ಹೆಚ್ಚಿದ ಬೇಡಿಕೆ..: ಪ್ರವಾಹ ಪೀಡಿತ ಬೆಂಗಳೂರಿನಲ್ಲಿ 40,000 ರೂ.ಗಳ ವರೆಗೆ ತಲುಪಿದ ಹೊಟೇಲ್ ರೂಂ ದರಗಳು…!

ಬೆಂಗಳೂರು: ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಹೋಟೆಲ್ ಕೊಠಡಿಗಳ ಬೇಡಿಕೆಯಲ್ಲಿ ದಿಢೀರ್‌ ಏರಿಕೆಯಾಗಿದೆ. ಮತ್ತು ಸುಂಕದ ಏರಿಕೆ ಕಂಡುಬಂದಿದೆ. ಐಟಿ ಹಬ್‌ ಪ್ರವಾಹ ಮತ್ತು ನೀರಿನಿಂದ ತುಂಬಿರುವ ಕಾರಣ ಪ್ರವಾಹ ಪೀಡಿತ ನಗರದ ಹಲವು ಕುಟುಂಬಗಳು ಹೋಟೆಲ್‌ಗಳಿಗೆ ಸ್ಥಳಾಂತರಗೊಂಡಿವೆ. ಹೋಟೆಲ್ ದರಗಳು ಗಗನಕ್ಕೇರಿವೆ ಮತ್ತು ರೂಮ್‌ಗಳು ಈಗ ಒಂದು ರಾತ್ರಿಗೆ ಸರಾಸರಿ 30,000-40,000 ರೂ.ಗಳಿಗೆ ಏರಿಕೆಯಾಗಿದೆ, … Continued

ಸುದೀರ್ಘ ಸೇವೆ ಸಲ್ಲಿಸಿದ ಬ್ರಿಟನ್‌ ರಾಣಿ ಎಲಿಜಬೆತ್ II 96ನೇ ವಯಸ್ಸಿನಲ್ಲಿ ನಿಧನ

ಲಂಡನ್: ಬ್ರಿಟನ್‌ನ ಇತಿಹಾಸದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ರಾಣಿ ಎಲಿಜಬೆತ್ II ಅವರು 96 ನೇ ವಯಸ್ಸಿನಲ್ಲಿ ನಿಧನರಾದರು. ರಾಣಿ ಇಂದು, ಗುರುವಾರ ಮಧ್ಯಾಹ್ನ ಬಲ್ಮೋರಲ್‌ನಲ್ಲಿ  ನಿಧನರಾದರು. ಬಕಿಂಗ್ಹ್ಯಾಮ್ ಅರಮನೆಯು ಸ್ಕಾಟ್ಲೆಂಡ್‌ನ ಅವರ ಬೇಸಿಗೆ ನಿವಾಸವಾದ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾದರು ಎಂದು ಘೋಷಿಸಿತು, ಅಲ್ಲಿ ಅವರ ಆರೋಗ್ಯವು ಹದಗೆಟ್ಟ ನಂತರ ರಾಜಮನೆತನದ ಸದಸ್ಯರು ಅವರಿದ್ದಲ್ಲಿಗೆ ಧಾವಿಸಿದರು. … Continued

ಇಂಡಿಯಾ ಗೇಟ್‌ನಲ್ಲಿ ಸುಭಾಷ ಚಂದ್ರ ಬೋಸ್‌ರ 28 ಅಡಿ ಎತ್ತರದ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ, ನೇತಾಜಿ ಆದರ್ಶ ಭಾರತ ಅನುಸರಿಸಿದ್ದರೆ ಇಂದು ದೇಶದ ಕೀರ್ತಿ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು ಎಂದ ಮೋದಿ

ನವದೆಹಲಿ: ಗುರುವಾರ ದೆಹಲಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. 280 ಮೆಟ್ರಿಕ್ ಟನ್ ತೂಕದ ಏಕಶಿಲೆಯ ಗ್ರಾನೈಟ್ ಬ್ಲಾಕ್‌ನಿಂದ ಕೆತ್ತಿದ ಇಂಡಿಯಾ ಗೇಟ್‌ನಲ್ಲಿ ಬೋಸ್ ಅವರ 28 ಅಡಿ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ರಾಜಪಥ ಅವೆನ್ಯೂವನ್ನು ಮರುನಾಮಕರಣ ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಕರ್ತವ್ಯ ಪಥವನ್ನು … Continued

ಹಿಜಾಬ್‌ ಪ್ರಕರಣ: ಸಿಖ್ಖರ ಪೇಟಕ್ಕೆ ಹಿಜಾಬ್‌ ಹೋಲಿಕೆ ತಪ್ಪಾಗುತ್ತದೆ: ಅರ್ಜಿದಾರರಿಗೆ ಹೇಳಿದ ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಸಿಖ್ಖರ ಪೇಟಕ್ಕೆ ಹಿಜಾಬ್‌ ಹೋಲಿಸುವುದು ತಪ್ಪಾಗುತ್ತದೆ ಎಂದು ಹೇಳಿದೆ. ಸಿಖ್ಖರು ಧರಿಸುವ ಪೇಟಗಳು ಸಿಖ್ ಧರ್ಮದ ಐದು ಕಡ್ಡಾಯ ಅಂಶಗಳ ಭಾಗವಾಗಿದೆ. ಅದನ್ನು ಸುಪ್ರೀಂ ಕೋರ್ಟ್ ಕೂಡ ಗುರುತಿಸಿದೆ ಎಂದು ನ್ಯಾ. ಹೇಮಂತ್ ಗುಪ್ತಾ … Continued

ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ತಂಬಾಕು ಜಗಿದಿದ್ದಕ್ಕೆ ವ್ಯಕ್ತಿಯನ್ನು ಕೊಂದ ಇಬ್ಬರು ನಿಹಾಂಗ್ ಸಿಖ್ಖರು

ಅಮೃತಸರ: ಅಮೃತಸರದಲ್ಲಿ ಯುವಕನೊಬ್ಬನನ್ನು ಇಬ್ಬರು ನಿಹಾಂಗ್ ಸಿಖ್ಖರು ಕೊಲೆ ಮಾಡಿದ್ದಾರೆ. ಹರ್ಮಂದಿರ್ ಸಾಹಿಬ್ ಬಳಿಯ ಮಾರುಕಟ್ಟೆ ಪ್ರದೇಶದಲ್ಲಿ ಬುಧವಾರ ಈ ಅಪರಾಧ ನಡೆದಿದ್ದು, ಘಟನೆಯ ದೃಶ್ಯಗಳು ಸುತ್ತಮುತ್ತಲಿನ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಒಬ್ಬ ವ್ಯಕ್ತಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಬ್ಬರು ನಿಹಾಂಗ್ ಸಿಖ್ಖರು ತಮ್ಮ ಕತ್ತಿಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊಲೆಯಾದ ವ್ಯಕ್ತಿಯ … Continued

ಲಡಾಖ್‌ನ ಸಂಘರ್ಷ ಸ್ಥಳದಿಂದ ಭಾರತ-ಚೀನಾ ಸೇನೆಗಳ ಹಿಂತೆಗೆತ ಆರಂಭ

ನವದೆಹಲಿ: ಭಾರತ ಮತ್ತು ಚೀನಾ ನಡುವೆ 16ನೇ ಸುತ್ತಿನ ಸೇನಾ ಮಾತುಕತೆಯಲ್ಲಿ ಸಹಮತ ವ್ಯಕ್ತವಾದ ನಂತರ ಉಭ ದೇಶಗಳು ಲಡಾಖ್‌ನ ಗೋಗ್ರಾ- ಹಾಟ್‌ ಸ್ಪ್ರಿಂಗ್ಸ್‌ನಿಂದ ತಮ್ಮ ಸೇನಾ ಪಡೆಗಳನ್ನು ಹಿಂಪಡೆಯುವ ಕಾರ್ಯ ಆರಂಭಿಸಿದ್ದು, ಎರಡೂ ದೇಶಗಳು ಗುರುವಾರ ಸಂಜೆ ಜಂಟಿ ಹೇಳಿಕೆಯಲ್ಲಿ ಈ ಮಾಹಿತಿ ನೀಡಿವೆ. 2022ರ ಸೆಪ್ಟೆಂಬರ್‌ 8ರಂದು ಭಾರತ- ಚೀನಾ ಕಾರ್ಪ್ಸ್ ಕಮಾಂಡರ್ … Continued

