ನವವಿವಾಹಿತೆಯೊಬ್ಬಳು ಮೊದಲ ರಾತ್ರಿಯೇ ಚಾಕು ಹಿಡಿದುಕೊಂಡು ನನ್ನನ್ನು ಮುಟ್ಟಿದರೆ 35 ತುಂಡುಗಳಾಗಿ ಕತ್ತರಿಸುವೆ ಎಂದು ಗಂಡನಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
“ನನ್ನನ್ನು ಮುಟ್ಟಿದರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸುವೆ. ನಾನು ಅಮನ್ಗೆ ಸೇರಿದವಳು” ಎಂದು ಎಚ್ಚರಿಸುತ್ತ ಪತ್ನಿ ಕೋಣೆಯ ಒಂದು ಮೂಲೆಯಲ್ಲಿ ಕುಳಿತು, ತಲೆಯ ಮುಸುಕಿನ ಕೆಳಗೆ ಹರಿತವಾದ ಚಾಕುವನ್ನು ಹಿಡಿದುಕೊಂಡು ಕುಳಿತಿದ್ದಳು. ಪ್ರಯಾಗ್ರಾಜ್ನಲ್ಲಿ ನಡೆದ ಮದುವೆಯ ರಾತ್ರಿ ಕ್ಯಾಪ್ಟನ್ ನಿಶಾದ ತಮ್ಮ ಪತ್ನಿಯಿಂದ ಈ ಮಾತು ಕೇಳಿ ದಂಗಾಗಿ ಹೋಗಿದ್ದರು. ಕ್ಯಾಪ್ಟನ್ ನಿಶಾದ್ ಏಪ್ರಿಲ್ 29 ರಂದು ಕರಾಚನಾ ದೀಹಾ ಗ್ರಾಮದ ಸಿತಾರಾ ಎಂಬವರನ್ನು ವಿವಾಹವಾಗಿದ್ದರು. ವಧು ಏಪ್ರಿಲ್ 30 ರಂದು ತನ್ನ ಅತ್ತೆಯ ಮನೆಗೆ ಬಂದರು ಮತ್ತು ಮೇ 2 ರಂದು ಅದ್ಧೂರಿ ಆರತಕ್ಷತೆ ನಡೆಯಿತು. ಸಿತಾರಾ ತನ್ನ ಮೊದಲ ರಾತ್ರಿಯಂದೇ ತನ್ನನ್ನು ಪ್ರಿಯಕರನ ಜೊತೆಗೆ ಕಳುಹಿಸುವಂತೆ ಗಂಡನಿಗೆ ಹೇಳಿದ್ದಾಳೆ. ವಿವಾಹ ಕಾರ್ಯಕ್ರಮವೆಲ್ಲ ಮುಗಿದ ನಂತರ ವಿವಾಹದ ಮೊದಲ ರಾತ್ರಿಯೇ ಭಯಾನಕ ಕತೆ ತೆರೆದುಕೊಳ್ಳಲು ಆರಂಭವಾಗಿತ್ತು.
ಪ್ರಯಾಗ್ರಾಜ್ನ ಎಡಿಎ ಕಾಲೋನಿ ಪ್ರದೇಶದ 26 ವರ್ಷದ ವರ ಒಂದು ದಿನ ಮೊದಲಷ್ಟೇ ಮದುವೆಯಾಗಿದ್ದ. ಮದುಮಗಳು ತಮ್ಮ ಮೊದಲ ರಾತ್ರಿಯೇ ತನ್ನನ್ನು 35 ತುಂಡುಗಳಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದಾಗ ನವವಿವಾಹಿತ ಕುಳಿತಲ್ಲೇ ಬೆವೆತಿದ್ದ. ನಂತರ ನಡೆದದ್ದು ಬೆದರಿಕೆ, ಭಯ ಮತ್ತು ಅವಮಾನಗಳಿಂದ ಕೂಡಿದ ಮೂರು ಭಯಾನಕ ರಾತ್ರಿಗಳು.
“ನಾನು ಕೋಣೆಗೆ ಪ್ರವೇಶಿಸಿದಾಗ, ಅವಳು ಸದ್ದಿಲ್ಲದೆ, ಮದುಮಗಳು ಸಂಪೂರ್ಣವಾಗಿ ಮುಸುಕು ಹಾಕಿಕೊಂಡು, ಚಾಕು ಹಿಡಿದುಕೊಂಡು ಕುಳಿತಿದ್ದಳು” ಎಂದು ಕ್ಯಾಪ್ಟನ್ ನಿಶಾದ ನೆನಪಿಸಿಕೊಂಡಿದ್ದಾರೆ. “ಅವಳು ನನಗೆ ಸ್ಪಷ್ಟವಾಗಿ ಹೇಳಿದಳು—’ನನ್ನನ್ನು ಮುಟ್ಟಬೇಡಿ. ನಾನು ಅಮನ್ನ ಆಸ್ತಿ. ನೀವು ಮುಟ್ಟಲು ಪ್ರಯತ್ನಿಸಿದರೆ, ನಾನು ನಿಮ್ಮನ್ನು 35 ತುಂಡುಗಳಾಗಿ ಕತ್ತರಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾಳೆ. ಇದನ್ನು ಕೇಳಿ ಕ್ಯಾಪ್ಟನ್ ನಿಶಾದ ಬೆಚ್ಚಿಬಿದ್ದರು. ಆ ಇಡೀ ರಾತ್ರಿ, ಅವಳು ಚಾಕು ಹಿಡಿದುಕೊಂಡೇ ಹಾಸಿಗೆಯ ಮೇಲೆ ಕುಳಿತಿದ್ದಳು, ನಾನು ಸೋಫಾದ ಮೇಲೆ ಕುಳಿತಿದ್ದೆ. ಇದು ಮೂರು ರಾತ್ರಿ ನಡೆಯಿತು ಎಂದು ಅವರು ಹೇಳಿಕೊಂಡಿದ್ದಾರೆ.
“ಅವಳು ಮಧ್ಯರಾತ್ರಿಯ ನಂತರವೇ ಮಲಗುತ್ತಿದ್ದಳು. ಅವಳು ನನ್ನ ನಿದ್ರೆಯಲ್ಲಿ ನನ್ನನ್ನು ಇರಿಯಬಹುದೆಂಬ ಭಯದಿಂದ ನಾನು ಎಚ್ಚರವಾಗಿರುತ್ತಿದ್ದೆ. ಅಂತಹ ಪ್ರಕರಣಗಳ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿದ್ದೆ. ನಾನು ಇನ್ನೊಂದು ಹೆಡ್ಲೈನ್ ಆಗಬಹುದು ಭಾವಿಸಿದೆ ಎಂದು ಅವರು ಹೇಳಿದ್ದಾರೆ.
ಮೇ 3 ರಂದು ಮಾನಸಿಕ ಒತ್ತಡವನ್ನು ಸಹಿಸಲಾಗದೆ, ನಿಶಾದ ತನ್ನ ತಾಯಿಯೊಂದಿಗೆ ಎಲ್ಲವನ್ನೂ ಹಂಚಿಕೊಂಡರು. ಸಿತಾರಾ ಎದುರಾದಾಗ ಮನೆಯಲ್ಲಿ ಅವ್ಯವಸ್ಥೆ ಭುಗಿಲೆದ್ದಿತು. ಎಲ್ಲರಿಗೂ ಆಘಾತವಾಗುವಂತೆ ಹಾಗೂ ಯಾವುದೇ ಹಿಂಜರಿಕೆಯಿಲ್ಲದೆ ಅವಳು, “ನಾನು ಅಮನ್ನನ್ನು ಪ್ರೀತಿಸುತ್ತೇನೆ. ಬಲವಂತ ಮಾಡಿದ್ದರಿಂದ ನಾನು ಮದುವೆಯಾಗಿದ್ದೇನೆ. ನಾನು ಅಮನ್ ಜೊತೆ ವಾಸಿಸಲು ಬಯಸುತ್ತೇನೆ – ಅವನು ಮಾತ್ರ ನನ್ನೊಂದಿಗೆ ಮದುವೆಯ ರಾತ್ರಿ ಕಳೆಯುವ ಹಕ್ಕನ್ನು ಹೊಂದಿದ್ದಾನೆ ಎಂದು ಅವಳು ಹೇಳಿದ್ದಾಳೆ.
ವರನ ತಂದೆ ಪ್ರಕಾರ, ಕುಟುಂಬವು ತಕ್ಷಣವೇ ಸಿತಾರಾಳ ಪೋಷಕರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿಸಿತು. ಮೇ 25 ರಂದು ಸ್ಥಳೀಯ ಹಿರಿಯರ ಸಮ್ಮುಖದಲ್ಲಿ ಎರಡೂ ಕುಟುಂಬಗಳ ನಡುವೆ ಔಪಚಾರಿಕ ಸಭೆ ನಡೆಯಿತು. “ಅಮನ್ನನ್ನು ಮರೆತು ಅವಳಿಗೆ ಈ ಮದುವೆಯನ್ನು ಒಪ್ಪಿಕೊಳ್ಳಲು ಹೇಳಲಾಯಿತು” ಎಂದು ಅವರು ಹೇಳಿದರು. ಅವರು ಅಕ್ಕಪಕ್ಕದವರನ್ನು ಮಧ್ಯಸ್ಥಿಕೆ ವಹಿಸಲು ಕರೆತಂದರು. ನಂತರ ತಮ್ಮ ಮಗನೊಂದಿಗೆ ಇರಲು ಒಪ್ಪಿಕೊಂಡ ನಂತರ ಲಿಖಿತ ರಾಜಿ ಮಾಡಿಕೊಳ್ಳಲಾಯಿತು ಎಂದು ಅವರು ಹೇಳಿದರು.
