ಮತ್ತೆ ಏರುತ್ತಿರುವ ಕೊರೊನಾ ಸೋಂಕು. ಭಾರತದಲ್ಲಿ 2,451 ಹೊಸದಾಗಿ ಕೋವಿಡ್‌-19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 2,451 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಹಾಗೂ 54 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಕೋವಿಡ್‌ಡ್‌-19 ಪ್ರಕರಣಗಳು ಮೇಲ್ಮುಖವಾದ ಪ್ರವೃತ್ತಿಯನ್ನು ತೋರಿಸುತ್ತಿದ್ದು, ಏಪ್ರಿಲ್ 22 ರಂದು ಶುಕ್ರವಾರ ವರದಿಯಾದ 2,451 ಹೊಸ ಕೊರೊನಾ ವೈರಸ್ ಪ್ರಕರಣಗಳು ನಿನ್ನೆ … Continued

ಅವರು ಯಾರು…ನನಗೆ ಗೊತ್ತಿಲ್ಲ : ಜಿಗ್ನೇಶ್ ಮೇವಾನಿ ಬಂಧನದ ಬಗ್ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಗುವಾಹತಿ/ಕೊಕ್ರಜಾರ್: ಉದ್ದೇಶಪೂರ್ವಕ ಟ್ವೀಟ್‌ನಿಂದ ಬಂಧನಕ್ಕೊಳಗಾದ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಗುಜರಾತ್‌ನಿಂದ ಅಸ್ಸಾಂಗೆ ಕರೆತಂದ ಕೆಲವೇ ಗಂಟೆಗಳ ನಂತರ ನನಗೆ ಮೇವಾನಿ ಯಾರೆಂಬುದು ಗೊತ್ತಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶರ್ಮಾ, ಮೇವಾನಿ ಯಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. … Continued

ನಮಗೆ ಪಾಠ ಮಾಡಬೇಡಿ: ಅಬು ಸಲೇಂ ಪ್ರಕರಣದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ನವದೆಹಲಿ: ತನಗೆ 2017ರಲ್ಲಿ ವಿಧಿಸಿದ್ದ ಜೀವಾವಧಿ ಶಿಕ್ಷೆ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ 1993ರ ಬಾಂಬೆ ಸ್ಫೋಟದ ಅಪರಾಧಿ ಅಬು ಸಲೇಂ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್, ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ. ಅಫಿಡವಿಟ್ ಸಂಪೂರ್ಣ ಅತಿರೇಕದಿಂದ ಕೂಡಿದ್ದು ನ್ಯಾಯಾಂಗಕ್ಕೆ ಪಾಠ ಮಾಡಲು ಹೊರಟಂತಿದೆ ಎಂದು ನ್ಯಾಯಮೂರ್ತಿಗಳಾದ … Continued

ಭಾರತದಲ್ಲಿ 5 ರಿಂದ 11 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ತಜ್ಞರ ಸಮಿತಿ ಶಿಫಾರಸು

ನವದೆಹಲಿ: ಭಾರತದ ಕೆಲ ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ವರದಿಗಳ ಮಧ್ಯೆ ಮಕ್ಕಳಿಗೆ ಹೆಚ್ಚು ಅಪಾಯ ಆಗುವ ಸಾಧ್ಯತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ(DCGI)ದ ವಿಷಯ ತಜ್ಞರ ಸಮಿತಿಯು 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡುವಂತೆ ಶಿಫಾರಸ್ಸು ಮಾಡಿದೆ. ದೇಶದಲ್ಲಿ 5 ರಿಂದ 11 ವರ್ಷದ ಮಕ್ಕಳಿಗೆ ಬಯೋಲಾಜಿಕಲ್-ಇ … Continued

ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರ ಹಿಂದೂ ಅವಿಭಜಿತ ಕುಟುಂಬದ ಪಿತ್ರಾರ್ಜಿತ ಆಸ್ತಿ ಉಡುಗೊರೆಯಾಗಿ ನೀಡಬಹುದು: ಸುಪ್ರೀಂ ಕೋರ್ಟ್

ನವದೆಹಲಿ: ಪ್ರೀತಿ ವಾತ್ಸಲ್ಯದಿಂದ ನೀಡುವ ಅವಿಭಕ್ತ ಕುಟುಂಬದ ಪಿತ್ರಾರ್ಜಿತ ಆಸ್ತಿ ‘ಭಕ್ತಿಯ ಉದ್ದೇಶʼ ಪದದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠವು ಹಿಂದೂ ತಂದೆ ಅಥವಾ ಹಿಂದೂ ಅವಿಭಜಿತ ಕುಟುಂಬದ ಇತರ ನಿರ್ವಹಣಾ ಸದಸ್ಯರಿಗೆ ಪೂರ್ವಜರ ಆಸ್ತಿಯನ್ನು ಕೇವಲ ‘ಭಕ್ತಿಯ ಉದ್ದೇಶಕ್ಕಾಗಿ’ … Continued

ಕರ್ನಾಟಕದ್ದು 40% ಕಮಿಷನ್ ಸರ್ಕಾರ, ದೆಹಲಿಯದ್ದು 0% ಎಎಪಿ ಸರ್ಕಾರ, ನಿಮಗೆ ಕರ್ನಾಟಕದಲ್ಲಿ 0% ಸರ್ಕಾರ ಬೇಡವೇ ?: ಜನತೆಗೆ ಕೇಜ್ರಿವಾಲ್‌ ಪ್ರಶ್ನೆ, ರಾಜ್ಯದಲ್ಲಿ ಚುನಾವಣಾ ತಯಾರಿಗೆ ಎಎಪಿ ಮುನ್ನುಡಿ

