ಕೋ-ವಿನ್ ಅಪ್ಲಿಕೇಶನ್ ನವೀಕರಿಸಲು ಫೆ.೨೭, ೨೮ರಂದು ಕೊವಿಡ್‌ ವ್ಯಾಕ್ಸಿನೇಷನ್ ಇಲ್ಲ

ಭಾರತದಲ್ಲಿ ಚುಚ್ಚುಮದ್ದಿನ ಪ್ರಮಾಣ ನಿದಾನಗತಿಯಲ್ಲಿದೆ ಎಂಬ ಟೀಕೆಗಳ ಮಧ್ಯಯೇ ಫೆ.೨೭ ಹಾಗೂ ೨೮ರಂದು ಎರಡು ದಿನಗಳು ಲಸಿಕೆ ಡ್ರೈವ್‌ಗೆ ವಿರಾಮ ಬೀಳಲಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಫೆ.೨೭ ಹಾಗೂ ೨೮ರಂದು (ಶನಿವಾರ ಮತ್ತು ಭಾನುವಾರ) ಕೊವಿಡ್‌ ವ್ಯಾಕ್ಸಿನ್‌ ಅವಧಿಗಳನು ನಿಗದಿ ಪಡಿಸಲಾಗುವುದಿಲ್ಲ ಎಂದು ಶುಕ್ರವಾರ ಪ್ರಕಟಣೆ ಮೂಲಕ ತಿಳಿಸಿದೆ. ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ … Continued

ಕಾವೇರಿ ಹೆಚ್ಚುವರಿ ನೀರು ಬಳಕೆಗೆ ತಮಿಳುನಾಡು ಹೊಸ ಯೋಜನೆ: ಬೊಮ್ಮಾಯಿ ಖಂಡನೆ

ಕಾವೇರಿ ನದಿಯ ಹೆಚ್ಚುವರಿ ನೀರು ಹಂಚಿಕೆಯಾಗದಿದ್ದರೂ ಅದರ ಬಳಕೆಗೆ ತಮಿಳುನಾಡು ಯೋಜನೆ ರೂಪಿಸಿರುವುದು ಖಂಡನೀಯ ಎಂದು ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ತಮಿಳುನಾಡು ಸರಕಾರದ ಯೋಜನೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ತಮಿಳುನಾಡು ಸರಕಾರ ಕಾವೇರಿ ನದಿಯ ಹೆಚ್ಚುವರಿ ೪೫ ಟಿಎಂಸಿ ನೀರು ಬಳಕೆಯ ಯೋಜನೆಗೆ ಅಡಿಗಲ್ಲು ಹಾಕಿದೆ. ಮುಂದೆ ರಾಜ್ಯ ಯಾವ ಕ್ರಮ … Continued

ತುಮಕೂರು ಮೇಯರ್‌ ಚುನಾವಣೆ: ಬಿಜೆಪಿ ಜೊತೆ ಕೈಜೋಡಿಸಿ ಮತ್ತೆ ಕಾಂಗ್ರೆಸ್‌ಗೆ ಶಾಕ್‌ ನೀಡಿದ ಜೆಡಿಎಸ್‌…!

ತುಮಕೂರು:ಬಿಜೆಪಿ ಹಾಗೂ ಕಾಂಗ್ರೆಸ್‌ ಜೊತೆ ಜೆಡಿಎಸ್‌ನ ಸಂಗೀತ ಖುರ್ಚಿ ಆಟ ಮುಂದುವರಿದೆ. ಎರಡು ದಿನಗಳ ಹಿಂದೇ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆ ವಿಚಾರದಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಜೊತೆ ಕೈಜೋಡಿಸಿ ಬಿಜೆಪಿಗೆ ಶಾಕ್‌ ನೀಡಿದ್ದ ಜೆಡಿಎಸ್‌ ಶುಕ್ರವಾರ ತುಮಕೂರು ಪಾಲಿಕೆಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿ ಮತ್ತೆ ಕಾಂಗ್ರೆಸ್‌ಗೆ ಶಾಕ್‌ ನೀಡಿದೆ..!! ಮೇಯರ್‌ ಹಾಗೂ … Continued

ಬೀದರ್:‌ ಅನಧಿಕೃತ ಸ್ಫೋಟಕಗಳ ಸಂಗ್ರಹ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಅನಧಿಕೃತ ಸ್ಫೋಟಕಗಳನ್ನು ಅಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಬೀದರ್‌ ತಾಲೂಕಿನ ಸುಲ್ತಾನಪುರ ಶಿವಾರದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿ.ಕೆ.ಕನ್ಸ್ಟ್ರಕ್ಷನ್‌ ಕಂಪೆನಿಯ ಮಾಲೀಕ, ಟಿಪ್ಪರ್‌ ಮಾಲಿಕ ಯಾದಗಿರಿಯ ಭೈರಾಪುರ ತಾಂಡಾದ ಶಂಕರ ಗೋವಿಂದ ಚವ್ಹಾಣ್‌, ವಿಜಯಪುರದ ಸಿಂದಗಿಯ ಟಿಪ್ಪರ್‌ ಚಾಲಕ ಮಹಾದೇವ್‌ ಪಾಂಡು ರಾಠೋಡ್‌, ಕಂಪೆನಿಯ ಮ್ಯಾನೇಜರ್‌ ಸೂರ‍್ಯಕಾಂತ ಗಣಪತಿ ಹೆಡಗಾಪುರ ವಿರುದ್ಧ ಬೀದರ್‌ ಗ್ರಾಮೀಣ ಪೊಲೀಸ್‌ … Continued

ರಾಜ್ಯದಲ್ಲಿ ಪಿಎಫ್‌ಐ-ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಲಿಂಬಾವಳಿ ಒತ್ತಾಯ

