ಅಹಮದಾಬಾದ್ ವಿಮಾನ ದರಂತ | ವಿಮಾನ ಬಿದ್ದು ಹೊತ್ತಿ ಉರಿಯುತ್ತಿದ್ದ ಸ್ಥಳದಿಂದ ಬದುಕುಳಿದ ಏಕೈಕ ವ್ಯಕ್ತಿ ನಡೆದು ಬರುವ ಹೊಸ ವೀಡಿಯೊ ವೈರಲ್‌

ಗಾಂಧಿನಗರ: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ-171 ವಿಮಾನ (Air India) ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸಕುಮಾರ ರಮೇಶ ಅವರು, ವಿಮಾನ ಅಪಘಾತವಾದ ಸ್ಥಳದಿಂದ ಹೊರಬರುತ್ತಿರುವುದನ್ನು ತೋರಿಸುವ ಹೊಸ ವೀಡಿಯೊವೊಂದು ಹೊರಬಿದ್ದಿದೆ.
ಹೊತ್ತಿ ಉರಿಯುತ್ತಿರುವ ವಿಮಾನದಿಂದ ವ್ಯಕ್ತಿ ಪಾರಾಗಿ ಬಂದಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಳದ ಕ್ಯಾಂಪಸ್‌ನಿಂದ ಅವರು ಹೊರಗೆ ಹೋಗುತ್ತಿದ್ದಾಗ, ಬೆಂಕಿ ನೋಡಿ ಕಿರುಚುತ್ತಿದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಲು ಕರೆದೊಯ್ಯುತ್ತಿರುವುದು ಕಂಡುಬಂದಿದೆ.

ಅಪಘಾತದ ಅದೇ ದಿನ ಅವರು ಬದುಕಿ ಬಂದ ಮತ್ತೊಂದು ವೀಡಿಯೊ ತುಣುಕುಗಳು ಕಾಣಿಸಿಕೊಂಡಿತ್ತು, ಅಪಘಾತದ ನಂತರ ಎಲ್ಲರೂ ಸತ್ತಿದ್ದಾರೆಂದು ಭಾವಿಸಲಾಗಿದ್ದ ಸ್ಥಳದಿಂದ ಅವರು ಪವಾಡಸದೃಶವಾಗಿ ಪಾರಾಗಿ ಹೊರ ಬಂದಿದ್ದಾರೆ. ಆ ವಿಡಿಯೋದಲ್ಲಿ ಅವರು ಗುಜರಾತಿ ಭಾಷೆಯಲ್ಲಿ ಮಾತನಾಡಿದ್ದು ಕಂಡುಬಂದಿದೆ. ಜೂನ್ 12 ರಂದು ಲಂಡನ್‌ಗೆ ಹೊರಟ ಸ್ವಲ್ಪ ಸಮಯದ ನಂತರ ವಿಮಾನ ಅಪಘಾತಕ್ಕೀಡಾದ ನಂತರ AI-171 ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದರು. ವಿಮಾನದ 11A ಸೀಟಿನಲ್ಲಿ – ತುರ್ತು ನಿರ್ಗಮನದ ಪಕ್ಕದ A11 ಸೀಟಿನಲ್ಲು ಕುಳಿತಿದ್ದ ವಿಶ್ವಾಸಕುಮಾರ ರಮೇಶ , ತನ್ನ ಜೀವವನ್ನು ಉಳಿಸಿಕೊಳ್ಳಲು ಸಕಾಲದಲ್ಲಿ ವಿಮಾನದಿಂದ ಜಿಗಿದು ಹೊಬರುವಲ್ಲಿ ಯಶಸ್ವಿಯಾದರು.

