ದೆಹಲಿಯಲ್ಲಿ ೫೦ ರೈತರ ಬಂಧನ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ರಾಜಧಾನಿಯ ಹಲವೆಡೆ ನಡೆಸಿದ ಚಕ್ಕಾ ಬಂದ್ ವೇಳೆ ಶಾಹೀದ್ ಪಾರ್ಕ್ ನಲ್ಲಿ 50 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಕಾಯ್ದೆ ವಾಪಸ್ಸಿಗೆ ಬಿಗಿಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿರುವ ರೈತರು ಶನಿವಾರ ದೇಶವ್ಯಾಪಿ ಕರೆ ನೀಡಿದ್ದ ರಸ್ತೆ ತಡೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು. ದೆಹಲಿಯ ಶಾಹಿದ್ … Continued

ಜನರಲ್ ತಿಮ್ಮಯ್ಯ ವಸ್ತುಸಂಗ್ರಹಾಲಯ ಲೋಕಾರ್ಪಣೆ

ಮಡಿಕೇರಿ :ಜನರಲ್ ಕೆ.ಎಸ್ ತಿಮಯ್ಯ ವಸ್ತುಸಂಗ್ರಹಾಲಯ ಸೇನಾಪಡೆಯ ಅತ್ಯುತ್ತಮ ವೀರ ಸೇನಾನಿಯ ಸೇವೆ ಮತ್ತು ಕೊಡುಗೆಯನ್ನು ಸಂರಕ್ಷಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು. ಶನಿವಾರ ಮಡಿಕೇರಿಯಲ್ಲಿ ಜನರಲ್ ಕೆ.ಎಸ್ ತಿಮ್ಮಯ್ಯ ವಸ್ತುಸಂಗ್ರಹಾಲಯ ‘ಸನ್ನಿಸೈಡ್’ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, .ಜನರಲ್ ತಿಮಯ್ಯ ಅವರ ನಿವಾಸ ‘ಸನ್ನಿ ಸೈಡ್’ನಲ್ಲಿರುವ ಸ್ಮರಣಿಕೆಗಳು ನಮ್ಮ ಕೆಚ್ಚೆದೆಯ ಸೇನಾಪಡೆಗಳ ವೈಶಿಷ್ಟ್ಯಗಳನ್ನು … Continued

ಫೆ.20ರ ವರೆಗೆ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ದಾಖಲಾತಿಗೆ ಸೂಚನೆ

ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ತಡವಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ತರಗತಿಗಳ ದಾಖಲಾತಿಯನ್ನು ಫೆ.20ರ ವರೆಗೆ ವಿಸ್ತರಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲಾ-ಕಾಲೇಜುಗಳು ಫೆ. 1ರಿಂದ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡಿವೆ. 9ರಿಂದ 12ನೇ ತರಗತಿವರೆಗೆ ಭೌತಿಕ ತರಗತಿಗಳು ಆರಂಭವಾಗಿದ್ದರೆ, ಉಳಿದ … Continued

ರೈತರು ಎಪಿಎಂಸಿ ಕೈಗೊಂಬೆ ಆಗುವುದು ಬೇಡ

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಇನ್ನೂ ರೈತನಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಆದರೆ ಈಗ ರೈತ ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದೇವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಬೆಂಬಲ ಬೆಲೆ ನೀಡಿದ್ದು ಮೋದಿ ಸರ್ಕಾರ. ರೈತರು ಎಪಿಎಂಸಿ ಕೈಗೊಂಬೆ ಆಗುವುದು ಬೇಡ ಎಂಬ … Continued

ಪಂಚಮಸಾಲಿಗೆ 2ಎ ಮೀಸಲು: ವರದಿ ಬಂದ ನಂತರ ಕ್ರಮ

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದುಳಿದ ವರ್ಗಗಳ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದಾರೆ. ಆಯೋಗದಿಂದ ಶಿಫಾರಸು ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು … Continued

ಸಭಾಪತಿ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಸೀರ್ ಅಹಮ್ಮದ್ ..?

ಬೆಂಗಳೂರು: ವಿಧಾನಪರಿಷತ್‍ನ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ಫೆ.೯ರಂದು ನಡೆಯವ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಹುತೇಕ ನಿಚ್ಚಳವಾಗಿದೆ. ಪ್ರತಾಪ್‍ಚಂದ್ರಶೆಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಸೋಮವಾರದಿಂದ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿದ್ದು, ಸೋಮವಾರ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಾಗಿದೆ. ಮಂಗಳವಾರ ನೂತನ ಸಭಾಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಬಹುತೇಕ ಸಂದರ್ಭಗಳಲ್ಲಿ ಸಭಾಪತಿಯವರನ್ನು ಅವಿರೋಧ ಆಯ್ಕೆ ಮಾಡುವ ಸಂಪ್ರದಾಯವಿದ್ದು, … Continued

