ರಾಜೀನಾಮೆ ಹಿಂಪಡೆದ ನವಜೋತ್ ಸಿಂಗ್ ಸಿಧು : ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಮುಂದುವರಿಕೆ

ನವದೆಹಲಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ನವಜೋತ್ ಸಿಂಗ್ ಸಿಧು ಹಿಂಪಡೆದಿದ್ದಾರೆ. ಮತ್ತು ಅದೇ ಹುದ್ದೆಯಲ್ಲಿ ತಮ್ಮ ಕರ್ತವ್ಯವನ್ನು ಮುಂದುವರಿಸಲಿದ್ದಾರೆ. ಶುಕ್ರವಾರ, ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾದ ನಂತರ, ನವಜೋತ್ ಸಿಂಗ್ ಸಿಧು “ನಾನು ನನ್ನ ಎಲ್ಲಾ ಕಳವಳಗಳನ್ನು ರಾಹುಲ್ ಗಾಂಧಿಯೊಂದಿಗೆ ಹಂಚಿಕೊಂಡಿದ್ದೇನೆ. ಎಲ್ಲವನ್ನೂ ಬಗೆಹರಿಸಲಾಗಿದೆ” ಎಂದು ಹೇಳಿದ್ದಾರೆ. ಅಖಿಲ … Continued

ಸಿಂಘು ಗಡಿ ಹತ್ಯೆ ಪ್ರಕರಣ: ಪೊಲೀಸರಿಗೆ ಶರಣಾದ ಸರಬ್ಜಿತ್ ಸಿಂಗ್

ನವದೆಹಲಿ:ನಿಹಾಂಗ್ ಸಮುದಾಯಕ್ಕೆ ಸೇರಿದ ಸರಬ್ಜಿತ್ ಸಿಂಗ್ ಎಂಬ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದು, ದೆಹಲಿ-ಹರಿಯಾಣ ಗಡಿ ಸಮೀಪದ ಕುಂಡ್ಲಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಒಬ್ಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದ ಜವಾಬ್ದಾರಿಯನ್ನು ಈತ ಹೊತ್ತುಕೊಂಡಿದ್ದಾನೆ. ಸರಬ್ಜಿತ್ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ವಿವರಗಳ ಪ್ರಕಾರ, ಅವರನ್ನು ಶನಿವಾರ (ನಾಳೆ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. .35 ವರ್ಷದ ವ್ಯಕ್ತಿಯನ್ನು … Continued

ದುರ್ಗಾ ದೇವಿ ಮೆರವಣಿಗೆ ನಡುವೆ ನುಗ್ಗಿದ ಕಾರು; ಒಂದು ಸಾವು, 20 ಮಂದಿಗೆ ಗಾಯ, ದೃಶ್ಯ ವಿಡಿಯೊದಲ್ಲಿ ಸೆರೆ

ನವದೆಹಲಿ: ದುರ್ಗಾ ದೇವಿ ಮೂರ್ತಿಯ ಮೆರವಣಿಗೆಯ ನಡುವೆ ಕಾರು ನುಗ್ಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಡದ ಜಶ್‌ಪುರದಲ್ಲಿ ಶುಕ್ರವಾರ ನಡೆದ ಬಗ್ಗೆ ವರದಿಯಾಗಿದೆ. ಆದರೆ ಘಟನೆಯಲ್ಲಿ, ಕನಿಷ್ಠ ನಾಲ್ಕು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ. 20 ಮಂದಿ ಇತರರು ಗಾಯಗೊಂಡಿದ್ದು ಇದರಲ್ಲಿ ನಾಲ್ವರ ಸ್ಥಿತಿ ಚಗಂಭೀರವಾಗಿದೆ … Continued

