ ಝುಂ ಎನ್ನುವ ಈ ವೀಡಿಯೊವು ತನ್ನ ಮೋಟಾರ್‌ಸೈಕಲ್‌ನಲ್ಲಿ ವ್ಯಕ್ತಿಯನ್ನು ತೋರಿಸಲು ತೆರೆದುಕೊಳ್ಳುತ್ತದೆ, ಅದು ಬಿಡುವಿಲ್ಲದ … Continued

ಗೂಂಡಾ ಶ್ರೀಕಾಂತ್ ತ್ಯಾಗಿಯ ಸಮಾಜವಾದಿ ಪಕ್ಷದ ಸಂಪರ್ಕ ಪೊಲೀಸರ ವಿಚಾರಣೆಯಿಂದ ಬಹಿರಂಗ

ನವದೆಹಲಿ: ನೋಯ್ಡಾ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ‘ಬಿಜೆಪಿ ನಾಯಕ’ ಶ್ರೀಕಾಂತ್ ತ್ಯಾಗಿ, ತಮ್ಮ ವಾಹನದ ಮೇಲಿನ ವಿವಿಐಪಿ ಸ್ಟಿಕ್ಕರ್ ಅನ್ನು ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ನೀಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ತಮ್ಮ ಕಾರಿನ ಮೇಲಿನ ಸ್ಟಿಕ್ಕರ್ ಅನ್ನು ಸ್ವಾಮಿ ಪ್ರಸಾದ್ ಮೌರ್ಯ ಒದಗಿಸಿದ್ದಾರೆ. ರಾಜ್ಯ ಲಾಂಛನವನ್ನು … Continued

ಬಿಹಾರ: ಏಳು ಪಕ್ಷಗಳ ಮಹಾಮೈತ್ರಿ ಸರ್ಕಾರದ ಸಿಎಂ ಆಗಿ ನಿತೀಶಕುಮಾರ, ಡಿಸಿಎಂ ಆಗಿ ತೇಜಸ್ವಿ ಯಾದವ್ ನಾಳೆ ಪ್ರಮಾಣ ವಚನ

ಪಾಟ್ನಾ: ಮಂಗಳವಾರ ಬಿಜೆಪಿ ಮೈತ್ರಿಯಿಂದ ಹೊರ ನಡೆದು ಆರ್‌ಜೆಡಿಯ ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷಗಳನ್ನು ಜೊತೆ ಕೈಜೋಡಿಸಿ ಹೊಸ “ಮಹಾಮೈತ್ರಿ” ಘೋಷಿಸಿದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ನಾಳೆ, ಬುಧವಾರ ಮಧ್ಯಾಹ್ನ 2 ಗಂಟೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಏಳು ಪಕ್ಷಗಳ ಮಹಾಘಟಬಂಧನ್ (ಮಹಾಮೈತ್ರಿಕೂಟ) ಕೆಲಸ ಮಾಡುತ್ತದೆ” ಎಂದು ನಿತೀಶ್ … Continued

ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ

ಮಂಗಳೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಸುಳ್ಯದ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33) ಬಂಧಿತ ಆರೋಪಿಯಾಗಿದ್ದಾನೆ. ಪ್ರವೀಣ್ ಹತ್ಯೆಯಲ್ಲಿ ಪ್ರಮುಖ ಆರೋಪಿಗಳಿಗೆ ನೆರವು ನೀಡಿದ … Continued