ವಾಯು ಕ್ಷಿಪಣಿಗೆ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಭಾರತ

ಬಾಲಸೋರ್: ಸೇನೆಯ ಮೌಲ್ಯಮಾಪನ ಪ್ರಯೋಗಗಳ ಭಾಗವಾಗಿ ಒಡಿಶಾ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯೂಆರ್‌ಎಸ್‌ಎಎಂ) ವ್ಯವಸ್ಥೆಯ ಆರು ಹಾರಾಟ-ಪರೀಕ್ಷೆಗಳನ್ನು ಭಾರತ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಡಿಆರ್‌ಡಿಒ ಗುರುವಾರ ತಿಳಿಸಿದೆ. ವಿವಿಧ ಸನ್ನಿವೇಶಗಳಲ್ಲಿ ಶಸ್ತ್ರಾಸ್ತ್ರ ವ್ಯವಸ್ಥೆಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ವಿವಿಧ ರೀತಿಯ ಬೆದರಿಕೆಗಳನ್ನು ಅನುಕರಿಸುವ ಹೆಚ್ಚಿನ … Continued

1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ ಸಮಾಧಿಗೆ ಅಲಂಕಾರ: ಹಿಂದಿನ ಎಂವಿಎ ಸರ್ಕಾರ ದೂಷಿಸಿದ ಬಿಜೆಪಿ

ಮುಂಬೈ: 1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿಯನ್ನು ಮಾರ್ಬಲ್ ಬಾರ್ಡರ್ ಮತ್ತು ಎಲ್ಇಡಿ ಲೈಟಿಂಗ್‌ನೊಂದಿಗೆ ನವೀಕರಿಸಲಾಗಿದೆ ಎಂದು ಹೇಳಲಾಗಿದ್ದು, ಅದನ್ನು ‘ಸುಂದರಗೊಳಿಸಲಾಗಿದೆ’ ಎಂದು ವರದಿಯಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಕಾರ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರದಲ್ಲಿದ್ದಾಗ ಮತ್ತು ಶಿವಸೇನೆ, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಸಮ್ಮಿಶ್ರ ಮಹಾ … Continued

ನಾನು ಬಿಜೆಪಿ ಸೇವಕನೆಂಬಂತೆ ಆಹ್ವಾನಿಸಲಾಗಿದೆ…: ನೇತಾಜಿ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಹಾಜರಾಗಲ್ಲ ಎಂದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಸರಿಯಾದ ಕ್ರಮದಲ್ಲಿ ಆಹ್ವಾನಿಸಿದ ಕಾರಣ ಇಂದು ದೆಹಲಿಯಲ್ಲಿ ನೇತಾಜಿ ಪ್ರತಿಮೆ ಉದ್ಘಾಟನೆಗೆ ಹಾಜರಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂದಿನ ಕಾರ್ಯಕ್ರಮದ ಬಗ್ಗೆ ತಿಳಿಸುವ ಅಧಿಕಾರಶಾಹಿಯಿಂದ ನಿನ್ನೆ ಪತ್ರ ಬಂದಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಿನ್ನೆ ಸಂಜೆ ನನಗೆ ಅಧಿಕಾರಿಯಿಂದ ಪತ್ರ ಬಂದಿದೆ. ಗುರುವಾರ 7 ಗಂಟೆಗೆ ನೇತಾಜಿ … Continued

ಇಂಡಿಯಾ ಗೇಟ್ ಬಳಿ ಸ್ಥಾಪಿಸುವ ನೇತಾಜಿ ಸುಭಾಸ್‌ಚಂದ್ರ ಬೋಸ್‌ ಪ್ರತಿಮೆ ಕೆತ್ತಲು ಶಿಲ್ಪಿಗಳಿಗೆ ಬೇಕಾಯ್ತು 26,000 ತಾಸುಗಳು : ಕೇಂದ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಒಂದು ದಿನ ಮುಂಚಿತವಾಗಿ, ಶಿಲ್ಪಿಗಳ ತಂಡವು 28 ಅಡಿ ರಚನೆಯನ್ನು ಕೆತ್ತಲು 26,000 ಮಾನವ ಗಂಟೆಗಳನ್ನು ತೆಗೆದುಕೊಂಡಿದೆ ಎಂದು ಸಂಸ್ಕೃತಿ ಸಚಿವಾಲಯ ಬುಧವಾರ ಹೇಳಿದೆ. 65 ಮೆಟ್ರಿಕ್ ಟನ್ ತೂಕದ ಪ್ರತಿಮೆಯನ್ನು ತಯಾರಿಸಲು 280 ಮೆಟ್ರಿಕ್ ಟನ್ … Continued