ಕೋವಿಡ್ ಲಸಿಕೆ ಹಾಕಲು ಕಾಲು ಸಂಕದ ಮೇಲೆ ಉಕ್ಕಿದ ನದಿ ದಾಟಿದ ಆರೋಗ್ಯ ಕಾರ್ಯಕರ್ತರ ವಿಡಿಯೋ ವೈರಲ್

ಇಟಾನಗರ: ಕೊರೊನಾ ವೈರಸ್ ವಿರುದ್ಧ ಜನರಿಗೆ ಲಸಿಕೆ ನೀಡುವ ಸಲುವಾಗಿ ಆರೋಗ್ಯ ಕಾರ್ಯಕರ್ತರು ಭಾರೀ ಸಾಹಸ ಮಾಡುತ್ತಾರೆ. ನದಿ ದಾಟುತ್ತಾರೆ, ಎತ್ತರದ ಗುಡ್ಡ ದಾಟಿ ಹೋಗಿ ಲಸಿಕೆ ನೀಡಿದ್ದಾರೆ. ಈಗ ಇಂಥದ್ದೇ ಒಂದು ವಿದ್ಯಮಾನದಲ್ಲಿ ಉಕ್ಕಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ಬಿದಿರಿನ ಕಾಲು ಸಂಕ ದಾಟಿ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. Watch … Continued

ಜೆಇಇ ಅಡ್ವಾನ್ಸಡ್ 2021 ಫಲಿತಾಂಶ ಪ್ರಕಟ :ಇತಿಹಾಸ ನಿರ್ಮಿಸಿದ ಮೃದುಲ್​ ಅಗರ್ವಾಲ್​

ನವದೆಹಲಿ: ಪ್ರತಿಷ್ಠಿತ ಐಐಟಿಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಅಡ್ವಾನ್ಸಡ್​(JEE Advanced) 2021ರ ಫಲಿತಾಂಶವು ಹೊರಬಿದ್ದಿದೆ. ರಾಜಸ್ಥಾನದ ಜೈಪುರ ಮೂಲದ 18 ವರ್ಷದ ಮೃದುಲ್​ ಅಗರ್​​ವಾಲ್​, ಈವರೆಗೆ ಅತಿಹೆಚ್ಚು ಅಂಕಗಳನ್ನು ಗಳಿಸಿ ಇತಿಹಾಸ ನಿರ್ಮಿಸಿದ್ದಾನೆ. ದೆಹಲಿಯ ಕಾವ್ಯಾ ಚೋಪ್ರಾ ಬಾಲಕಿಯರಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ್ದಾಳೆ. ಅರ್ಹತಾ ಪರೀಕ್ಷೆಯಾದ ಜೆಇಇ ಮೇಯ್ಸ್​ನ ಮಾರ್ಚ್​ ಸುತ್ತಿನಲ್ಲಿ 100 ಪರ್ಸೆಂಟೈಲ್​ ಗಳಿಸಿ, … Continued

ಸಿಂಗು ಗಡಿಯಲ್ಲಿ ಕೈ ಕತ್ತರಿಸಿದ ನೇಣು ಬಿಗಿದ ಸ್ಥಿತಿಯಲ್ಲಿರುವ ವ್ಯಕ್ತಿಯ ಅರೆಬೆತ್ತಲೆ ದೇಹ ಪತ್ತೆ..!

ನವದೆಹಲಿ: ಇಂದು (ಶುಕ್ರವಾರ) ಬೆಳಗ್ಗೆ ಸಿಂಗು ಗಡಿಯಲ್ಲಿರುವ ರೈತರ ಪ್ರತಿಭಟನಾ ಸ್ಥಳದಲ್ಲಿ ಎಡಗೈ ಮಣಿಕಟ್ಟು ತುಂಡಾಗಿ ಮತ್ತು ರಕ್ತದ ಮಡುವಿನೊಂದಿಗೆ ತಲೆಕೆಳಗಾದ ಸ್ಥಿತಿಯಲ್ಲಿದ್ದ ಯುವಕನ ಶವವನ್ನು ಪೊಲೀಸ್ ಬ್ಯಾರಿಕೇಡ್‌ಗೆ ಕಟ್ಟಿರುವುದು ಕಂಡುಬಂದಿದೆ. ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯಲ್ಲಿ ನಡೆದ ಈ ಕೊಲೆಗೆ ನಿಹಾಂಗ್ಸ್ – ‘ಯೋಧ’ ಸಿಖ್ ಗುಂಪು ಕಾರಣ ಎಂದು ಆರಂಭಿಕ ವರದಿಗಳು ಹೇಳಿವೆ … Continued

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ: ಗಾಯಗೊಂಡಿದ್ದ ಸೇನಾಧಿಕಾರಿ, ಯೋಧ ಹುತಾತ್ಮ

ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೇನಾಧಿಕಾರಿ (ಜೆಸಿಒ) ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಪೂಂಚ್-ರಾಜೌರಿ ಅರಣ್ಯದಲ್ಲಿ ಐವರು ಸೇನಾ ಯೋಧರು ಹುತಾತ್ಮರಾದ ನಾಲ್ಕು ದಿನಗಳ ನಂತರ ಅದೇ ಪ್ರದೇಶದಲ್ಲಿ ಸೇನೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯಿತು. ಈಗ ನಡೆಯುತ್ತಿರುವ … Continued

ಭಾರತದಲ್ಲಿ 16,862 ಹೊಸ ಕೋವಿಡ್ ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 16,862 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಗುರುವಾರ ವರದಿ ಮಾಡಿದ ಸಂಖ್ಯೆಗಿಂತ ಶೇಕಡಾ 11.2 ರಷ್ಟು ಕಡಿಮೆಯಾಗಿದೆ. ಹೊಸ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಕೇಸ್‌ಲೋಡ್ 3,40,37,592 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ. 379 ಜನರು ಸೋಂಕಿನಿಂದ ನಿಧನರಾಗಿದ್ದಾರೆ. ದೇಶದ … Continued

ವಿಜಯ ದಶಮಿಯಂದು ಗ್ರಾಹಕರಿಗೆ ಮತ್ತೆ ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಶಾಕ್‌..!

ನವದೆಹಲಿ: ವಿಜಯದಶಮಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ದೇಶದ ಗ್ರಾಹಕರಿಗೆ ಶಾಕ್ ನೀಡಿರುವ ತೈಲ ಕಂಪನಿಗಳು, ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿವೆ. ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಳೆದ ಎರಡು ದಿನಗಳಿಂದ ಸತತವಾಗಿ ಏರಿಕೆ ಮಾಡುತ್ತಿವೆ. ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿ ಇಂಧನ … Continued

ಆದಾಯ ತೆರಿಗೆ ಇಲಾಖೆ ಹೊಸ ಪೋರ್ಟಲ್‌ನಲ್ಲಿ 2 ಕೋಟಿಗೂ ಹೆಚ್ಚು ಐಟಿಆರ್‌ಗಳ ಸಲ್ಲಿಕೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಹೊಸ ಐಟಿ ಪೋರ್ಟಲ್ ಅನ್ನು ಗಣನೀಯವಾಗಿ ಸ್ಥಿರಗೊಳಿಸಿದೆ ಎಂದು ಗುರುವಾರ ತಿಳಿಸಲಾಗಿದೆ. ಇದುವರೆಗೆ ಎರಡು ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು(ಸಿಬಿಡಿಟಿ) ಎಲ್ಲ ಐಟಿಆರ್‌ಗಳನ್ನು ಇ-ಫೈಲಿಂಗ್‌ಗಾಗಿ ಲಭ್ಯಗೊಳಿಸಿದೆ ಮತ್ತು ತೆರಿಗೆ ಪಾವತಿದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್)ಗಳನ್ನು 2020-21ರ ಹಣಕಾಸು … Continued