ಬೆಂಗಳೂರು: ಡಿಜೆ-ಕೆಜಿಹಳ್ಳಿ ಗಲಭೆ ಮತ್ತು ಸಂಘರ್ಷಕ್ಕೆ ಕಾರಣಕರ್ತ ಸಂಘಟನೆಗಳಾದ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಪಿಎಫ್‍ಐ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ರಾಜ್ಯ ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ. ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದಆಗಸ್ಟ್ 11 ರಂದು ಕೆ.ಜೆ … Continued

ಫೆ.೨೬ರಂದು ಲಾರಿ ಮುಷ್ಕರ, ನಿಂತಲ್ಲೇ ನಿಲ್ಲುವ ೬ ಲಕ್ಷ ಲಾರಿಗಳು

ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿಫೆ,೨೬ರಂದು ಲಾರಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ,ಇಂಧನ ದರ, ಟೋಲ್, ವಿಮೆ ಹೆಚ್ಚಳದಿಂದ ಟ್ರಕ್ಕಿಂಗ್ ಉದ್ಯಮದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದರು. ಸ್ಕ್ರಾಪಿಂಗ್ ನೀತಿ, ಇ-ವೇ ಬಿಲ್, ಹಸಿರು ತೆರಿಗೆ ಹೆಚ್ಚಳ, ಬಿಎಸ್6 … Continued

ಯತ್ನಾಳ ಪ್ರಖರ ಹಿಂದುತ್ವವಾದಿ: ಸಚಿವ ಈಶ್ವರಪ್ಪ

ಕಾಂಗ್ರೆಸ್‌ ಹಾಗೂ ಮುಸ್ಲಿಂ ಲೀಗ್‌ ಹೊರತುಪಡಿಸಿ ಯಾವುದೇ ಪಕ್ಷಗಳೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಬಿಜೆಪಿಯಲ್ಲಿ ಮಡಿವಂತಿಕೆ ಎಂಬುದಿಲ್ಲ, ಆದರೆ ಕಾಂಗ್ರೆಸ್‌ ದೇಶವನ್ನು ದಿವಾಳಿ ಮಾಡಿದ ಪಕ್ಷವಾಗಿದ್ದರೆ, ಮುಸ್ಲಿಂ ಲೀಗ್‌ ಪಕ್ಷ ದೇಶ ವಿರೋಧಿ ಪಕ್ಷವಾಗಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಜೆಡಿಎಸ್‌ ಬಿಜೆಪಿಗೆ ಕೈಕೊಟ್ಟಿದೆ. ಜೆಡಿಎಸ್‌ ಕೈಕೊಡುವುದರಲ್ಲಿ … Continued

ನೂತನ ವಿಜಯನಗರ ಜಿಲ್ಲೆಗೂ ೩೭೧ ಜೆ ಸೌಲಭ್ಯ:ಸರ್ಕಾರ ಆದೇಶ

ನೂತನ ವಿಜಯನಗರ ಜಿಲ್ಲೆಗೆ ಸಂವಿಧಾನದ 371 ಜೆ ವಿಧಿ ಅಡಿ ಎಲ್ಲ ಸವಲತ್ತು ಸಿಗುವಂತೆ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371 ಜೆ ವಿಧಿ ಅಡಿ ಸಿಗುವ ಸವಲತ್ತುಗಳು ನೂತನ ವಿಜಯನಗರ ಜಿಲ್ಲೆಗೂ ಸಿಗಲಿದೆ. ವಿಧಿಯಲ್ಲಿ ಹಲವು ತಿದ್ದುಪಡಿಗಳನ್ನೂ ರಾಜ್ಯ ಸರಕಾರ ಮಾಡಿದೆ. ಪ್ಯಾರಾ 2 (ಇ)ನಲ್ಲಿ ‘ಮತ್ತು … Continued

ಆರೋಪ-ಪ್ರತ್ಯಾರೋಪ ಬಿಟ್ಟು ಪಂಚಮಸಾಲಿ ಸಮಾಜ ೨ಎ ಸೇರ್ಪಡೆಗೆ ಒಂದಾಗಿ

ಬೆಂಗಳೂರು:ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬಿಟ್ಟು ಸಮುದಾಯದ ಹಿತಕ್ಕಾಗಿ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ಪಕ್ಷಾತೀತವಾಗಿ ಹೋರಾಡಬೇಕೆಂದು ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಒತ್ತಾಯಿಸಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ದಿಂಡೂರು, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ನಮ್ಮಲ್ಲಿ ಒಡಕು ಮೂಡುವುದು ಸರಿಯಲ್ಲ. ಸಮುದಾಯದ ಹಿತಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು … Continued

ರಾಯಚೂರು ವಿವಿ ಕ್ಯಾಂಪಸ್‌ ನಿರ್ಮಾಣಕ್ಕೆ ೬೦೦ ಕೋಟಿ ರೂ. ಬೇಡಿಕೆ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿಶ್ವವಿದ್ಯಾಲಯ ಸಮಗ್ರ ಕ್ಯಾಂಪಸ್‌ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ೬೦೦ ಕೋಟಿ ರೂ. ಅನುದಾನ ಕೋರಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಕುಲಪತಿ ಪ್ರೊ. ಹರೀಶ ರಾಮಸ್ವಾಮಿ ಹೇಳಿದರು. ಕ್ಯಾಂಪಸ್‌ ನಿರ್ಮಾಣದ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಕುಲಪತಿಯಾಗಿ ನೇಮಕಗೊಂಡ ೧೦೦ ದಿನಗಳಲ್ಲಿ ಸಾಕಷ್ಟು ಕೆಲಸಗಳಾಗಿವೆ. ಎಲ್ಲರಿಂದ … Continued