ವೀಡಿಯೊ | ಮಥುರಾ ದೇಗುಲದ ಬಳಿ ಗ್ರಾಹಕರಿಗಾಗಿ ಲಸ್ಸಿ ಮಾರಾಟಗಾರರ ನಡುವೆ ಮಣ್ಣಿನ ಕುಡಿಕೆಗಳಲ್ಲಿ ಹೊಡೆದಾಟ ; ಒಬ್ಬರಿಗೆ ಗಾಯ

ಮಥುರಾ (ಉತ್ತರ ಪ್ರದೇಶ): 2021 ರಲ್ಲಿ ಚಾಟ್ ಗಾಗಿ ನಡೆದ ಬಾಗ್‌ಪತ್ ಕದನ ನಡೆಯಿತು. ಮತ್ತು ಜುಲೈ 2025 ರಲ್ಲಿ ನಡೆದ ಮಥುರಾ ಕದನವು ಲಸ್ಸಿಗಾಗಿ ನಡೆಯಿತು. ದೇವಾಲಯ ಪಟ್ಟಣವಾದ ಮಥುರಾದಲ್ಲಿ ಗ್ರಾಹಕರನ್ನು ತಮ್ಮ ಅಂಗಡಿಗಳಿಗೆ ಸೆಳೆಯುವ ಬಗ್ಗೆ ನಡೆದ ಮಾತಿನ ಚಕಮಕಿ ಲಸ್ಸಿ ಅಂಗಡಿ ಮಾಲೀಕರ ಎರಡು ಗುಂಪುಗಳ ನಡುವೆ ಕಲ್ಲು-ದೊಣ್ಣೆಗಳಿಂದ ಹೊಡೆದಾಟಕ್ಕೆ ಕಾರಣವಾಯಿತು.
ಬಾಗ್‌ಪತ್‌ನಲ್ಲಿ, ಗ್ರಾಹಕರನ್ನು ಸೆಳೆಯಲು ಚಾಟ್ ಸ್ಟಾಲ್‌ಗಳ ನಡುವಿನ ಸ್ಪರ್ಧೆಯು ಬೀದಿ ಜಗಳಕ್ಕೆ ಕಾರಣವಾಗಿತ್ತು. ಗ್ರಾಹಕರನ್ನು ಸೆಳೆಯುವ ಬಗ್ಗೆ ನಡೆದ ವಾಗ್ವಾದವು ಪೂರ್ಣ ಪ್ರಮಾಣದ ಹೊಡೆದಾಟಕ್ಕೆ ಕಾರಣಗಿ ಮಥುರಾದಲ್ಲಿ ಪುನರಾವರ್ತನೆಯಾಯಿತು. ಬಾಗ್‌ಪತ್‌ನಲ್ಲಿ ಆಯುಧವೆಂದರೆ ಕೋಲುಗಳು. ಆದರೆ ಮಥುರಾದಲ್ಲಿ, ‘ಯೋಧರು’ ಲಸ್ಸಿಯನ್ನು ಕೊಡಲು ಬಳಸುವ ಕುಲ್ಹಾದ್‌ಗಳಿಂದ (ಮಣ್ಣಿನ ಕಪ್‌ಗಳು) ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ವೀಡಿಯೊದಲ್ಲಿ ಒಬ್ಬ ಮಹಿಳೆ ಮತ್ತು ಹದಿಹರೆಯದ ಹುಡುಗಿಯನ್ನು ಸಹ ಕಾಣಬಹುದು. ತಲೆಗೆ ಮುಸುಕಿನಿಂದ ಮುಚ್ಚಿದ ಮಹಿಳೆ, ತಮ್ಮ ವಿರೋಧಿ ಗುಂಪುಗಳನ್ನು ಗುರಿಯಾಗಿಸಿಕೊಂಡು ಕುಲ್ಹಾದ್‌ಗಳನ್ನು ಎಸೆಯುತ್ತಿದ್ದುದನ್ನು. ಹುಡುಗಿ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊಂದಲಕ್ಕೊಳಗಾದಂತೆ ತೋರುತ್ತದೆ. ಮತ್ತು ಅವಳು ನಿರ್ಧಾರ ತೆಗೆದುಕೊಳ್ಳುವ ಮೊದಲೇ ಕುಲ್ಹಾದ್ ಅವಳ ತಲೆಗೆ ಬಡಿದು ಅವಳು ಕಿರುಚುತ್ತಾ ನೆಲಕ್ಕೆ ಬೀಳುತ್ತಾಳೆ. ಹಾರಿ ಬರುತ್ತಿದ್ದ ಕುಲ್ಹಾದ್‌ಗಳಿಂದ ದೂರ ಸರಿದು ಮಹಿಳೆ ಅವಳ ಬಳಿಗೆ ಓಡುತ್ತಾಳೆ.

ಪ್ರಮುಖ ಸುದ್ದಿ :-   ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್‌ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ; ಆದರೆ ಕೆಲವರಿಗೆ ವಿನಾಯಿತಿ ಇಲ್ಲ...

ವರದಿಗಳ ಪ್ರಕಾರ, ಬರ್ಸಾನಾದ ಲಾಡ್ಲಿ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಈ ಜಗಳ ನಡೆದಿದೆ. ವೈರಲ್ ಆಗಿರುವ ವೀಡಿಯೊವನ್ನು ಪೊಲೀಸರು ಗಮನಿಸಿದ್ದಾರೆ. “ಬರ್ಸಾನಾದಲ್ಲಿ ಸುಧಾಮ ಚೌಕ ಇದೆ. ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ಎರಡು ಲಸ್ಸಿ ಅಂಗಡಿಗಳ ನಡುವೆ ಈ ಜಗಳ ಆರಂಭವಾಯಿತು. ಇದು ವಿಕೋಪಕ್ಕೆ ಹೋದ ಸಮಯದಲ್ಲಿ ಕುಲ್ಹಾದ್‌ಗಳನ್ನು ಬಳಸಿ ಹೊಡೆದಾಡಿಕೊಂಡಿದ್ದಾರೆ. ಒಬ್ಬ ಮಹಿಳೆ ಗಾಯಗೊಂಡಿದ್ದಾರೆ ಮತ್ತು ನಾವು ಅವಳನ್ನು ವೈದ್ಯಕೀಯವಾಗಿ ಪರಿಶೀಲಿಸಿದ್ದೇವೆ. ನಾವು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸುರೇಶಚಂದ್ರ ರಾವತ್ ಹೇಳಿದ್ದಾರೆ. ಮಥುರಾ ಕದನವು ಬಾಗ್‌ಪತ್ ಕದನದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ .

ಪ್ರಮುಖ ಸುದ್ದಿ :-   ನೌಕಾಪಡೆಗೆ ಐಎನ್ಎಸ್ ನಿಪುಣ್ ಸೇರ್ಪಡೆ : ಭಾರತಕ್ಕೆ ಈ ಆಳ ಸಮುದ್ರ ಡೈವಿಂಗ್ ಹಡಗುಗಳು ಏಕೆ ಬೇಕು? ಇದರ ವಿಶೇಷತೆ ಏನು?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement