ಜಮ್ಮು ಜೈಲಿಂದ ತಪ್ಪಿಸಿಕೊಳ್ಳಲು ನಡೆಸಿದ ವಿಫಲ ಯತ್ನ, ನಂತರ ಹೊಡೆತ ತಿಂದಿದ್ದನ್ನು ನೆನಪಿಸಿಕೊಂಡ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನ ಮುಖ್ಯಸ್ಥ ಮಸೂದ್ ಅಜರ್, 1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ತಾನು ಅದಕ್ಕೆ ದೊಡ್ಡ ಬೆಲೆ ತೆರಬೇಕಾಯಿತು ಎಂದು ಒಪ್ಪಿಕೊಂಡಿದ್ದಾನೆ.
ಪಾಕಿಸ್ತಾನದಲ್ಲಿ ನಡೆದ ಒಂದು ಕಾರ್ಯಕ್ರಮದ ಆಡಿಯೋ ಕ್ಲಿಪ್‌ನಲ್ಲಿ ಆತ ಜೈಲಿನಲ್ಲಿ ಸುರಂಗ ತೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾನೆ. ಆತನ ಧ್ವನಿಯು ಧ್ವನಿವರ್ಧಕದಲ್ಲಿ ಪ್ರತಿಧ್ವನಿಸುತ್ತಿದ್ದು, ಈ ಕಾರ್ಯಕ್ರಮವು ತೆರೆದ ಪ್ರದೇಶದಲ್ಲಿ ನಡೆದಂತೆ ತೋರುತ್ತಿದೆ.
2001ರ ಸಂಸತ್ ದಾಳಿ, 2008 ರ ಮುಂಬೈ ದಾಳಿ ಮತ್ತು ಇತರ ಹಲವು ಭಯೋತ್ಪಾದಕ ಕೃತ್ಯಗಳ ಸೂತ್ರಧಾರನಾಗಿರುವ ಈತ, ಭಾರತಕ್ಕೆ ಮೋಸ್ಟ್‌ ವಾಂಟೆಡ್‌ ಉಗ್ರನಾಗಿದ್ದಾನೆ.
ಆಡಿಯೋದಲ್ಲಿ, ಸುರಂಗ ತೋಡಿ ಜಮ್ಮು ಮತ್ತು ಕಾಶ್ಮೀರದ ಕೋಟ್ ಭಲ್ವಾಲ್ ಜೈಲಿನಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನವು, ಆತ ಪರಾರಿಯಾಗಲು ನಿಗದಿಪಡಿಸಿದ ದಿನದಂದು ಹೇಗೆ ವಿಫಲವಾಯಿತು ಎಂಬುದನ್ನು ಮಸೂದ್ ಅಜರ್ ನೆನಪಿಸಿಕೊಂಡಿದ್ದಾನೆ.

ಜಮ್ಮು ಪ್ರದೇಶದಲ್ಲಿರುವ ಈ ಜೈಲು, ಭಾರತವು ಬಂಧಿಸಿರುವ ಮೋಸ್ಟ್‌ ವಾಂಟೆಡ್‌ ಕೆಲವು ಭಯೋತ್ಪಾದಕರನ್ನು ಇರಿಸಿರುವ ಉನ್ನತ ಭದ್ರತಾ ಸೌಲಭ್ಯವಾಗಿದೆ.
ಆಡಿಯೋ ಕ್ಲಿಪ್‌ನಲ್ಲಿ, ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ತನಗೆ ಹೇಗೋ ಸಿಕ್ಕ ಪರಿಕರಗಳನ್ನು ಬಳಸಿ ಕೋಟ್ ಭಲ್ವಾಲ್‌ನಲ್ಲಿ ಬಹಳ ಸಮಯದಿಂದ ಸುರಂಗವನ್ನು ತೋಡುತ್ತಿದ್ದೆ ಎಂದು ಹೇಳಿದ್ದಾನೆ. ಸುರಂಗದ ಮೂಲಕ ತಪ್ಪಿಸಿಕೊಳ್ಳಲು ಆತ ನಿಗದಿಪಡಿಸಿದ ದಿನದಂದೇ, ಜೈಲು ಅಧಿಕಾರಿಗಳು ಆತನ ಈ ಕೃತ್ಯವನ್ನು ಪತ್ತೆ ಮಾಡಿದರು.
ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಕ್ಕಾಗಿ ತನ್ನನ್ನು ಮತ್ತು ಇತರ ಭಯೋತ್ಪಾದಕರನ್ನು ಥಳಿಸಿದ ಜೈಲು ಅಧಿಕಾರಿಗಳಿಗೆ ಇಂದಿಗೂ ತಾನು ಹೆದರುತ್ತೇನೆ ಎಂದು ಆತ ಹೇಳಿದ್ದಾನೆ. “ನಾನು ಪರಾರಿಯಾಗಲು ಯೋಜಿಸಿದ್ದ ಕೊನೆಯ ದಿನದಂದೇ ಅವರು ಸುರಂಗವನ್ನು ಕಂಡುಹಿಡಿದರು,” ಎಂದು ಪಾಕಿಸ್ತಾನ ಮೂಲದ ಈ ಭಯೋತ್ಪಾದಕ ಹೇಳುತ್ತಾ ಕಣ್ಣೀರು ಹಾಕಿದ್ದಾನೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ವಿಫಲವಾದ ತಪ್ಪಿಸಿಕೊಳ್ಳುವ ಪ್ರಯತ್ನದ ನಂತರ, ನಿಯಮಗಳ ಕಟ್ಟುನಿಟ್ಟಿನ ಜಾರಿ ಮತ್ತು ಉಲ್ಲಂಘನೆಗಳಿಗೆ ದೈಹಿಕ ಶಿಕ್ಷೆಯ ಕಾರಣದಿಂದಾಗಿ ಜೈಲು ತನಗೆ ಮತ್ತು ಕೆಲವು ಇತರ ಕೈದಿಗಳಿಗೆ ಕಠಿಣ ಸ್ಥಳವಾಯಿತು ಎಂದು ಮಸೂದ್ ಅಜರ್ ಆಡಿಯೋ ಕ್ಲಿಪ್‌ನಲ್ಲಿ ಹೇಳಿದ್ದಾನೆ. ತನ್ನನ್ನು ಸರಪಳಿಗಳಿಂದ ಕಟ್ಟಿಹಾಕಲಾಯಿತು ಮತ್ತು ದಿನಚರಿಯ ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ಹೇರಲಾಯಿತು ಎಂದು ಆತ ಹೇಳಿದ್ದಾನೆ.
ಭಯೋತ್ಪಾದಕನ ಈ ತಪ್ಪೊಪ್ಪಿಗೆಯಿಂ ಪಾಕಿಸ್ತಾನವು ಭಯೋತ್ಪಾದನೆಯನ್ನು ಅಧಿಕೃತ ಸರ್ಕಾರಿ ನೀತಿಯಾಗಿ ಬಳಸಿಕೊಂಡು ಭಾರತಕ್ಕೆ ಕಿರುಕುಳ ನೀಡುತ್ತಿದೆ ಎಂದು ಭಾರತ ಬಹಳ ದಿನಗಳಿಂದ ಹೇಳುತ್ತಾ ಬಂದಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ.