ಬೆಳಗಾವಿ : ಸೆರೆಯಾಗದ ಚಿರತೆ, ನಾಳೆಯೂ 21 ಶಾಲೆಗಳಿಗೆ ರಜೆ

ಬೆಳಗಾವಿ: ಬೆಳಗಾವಿಯ ಗಾಲ್ಫ್ ಮೈದಾನ ಪ್ರದೇಶದಲ್ಲಿ ಅವಿತುಕೊಂಡಿರುವ ಚಿರತೆಯ ಶೋಧ ಹಾಗೂ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದ್ದರೂ ಸೆರೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಲ ಶಾಲೆಗಳಿಗೆ ಬುಧವಾರ  ರಜೆ ಘೋಷಣೆ ಮಾಡಲಾಗಿದೆ. ನಗರ ಶಿಕ್ಷಣ ವಲಯದ 12 ಹಾಗೂ ಗ್ರಾಮೀಣ ಶಿಕ್ಷಣ ವಲಯದ‌ 9 ಶಾಲೆಗಳಿಗೆ ಬುಧವಾರ(ಆಗಸ್ಟ್‌ 10) ರಜೆಯನ್ನು ಘೋಷಿಸಲಾಗಿದೆ ಎಂದು ಸಾರ್ವಜನಿಕ … Continued

ನಿರ್ಮಾಪಕನಿಗೆ ಜೀವ ಬೆದರಿಕೆ ಪ್ರಕರಣ: ನಟ ದರ್ಶನ್‌ ವಿರುದ್ಧ ದೂರು ದಾಖಲು

ಬೆಂಗಳೂರು: ಸಿನೆಮಾ ನಿರ್ಮಾಪಕ ಭರತ್‌ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೆಂಗೇರಿ ಪೊಲೀಸ್ ಠಾಣೆ ನಟ ದರ್ಶನ್‌ ವಿರುದ್ಧ ಎನ್‌ಸಿಆರ್ ದಾಖಲಾಗಿದೆ. ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡು ಸ್ವೀಕೃತಿ ನೀಡಲಾಗಿದೆ. ಭರತ್‌ ಅವರು ದೂರು ದಾಖಲಿಸಿದ್ದಾರೆ. ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾವೊಂದನ್ನು ನಿರ್ಮಾಪಕ ಭರತ್ ಕಳೆದ … Continued

ಮದುವೆಯಾಗಿ 54 ವರ್ಷಗಳ ನಂತರ ರಾಜಸ್ತಾನದ ದಂಪತಿಗೆ ಮೊದಲ ಮಗು ಜನನ…!

ಜೈಪುರ: 54 ವರ್ಷಗಳ ದಾಂಪತ್ಯದ ನಂತರ ಸೋಮವಾರ ರಾಜಸ್ಥಾನದ ಅಲ್ವಾರ್‌ನಲ್ಲಿ 75 ವರ್ಷದ ಪುರುಷ ಮತ್ತು 70 ವರ್ಷದ ದಂಪತಿ ಮಹಿಳೆ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಇದು ರಾಜ್ಯದ ಏಕೈಕ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ. ಆದಾಗ್ಯೂ, ಐವಿಎಫ್ ತಂತ್ರಜ್ಞಾನದೊಂದಿಗೆ, ದೇಶ ಮತ್ತು ಪ್ರಪಂಚದ ಅನೇಕ ವೃದ್ಧ ದಂಪತಿಗಳು 70-80 ವರ್ಷ ವಯಸ್ಸಿನಲ್ಲೂ ಪೋಷಕರಾಗಿರುವ … Continued

ತುರ್ತು ವಾಟ್ಸಪ್ ಸಹಾಯವಾಣಿಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಜೀವ ಬೆದರಿಕೆ: ವರದಿ

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವ ಬೆದರಿಕೆಯ ವಾಟ್ಸಪ್ ಸಂದೇಶವೊಂದು ಉತ್ತರ ಪ್ರದೇಶ ಪೊಲೀಸರ ಟೆಕ್ಷ್ಟ್‌ ಸಹಾಯವಾಣಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲಕ್ನೋ ಅಧಿಕಾರಿಗಳು ಇಂದು, ಮಂಗಳವಾರ ತಿಳಿಸಿದ್ದಾರೆ. ಡಯಲ್-112 ಸಹಾಯವಾಣಿಯ ವಾಟ್ಸಪ್ ಸಂಖ್ಯೆಗೆ ಶಾಹಿದ್ ಎಂಬ ವ್ಯಕ್ತಿಯಿಂದ ಸಂದೇಶ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು … Continued