ವಿಶ್ವದ ಮೊದಲ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್‌ ಬಿಡುಗಡೆ

ನವದೆಹಲಿ : ಭಾರತದಲ್ಲೇ ತಯಾರಾದ ವಿಶ್ವದ ಮೊದಲ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್‌ ಅನ್ನು ಭಾರತ್ ಬಯೋಟೆಕ್ ಸಂಸ್ಥೆ ಗುರುವಾರ ಬಿಡುಗಡೆಗೊಳಿಸಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಲಸಿಕೆಯನ್ನು ಬಿಡುಗಡೆ ಮಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತೀ ಡೋಸ್‌ಗೆ 325 ರೂ.ಗಳಿಗೆ ಲಸಿಕೆ … Continued

ವಿವಾದ-ನಿಷೇಧದ ಮಧ್ಯೆ, ಕೇರಳ ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳದ ಕಾಂಗ್ರೆಸ್ ಘಟಕವು ಇಂದು, ಗುರುವಾರ ತಿರುವನಂತಪುರದಲ್ಲಿ ಪ್ರದರ್ಶಿಸಿತು. ಆದರೆ ಕೇಂದ್ರ ಸರ್ಕಾರವು ಭಾರತದಲ್ಲಿ ಅದನ್ನು ಸುಳ್ಳು ಮತ್ತು ಪ್ರೇರಿತ “ಪ್ರಚಾರ” ಎಂದು ಹೇಳಿ ನಿಷೇಧಿಸಿದೆ. ಬಿಬಿಸಿಯ ಎರಡು ಭಾಗಗಳ ಸಾಕ್ಷ್ಯಚಿತ್ರವು 2002 ರ ಗುಜರಾತ್ ಗಲಭೆಗಳು ಮತ್ತು ಪ್ರಧಾನಿ ಮೋದಿಯವರು ಗುಜರಾತ್‌ … Continued

ದೆಹಲಿಯ ಮೇಯರ್ ಚುನಾವಣೆ: ಸುಪ್ರೀಂ ಕೋರ್ಟ್‌ ಮೊರೆ ಹೋದ ಎಎಪಿಯ ಶೆಲ್ಲಿ ಒಬೆರಾಯ್

ನವದೆಹಲಿ : ಆಮ್ ಆದ್ಮಿ ಪಕ್ಷದ (ಎಎಪಿ) ದೆಹಲಿ ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು ಗುರುವಾರ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದು, ಪೌರ ಸಂಸ್ಥೆಯ ಉನ್ನತ ಹುದ್ದೆಗೆ ಚುನಾವಣೆಯನ್ನು “ಸಮಯಕ್ಕೆ ಅನುಗುಣವಾಗಿ” ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ. 10 ನಾಮನಿರ್ದೇಶಿತ ಕೌನ್ಸಿಲರ್‌ಗಳಿಗೆ ಮತದಾನ ಮಾಡಲು ಅವಕಾಶ ನೀಡದಂತೆ … Continued

ನಾನ್ಯಾಕೆ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷಿಸಬಾರದು? : ಮಾಧ್ಯಮದವರ ಪ್ರಶ್ನೆಗೆ ಕಮಲ್‌ ಹಾಸನ್‌

ಚೆನ್ನೈ: ಮಕ್ಕಳ ನಿಧಿ ಮೈಯಂ ಎಂಬ ಪಕ್ಷ ಸ್ಥಾಪಿಸಿ ತಮಿಳುನಾಡಿನ ರಾಜಕೀಯದಲ್ಲಿ ಸಕ್ರಿಯವಾಗಿರುವ ನಟ, ರಾಜಕಾರಣಿ ಕಮಲ್‌ ಹಾಸನ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರಬಹುದು ಎಂಬ ಊಹಾಪೋಹ ಸೃಷ್ಟಿಯಾಗಿದೆ. ನಾನ್ಯಾಕೆ ಕಾಂಗ್ರೆಸ್‌ನಿಂದ ಲೋಕಸಭಾ ಟಿಕೆಟ್‌ ಅನ್ನು ನಿರೀಕ್ಷಿಸಬಾರದು ಎಂದು ಕಮಲ್‌ ಹಾಸನ್‌ ಹೇಳಿರುವುದು ಈಗ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ತಮಿಳುನಾಡಿನ ಪೂರ್ವ ಈರೋಡ್‌ ವಿಧಾನಸಭಾ … Continued