ಆದರೆ ಇದರ ಹೊರತಾಗಿಯೂ, ಸಿತಾರಾ ಮದುವೆಯನ್ನು ನಿರಾಕರಿಸಿದಳು ಮತ್ತು ತಾನು ಪ್ರೀತಿಸಿದ ಅಮನ್ ಬಳಿಗೆ ಕಳುಹಿಸುವಂತೆ ಪದೇ ಪದೇ ಒತ್ತಾಯಿಸುತ್ತಿದ್ದಳು ಎಂದು ಹೇಳಲಾಗಿದೆ.
ಮಧ್ಯರಾತ್ರಿ ತಪ್ಪಿಸಿಕೊಂಡಳು…
ಮೇ 30 ರ ರಾತ್ರಿ, ಸಿತಾರಾ ಅಂತಿಮವಾಗಿ ಮನೆಯಿಂದ ತಪ್ಪಿಸಿಕೊಂಡಳು. ಮುಖ್ಯ ದ್ವಾರಕ್ಕೆ ಬೀಗ ಹಾಕಿಕೊಂಡಿದ್ದರೂ ಅವಳು ಹಿಂಭಾಗದ ಗೋಡೆಯನ್ನು ಹತ್ತಿ ಮನೆಯಿಂದ ಓಡಿಹೋದಳು ಎಂದು ಹೇಳಲಾಗಿದೆ. ಮಧ್ಯರಾತ್ರಿಯ ಸುಮಾರಿಗೆ ಅವಳು ಕುಂಟುತ್ತಾ ಓಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ.
“ಅವಳ ಬಳಿ ಗೇಟ್ನ ಕೀಲಿ ಇರಲಿಲ್ಲ, ಆದ್ದರಿಂದ ಅವಳು ಗೋಡೆ ಹತ್ತಿದಳು” ಎಂದು ನವವಿವಾಹಿತನ ತಂದೆ ಹೇಳಿದರು. “ಅವಳು ನೇರವಾಗಿ ಅಮನ್ ಬಳಿಗೆ ಓಡಿಹೋದಳು. ಈಗ ನಾವು ಅವಮಾನ, ಪೊಲೀಸ್ ಠಾಣೆ ಮತ್ತು ಸಮಾಜದಿಂದ ಅಂತ್ಯವಿಲ್ಲದ ಪ್ರಶ್ನೆಗಳನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಸಿತಾರ ಅವರ ತಂದೆ ವಿದ್ಯಮಾನದಿಂದ ಬೇಸರಗೊಂಡಿದ್ದಾರೆ. “ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ. ನಾನು ಅವಳಿಗೆ ಒಳ್ಳೆಯ ಜೋಡಿಯನ್ನು ಹುಡುಕಿದೆ. ನಾವು ಅವಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆವು. ಅವಳು ಕೇಳಲಿಲ್ಲ. ಅವಳು ನಮಗೆ ಏನು ಬಿಟ್ಟು ಹೋಗಿದ್ದಾಳೆ? ಕೇವಲ ಅವಮಾನ ಮತ್ತು ನೋವು ಎಂದು ಅವರು ಹೇಳಿದ್ದಾರೆ.
ನೈನಿ ಬ್ರಿಡ್ಜ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಿಶೋರ ಗೌತಮ ಅವರ ಪ್ರಕಾರ, ಈ ವಿಷಯವು ಅಪರಾಧವಲ್ಲದ ಕುಟುಂಬ ವಿವಾದವಾಗಿ ಠಾಣೆಗೆ ಬಂದಿತು. “ಹುಡುಗನ ಕುಟುಂಬವು ಅರ್ಜಿಯನ್ನು ಸಲ್ಲಿಸಿತು ಮತ್ತು ಯಾವುದೇ ಎಫ್ಐಆರ್ ದಾಖಲಿಸಬಾರದು ಎಂದು ವಿನಂತಿಸಿತು. ಎರಡೂ ಕುಟುಂಬಗಳು ಚರ್ಚೆಯ ಮೂಲಕ ವಿಷಯವನ್ನು ಪರಿಹರಿಸಲು ಒಪ್ಪಿಕೊಂಡವು. ಅವರು ಲಿಖಿತ ಪರಸ್ಪರ ಒಪ್ಪಂದ ಮಾಡಿಕೊಂಡರು. ಇದು ಮನೆಯ ವಿಷಯವಾಗಿದ್ದರಿಂದ, ನಾವು ಅವರ ನಿರ್ಧಾರವನ್ನು ಗೌರವಿಸಿದ್ದೇವೆ” ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