ಮಸೂದ್ ಅಜರ್ ಫೆಬ್ರವರಿ 1994 ರಲ್ಲಿ ನಕಲಿ ಗುರುತು ಮತ್ತು ಪೋರ್ಚುಗೀಸ್ ಪಾಸ್‌ಪೋರ್ಟ್‌ನೊಂದಿಗೆ ಭಾರತಕ್ಕೆ ಬಂದಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಹಾದ್ ಹರಡುವುದು ಮತ್ತು ಭಯೋತ್ಪಾದಕರನ್ನು ನೇಮಕ ಮಾಡುವುದು ಆತನ ಉದ್ದೇಶವಾಗಿತ್ತು. ಅದೇ ವರ್ಷ, ಆತನನ್ನು ಅನಂತನಾಗ್‌ನಲ್ಲಿ ಬಂಧಿಸಲಾಯಿತು. 1994 ರಿಂದ 1999 ರವರೆಗೆ ಆತ ಜೈಲಿನಲ್ಲಿ ಉಳಿದಿದ್ದ. ಈ ಸಮಯದಲ್ಲಿ, ಭಯೋತ್ಪಾದಕರು ಆತನನ್ನು ಮುಕ್ತಗೊಳಿಸಲು ಹಲವು ಪ್ರಯತ್ನಗಳನ್ನು ಮಾಡಿ ವಿಫಲರಾಗಿದ್ದರು.
ಆದರೆ, ಡಿಸೆಂಬರ್ 1999 ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಐಸಿ-814 ಅನ್ನು ಕಂದಹಾರಕ್ಕೆ ಹೈಜಾಕ್ ಮಾಡಿದ ಸಂದರ್ಭದಲ್ಲಿ, ಒತ್ತೆಯಾಳುಗಳ ಬಿಉಗಡೆಯ ಬದಲಿಗೆ ಸರ್ಕಾರವು ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಿತು.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

ಅದರ ನಂತರ, ಆತ ಜೆಇಎಂ ಭಯೋತ್ಪಾದಕ ಸಂಘಟನೆ ಸ್ಥಾಪಿಸಿದ. ಅಂದಿನಿಂದ ಆತ ಭಾರತದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳೊಂದಿಗೆ ಸಂಬಂಧ ಹೊಂದಿದ್ದು, ಈಗ ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್‌ ಉಗ್ರರಲ್ಲಿ ಒಬ್ಬನಾಗಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೆಇಎಂ ಭಯೋತ್ಪಾದಕರು 26 ನಾಗರಿಕರನ್ನು ಕೊಂದಿದ್ದಕ್ಕೆ ಪ್ರತಿಕ್ರಿಯೆಯಾಗಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನದೊಳಗೆ ಭಯೋತ್ಪಾದಕ ಮೂಲಸೌಕರ್ಯದ ಮೇಲೆ ಭಾರತವು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಆತನ ಕುಟುಂಬದ ಕನಿಷ್ಠ 10 ಸದಸ್ಯರು ಕೊಲ್ಲಲ್ಪಟ್ಟರು. ಈ ದಾಳಿಯಲ್ಲಿ ತಾನು “ಆಪ್ತ ಸಹಾಯಕರು” ಎಂದು ಕರೆದ ನಾಲ್ವರು ಭಯೋತ್ಪಾದಕರೂ ಸಹ ಕೊಲ್ಲಲ್ಪಟ್ಟರು ಎಂದು ಭಾರತವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ಒಂದು ದಿನದ ನಂತರ ಮಸೂದ್ ಅಜರ್ ಹೇಳಿಕೆಯಲ್ಲಿ ತಿಳಿಸಿದ್ದಾನೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement