ವೀಡಿಯೊ..: TNPL-2023ರಲ್ಲಿ ಹೊಸ ದಾಖಲೆ…ಕೊನೆಯ ಎಸೆತದಲ್ಲಿ 18 ರನ್‌ಗಳು…| ವೀಕ್ಷಿಸಿ

ತಮಿಳುನಾಡು ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ನಡುವಿನ ಪಂದ್ಯ ಹೊಸ ದಾಖಲೆಯೊಂದಕ್ಕೆ ಕಾರಣವಾಗಿದೆ. ಸ್ಪಾರ್ಟನ್ಸ್ ತಂಡದ ನಾಯಕ ಅಭಿಷೇಕ್ ತನ್ವರ್ ಅವರು ಇನ್ನಿಂಗ್ಸ್‌ನ 20ನೇ ಓವರ್‌ನ ಕೊನೆಯ ಎಸೆತದಲ್ಲಿ 18 ರನ್‌ಗಳನ್ನು ನೀಡಿರುವುದೇ ಈ ಹೊಸ ದಾಖಲೆಯಾಗಿದೆ..!! TNPL 2022 ಋತುವಿನಲ್ಲಿ ತನ್ವರ್ ಅತಿ ಹೆಚ್ಚು ವಿಕೆಟ್ ಪಡೆದ … Continued

4 ಕೈಗಳು, 4 ಕಾಲುಗಳು, 2 ಹೃದಯಗಳಿದ್ದ ವಿಚಿತ್ರ ಹೆಣ್ಣು ಮಗು ಜನನ..!

ಚಾಪ್ರಾ: ಬಿಹಾರದ ಸರನ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು 4 ಕೈಗಳು, 4 ಕಾಲುಗಳು, ಎರಡು ಹೃದಯಗಳು, ಎರಡು ಬೆನ್ನು ಹುರಿಗಳು ಮತ್ತು 1 ತಲೆಯ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ…! ನಿನ್ನೆ, ಮಂಗಳವಾರ ತಡರಾತ್ರಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಈ ವಿಚಿತ್ರ ಮಗು ಜನಿಸಿದ ಕೆಲವೇ ಸಮಯದಲ್ಲಿ ಮೃತಪಟ್ಟಿದೆ. ಪ್ರಕರಣವು … Continued

ನೀಟ್‌ ಯುಜಿ 2023 ಫಲಿತಾಂಶ ಪ್ರಕಟ : ಪ್ರಬಂಜನ್ ಜೆ, ಬೋರಾ ವರುಣ ಚಕ್ರವರ್ತಿಗೆ ಮೊದಲ ಸ್ಥಾನ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಟ್‌ ಯುಜಿ-2023ರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ನೀಟ್‌ (NEET) ಫಲಿತಾಂಶಗಳಲ್ಲಿ, ತಮಿಳುನಾಡಿನ ಪ್ರಬಂಜನ್ ಜೆ. ಮತ್ತು ಆಂಧ್ರ ಪ್ರದೇಶದ ಬೋರಾ ವರುಣ ಚಕ್ರವರ್ತಿ ಅವರು 99.99 ಶೇಕಡಾವಾರು ಅಂಕಗಳನ್ನು ಗಳಿಸುವ ಮೂಲಕ ನೀಟ್‌ ಯುಜಿ-2023 (NEET UG 2023) ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಎನ್‌ಟಿಎ (NTA)ಯ ಇತ್ತೀಚಿನ ನೀಟ್‌ … Continued

ಬಂಧನದ ನಂತರ ಇ.ಡಿ. ಕಸ್ಟಡಿಯಲ್ಲಿ ಗಳಗಳನೆ ಅತ್ತ ತಮಿಳುನಾಡು ಸಚಿ ಸೆಂಥಿಲ್ ಬಾಲಾಜಿ : ಎದೆನೋವಿದೆ ಎಂದಿದ್ದಕ್ಕೆ ಐಸಿಯುಗೆ ದಾಖಲು | ವೀಕ್ಷಿಸಿ

ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ.)ವು ತಮಿಳುನಾಡು ವಿದ್ಯುತ್ ಮತ್ತು ಅಬಕಾರಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಬುಧವಾರ ಅವರನ್ನು ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸುದೀರ್ಘ ವಿಚಾರಣೆಯ ನಂತರ ಸಚಿವರನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಬುಧವಾರ ಬೆಳ್ಳಂಬೆಳಗ್ಗೆ … Continued

ವಾಯು ಪ್ರಕ್ಷುಬ್ಧತೆ..: ಬಿಪೋರ್‌ ಜಾಯ್‌ ಚಂಡಮಾರುತ, ಪೂರ್ವದಲ್ಲಿನ ಕಡಿಮೆ ಒತ್ತಡದ ವ್ಯವಸ್ಥೆ ಮುಂಗಾರು ಮಳೆ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ…?

ಭಾರತವು ಮಾನ್ಸೂನ್ ಆಗಮನಕ್ಕಾಗಿ ಕಾಯುತ್ತಿರುವ ಸಮಯದಲ್ಲಿ, ಅರಬ್ಬಿ ಸಮುದ್ರದಲ್ಲಿ ಸಕ್ರಿಯವಾಗಿರುವ ವ್ಯವಸ್ಥೆಗಳು ಮತ್ತು ಬಂಗಾಳ ಕೊಲ್ಲಿಯಲ್ಲಿನ ಕೆಲವು ದುರ್ಬಲ ವ್ಯವಸ್ಥೆಗಳು ಅಲೆಗಳನ್ನು ಸೃಷ್ಟಿಸುತ್ತಿವೆ ಮತ್ತು ಬಿಪೋರ್‌ ಜಾಯ್‌ ಚಂಡಮಾರುತವು ಪಶ್ಚಿಮ ರಾಜ್ಯಗಳ ಕರಾವಳಿಯ ಮೇಲೆ ವಿಶೇಷವಾಗಿ ಗುಜರಾತ್ ರಾಜ್ಯದ ಮೇಲೆ ಸಕ್ರಿಯವಾಗಿ ಪರಿಣಾಮ ಬೀರುತ್ತಿದೆ. ಕೆಲವು ದಿನಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಚಂಡಮಾರುತದ ವ್ಯವಸ್ಥೆ … Continued

ಬಿಪೋರ್‌ ಜಾಯ್‌ ಚಂಡಮಾರುತ: ಗುಜರಾತ್‌ ಕರಾವಳಿ ಜಿಲ್ಲೆಗಳ 30,000 ಜನರ ಸ್ಥಳಾಂತರ

ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಪ್ರಬಲ ಚಂಡಮಾರುತ ಬಿಪೋರ್‌ ಜಾಯ್‌ನ ನಿರೀಕ್ಷಿತ ಅಪ್ಪಳಿಸುವಿಕೆಯ ಎರಡು ದಿನಗಳ ಮೊದಲು ಅಧಿಕಾರಿಗಳು ಮಂಗಳವಾರ ಗುಜರಾತ್‌ ಕರಾವಳಿ ಪ್ರದೇಶಗಳಿಂದ 30,000 ಜನರನ್ನು ತಾತ್ಕಾಲಿಕ ಆಶ್ರಯದ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಹಲವಾರು ಎನ್‌ಡಿಆರ್‌ಎಫ್‌ (NDRF) ಮತ್ತು ಎಸ್‌ಡಿಆರ್‌ಎಫ್‌ (SDRF) ತಂಡಗಳು ಸ್ಟ್ಯಾಂಡ್‌ಬೈನಲ್ಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, … Continued

ಒಡಿಶಾದ ಟಾಟಾ ಸ್ಟೀಲ್ ಘಟಕದಲ್ಲಿ ಉಗಿ ಸೋರಿಕೆಯಿಂದ 19 ಮಂದಿ ಗಾಯ

ಭುವನೇಶ್ವರ: ಒಡಿಶಾದ ಧೆಂಕನಲ್ ಜಿಲ್ಲೆಯ ಟಾಟಾ ಸ್ಟೀಲ್‌ನ ಮೆರಮಂಡಲಿ ಸ್ಥಾವರದಲ್ಲಿ ಮಂಗಳವಾರ ಉಗಿ ಸೋರಿಕೆಯಿಂದ ಕನಿಷ್ಠ 19 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಸುಟ್ಟಗಾಯಗಳಾಗಿರುವ ಗಾಯಾಳುಗಳನ್ನು ಕೂಡಲೇ ಕಟಕ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಕುಲುಮೆಯನ್ನು ಪರಿಶೀಲಿಸುತ್ತಿದ್ದ ಕಾರ್ಮಿಕರು ಮತ್ತು ಎಂಜಿನಿಯರ್‌ಗಳು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ತಪಾಸಣೆ ಕಾರ್ಯದ ವೇಳೆ ಮಧ್ಯಾಹ್ನ 1 ಗಂಟೆ ಸುಮಾರಿಗೆ … Continued

