ಪಂಡೋರಾ ಪೇಪರ್‌ ಲೀಕ್: ಕಡಲಾಚೆಯ ಮಾಹಿತಿಯ ಅತಿದೊಡ್ಡ ಸೋರಿಕೆ ಶ್ರೀಮಂತ-ಗಣ್ಯ ವ್ಯಕ್ತಿಗಳ ಆರ್ಥಿಕ ರಹಸ್ಯಗಳು ಬಹಿರಂಗ..! ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್‌ ಅಂಬಾನಿ ಐವರು ಭಾರತೀಯರ ಹೆಸರು ..!

ನವದೆಹಲಿ: 91 ದೇಶದ 35 ಮಂದಿ ಪ್ರಭಾವಿ ವಿಶ್ವ ನಾಯಕರು, 330 ರಾಜಕಾರಣಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ರಹಸ್ಯ ಸಂಪತ್ತಿನ ಮಾಹಿತಿಯನ್ನೊಳಗೊಂಡ ಲಕ್ಷಾಂತರ ದಾಖಲೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. 117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ. ಪ್ರಭಾವಿ ವ್ಯಕ್ತಿಗಳು ವಿದೇಶದಲ್ಲಿ ನಡೆಸಿರುವ ಹೂಡಿಕೆ ಮಾಹಿತಿಯನ್ನು ಈ ದಾಖಲೆಗಳು … Continued

ಶಾಹೀನ್‌ ಚಂಡ ಮಾರುತ: ಒಮನ್‌ನಲ್ಲಿ ವಿಮಾನ ಹಾರಾಟ ಬಂದ್‌, ಯುಎಇನಲ್ಲಿ ಹೈ ಅಲರ್ಟ್‌ ಘೋಷಣೆ

ಯುಎಇ : ಶಾಹೀನ್‌ ಚಂಡಮಾರುತದ ಕಾರಣದಿಂದ ಯುಎಇನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಒಮನ್‌ನಲ್ಲಿ ಒಳಬರುವ ಹಾಗೂ ಹೊರ ಹೋಗುವ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಶಾಹೀನ್ ಚಂಡಮಾರುತವು ಭಾನುವಾರ ಓಮನ್ ರಾಜಧಾನಿ ಮಸ್ಕತ್ ಅನ್ನು 116 ಕಿಲೋಮೀಟರ್ (72 ಮೈಲಿಗಳು) ವೇಗದಲ್ಲಿ ತಲುಪುತ್ತಿದೆ. ಇದು ವರ್ಗ 1 ರ ಉಷ್ಣವಲಯದ ಚಂಡಮಾರುತವಾಗಿ ಬಲಗೊಳ್ಳುವ ನಿರೀಕ್ಷೆಯಿದೆ … Continued

ಕಾಬೂಲ್‌ ಬಾಂಬ್‌ ಸ್ಫೋಟ: ಮೃತರ ಸಂಖ್ಯೆ 12ಕ್ಕೆ ಏರಿಕೆ:32 ಜನರಿಗೆ ಗಾಯ

ಕಾಬೂಲ್(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಭಾನುವಾರ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಏರಿದೆ. ಮತ್ತು 32 ಜನರು ಗಾಯಗೊಂಡಿದ್ದಾರೆ. ತಾಲಿಬಾನ್ ವಕ್ತಾರರ ಪ್ರಕಾರ, ಸ್ಫೋಟವು ಕಾಬೂಲ್‌ನ ಮಸೀದಿಯ ಹೊರಗೆ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಅಫ್ಘಾನ್ ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸಯೀದ್ ಖೋಸ್ಟಿ ಹೇಳಿದ್ದಾರೆ. ಮಾಹಿತಿ ಮತ್ತು ಸಂಸ್ಕೃತಿಯ ಉಪ … Continued

ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಭಾನುವಾರ ಬಾಂಬ್ ಸ್ಫೋಟಿಸಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕಾಬೂಲಿನ ಈದ್ಗಾ ಮಸೀದಿಯಲ್ಲಿ ಸೇರಿದ್ದವರನ್ನು ಈ ಬಾಂಬ್ ಸ್ಫೋಟದ ಮೂಲಕ ಗುರಿಯಾಗಿಸಲಾಗಿತ್ತು. ಬಾಂಬ್ ಸ್ಫೋಟ ಸಂಭವಿಸಿದಾಗ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿತ್ತು ಎಂದು ತಾಲಿಬಾನ್ ವಕ್ತಾರ ಝಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಮೂವರು … Continued

ರೋಗಿಯ ಹೊಟ್ಟೆಯಿಂದ 1 ಕೆಜಿಗಿಂತ ಹೆಚ್ಚು ಕಬ್ಬಿಣದ ತುಂಡು-ಉಗುರು ಹೊರತೆಗೆದ ವೈದ್ಯರು..!

ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಯ ಹೊಟ್ಟೆಯಲ್ಲಿ 1 ಕೆಜಿಗಿಂತಲೂ ಹೆಚ್ಚಿನ ಉಗುರು ಮತ್ತು ಕಬ್ಬಿಣದ ತುಂಡುಗಳು ಇರುವುದು ಪತ್ತಯಾಗಿದೆ. ಇದು ಲಿಥುವೇನಿಯಾದ ಕ್ಲೈಪೆಡಾ ನಗರದಲ್ಲಿ ವರದಿಯಾಗಿದೆ. ವ್ಯಕ್ತಿಯನ್ನು ಹೊಟ್ಟೆ ನೋವಿನಿಂದ ಬಾಲ್ಟಿಕ್ ಬಂದರು ನಗರ ಕ್ಲೈಪೆಡಾ ಆಸ್ಪತ್ರೆಗೆ ದಾಖಲಾಗಿದ್ದ. ಆತ ಕುಡಿಯುವುದನ್ನು ನಿಲ್ಲಿಸಿದ ನಂತರ ಲೋಹದ ತುಂಡುಗಳನ್ನು ನುಂಗಲು ಪ್ರಾರಂಭಿಸಿದನೆಂದು ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ತೀವ್ರವಾದ … Continued

ಅಫ್ಘಾನಿಸ್ತಾನ ಗಡಿಗಳಲ್ಲಿ ತಾಲಿಬಾನಿಗಳಿಂದ ಆತ್ಮಹತ್ಯಾ ಬಾಂಬರ್‌ಗಳ ನಿಯೋಜನೆ:ವರದಿ

ಕಾಬೂಲ್: ತಾಲಿಬಾನ್ ಆತ್ಮಾಹುತಿ ಬಾಂಬರ್‌ಗಳ ವಿಶೇಷ ಬೆಟಾಲಿಯನ್ ಅನ್ನು ರಚಿಸಿದ್ದು, ಅದನ್ನು ಅಫ್ಘಾನಿಸ್ತಾನದ ಗಡಿಗಳಲ್ಲಿ ವಿಶೇಷವಾಗಿ ಬಡಕ್ಷಾನ್ ಪ್ರಾಂತ್ಯದಲ್ಲಿ ನಿಯೋಜಿಸಲಾಗುತ್ತದೆ ಎಂದು ವರದಿಗಳು ಹೇಳಿವೆ. ಪ್ರಾಂತ್ಯದ ಉಪ ಗವರ್ನರ್ ಮುಲ್ಲಾ ನಿಸಾರ್ ಅಹ್ಮದ್ ಅಹ್ಮದಿತಜಾಕಿಸ್ತಾನ್ ಮತ್ತು ಚೀನಾದ ಗಡಿಯಾಗಿರುವ ಈಶಾನ್ಯ ಪ್ರಾಂತ್ಯದ ಬಡಕ್ಷಾನಿನಲ್ಲಿ ಆತ್ಮಾಹುತಿ ಬಾಂಬರ್ ಗಳ ಬೆಟಾಲಿಯನ್ ಸೃಷ್ಟಿಯ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು … Continued

ಸಾವಿನ ನಂತರ ಭೂಮಿಯಲ್ಲೇ ಅತ್ಯಂತ ಗಿಡ್ಡ ಹಸು ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾದ ಈ ಗೋವು: ಎತ್ತರ ತಿಳಿದರೆ ಹೌಹಾರುತ್ತೀರಿ..!

ಬಾಂಗ್ಲಾದೇಶದಲ್ಲಿ ಸಂಚಲನ ಮೂಡಿಸಿದ ಅಕ್ನಿ-ಹೈ ಸೆಲೆಬ್ರಿಟಿ ಹಸು ಮರಣದ ಕೆಲವೇ ವಾರಗಳ ನಂತರ ವಿಶ್ವದ ಅತಿ ಕಡಿಮೆ ಎತ್ತರದ (ಅತಿ ಗಿಡ್ಡ) ಹಸು ಎಂದು ಮರಣೋತ್ತರ ಮನ್ನಣೆ ಗಳಿಸಿದೆ. ಹಸು ರಾಣಿ, ಕೇವಲ 50.8 ಸೆಂಟಿಮೀಟರ್ (20 ಇಂಚು) ಎತ್ತರವಿತ್ತು. ಇದು ತತಕ್ಷಣದ ಇಂಟರ್ನೆಟ್ ಸೆಲೆಬ್ರಿಟಿಯಾಯಿತು. ಢಾಕಾದ ಹೊರ ವಲಯದಲ್ಲಿದ್ದ ಇದು ಇದ್ದ ಜಮೀನಿಗೆ ಈ … Continued

ಎಂಥಾ ಲೋಕವಯ್ಯಾ…ಕುಕ್ಕರ್ ಜೊತೆ ಇಂಡೋನೇಷ್ಯಾ ಯುವಕನ ಮದುವೆ..!