ಗಾಂಧಿನಗರ: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ-171 ವಿಮಾನ (Air India) ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸಕುಮಾರ ರಮೇಶ ಅವರು, ವಿಮಾನ ಅಪಘಾತವಾದ ಸ್ಥಳದಿಂದ ಹೊರಬರುತ್ತಿರುವುದನ್ನು ತೋರಿಸುವ ಹೊಸ ವೀಡಿಯೊವೊಂದು ಹೊರಬಿದ್ದಿದೆ.
ಹೊತ್ತಿ ಉರಿಯುತ್ತಿರುವ ವಿಮಾನದಿಂದ ವ್ಯಕ್ತಿ ಪಾರಾಗಿ ಬಂದಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಳದ ಕ್ಯಾಂಪಸ್‌ನಿಂದ ಅವರು ಹೊರಗೆ ಹೋಗುತ್ತಿದ್ದಾಗ, ಬೆಂಕಿ ನೋಡಿ ಕಿರುಚುತ್ತಿದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಲು ಕರೆದೊಯ್ಯುತ್ತಿರುವುದು ಕಂಡುಬಂದಿದೆ.
ಅಪಘಾತದ ಅದೇ ದಿನ ಅವರು ಬದುಕಿ ಬಂದ ಮತ್ತೊಂದು ವೀಡಿಯೊ ತುಣುಕುಗಳು ಕಾಣಿಸಿಕೊಂಡಿತ್ತು, ಅಪಘಾತದ ನಂತರ ಎಲ್ಲರೂ ಸತ್ತಿದ್ದಾರೆಂದು ಭಾವಿಸಲಾಗಿದ್ದ ಸ್ಥಳದಿಂದ ಅವರು ಪವಾಡಸದೃಶವಾಗಿ ಪಾರಾಗಿ ಹೊರ ಬಂದಿದ್ದಾರೆ. ಆ ವಿಡಿಯೋದಲ್ಲಿ ಅವರು ಗುಜರಾತಿ ಭಾಷೆಯಲ್ಲಿ ಮಾತನಾಡಿದ್ದು ಕಂಡುಬಂದಿದೆ.
ಜೂನ್ 12 ರಂದು ಲಂಡನ್‌ಗೆ ಹೊರಟ ಸ್ವಲ್ಪ ಸಮಯದ ನಂತರ ವಿಮಾನ ಅಪಘಾತಕ್ಕೀಡಾದ ನಂತರ AI-171 ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದರು. ವಿಮಾನದ 11A ಸೀಟಿನಲ್ಲಿ – ತುರ್ತು ನಿರ್ಗಮನದ ಪಕ್ಕದ A11 ಸೀಟಿನಲ್ಲು ಕುಳಿತಿದ್ದ ವಿಶ್ವಾಸಕುಮಾರ ರಮೇಶ , ತನ್ನ ಜೀವವನ್ನು ಉಳಿಸಿಕೊಳ್ಳಲು ಸಕಾಲದಲ್ಲಿ ವಿಮಾನದಿಂದ ಜಿಗಿದು ಹೊಬರುವಲ್ಲಿ ಯಶಸ್ವಿಯಾದರು.

ನಂತರ ಆಸ್ಪತ್ರೆಯ ಹಾಸಿಗೆಯಿಂದ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಾವು ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದು, ತಮ್ಮ ಕುಟುಂಬ ನೋಡಲು ಭಾರತಕ್ಕೆ ಭೇಟಿ ಬಂದಿದ್ದೆ ಹೇಳಿದ್ದಾರೆ. ವಾಪಸ್‌ ಹೋಗಲು ತನ್ನ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದೆ . ಮೊದಲಿಗೆ, ನಾನು ಸತ್ತಿದ್ದೇನೆ ಎಂದು ಭಾವಿಸಿದ್ದೆ. ನಂತರ, ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಅರಿವಿಗೆ ಬಂತು. ನನ್ನ ಸೀಟಿನ ಬಳಿ ಎಮರ್ಜೆನ್ಸಿ ಡೋರ್‌ ನೋಡಿ ಕೂಡಲೇ ಅದನ್ನು ತೆಗೆದು ನನ್ನ ಕಾಲನ್ನು ತಳ್ಳಿ ತೆವಳುತ್ತಾ ಹೊರಬಂದೆ ಹೀಗಾಗಿ ಬಚಾವ್‌ ಆದೆ ಎಂದು ಅವರು ಹೇಳಿದ್ದರು. ನನ್ನ ಸುತ್ತಲೂ ಶವಗಳಿದ್ದವು, ನನ್ನ ಕಣ್ಣಮುಂದೆಯೇ ಕೆಲವರು ದಹಿಸಿ ಹೋದರು. ವಿಮಾನದ ತುಣುಕುಗಳಿದ್ದವು. ಯಾರೋ ನನ್ನನ್ನು ಆಂಬ್ಯುಲೆನ್ಸ್‌ಗೆ ಹಾಕಿದರು ಎಂದು ಅವರು ಹೇಳಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ | ನಾವು ಭಾರತದ ಐಪಿಎಲ್ ಫ್ಲಡ್‌ಲೈಟ್‌ ಆಫ್‌ ಮಾಡಿದ್ದೇವೆ : ವಿಚಿತ್ರ ಹೇಳಿಕೆಯಿಂದ ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ-ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement