2023ರಲ್ಲಿ ನಡೆಯುವ 9 ರಾಜ್ಯಗಳ ಚುನಾವಣೆಯಲ್ಲಿ ಯಾವುದರಲ್ಲೂ ಪಕ್ಷ ಸೋಲಬಾರದು : ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಧ್ಯಕ್ಷ ನಡ್ಡಾ

ನವದೆಹಲಿ: ಸೋಮವಾರ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷವು ಈ ವರ್ಷ ಒಂಬತ್ತು ವಿಧಾನಸಭಾ ಚುನಾವಣೆಗಳನ್ನು ಎದುರಿಸಬೇಕಾಗಿದೆ ಮತ್ತು ಅದರಲ್ಲಿ ಒಂದನ್ನು ಸಹ ಕಳೆದುಕೊಳ್ಳಬಾರದು ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಕರೆ ನೀಡಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ ಪ್ರಸಾದ ಹೇಳಿದ್ದಾರೆ. ಸಭೆಯಲ್ಲಿ ಚರ್ಚೆ ನಡೆದ ವಿಷಯಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ … Continued

ಕೋವಿಡ್-19 : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿದ ಕೇರಳ

ತಿರುವನಂತಪುರಂ: ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯವು ಕೋವಿಡ್ ಪುನರುತ್ಥಾನದ ಅಪಾಯದಲ್ಲಿರುವುದರಿಂದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಎಲ್ಲ ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು ಮತ್ತು ಸಭೆ ಸಮಾರಂಭಗಳಲ್ಲಿ ಜನರಿಗೆ ಮಾಸ್ಕ್ ಅನ್ನು ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಅನುಸರಿಸುವಂತೆ ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಜನರಿಗೆ … Continued

ವೈವಾಹಿಕ ಅತ್ಯಾಚಾರದ ಮೇಲಿನ ಅರ್ಜಿಗಳಿಗೆ ಕೇಂದ್ರದ ಉತ್ತರ ಕೇಳಿದ ಸುಪ್ರೀಂ ಕೋರ್ಟ್‌

ನವದೆಹಲಿ: ವೈವಾಹಿಕ ಅತ್ಯಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ವಿನಾಯಿತಿ 2 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳಿಗೆ ಉತ್ತರವನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರಕ್ಕೆ ಸೂಚಿಸಿದೆ. ಅತ್ಯಾಚಾರವನ್ನು ವ್ಯಾಖ್ಯಾನಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ವಿನಾಯಿತಿ 2, ಪತ್ನಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರದ … Continued

ಭಾರತದ 1%ರಷ್ಟು ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ 40%ಕ್ಕಿಂತ ಹೆಚ್ಚು ಸಂಪತ್ತಿದೆ : ಆಕ್ಸ್‌ಫ್ಯಾಮ್‌ ವರದಿ

ನವದೆಹಲಿ: ಭಾರತದ ಒಟ್ಟು ಸಂಪತ್ತಿನ 40%ಕ್ಕೂ ಹೆಚ್ಚು ಸಂಪತ್ತು ಈಗ ಭಾರತದ ಶೇ.1ರಷ್ಟು ಶ್ರೀಮಂತರ ಒಡೆತನದಲ್ಲಿದೆ ಎಂದು ಹೊಸ ಅಧ್ಯಯನವೊಂದು ಸೋಮವಾರ ಬಹಿರಂಗಪಡಿಸಿದೆ. ಕೇವಲ 3 ಶೇಕಡಾ ಸಂಪತ್ತನ್ನು ಮಾತ್ರ ಜನಸಂಖ್ಯೆಯ ಕೆಳಸ್ತರದ ಅರ್ಧದಷ್ಟು ಜನರು ಹಂಚಿಕೊಂಡಿದ್ದಾರೆ ಎಂದು ಅಧ್ಯಯನವು ತೋರಿಸಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೊದಲ ದಿನದಂದು ಹಕ್ಕುಗಳ … Continued

ಇಂದಿನಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ದೆಹಲಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಇಂದು, ಸೋಮವಾರದಿಂದ ದೆಹಲಿಯಲ್ಲಿ ಆರಂಭವಾಗಿದ್ದು, ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಿದೆ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರಾವಧಿಯ ವಿಸ್ತರಣೆ ಅನುಮೋದಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ನಡ್ಡಾ ಅವರು … Continued

ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ 1.4° ಸೆಲ್ಸಿಯಸ್‌ ತಾಪಮಾನ ದಾಖಲು : ಇದು ರಾಷ್ಟ್ರ ರಾಜಧಾನಿಯ ಈ ಋತುವಿನ ಕನಿಷ್ಠ ತಾಪಮಾನ

ನವದೆಹಲಿ: ಸೋಮವಾರ ನಸುಕಿನ ವೇಳೆಯಲ್ಲಿ ದೆಹಲಿಯ ತಾಪಮಾನದ ಮಟ್ಟವು 1.4 ° ಸೆಲ್ಸಿಯಸ್‌ ಗೆ ಇಳಿಯುವುದರೊಂದಿಗೆ ದೆಹಲಿಯು ಈ ಋತುವಿನ ಅತ್ಯಂತ ಕಡಿಮೆ ತಾಪಮಾನವನ್ನು ದಾಖಲಿಸಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮುಂಬರುವ ತೀವ್ರ ಶೀತಗಾಳಿಯಿಂದಾಗಿ ಭಾರತ ಹವಾಮಾನ ಇಲಾಖೆ (IMD) ಇಂದು ಸೋಮವಾರದಿಂದ ಮುಂದಿನ ಆರು ದಿನಗಳವರೆಗೆ ದೆಹಲಿಯಲ್ಲಿ ಹಳದಿ ಎಚ್ಚರಿಕೆಯನ್ನು ನೀಡಿದೆ. ಮೊದಲ ಮೂರು … Continued

ಮುಳುಗುತ್ತಿರುವ ಜೋಶಿಮಠದಲ್ಲಿ ವಾಲಿದ ಇನ್ನೆರಡು ಹೊಟೇಲ್‌ಗಳು; ಔಲಿ ರೋಪ್‌ವೇ ಬಳಿ ಕಂಡುಬಂದ ದೊಡ್ಡ ಬಿರುಕುಗಳು

ಜೋಶಿಮಠ (ಉತ್ತರಾಖಂಡ): ಜೋಶಿಮಠದಲ್ಲಿ ಭಾನುವಾರ ಮತ್ತೆರಡು ಹೋಟೆಲ್‌ಗಳು ಕುಸಿದ ಪರಿಣಾಮ ವಾಲಿವೆ. ಈ ಎರಡು ಹೊಟೇಲ್‌ಗಳು ಅಪಾಯಕಾರಿಯಾಗಿ ಪರಸ್ಪರ ವಾಲಲು ಪ್ರಾರಂಭಿಸಿತು. ಔಲಿ ರೋಪ್‌ವೇ ಬಳಿ ಮತ್ತು ಉತ್ತರಾಖಂಡದ ಈ ಹಿಮಾಲಯದ ಧಾರ್ಮಿಕ ಪ್ರಾಮುಖ್ಯತೆಯ ಇತರ ಪ್ರದೇಶಗಳಲ್ಲಿ ಬಿರುಕುಗಳು ವಿಸ್ತರಿಸಿದವು. ಮೂಲಗಳ ಪ್ರಕಾರ, ಪಟ್ಟಣದ ಮಾರ್ವಾಡಿ ಬಡಾವಣೆಯ ಜೆಪಿ ಕಾಲೋನಿಯಲ್ಲಿ ಭೂಗತ ಕಾಲುವೆ ಒಡೆದು ನೀರಿನ … Continued

ಅಂಬಿಗರ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುತ್ತೇವೆ: ಸಿಎಂ ಬೊಮ್ಮಾಯಿ ಭರವಸೆ

ಹಾವೇರಿ: ಆದಷ್ಟು ಗಂಗಾಮತ ಸಮುದಾಯ (ಅಂಬಿಗ ಸಮುದಾಯ) ವನ್ನು ಎಸ್​ಟಿಗೆ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಜಿಲ್ಲೆಯ ನರಸೀಪುರದಲ್ಲಿ ನಡೆದ ಅಂಬಿಗರ ಚೌಡಯ್ಯರ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಅವರು, ಅಂಬಿಗರ ಸಮಾಜಕ್ಕೆ ಪರಿಶಿಷ್ಟ ವರ್ಗದ ಮೀಸಲಾತಿ (ST) ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಮಾಜದ ಬೇಡಿಕೆಯನ್ನು ಈಡೇರಿಸಲಾಗುವುದು. ಆದಷ್ಟು ಬೇಗ … Continued

ಭಾರತ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಶ್ರೀಲಂಕಾ ವಿರುದ್ಧ ಅತಿದೊಡ್ಡ ಅಂತರದಲ್ಲಿ ಗೆಲುವು ದಾಖಲಿಸಿದ ಭಾರತ

ವಿರಾಟ್ ಕೊಹ್ಲಿ ಅವರು ಔಟಾಗದೆ 166 ರನ್ ಗಳಿಸುವ ಮೂಲಕ ಭಾರತವು ಶ್ರೀಲಂಕಾದ ವಿರುದ್ಧ ಭಾನುವಾರ ಇಲ್ಲಿ ನಡೆದ ಮೂರನೇ ಏಕದಿನದ ಪಂದ್ಯದಲ್ಲಿ 317 ರನ್‌ಗಳ ದಾಖಲೆಯ ಅಂತರದಲ್ಲಿ ಜಯಗಳಿಸಿತು. 2008ರ ಜುಲೈನಲ್ಲಿ ಅಬರ್ಡೀನ್‌ನಲ್ಲಿ ಐರ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ನ 290 ರನ್‌ಗಳ ಜಯವನ್ನು ಹಿಂದಿಕ್ಕುವ ಮೂಲಕ 317 ರನ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿ ಭಾರತವು ದಿಗ್ಭ್ರಮೆಗೊಳಿಸಿತು. ಇದಕ್ಕೂ … Continued

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ವಿರೋಧಿ ಪ್ರತಿಭಟನೆಗಳು ತೀವ್ರ : ಗಿಲ್ಗಿಟ್-ಬಾಲ್ಟಿಸ್ತಾನ ಭಾರತದೊಂದಿಗೆ ಪುನಃ ಸೇರಬೇಕೆಂದು ಒತ್ತಾಯ | ವೀಕ್ಷಿಸಿ

ಪಾಕಿಸ್ತಾನದಾದ್ಯಂತ ಹಿಟ್ಟು ಮತ್ತು ಆಹಾರದ ಬಿಕ್ಕಟ್ಟಿನ ಸುದ್ದಿಗಳ ನಡುವೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ), ಗಿಲ್ಗಿಟ್ ಬಾಲ್ಟಿಸ್ತಾನ್ (ಜಿ-ಬಿ) ಮತ್ತೆ ಹೆಡ್‌ಲೈನ್ಸ್‌ ಮಾಡುತ್ತಿದೆ, ಏಕೆಂದರೆ ಹಲವಾರು ದಶಕಗಳಿಂದ ಪ್ರದೇಶವನ್ನು ದುರ್ಬಳಕೆ ಮಾಡಿಕೊಂಡಿರುವ ಪಾಕಿಸ್ತಾನ ಸರ್ಕಾರದ ತಾರತಮ್ಯ ನೀತಿಗಳ ಬಗ್ಗೆ ನಿವಾಸಿಗಳು ಕೋಪಗೊಂಡಿದ್ದಾರೆ ಹಾಗೂ ಭಾರತದೊಂದಿಗೆ ಪುನರ್‌ ಜೋಡಣೆ ಮಾಡಲು ಒತ್ತಾಯಿಸುತ್ತಿದ್ದಾರೆ. ಅಂತರ್ಜಾಲದಲ್ಲಿನ ಹಲವಾರು ವೀಡಿಯೊಗಳು ನಿವಾಸಿಗಳ … Continued