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಇಂಡೋನೇಷ್ಯಾದ ಯುವಕನೊಬ್ಬತಾನು ದಿನನಿತ್ಯ ಅನ್ನ ಬೇಯಸಿಕೊಳ್ಳುವ ಮಾಡುವ ಕುಕ್ಕರ್ ಜೊತೆಯೇ ಮದುವೆಯಾಗಿದ್ದಾನೆ..! ಇದು ವಿಚಿತ್ರವಾದರೂ ಸತ್ಯ.. ಇಂಡೋನೇಷ್ಯಾದ ಯುವಕ ಉದ್ಯೋಗದ ನಿಮಿತ್ತ ಮನೆಯಿಂದ ದೂರವಾಗಿ ಬೇರೆ ಊರಿನಲ್ಲಿ ಇದ್ದ. ಆಗ ತಾನೇ ಅಡುಗೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು ಹೀಗಾಗಿ, ಆತ ಅಡುಗೆ ಸಾಮಾನುಗಳನ್ನು ಖರೀದಿಸಿದ್ದ. ಅದರಲ್ಲಿ ಕುಕ್ಕರ್ … Continued

ಪಾಕಿಸ್ತಾನಕ್ಕೆ ಸಂಕಷ್ಟ..?: ಅಫ್ಘಾನಿಸ್ತಾನದ ತಾಲಿಬಾನ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರದ ಮೌಲ್ಯಮಾಪನದ ಮಸೂದೆ ಅಮೆರಿಕದ ಸೆನೆಟ್ಟಿನಲ್ಲಿ ಮಂಡನೆ..!

ಕಾಬೂಲ್ ಪತನದ ಮೊದಲು ಮತ್ತು ನಂತರ ಅಫ್ಘಾನಿಸ್ತಾನದಲ್ಲಿ ಮತ್ತು ಪಂಜಶೀರ್ ಕಣಿವೆಯಲ್ಲಿ ತಾಲಿಬಾನ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ನಿರ್ಣಯಿಸಲು ಇಪ್ಪತ್ತೆರಡು ಅಮೆರಿಕ ಸೆನೆಟರ್‌ಗಳು ಮಸೂದೆಯೊಂದನ್ನು ಸೆನೆಟ್ ನಲ್ಲಿ ಮಂಡಿಸಿದ್ದಾರೆ. ಸೆನೆಟರ್ ವಿದೇಶಿ ಸಂಬಂಧಗಳ ಸಮಿತಿಯ ಶ್ರೇಯಾಂಕ ಸದಸ್ಯ ಸೆನೆಟರ್ ಜಿಮ್ ರಿಶ್ ಮತ್ತು ಇತರ ರಿಪಬ್ಲಿಕನ್ನರು ಸೋಮವಾರ ಅಫಘಾನಿಸ್ತಾನ ಭಯೋತ್ಪಾದನೆ ನಿಗ್ರಹ, ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ … Continued

ಇನ್ನೂ ಮುಗಿದಿಲ್ಲ ಅಫ್ಘನ್‌ ಆಟ..:ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದಿಂದ ಸಲೇಹ್ ನೇತೃತ್ವದ ಗಡಿಪಾರು ಸರ್ಕಾರ ರಚನೆಯ ಘೋಷಣೆ..!

ನವದೆಹಲಿ: ಇತ್ತೀಚಿನ ಬೆಳವಣಿಗೆಯಲ್ಲಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ಮಾಜಿ ಅಧಿಕಾರಿಗಳು, ಅಫ್ಘಾನಿಸ್ತಾನದ ಇಸ್ಲಾಮಿಕ್ ಗಣರಾಜ್ಯದಿಂದ  ಅಮರುಲ್ಲಾ ಸಲೇಹ್ ನೇತೃತ್ವದ ಹೊಸ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದ್ದಾರೆ..! ಅಶ್ರಫ್ ಘನಿ ಆಡಳಿತದ ಮೊದಲ ಉಪಾಧ್ಯಕ್ಷ, ಸಲೇಹ್ ಘಾನಿಯ ಅನುಪಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರು. ಅಮ್ರುಲ್ಲಾ ಸಲೇಹ್ ನೇತೃತ್ವದ ಗಡಿಪಾರು ಸರ್ಕಾರವು ಅಫ್ಘಾನಿಸ್ತಾನದ ಏಕೈಕ “ಕಾನೂನುಬದ್ಧ … Continued