ಗೋವಾದಲ್ಲಿ ನಡೆಯುವ ಉನ್ನತ ಮಟ್ಟದ ಎಸ್‌ಸಿಒ ಸಭೆಗೆ ಪಾಕಿಸ್ತಾನ ಪ್ರಧಾನಿಗೆ ಆಹ್ವಾನಿಸಲಿರುವ ಭಾರತ

ನವದೆಹಲಿ: ಈ ವರ್ಷದ ಮೇನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಗೆ ಭಾರತವು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಆಹ್ವಾನಿಸಲಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಮತ್ತು ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಅವರಿಗೆ ಗೋವಾದಲ್ಲಿ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಗೆ ಆಹ್ವಾನವನ್ನು ಹಸ್ತಾಂತರಿಸಿದ ಒಂದು ದಿನದ ನಂತರ … Continued

ತ್ರಿಪುರಾ ಚುನಾವಣೆ: 43 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಸಿಪಿಐ(ಎಂ), ಆದ್ರೆ ಮಾಜಿ ಸಿಎಂ ಮಾಣಿಕ್ ಸರ್ಕಾರ್ ಹೆಸರು ಪಟ್ಟಿಯಿಂದ ನಾಪತ್ತೆ

ಅಗರ್ತಲಾ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ತ್ರಿಪುರಾ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಮಾಣಿಕ್ ಸರ್ಕಾರ್ ಅವರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಎಡರಂಗವು ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ನಾಲ್ಕು ಬಾರಿ ತ್ರಿಪುರದ … Continued

ಪದ್ಮ ಪ್ರಶಸ್ತಿಗಳು ಪ್ರಕಟ: 6 ಜನರಿಗೆ ಪದ್ಮ ವಿಭೂಷಣ, 9 ಜನರಿಗೆ ಪದ್ಮಭೂಷಣ, 91 ಜನರಿಗೆ ಪದ್ಮಶ್ರೀ ಪ್ರಶಸ್ತಿ; ಮಾಜಿ ಸಿಎಂ ಎಸ್‌.ಎಂ.ಕೃಷ್ಣ, ಸಾಹಿತಿ ಭೈರಪ್ಪ, ಸುಧಾಮೂರ್ತಿ ಸೇರಿ ಕರ್ನಾಟಕದ 8 ಜನರಿಗೆ ಪದ್ಮ ಪುರಸ್ಕಾರ

ನವದೆಹಲಿ: 74 ನೇ ಗಣರಾಜ್ಯೋತ್ಸವದ ಮೊದಲ ದಿನವಾದ ಬುಧವಾರ ಸರ್ಕಾರವು 2023 ರ ಗಣರಾಜ್ಯೋತ್ಸವದ ಮೊದಲು ಪದ್ಮ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿದೆ ಮತ್ತು ಪದ್ಮ ವಿಭೂಷಣಕ್ಕೆ ಆರು ಹೆಸರುಗಳನ್ನು, ಪದ್ಮಭೂಷಣಕ್ಕೆ ಒಂಬತ್ತು ಹೆಸರುಗಳನ್ನು ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ 91 ಹೆಸರನ್ನು ಪ್ರಕಟಿಸಿದೆ. ORS ಐಕಾನ್ ಡಾ. ದಿಲೀಪ್ ಮಹಲನಾಬಿಸ್ ಅವರನ್ನು ಮರಣೋತ್ತರವಾಗಿ ವೈದ್ಯಕೀಯದಲ್ಲಿ ಪದ್ಮವಿಭೂಷಣಕ್ಕೆ ಆಯ್ಕೆ … Continued

