ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಯಿಂದ ಸಲ್ಮಾನ್ ಖಾನ್‌ಗೂ ‘ಮೂಸ್ ವಾಲಾ ಕರ್ ದೇಂಗೆ…’ ಸಂಚು ಬಯಲು

ಚಂಡೀಗಡ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಮತ್ತು ಸಲ್ಮಾನ್ ಖಾನ್‌ಗೆ ಕಳುಹಿಸಲಾದ ಬೆದರಿಕೆಗಳ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿರುವ ಪಂಜಾಬ್‌ನ ಉನ್ನತ ಪೊಲೀಸ್ ಅಧಿಕಾರಿಗಳು ಆರೋಪಿಗಳಲ್ಲಿ ಒಬ್ಬಾತ ಬಾಲಿವುಡ್ ನಟನನ್ನು ಗುರಿಯಾಗಿಸಲು ಮುಂಬೈನಲ್ಲಿ ಸಂಚು ನಡೆಸಿದ್ದರು ಎಂದು ಭಾನುವಾರ ಹೇಳಿದ್ದಾರೆ. ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ, ರಾಜಕಾರಣಿ ಮೂಸೆವಾಲಾ ಹತ್ಯೆಯ ನಂತರ ಜೂನ್‌ನಲ್ಲಿ ಬಾಲಿವುಡ್‌ … Continued

ಇಹಲೋಕ ತ್ಯಜಿಸಿದ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ನವದೆಹಲಿ: ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ಭಾನುವಾರ ನಿಧನರಾದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ದ್ವಾರಕಾ, ಜ್ಯೋತಿಶ್ ಪೀಠದ ಶಂಕರಾಚಾರ್ಯರಾಗಿದ್ದ ಸ್ವಾಮಿ ಸ್ವರೂಪಾನಂದ ಅವರು ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ನರಸಿಂಗ್‌ಪುರ ಜಿಲ್ಲೆಯ ತಮ್ಮ ಆಶ್ರಮದಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ … Continued

ಕ್ಲಿನಿಕ್ ಬಾಗಿಲು ತೆರೆಯಲು ತಡವಾಗಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಗುಂಪು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವೈದ್ಯರು ಕ್ಲಿನಿಕ್‌ಗೆ ಬೇಗ ಬರಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಜನರ ಗುಂಪೊಂದು ಚೆನ್ನಾಗಿ ಥಳಿಸಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಈ ಘಟನೆ ನಡೆದಿದ್ದು, ಆಯುರ್ವೇದ ವೈದ್ಯರನ್ನು ಗುಂಪೊಂದು ಚೆನ್ನಾಗಿ ಥಳಿಸಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಆಯುರ್ವೇದ ವೈದ್ಯರು ತಡವಾಗಿ ಕ್ಲಿನಿಕ್ ಬಾಗಿಲು ತೆರೆದಿದ್ದಾರೆ. ಕ್ಲಿನಿಕ್ ಬಾಗಿಲನ್ನು ತಡವಾಗಿ ತೆರೆದಿದ್ದರಿಂದ ನಮ್ಮನ್ನು … Continued

ನಿಮಗೆ ತಮಿಳು ಹುಡುಗಿಯನ್ನೇ ಮದುವೆ ಮಾಡಿಕೊಡಲು ಸಿದ್ಧ: ಮಹಿಳೆ ಮಾತಿಗೆ ನಾಚಿನೀರಾದ ರಾಹುಲ್ ಗಾಂಧಿ

ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಕಾಂಗ್ರೆಸ್‌ನ ‘ಭಾರತ್‌ ಜೋಡೋ ಯಾತ್ರೆ’ ಅನೇಕ ತಮಾಷೆಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ತಮಿಳುನಾಡಿನಲ್ಲಿ ಸಂಚರಿಸಿದ ಯಾತ್ರೆಯುದ್ದಕ್ಕೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಜನರೊಂದಿಗೆ ಸಂವಾದ ನಡೆಸಿದ್ದಾರೆ. ತಮಿಳುನಾಡಿನಲ್ಲಿ ರಾಹುಲ್ ಅವರು ಮಹಿಳೆಯರ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದಾಗ ನಡೆದ ತಮಾಷೆಯ ವಿದ್ಯಮಾನದ ಬಗ್ಗೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. … Continued

ಗಣೇಶನಮೂರ್ತಿ ತಬ್ಬಿಕೊಂಡು ವಿಸರ್ಜನೆಗೆ ಒಯ್ಯಲು ಬಿಡದ ಪುಟ್ಟ ಹುಡುಗಿ, ಮೂರ್ತಿ ತಬ್ಬಿಕೊಂಡು ಅಳುವ ಕಂದ | ವೀಕ್ಷಿಸಿ

10 ದಿನಗಳ ಗಣೇಶ ಚತುರ್ಥಿ ಹಬ್ಬವು ಮುಕ್ತಾಯವಾಗಿದ್ದು ಒಂದು ದಿನದ ಹಿಂದೆ ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳಾದ್ಯಂತ ಜನರು ವಿವಿಧ ಜಲಮೂಲಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು. ಒಂದು ಕುಟುಂಬವು ತಮ್ಮ ಗಣಪತಿ ವಿಗ್ರಹವನ್ನು ನಿಮಜ್ಜನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ, ಒಂದು ಚಿಕ್ಕ ಹುಡುಗಿ ಗಣಪತಿ ಬಪ್ಪನನ್ನು ತನ್ನ ಮನೆಯಿಂದ ವಿಸರ್ಜನೆಗೆ ಹೋಗಲು ಬಿಡಲಿಲ್ಲ. ಹಬ್ಬದ ಕೊನೆಯ … Continued

ದೆಹಲಿ ಸರ್ಕಾರದ ಡಿಟಿಸಿ ಬಸ್‌ಗಳ ಖರೀದಿಯಲ್ಲಿ ‘ಅಕ್ರಮ’ ಆರೋಪ ಪ್ರಕರಣ: ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆ

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದೆಹಲಿ ಸರ್ಕಾರವು 1000 ಲೋ ಫ್ಲೋರ್ ಬಸ್‌ಗಳನ್ನು ಖರೀದಿಸಿರುವ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಭಾನುವಾರ ಅನುಮೋದಿಸಿದ್ದಾರೆ. ಜೂನ್‌ನಲ್ಲಿ ಬಂದ ದೂರಿನ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿ ನರೇಶ್‌ಕುಮಾರ್ ಅವರು ಈ ಕುರಿತು ಶಿಫಾರಸು ಮಾಡಿದ್ದರು. ಡಿಟಿಸಿ ಬಸ್‌ಗಳ ಟೆಂಡರ್ ಮತ್ತು ಖರೀದಿಗೆ … Continued

ಕಾರ್ಯನಿರ್ವಹಣೆಯಿಂದ ಅತೃಪ್ತಿ : 5 ಅಧೀನ ಪೊಲೀಸ್‌ ಅಧಿಕಾರಿಗಳನ್ನೇ ಲಾಕಪ್‌ನಲ್ಲಿ ಇರಿಸಿದ ಎಸ್‌ಪಿ | ವೀಡಿಯೋ ವೈರಲ್

ಪಾಟ್ನಾ: ಬಿಹಾರದ ನವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಐವರು ಅಧೀನ ಅಧಿಕಾರಿಗಳ ಕಾರ್ಯವೈಖರಿಯಿಂದ ಅತೃಪ್ತರಾಗಿದ್ದಕ್ಕೆ ಅವರನ್ನು ಎರಡು ಗಂಟೆಗಳ ಕಾಲ ಲಾಕಪ್‌ನಲ್ಲಿ ಇರಿಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವ ವೀಡಿಯೊದಲ್ಲಿ, ಐವರು ಬಿಹಾರ ಪೊಲೀಸರು ಲಾಕಪ್‌ನಲ್ಲಿ ಪರಸ್ಪರ ಮಾತನಾಡುತ್ತಿರುವುದನ್ನು ಕಾಣಬಹುದು. ಮೂವರು ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳ … Continued

ಉನ್ನತ ನಾಯಕರ ರಾಜೀನಾಮೆ, 5 ಸಂಸದರ ಪತ್ರದ ನಂತರ ಆಂತರಿಕ ಚುನಾವಣೆ ನಿಯಮ ಬದಲಾವಣೆಗೆ ಒಪ್ಪಿದ ಕಾಂಗ್ರೆಸ್ ನಾಯಕತ್ವ

ನವದೆಹಲಿ: ಮುಂದಿನ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಮಹತ್ವದ ಚುನಾವಣೆ ನಡೆಯಲಿದ್ದು, ಹಿರಿಯ ನಾಯಕರ ಒತ್ತಾಯದ ಮೇರೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲು ಕಾಂಗ್ರೆಸ್‌ ಪಕ್ಷದ ನಾಯಕತ್ವ ಒಪ್ಪಿಗೆ ನೀಡಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಯಸುವ ಯಾರಾದರೂ ಚುನಾವಣಾ ಕಾಲೇಜನ್ನು ರೂಪಿಸುವ ಎಲ್ಲಾ 9,000 ಪ್ರತಿನಿಧಿಗಳ ಪಟ್ಟಿಯನ್ನು ನೋಡಲು ಸಾಧ್ಯವಾಗಲಿದೆ. ಈ ಪಟ್ಟಿಯು … Continued

ತೆಲುಗು ಸಿನೆಮಾ ‘ರೆಬೆಲ್ ಸ್ಟಾರ್’ ಕೃಷ್ಣಂ ರಾಜು ನಿಧನ

ಹೈದರಾಬಾದ್‌: ಹಿರಿಯ ತೆಲುಗು ನಟ ಉಪ್ಪಲಪತಿ ಕೃಷ್ಣಂ ರಾಜು ಅವರು ಸೆಪ್ಟೆಂಬರ್ 11 ರ ಭಾನುವಾರದ ಮುಂಜಾನೆ 83 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ನಟ ಪ್ರಭಾಸ್ ಅವರ ದೊಡ್ಡಪ್ಪ. ಟಾಲಿವುಡ್‌ನ ‘ರೆಬೆಲ್ ಸ್ಟಾರ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೃಷ್ಣಂ ರಾಜು ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ 180ಕ್ಕೂ … Continued

ಪರೀಕ್ಷೆ ಕೇಂದ್ರಕ್ಕೆ ಹೋಗಲು ಕುಟುಂಬದವರ ಸಹಾಯದಿಂದ ತುಂಬಿ ಹರಿಯುತ್ತಿದ್ದ ನದಿ ಈಜಿದ ದಾಟಿದ ವಿದ್ಯಾರ್ಥಿನಿ : ವೀಕ್ಷಿಸಿ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಗೆ ಹಾಜರಾಗಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ತುಂಬಿ ಹರಿಯುತ್ತಿರುವ ಈಜಿ ನದಿ ದಾಟಿ ಪರೀಕ್ಷೆಗೆ ತೆರಳಿದ ಘಟನೆ ವರದಿಯಾಗಿದೆ. ತಡ್ಡಿ ಕಲಾವತಿ ಎಂದು ಗುರುತಿಸಲಾದ ವಿದ್ಯಾರ್ಥಿನಿ ವಿಶಾಖಪಟ್ಟಣಂನಲ್ಲಿ ಪರೀಕ್ಷೆ ತೆಗೆದುಕೊಳ್ಳಬೇಕಾಗಿತ್ತು. ಉಕ್ಕಿ ಹರಿಯುತ್ತಿದ್ದ ಚಂಪಾವತಿ ನದಿಯನ್ನು ತನ್ನ ಸಹೋದರ ಹಾಗೂ ಮತ್ತೊಬ್ಬ ಕುಟುಂಬದವರ … Continued