ಫ್ರೀ ಬಸ್‌ ಪ್ರಯಾಣಕ್ಕೆ ಹೊರ ರಾಜ್ಯದ ಮಹಿಳೆಯರ ಐನಾತಿ ಐಡಿಯಾ: ಆಧಾರ್‌ ಕಾರ್ಡ್‌ ನೋಡಿ ದಂಗಾದ ಬಸ್‌ ಕಂಡಕ್ಟರ್‌

ಬೆಂಗಳೂರು : ಶಕ್ತಿ ಯೋಜನೆಯಡಿ ಸರ್ಕಾರ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ ಕಲ್ಪಿಸಿದ್ದು, ಬೇರೆ ರಾಜ್ಯಗಳ ಮಹಿಳೆಯರ ಖತರ್ನಾಕ್‌ ಐಡಿಯಾಕ್ಕೆ ಬಸ್‌ ಕಂಡಕ್ಷರ್‌ಗಳೇ ಬೆಚ್ಚಿಬಿದ್ದಿದ್ದಾರೆ. ಋಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಕಳೆದ ಮೂರು ದಿನಗಳಿಂದ ಬಿಎಂಟಿಸಿ ಸೇರಿದಂತೆ ಸಾಮಾನ್ಯ ಕೆಎಸ್‍ಆರ್‌ಟಿಸಿ ಬಸ್‍ಗಳಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಸ್ಮಾರ್ಟ್ ಕಾರ್ಡ್ ವಿತರಿಸದ ಹಿನ್ನೆಲೆಯಲ್ಲಿ ಆಧಾರ್ … Continued

ಟಿಸಿಎಸ್‌ ಕಂಪನಿಯಲ್ಲಿ ಹೆಚ್ಚಿದ ಮಹಿಳಾ ಉದ್ಯೋಗಿಗಳ ಕೆಲಸ ತೊರೆಯುವ ಪ್ರಮಾಣ : ಯಾಕೆಂದರೆ….

ಮನೆಯಿಂದ ಕೆಲಸ ಮಾಡುವ ಅವಕಾಶದ ಅಂತ್ಯವು ಐಟಿ ಸಂಸ್ಥೆ ಟಿಸಿಎಸ್‌ ಮಹಿಳಾ ಉದ್ಯೋಗಿಗಳ ಹೆಚ್ಚಿನ ಪ್ರಮಾಣದ ರಾಜೀನಾಮೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಲಿಂಗ ವೈವಿಧ್ಯತೆಯನ್ನು ಉತ್ತೇಜಿಸುವ ನಮ್ಮ ಪ್ರಯತ್ನಗಳಿಗೆ ಇದು ಹಿನ್ನಡೆಯಾಗಿದೆ, ಆದರೆ ನಾವು ಅದನ್ನು ದ್ವಿಗುಣಗೊಳಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ದೂರಸ್ಥ ಅಥವಾ ಮನೆಯಿಂದ ಕೆಲಸ ಮಾಡುವ ಅವಕಾಶದ … Continued

ಮಹಾತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-3 ಜುಲೈ 12 -19ರ ನಡುವೆ ಉಡಾವಣೆ : ಇಸ್ರೋ ಅಧ್ಯಕ್ಷ

ಕೊಟ್ಟಾಯಂ: ಇಸ್ರೋದ ಚಂದ್ರಯಾನದ ಮೂರನೇ ಆವೃತ್ತಿ ಚಂದ್ರಯಾನ-3 ಈ ವರ್ಷದ ಜುಲೈ 12 ಮತ್ತು 19 ರ ನಡುವೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ. ವೈಕಂನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದ ನೇಪಥ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೇಳಾಪಟ್ಟಿಯ … Continued