ಹಫೀಜ್‌ ಸಯೀದ್‌, ವಟಾಲಿಗೆ ಜಾಮೀನು ರಹಿತ ವಾರಂಟ್

ನವ ದೆಹಲಿ: ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಮುಹಮ್ಮದ್ ಹಫೀಜ್ ಸಯೀದ್, ಕಾಶ್ಮೀರಿ ಉದ್ಯಮಿ ಜಹೂರ್ ಅಹ್ಮದ್ ಷಾ ವಟಾಲಿ, ಪ್ರತ್ಯೇಕತಾವಾದಿ ಅಲ್ತಾಫ್ ಅಹ್ಮದ್ ಷಾ ಅಲಿಯಾಸ್ ಫುಂಟೂಶ್ ಮತ್ತು ಯುಎಇ ಉದ್ಯಮಿ ನವಲ್ ಕಿಶೋರ್‌ ವಿರುದ್ಧ ದೆಹಲಿ ನ್ಯಾಯಾಲಯ ಶನಿವಾರ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿದೆ. ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕರಿಗೆ ಧನಸಹಾಯ ಪ್ರಕರಣದಲ್ಲಿ ಜಾರಿ … Continued

ಗ್ರೆಟ್ಟಾ ಟೂಲ್‌ಕಿಟ್‌ ಟ್ವೀಟ್‌ ಮಾಡಿದ್ದು ಬಹಳಷ್ಟನ್ನು ಬಹಿರಂಗ ಪಡಿಸಿದೆ:ಜೈಶಂಕರ

  ಟೂಲ್ಕಿಟ್ ಬಗ್ಗೆ ವಿಶೇಶಾಂಗ ಸಚಿವ ಜೈಶಂಕರ ಅವರು ಶನಿವಾರ ಪ್ರತಿಕ್ರಿಯಿಸಿದ್ದಾರೆ. ಸ್ವೀಡನ್‌ನ ಹವಾಮಾನ ಕಾರ್ಯಕರ್ತೆ ಗ್ರೆಟ್ಟಾ ಥನ್‌ಬರ್ಗ್ ಅವರು ‘ಟೂಲ್‌ಕಿಟ್’ ಅನ್ನು ಟ್ವೀಟ್ ಮಾಡಿದ ನಂತರ ಇದು ಬಹಳಷ್ಟನ್ನು ಬಹಿರಂಗಪಡಿಸಿದೆ ಎಂದು ನಾನು ಭಾವಿಸುತ್ತೇನೆ. ಇನ್ನೇನು ಹೊರಬರುತ್ತದೆ ಎಂಬುದನ್ನು ನಾವು ನೋಡಬೇಕಾಗಿದೆ” ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ರೈತರ ಪ್ರತಿಭಟನೆಯು ಅಂತಾರರಾಷ್ಟ್ರೀಯ … Continued

ಸೋಶಿಯಲ್‌‌ ಮೀಡಿಯಾದಲ್ಲಿ ಭಾರತರತ್ನ ಅಭಿಯಾನ ನಿಲ್ಲಿಸಲು ರತನ್‌ ಟಾಟಾ ಮನವಿ

ಮುಂಬೈ: ಉದ್ಯಮಿ ರತನ್‌ ಟಾಟಾ ಅವರಿಗೆ ಭಾರತ ರತ್ನ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಅಭಿಯಾನವನ್ನುನಿಲ್ಲಿಸುವಂತೆ ಕೋರಿರುವ ರತನ್‌ ಟಾಟಾ, ಯಾವುದೇ ಪ್ರಶಸ್ತಿಯ ಹಂಬಲ ತಮಗಿಲ್ಲ ಎಂದು ತಿಳಿಸಿದ್ದಾರೆ. ಹಲವು ತಿಂಗಳುಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಉದ್ಯಮಿ ರತನ್‌ ಟಾಟಾ ಅವರಿಗೆ ಭಾರತದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಅಭಿಯಾನ ನಡೆಯುತ್ತಿದೆ. ಇದಕ್ಕೆ ರತನ್ … Continued

ನೆಟ್‌ ಪಾಸಾದ ಗಿರಿಜನ ಹಾಡಿಯ ಯುವತಿ ಸೃಜನಾ

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಗರಹೊಳೆ ನಾಗಾಪುರ ಗಿರಿಜನ ಹಾಡಿಯ ಯುವತಿಯೊನ್ನರು ಯುಜಿಸಿ ನಡೆಸುವ ನೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾರೆ. ನೆಟ್‌ ಪರೀಕ್ಷೆ ಪಾಸಾದ ಮೊದಲ ಯುವತಿ ಎಂಬ ಕೀರ್ತಿಗೆ ವಿ.ಪಿ.ಸೃಜನ ಪಾತ್ರವಾಗಿದ್ದಾರೆ. ಮುಂದೆ ಐಎಎಸ್‌ ಮಾಡುವ ಗುರಿ ಈಕೆಯದು. ಹಲವು ಸವಾಲುಗಳ ಮಧ್ಯೆ ಕೂಡ ಸೃಜನ ಸಾಧನೆ ಮಾಡಿದ್ದು ವಿಶೇಷ. ೨೦೨೦ರ ಅಕ್ಟೋಬರ್‌ನಲ್ಲಿ ಸಹಾಯಕ ಪ್ರಾಧ್ಯಾಪಕರ … Continued