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೆಸಿಆರ್ ವರ್ಸಸ್‌ ರಾಜ್ಯಪಾಲ: ನ್ಯಾಯಾಲಯದಲ್ಲಿ ತೆಲಂಗಾಣ ಸರ್ಕಾರಕ್ಕೆ ಹಿನ್ನಡೆ

ಹೈದರಾಬಾದ್: ರಾಜ್ಯಪಾಲರ ವಿರುದ್ಧದ ಇತ್ತೀಚಿನ ಸುತ್ತಿನ ಸಂಘರ್ಷದಲ್ಲಿ ತೆಲಂಗಾಣದ ಕೆ. ಚಂದ್ರಶೇಖರ್ ರಾವ್ ಸರ್ಕಾರ ಇಂದು, ಬುಧವಾರ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಪರೇಡ್‌ ವಿಚಾರದಲ್ಲಿ ಸೋತಿದೆ. ಗಣರಾಜ್ಯೋತ್ಸವದ ಪೂರ್ಣ ಪ್ರಮಾಣದ ಪರೇಡ್ ಅನ್ನು ಹೈದರಾಬಾದ್‌ನ ಸಾಮಾನ್ಯ ಪರೇಡ್ ಮೈದಾನದಲ್ಲಿ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ, ಇದೇ ವೇಳೆ ಸರ್ಕಾರವು ಬಯಸಿದ ರಾಜಭವನದಲ್ಲಿ ಆಚರಣೆಯನ್ನು ಮೊಟಕುಗೊಳಿಸಿದೆ. ಕೋವಿಡ್ ಕಾರಣ ಉಲ್ಲೇಖಿಸಿ … Continued

ಮಹಿಳೆಯರ ಐಪಿಎಲ್‌: ದಾಖಲೆಯ 4,669 ಕೋಟಿ ರೂ.ಗಳಿಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

ನವದೆಹಲಿ: ಅದಾನಿ ಸ್ಪೋರ್ಟ್ಸ್‌ಲೈನ್ ಬುಧವಾರ ನಡೆದ ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ ತಂಡದ ಹರಾಜಿನಲ್ಲಿ ಅಹಮದಾಬಾದ್ ಫ್ರಾಂಚೈಸಿಯನ್ನು ಹತ್ತು ವರ್ಷಗಳ ಕಾಲ 1,289 ಕೋಟಿ ರೂಪಾಯಿಗಳಿಗೆ ಖರೀದಿಸಿದೆ ಹಾಗೂ ಅದು ಬಿಡ್ಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ರಿಲಯನ್ಸ್ ಬೆಂಬಲಿತ ಇಂಡಿಯಾವಿನ್ ಸ್ಪೋರ್ಟ್ಸ್ ಮುಂಬೈ ಫ್ರಾಂಚೈಸಿಯನ್ನು 912.99 ಕೋಟಿ … Continued

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ : ಸರ್ಕಾರಿ ನೌಕರರ 10%ರಷ್ಟು ವೇತನ ಕಡಿತಕ್ಕೆ ಮುಂದಾದ ಸರ್ಕಾರ

ಇಸ್ಲಾಮಾಬಾದ್‌: ಬುಧವಾರದ ಮಾಧ್ಯಮ ವರದಿಯ ಪ್ರಕಾರ, ನಗದು ಕೊರತೆಯಿರುವ ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ಸರ್ಕಾರಿ ನೌಕರರ ವೇತನವನ್ನು ಶೇ.10 ರಷ್ಟು ಕಡಿತಗೊಳಿಸುವುದು ಸೇರಿದಂತೆ ವಿವಿಧ ಪ್ರಸ್ತಾಪಗಳನ್ನು ಸರ್ಕಾರವು ಪರಿಗಣಿಸುತ್ತಿದೆ. ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಸಂಗ್ರಹದ ಮಧ್ಯೆ ಪಾಕಿಸ್ತಾನವು ಇತ್ತೀಚಿನ ವರ್ಷಗಳಲ್ಲಿ ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರಧಾನಿ ಶೆಹಬಾಜ್ ಷರೀಫ್ … Continued