ಬೆಂಗಳೂರು: ಪ್ರತಿಪಕ್ಷಗಳು ಹಾಗೂ ರಾಜ್ಯದ ಗುತ್ತಿಗೆದಾರ ಸಂಘದಿಂದ ‘ಶೇ 40 ಪರ್ಸೆಂಟ್ ಕಮಿಷನ್ ಸರ್ಕಾರ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಆಡಳಿತದ ವಿರುದ್ಧ ಹೊರಿಸಲಾಗಿರುವ ಭ್ರಷ್ಟಾಚಾರದ ಆರೋಪದ ಮೇಲೆ ಎಎಪಿ ಕರ್ನಾಟಕದಲ್ಲಿ ಚುನಾವಣಾ ಕಣದ ಹುಡುಕಾಟದಲ್ಲಿದೆ. ಕರ್ನಾಟಕವು 2023 ರಲ್ಲಿ ಚುನಾವಣೆಗೆ ಹೋಗಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಗುರುವಾರ ನಡೆದ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ನವಾಬ್‌ ಮಲಿಕ್ ವಿರುದ್ಧ 5,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಇಡಿ

ಮುಂಬೈ: ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನದ ಸುಮಾರು ಎರಡು ತಿಂಗಳ ನಂತರ ಜಾರಿ ನಿರ್ದೇಶನಾಲಯ (ಇಡಿ) ನವಾಬ್‌ ಮಲಿಕ್‌ ವಿರುದ್ಧ ಗುರುವಾರ ಇಲ್ಲಿನ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಪ್ರಕರಣದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ … Continued

ಲಕ್ಷಾಂತರ ಮೀನುಗಳ ಪ್ರವಾಹ ಎದುರಿಸಿ ಈಜುತ್ತಿರುವ ನಾಲ್ಕು ದೈತ್ಯ ಶಾರ್ಕ್‌ಗಳು..! ವೀಡಿಯೊ ನೋಡಿ ಬೆರಗಾದ ಇಂಟರ್ನೆಟ್‌..!

ಸಮುದ್ರದ ಮಧ್ಯದಲ್ಲಿರುವ ಮೀನಿನ ಪ್ರವಾಹದ ಮೂಲಕ ಶಾರ್ಕ್‌ಗಳಿಗೆ ನಡುಕ ಉಂಟಾಗುವಂತೆ ಭಾಸವಾಗುವ ದೃಶ್ಯದ ವೀಡಿಯೊ ಈಗ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ ಈ ರೀತಿಯ ಬೆರಗುಗೊಳಿಸುವ ವೀಡಿಯೊವನ್ನು 64 ವರ್ಷದ ಉದ್ಯಮಿ ಹರ್ಷ ಗೋಯೆಂಕಾ ಅವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. . ಹವಾಮಾನ ಪ್ರಚಾರಕ ಮೈಕ್ ಹುಡೆಮಾ ಅವರು ಆರಂಭದಲ್ಲಿ ಹಂಚಿಕೊಂಡ ವೀಡಿಯೊವನ್ನು ಹರ್ಷ … Continued

ಸರ್ಕಾರಿ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಂದ ಮದ್ಯದ ಪಾರ್ಟಿ: ಫೋಟೋ ವೈರಲ್‌ ಆದ ನಂತ್ರ ತನಿಖೆ ಆರಂಭ

ಹೈದರಾಬಾದ್‌: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಚಿತ್ರಗಳು ವೈರಲ್ ಆಗಿವೆ. ದಂಡೇಪಲ್ಲಿಯ ಬಾಲಕರ ವಸತಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು ವಿದಾಯ ಪಾರ್ಟಿ ವೇಳೆ ಬಿಯರ್ ಸೇವಿಸುತ್ತಿರುವ ಘಟನೆ ವರದಿಯಾಗಿದೆ. 10ನೇ ತರಗತಿಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಬೀಳ್ಕೊಡುಗೆ ಪಾರ್ಟಿಯನ್ನು ಆಯೋಜಿಸಲು ಬಯಸಿದ್ದರು. ಅಭಿವೃದ್ಧಿ ಅಧಿಕಾರಿ ಭಗವತಿ ಮಾತನಾಡಿ, ”ಬೇಸಿಗೆ ರಜೆ … Continued

ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಒಮಿಕ್ರಾನ್-ಅದರ 9 ಉಪತಳಿಗಳು ಕಾರಣ…?!

ನವದೆಹಲಿ: ಕೊರೊನಾವೈರಸ್ ರೂಪಾಂತರವಾದ ಒಮಿಕ್ರಾನ್ ಮತ್ತು ಅದರ ಉಪರೂಪಾಂತರಗಳು ದೆಹಲಿಯಲ್ಲಿ ಕೊರೊನಾ ಉಲ್ಬಣವನ್ನು ಹೆಚ್ಚಿಸುತ್ತಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಜೀನೋಮ್ ಸೀಕ್ವೆನ್ಸಿಂಗ್‌ಗೆ ಒಳಗಾದ ಮಾದರಿಗಳು BA.2.12.1 ಮತ್ತು ಕೊರೊನಾ ವೈರಸ್‌ನ ಒಮಿಕ್ರಾನ್ ರೂಪಾಂತರದ ಇತರ 8 ಉಪರೂಪಾಂತರಗಳ ಉಪಸ್ಥಿತಿಯನ್ನು ತೋರಿಸಿವೆ ಎಂದು ಅದು ಹೇಳಿದೆ. ಕಳೆದ ಕೆಲವು ವಾರಗಳಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳವನ್ನು ಕಂಡ … Continued